Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲದ ಸಾಯಂಕಾಲಗಳಿಗೆ ಈರುಳ್ಳಿ ಪಕೋಡ
[ಅಡುಗೆ ಬಲ್ಲವರೇ, ರುಚಿಭರಿತ ಅಡುಗೆಗಳು ನಿಮಗೆ ಗೊತ್ತಿದ್ದರೇ ವಿಳಾಸಕ್ಕೆ ಕಳುಹಿಸಿ . ನಾವು ಎಲ್ಲರಿಗೂ ತಿಳಿಸುತ್ತೇವೆ.. ಎಲ್ಲರ ನಾಲಿಗೆ ತೃಪ್ತಿ ಪಡಿಸಿದ ಸಾರ್ಥಕತೆ ನಿಮ್ಮದಾಗಲಿ. ಸದ್ಯಕ್ಕೆ ಈಗ ಈರುಳ್ಳಿ ಪಕೋಡ ಸವಿಯಿರಿ : ಸಂಪಾದಕ]
- ನಿರುಪಮ ಕರಂದ್ಲಾಜೆ, ಕಳಸ
ಬೇಕಾಗುವ ಪದಾರ್ಥಗಳು :
*ಎರಡು ಲೋಟ ಕಡ್ಲೆ ಹಿಟ್ಟು.
*ಅರ್ಧ ಲೋಟ ಅಕ್ಕಿ ಹಿಟ್ಟು.
*ಮೂರುಚಮಚ ಒಣಮೆಣಸಿನ ಪುಡಿ.
*ಇನ್ನೂ ಕಾರ ಬೇಕು ಎನ್ನುವವರು
ನಾಲಕ್ಕು ಹಸಿ ಮೆಣಸಿನ ಕಾಯಿ ಸೇರಿಸಬಹುದು
*ಐದೋ ಆರೋ ಈರುಳ್ಳಿ.
*ಒಂದು ಚಮಚ ದನಿಯ ಪುಡಿ.
*ಒಂದು ಚಮಚ ಜೀರಿಗೆ ಪುಡಿ
*ಕರಿಯುವುದಕ್ಕೆ ಎರಡು ಲೋಟದಷ್ಟು ಎಣ್ಣೆ
*ಯಥಾಪ್ರಕಾರ ರುಚಿಗೆ ತಕ್ಕಷ್ಟು ಉಪ್ಪು.
*ಕರಿಬೇವಿನ ಎಸಳುಗಳು ಧಾರಾಳವಾಗಿ
ತಯಾರಿಸುವ ವಿಧಾನ :
ಮೆಣಸಿನಪುಡಿ, ಉಪ್ಪು, ಜೀರಿಗೆ ಪುಡಿ, ದನಿಯ ಪುಡಿ,ಕಡ್ಳೆ ಹಿಟ್ಟು ಅಕ್ಕಿಹಿಟ್ಟನ್ನು ಬೆರೆಸಿ ಅದಕ್ಕೆ ನೀರು ಹಾಕಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ಚಿಪ್ಸ್ ಗೆ ಹೆಚ್ಚಿಕೊಳ್ಳುವ ರೀತಿ ಈರುಳ್ಳಿಯನ್ನು ರೋಲ್ ರೋಲ್ ಆಗಿ ಹೆಚ್ಚಿಕೊಂಡು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು.
ಕೈಯಲ್ಲಿ ಸ್ವಲ್ಪ ಸ್ವಲ್ಪನೆ ಹಿಟ್ಟುತೆಗೆದು ಕೊಂಡು ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು. ಬೆಂದಮೇಲೆ ಜಾಲರ ಸೌಟಿನಲ್ಲಿ ನಿಧಾನವಾಗಿ ತಿರುವಿಹಾಕುತ್ತಾ ಕೆಂಪಗಾಗುವವರೆಗೆ, ಗರಿಗರಿಯಾಗುವವರೆಗೆ ಬಾಣಲೆಯಲ್ಲಿ ಹುರಿಯಬೇಕು. ಈರುಳ್ಳಿ ಪಕೋಡ ಆದನಂತರ ಕರಿಬೇವಿನ ಸೊಪ್ಪನ್ನು ಕರಿದು ಪಕೋಡದ ಮೇಲೆ ಡ್ರೆಸ್ಸಿಂಗ್ ಮಾಡುವುದು. ಆಮೇಲೆ ತಿನ್ನುವುದು.



Click it and Unblock the Notifications











