Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತಿನ್ನಲು ಸಜ್ಜಾಗಿ ಅನಾನಸ್ ಗೊಜ್ಜು

* ಗಾಯತ್ರಿ ಶೇಷಾಚಲ
ಬೇಕಾಗುವ ಸಾಮಾಗ್ರಿಗಳು :
ಅನಾನಸ್ - 1
ಉದ್ದಿನ ಬೇಳೆ - 4 ಚಮಚ
ಜೀರಿಗೆ - 1 ಚಮಚ
ಮೆಂತ್ಯ - 1/2 ಚಮಚ
ಬಿಳಿ ಎಳ್ಳು - 2 ಚಮಚ
ಹುಣಸೆ ಹಣ್ಣು - ನಿಂಬೆಗಾತ್ರದಷ್ಟು
ಇಂಗು - ಎರಡು ಚಿಟಿಕೆ
ಖಾರದ ಪುಡಿ - 3 ಚಮಚ
ಒಣ ಕೊಬ್ಬರಿ - 1ಚಮಚ
ಉಪ್ಪು ಹಾಗೂ ಬೆಲ್ಲ - ರುಚಿಗೆ ತಕ್ಕಷ್ಟು
ಎಣ್ಣೆ - 1ಸಣ್ಣ ಚಮಚ
ಸಾಸಿವೆ -1 ಸಣ್ಣ ಚಮಚ
ಮಾಡುವ ವಿಧಾನ :
ಅನಾನಸ್ ಹಣ್ಣನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆಹಣ್ಣನ್ನು ನೆನೆಸಿ, ಹಿಂಡಿ ರಸ ತೆಗೆದಿಟ್ಟುಕೊಳ್ಳಿ. ಮಸಾಲೆ ಪದಾರ್ಥಗಳನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ಪುಡಿಮಾಡಿ. ಕೊನೆಯಲ್ಲಿ ಅದಕ್ಕೆ ಕೊಬ್ಬರಿ ಹಾಕಿ, ಮತ್ತೆ ಗಿರಿಗಿರಿ ಅನ್ನಿಸಿ.
ಒಂದು ಕಡಾಯಿಯಲ್ಲಿ ಹೆಚ್ಚಿದ ಹಣ್ಣುಗಳನ್ನು ಹಾಕಿ 3-4 ನಿಮಿಷ ಹುರಿಯಿರಿ. ನಂತರ ಅದಕ್ಕೆ ಹುಳಿ ರಸವನ್ನು ಮತ್ತು ಎರಡು ಲೋಟ ನೀರನ್ನು ಹಾಕಿ. ಪುಡಿ ಮಾಡಿದ ಮಸಾಲೆ, ಬೆಲ್ಲ, ಇಂಗು ಮತ್ತು ಉಪ್ಪನ್ನು ಹಾಕಿ. 5 ನಿಮಿಷ ಚೆನ್ನಾಗಿ ಕುದಿಸಿ ಕೆಳಗಿಳಿಸಿ.
ಚಪಾತಿ ಮತ್ತು ಪೂರಿ ಜೊತೆ ನೆಚ್ಚಿಕೊಳ್ಳಲು ಚೆನ್ನಾಗಿರುತ್ತದೆ. ಅನ್ನದ ಜೊತೆ ಕೂಡ ನೆಂಜಿಕೊಂಡು ತಿನ್ನಬಹುದು.



Click it and Unblock the Notifications
