Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಜೀರ್ಣಶಕ್ತಿ ವೃದ್ಧಿಸುವ ಹೆಸರು ಬೇಳೆ ಕೋಸಂಬರಿ
ಹಬ್ಬ ಹರಿದಿನಗಳಲ್ಲಿ, ಮದುವೆ - ಮುಂಜಿಗಳಲ್ಲಿ, ಮನೆಗೆ ಅಪರೂಪದ ಅತಿಥಿಗಳು ಬಂದಾಗ ಮಾಡುವ ಔತಣ ಮುಂತಾದ (ವೈದಿಕವೂ ಸೇರಿದಂತೆ) ಶುಭ ಕಾರ್ಯಗಳಲ್ಲಿ ಮಾಡುವ ವಿವಿಧ ಭಕ್ಷ್ಯಗಳಲ್ಲಿ ಕೋಸಂಬರಿಯೂ ಒಂದು.
* ನಿವೇದಿತಾ ಪ್ರಭಾಕರ್, ಬೆಂಗಳೂರು
ಹಬ್ಬ ಹರಿದಿನಗಳಲ್ಲಿ ಮಿಗಿಲಾಗಿ ಭಾರಿ ಭೋಜನದಲ್ಲೇ ಈ ಎರಡು ಬಗೆಯ ಕೋಸಂಬರಿ ಮಾಡಲು ಕಾರಣ ಇದೆ. ಹೆಸರು ಹಾಗೂ ಕಡಲೆಬೇಳೆಗಳ ಕೋಸಂಬರಿಗಳು ಭರ್ಜರಿ ಭೋಜನದ ದುಷ್ಪರಿಣಾಮವನ್ನು ತಡೆಯುವ ಶಕ್ತಿ ಹೊಂದಿವೆ. ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಹೆಚ್ಚು ತಿಂದ ಕಾರಣ ಉಂಟಾಗುವ ಆಯಾಸವನ್ನೂ ಪರಿಹರಿಸುತ್ತದೆ.
ಹಸಿ ಬೇಳೆಯನ್ನು ಬೇಯಿಸದೇ, ನೆನೆಸಿ ಮಾಡುವ ಈ ತಿನಿಸು, ಪೌಷ್ಟಿಕಾಂಶಗಳಿಂದ ತುಂಬಿದ ಆರೋಗ್ಯವರ್ಧಕ. ಸಾಮಾನ್ಯವಾಗಿ ಕಡಲೆಬೇಳೆ, ಹೆಸರು ಬೇಳೆ ಕೋಸಂಬರಿ ಪ್ರಖ್ಯಾತ. ನವಧಾನ್ಯಗಳಿದ್ದಾಗ್ಯೂ ಈ ಎರಡೇ ಧಾನ್ಯಗಳಿಂದ ಕೋಸಂಬರಿ ಮಾಡುತ್ತಾರೆ. ಈ ಎರಡು ಧಾನ್ಯಗಳ ವೈಶಿಷ್ಟ್ಯವೇ ಅಂಥಹದ್ದು.
ಕಡಲೆಬೇಳೆ ರಕ್ತ, ಪಿತ್ತ ದೋಷಗಳಿಗೆ ರಾಮಬಾಣ. ಹೆಸರುಬೇಳೆ ಒಗರಿನಿಂದ ಕೂಡಿದ್ದು, ಪಿತ್ತ, ರಕ್ತ ವಿಕಾರಗಳಿಗೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ಪಂಡಿತರು. ನೇತ್ರರೋಗ, ಅತಿಸಾರ, ವಾತ, ಜ್ವರ, ಮೂತ್ರ ದೋಷಗಳೂ ಈ ಧಾನ್ಯದ ಸೇವನೆಯಿಂದ ತಹಬಂದಿಗೆ ಬರುತ್ತವೆ. ಹೊಟ್ಟೆಯುರಿ, ಎದೆಯುರಿಗೂ ಇದು ಸಿದ್ಧೌಷಧ. ದೇಹವನ್ನು ತಂಪು ಮಾಡುವ ಧಾನ್ಯಗಳಲ್ಲಿ ಇದೂ ಒಂದು. ಹೆಸರನ್ನು ನೆನೆಸಿ ತಿನ್ನುವುದರಿಂದ ಮನಸ್ಸು ಶಾಂತವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು :
ಕಡಲೆಬೇಳೆ ಅಥವಾ ಹೆಸರುಬೇಳೆ 3 ಬಟ್ಟಲು
ಕಾಯಿತುರಿ ಅರ್ಧ ಬಟ್ಟಲು
ಹಸಿ ಮೆಣಸಿನಕಾಯಿ 4
ಸೌತೆಕಾಯಿ 1
ಕೊತ್ತಂಬರಿ, ಇಂಗು, ಸಾಸಿವೆ
ಮಾಡುವ ವಿಧಾನ :
ಕಡಲೆ ಬೇಳೆ ಅಥವಾ ಹೆಸರು ಬೇಳೆಯನ್ನು ನೀರಿನಲ್ಲಿ ತೊಳೆದು, ಚೆನ್ನಾಗಿ ನೀರಿನಲ್ಲಿ ನೆನೆಸಿ, ಆನಂತರ ನೀರನ್ನು ಬಸಿಯಬೇಕು. ಇದಕ್ಕೆ ಹದವಾಗಿ ಕಾಯಿತುರಿ ಬೆರೆಸಬೇಕು. ಬಾಯಿ ರುಚಿಗೆ ಹಾಗೂ ಖಾರಕ್ಕಾಗಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಸಾಸಿವೆಯ ಒಗ್ಗರಣೆ ಹಾಕಬೇಕು. ಕೆಲವರು ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿಯನ್ನೂ ಸೇರಿಸುತ್ತಾರೆ. ನಿಂಬೆರಸ ಕಡ್ಡಾಯ. ಅಲ್ಲಿಗೆ ತಿನ್ನಲು ಕೋಸಂಬರಿ ರೆಡಿ.



Click it and Unblock the Notifications