Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಚಳಿಗಾಲದ ಸಾಯಂಕಾಲಗಳಿಗೆ ಈರುಳ್ಳಿ ಪಕೋಡ
[ಅಡುಗೆ ಬಲ್ಲವರೇ, ರುಚಿಭರಿತ ಅಡುಗೆಗಳು ನಿಮಗೆ ಗೊತ್ತಿದ್ದರೇ ವಿಳಾಸಕ್ಕೆ ಕಳುಹಿಸಿ . ನಾವು ಎಲ್ಲರಿಗೂ ತಿಳಿಸುತ್ತೇವೆ.. ಎಲ್ಲರ ನಾಲಿಗೆ ತೃಪ್ತಿ ಪಡಿಸಿದ ಸಾರ್ಥಕತೆ ನಿಮ್ಮದಾಗಲಿ. ಸದ್ಯಕ್ಕೆ ಈಗ ಈರುಳ್ಳಿ ಪಕೋಡ ಸವಿಯಿರಿ : ಸಂಪಾದಕ]
- ನಿರುಪಮ ಕರಂದ್ಲಾಜೆ, ಕಳಸ
ಬೇಕಾಗುವ ಪದಾರ್ಥಗಳು :
*ಎರಡು ಲೋಟ ಕಡ್ಲೆ ಹಿಟ್ಟು.
*ಅರ್ಧ ಲೋಟ ಅಕ್ಕಿ ಹಿಟ್ಟು.
*ಮೂರುಚಮಚ ಒಣಮೆಣಸಿನ ಪುಡಿ.
*ಇನ್ನೂ ಕಾರ ಬೇಕು ಎನ್ನುವವರು
ನಾಲಕ್ಕು ಹಸಿ ಮೆಣಸಿನ ಕಾಯಿ ಸೇರಿಸಬಹುದು
*ಐದೋ ಆರೋ ಈರುಳ್ಳಿ.
*ಒಂದು ಚಮಚ ದನಿಯ ಪುಡಿ.
*ಒಂದು ಚಮಚ ಜೀರಿಗೆ ಪುಡಿ
*ಕರಿಯುವುದಕ್ಕೆ ಎರಡು ಲೋಟದಷ್ಟು ಎಣ್ಣೆ
*ಯಥಾಪ್ರಕಾರ ರುಚಿಗೆ ತಕ್ಕಷ್ಟು ಉಪ್ಪು.
*ಕರಿಬೇವಿನ ಎಸಳುಗಳು ಧಾರಾಳವಾಗಿ
ತಯಾರಿಸುವ ವಿಧಾನ :
ಮೆಣಸಿನಪುಡಿ, ಉಪ್ಪು, ಜೀರಿಗೆ ಪುಡಿ, ದನಿಯ ಪುಡಿ,ಕಡ್ಳೆ ಹಿಟ್ಟು ಅಕ್ಕಿಹಿಟ್ಟನ್ನು ಬೆರೆಸಿ ಅದಕ್ಕೆ ನೀರು ಹಾಕಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ಚಿಪ್ಸ್ ಗೆ ಹೆಚ್ಚಿಕೊಳ್ಳುವ ರೀತಿ ಈರುಳ್ಳಿಯನ್ನು ರೋಲ್ ರೋಲ್ ಆಗಿ ಹೆಚ್ಚಿಕೊಂಡು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು.
ಕೈಯಲ್ಲಿ ಸ್ವಲ್ಪ ಸ್ವಲ್ಪನೆ ಹಿಟ್ಟುತೆಗೆದು ಕೊಂಡು ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು. ಬೆಂದಮೇಲೆ ಜಾಲರ ಸೌಟಿನಲ್ಲಿ ನಿಧಾನವಾಗಿ ತಿರುವಿಹಾಕುತ್ತಾ ಕೆಂಪಗಾಗುವವರೆಗೆ, ಗರಿಗರಿಯಾಗುವವರೆಗೆ ಬಾಣಲೆಯಲ್ಲಿ ಹುರಿಯಬೇಕು. ಈರುಳ್ಳಿ ಪಕೋಡ ಆದನಂತರ ಕರಿಬೇವಿನ ಸೊಪ್ಪನ್ನು ಕರಿದು ಪಕೋಡದ ಮೇಲೆ ಡ್ರೆಸ್ಸಿಂಗ್ ಮಾಡುವುದು. ಆಮೇಲೆ ತಿನ್ನುವುದು.



Click it and Unblock the Notifications