Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಚಳಿಗಾಲದ ಸಾಯಂಕಾಲಗಳಿಗೆ ಈರುಳ್ಳಿ ಪಕೋಡ
[ಅಡುಗೆ ಬಲ್ಲವರೇ, ರುಚಿಭರಿತ ಅಡುಗೆಗಳು ನಿಮಗೆ ಗೊತ್ತಿದ್ದರೇ ವಿಳಾಸಕ್ಕೆ ಕಳುಹಿಸಿ . ನಾವು ಎಲ್ಲರಿಗೂ ತಿಳಿಸುತ್ತೇವೆ.. ಎಲ್ಲರ ನಾಲಿಗೆ ತೃಪ್ತಿ ಪಡಿಸಿದ ಸಾರ್ಥಕತೆ ನಿಮ್ಮದಾಗಲಿ. ಸದ್ಯಕ್ಕೆ ಈಗ ಈರುಳ್ಳಿ ಪಕೋಡ ಸವಿಯಿರಿ : ಸಂಪಾದಕ]
- ನಿರುಪಮ ಕರಂದ್ಲಾಜೆ, ಕಳಸ
ಬೇಕಾಗುವ ಪದಾರ್ಥಗಳು :
*ಎರಡು ಲೋಟ ಕಡ್ಲೆ ಹಿಟ್ಟು.
*ಅರ್ಧ ಲೋಟ ಅಕ್ಕಿ ಹಿಟ್ಟು.
*ಮೂರುಚಮಚ ಒಣಮೆಣಸಿನ ಪುಡಿ.
*ಇನ್ನೂ ಕಾರ ಬೇಕು ಎನ್ನುವವರು
ನಾಲಕ್ಕು ಹಸಿ ಮೆಣಸಿನ ಕಾಯಿ ಸೇರಿಸಬಹುದು
*ಐದೋ ಆರೋ ಈರುಳ್ಳಿ.
*ಒಂದು ಚಮಚ ದನಿಯ ಪುಡಿ.
*ಒಂದು ಚಮಚ ಜೀರಿಗೆ ಪುಡಿ
*ಕರಿಯುವುದಕ್ಕೆ ಎರಡು ಲೋಟದಷ್ಟು ಎಣ್ಣೆ
*ಯಥಾಪ್ರಕಾರ ರುಚಿಗೆ ತಕ್ಕಷ್ಟು ಉಪ್ಪು.
*ಕರಿಬೇವಿನ ಎಸಳುಗಳು ಧಾರಾಳವಾಗಿ
ತಯಾರಿಸುವ ವಿಧಾನ :
ಮೆಣಸಿನಪುಡಿ, ಉಪ್ಪು, ಜೀರಿಗೆ ಪುಡಿ, ದನಿಯ ಪುಡಿ,ಕಡ್ಳೆ ಹಿಟ್ಟು ಅಕ್ಕಿಹಿಟ್ಟನ್ನು ಬೆರೆಸಿ ಅದಕ್ಕೆ ನೀರು ಹಾಕಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ಚಿಪ್ಸ್ ಗೆ ಹೆಚ್ಚಿಕೊಳ್ಳುವ ರೀತಿ ಈರುಳ್ಳಿಯನ್ನು ರೋಲ್ ರೋಲ್ ಆಗಿ ಹೆಚ್ಚಿಕೊಂಡು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು.
ಕೈಯಲ್ಲಿ ಸ್ವಲ್ಪ ಸ್ವಲ್ಪನೆ ಹಿಟ್ಟುತೆಗೆದು ಕೊಂಡು ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು. ಬೆಂದಮೇಲೆ ಜಾಲರ ಸೌಟಿನಲ್ಲಿ ನಿಧಾನವಾಗಿ ತಿರುವಿಹಾಕುತ್ತಾ ಕೆಂಪಗಾಗುವವರೆಗೆ, ಗರಿಗರಿಯಾಗುವವರೆಗೆ ಬಾಣಲೆಯಲ್ಲಿ ಹುರಿಯಬೇಕು. ಈರುಳ್ಳಿ ಪಕೋಡ ಆದನಂತರ ಕರಿಬೇವಿನ ಸೊಪ್ಪನ್ನು ಕರಿದು ಪಕೋಡದ ಮೇಲೆ ಡ್ರೆಸ್ಸಿಂಗ್ ಮಾಡುವುದು. ಆಮೇಲೆ ತಿನ್ನುವುದು.



Click it and Unblock the Notifications