Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಜೀರ್ಣಶಕ್ತಿ ವೃದ್ಧಿಸುವ ಹೆಸರು ಬೇಳೆ ಕೋಸಂಬರಿ
ಹಬ್ಬ ಹರಿದಿನಗಳಲ್ಲಿ, ಮದುವೆ - ಮುಂಜಿಗಳಲ್ಲಿ, ಮನೆಗೆ ಅಪರೂಪದ ಅತಿಥಿಗಳು ಬಂದಾಗ ಮಾಡುವ ಔತಣ ಮುಂತಾದ (ವೈದಿಕವೂ ಸೇರಿದಂತೆ) ಶುಭ ಕಾರ್ಯಗಳಲ್ಲಿ ಮಾಡುವ ವಿವಿಧ ಭಕ್ಷ್ಯಗಳಲ್ಲಿ ಕೋಸಂಬರಿಯೂ ಒಂದು.
* ನಿವೇದಿತಾ ಪ್ರಭಾಕರ್, ಬೆಂಗಳೂರು
ಹಬ್ಬ ಹರಿದಿನಗಳಲ್ಲಿ ಮಿಗಿಲಾಗಿ ಭಾರಿ ಭೋಜನದಲ್ಲೇ ಈ ಎರಡು ಬಗೆಯ ಕೋಸಂಬರಿ ಮಾಡಲು ಕಾರಣ ಇದೆ. ಹೆಸರು ಹಾಗೂ ಕಡಲೆಬೇಳೆಗಳ ಕೋಸಂಬರಿಗಳು ಭರ್ಜರಿ ಭೋಜನದ ದುಷ್ಪರಿಣಾಮವನ್ನು ತಡೆಯುವ ಶಕ್ತಿ ಹೊಂದಿವೆ. ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಹೆಚ್ಚು ತಿಂದ ಕಾರಣ ಉಂಟಾಗುವ ಆಯಾಸವನ್ನೂ ಪರಿಹರಿಸುತ್ತದೆ.
ಹಸಿ ಬೇಳೆಯನ್ನು ಬೇಯಿಸದೇ, ನೆನೆಸಿ ಮಾಡುವ ಈ ತಿನಿಸು, ಪೌಷ್ಟಿಕಾಂಶಗಳಿಂದ ತುಂಬಿದ ಆರೋಗ್ಯವರ್ಧಕ. ಸಾಮಾನ್ಯವಾಗಿ ಕಡಲೆಬೇಳೆ, ಹೆಸರು ಬೇಳೆ ಕೋಸಂಬರಿ ಪ್ರಖ್ಯಾತ. ನವಧಾನ್ಯಗಳಿದ್ದಾಗ್ಯೂ ಈ ಎರಡೇ ಧಾನ್ಯಗಳಿಂದ ಕೋಸಂಬರಿ ಮಾಡುತ್ತಾರೆ. ಈ ಎರಡು ಧಾನ್ಯಗಳ ವೈಶಿಷ್ಟ್ಯವೇ ಅಂಥಹದ್ದು.
ಕಡಲೆಬೇಳೆ ರಕ್ತ, ಪಿತ್ತ ದೋಷಗಳಿಗೆ ರಾಮಬಾಣ. ಹೆಸರುಬೇಳೆ ಒಗರಿನಿಂದ ಕೂಡಿದ್ದು, ಪಿತ್ತ, ರಕ್ತ ವಿಕಾರಗಳಿಗೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ಪಂಡಿತರು. ನೇತ್ರರೋಗ, ಅತಿಸಾರ, ವಾತ, ಜ್ವರ, ಮೂತ್ರ ದೋಷಗಳೂ ಈ ಧಾನ್ಯದ ಸೇವನೆಯಿಂದ ತಹಬಂದಿಗೆ ಬರುತ್ತವೆ. ಹೊಟ್ಟೆಯುರಿ, ಎದೆಯುರಿಗೂ ಇದು ಸಿದ್ಧೌಷಧ. ದೇಹವನ್ನು ತಂಪು ಮಾಡುವ ಧಾನ್ಯಗಳಲ್ಲಿ ಇದೂ ಒಂದು. ಹೆಸರನ್ನು ನೆನೆಸಿ ತಿನ್ನುವುದರಿಂದ ಮನಸ್ಸು ಶಾಂತವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು :
ಕಡಲೆಬೇಳೆ ಅಥವಾ ಹೆಸರುಬೇಳೆ 3 ಬಟ್ಟಲು
ಕಾಯಿತುರಿ ಅರ್ಧ ಬಟ್ಟಲು
ಹಸಿ ಮೆಣಸಿನಕಾಯಿ 4
ಸೌತೆಕಾಯಿ 1
ಕೊತ್ತಂಬರಿ, ಇಂಗು, ಸಾಸಿವೆ
ಮಾಡುವ ವಿಧಾನ :
ಕಡಲೆ ಬೇಳೆ ಅಥವಾ ಹೆಸರು ಬೇಳೆಯನ್ನು ನೀರಿನಲ್ಲಿ ತೊಳೆದು, ಚೆನ್ನಾಗಿ ನೀರಿನಲ್ಲಿ ನೆನೆಸಿ, ಆನಂತರ ನೀರನ್ನು ಬಸಿಯಬೇಕು. ಇದಕ್ಕೆ ಹದವಾಗಿ ಕಾಯಿತುರಿ ಬೆರೆಸಬೇಕು. ಬಾಯಿ ರುಚಿಗೆ ಹಾಗೂ ಖಾರಕ್ಕಾಗಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಸಾಸಿವೆಯ ಒಗ್ಗರಣೆ ಹಾಕಬೇಕು. ಕೆಲವರು ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿಯನ್ನೂ ಸೇರಿಸುತ್ತಾರೆ. ನಿಂಬೆರಸ ಕಡ್ಡಾಯ. ಅಲ್ಲಿಗೆ ತಿನ್ನಲು ಕೋಸಂಬರಿ ರೆಡಿ.



Click it and Unblock the Notifications