Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪಿತೃ ಪಕ್ಷದಂದು ಮಾಡಬಹುದಾದ ಅಡುಗೆಗಳು
ಇವತ್ತು ಮಹಾಲಯ ಅಮಾವಾಸ್ಯೆ. ಹಿಂದೂ ಧರ್ಮದಲ್ಲಿ ಸ್ವರ್ಗಸ್ಥರಾದ ಹಿರಿಯರನ್ನು ನೆನೆಯಲು ಮಹಾಲಯ ಅಮಾವಾಸ್ಯೆಸಕಾಲ. ಇತರ ದಿನಗಳಲ್ಲಿ ಹಿರಿಯರು ಸತ್ತ ದಿನದಂದು ಶ್ರಾದ್ಧ ಮಾಡಿದ್ದರೂ, ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಮಾಡಿ ದಾನ ಧರ್ಮ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆಂದು ಪ್ರತೀತಿ. ಯಾವುದೇ ಜಾತಿಭೇದವಿಲ್ಲದೇ ಎಲ್ಲರೂ ತಮ್ಮ ಗತಿಸಿದ ಹಿರಿಯರಿಗೆ ಈ ದಿನದಂದು ಶ್ರಾದ್ಧ ಮಾಡುತ್ತಾರೆ.
ಬೇರೆ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲು ಆಗದಿದ್ದಿದ್ದರೆ ಮಹಾಲಯ ಅಮಾವಾಸ್ಯೆಯಂದು ಮಾಡಿ ಬಡಬಗ್ಗರಿಗೆ ಅನ್ನಸಂತರ್ಪಣೆ ಮತ್ತು ದಾನಗಳನ್ನು ಮಾಡಬಹುದು. ಈ ದಿನದಂದು ಸ್ವರ್ಗಸ್ಥರಾದ ಪಿತೃದೇವತೆಗಳು ಪರಲೋಕದಿಂದ ಇಹಲೋಕಕ್ಕೆ ತಮ್ಮ ವಂಶಸ್ಥರ ಮನೆಗಳಿಗೆ ಬರುತ್ತಾರೆಂಬ ನಂಬಿಕೆಯಿದೆ.
ಈ ದಿನ ಶ್ರಾದ್ಧ ಮಾಡುವವರು ಹಬ್ಬದ ಅಡುಗೆಗಳನ್ನು ತಯಾರಿಸುತ್ತಾರೆ. ಆದರೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಅಡುಗೆಗಳನ್ನು ಮಾಡಲಾಗುವುದು. ಅದಲ್ಲದೆ ಉದ್ದಿನ ವಡೆ, ಪಾಯಸ ಹಾಗೂ ತಮ್ಮ ಹಿರಿಯರಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಈ ಅಡುಗೆಗಳನ್ನು ತಾಮ್ರದ ಪಾತ್ರೆಯಲ್ಲಿ ಮಾಡಿ, ಬಾಳೆ ಎಲೆಯಲ್ಲಿ ಬಡಿಸಲಾಗುವುದು.
ಇಲ್ಲಿ ನಾವು ಈ ದಿನ ಸುಲಭದಲ್ಲಿ ತಯಾರಿಸಬಹುದಾದ ಕೆಲವೊಂದು ರೆಸಿಪಿ ನೀಡಿದ್ದೇವೆ ನೋಡಿ:

ಉದ್ದಿನ ವಡೆ
ಉದ್ದಿನವಡೆ ಮಾಡುವುದಕ್ಕೆ ಜಾಸ್ತಿ ಪದಾರ್ಥಗಳ ಅವಶ್ಯಕತೆಯಿಲ್ಲ. ಸ್ವಲ್ಪ ಸಮಯ ಜಾಸ್ತಿ ಇದ್ದರೆ ವಡೆ ಮಾಡುವುದು ಬ್ರಹ್ಮವಿದ್ಯೆ ಅಲ್ಲ. ಒಟ್ಟು ಏಳು ಐಟಂ ಬೇಕು. ಇಷ್ಟು ಇದ್ದರೆ ಸವಿರುಚಿಯ ಉದ್ದಿನ ವಡೆ ರೆಡಿ.

ಸೌತೆಕಾಯಿ ಸಾರು
ಸಾಮಾನ್ಯವಾಗಿ ಈ ದಿನ ಈರುಳ್ಳಿ ಹಾಕದ ರೆಸಿಪಿಗಳನ್ನು ಮಾಡಲಾಗುವುದು. ಈರುಳ್ಳಿ ಹಾಕದೆ ಸೌತೆಕಾಯಿ ಸಾರು ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಮಿಶ್ರ ಸೊಪ್ಪಿನ ಗ್ರೇವಿ
ಈರುಳ್ಳಿ ಹಾಕದೆ ಮಿಶ್ರ ಸೊಪ್ಪಿನ ಗ್ರೇವಿ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ ನೋಡಿ.

ಆಲೂಜೀರಾ ಡ್ರೈ
ಈರುಳ್ಳಿ ಹಾಕದೆ ಮಾಡುವ ಆಲೂ ಜೀರಾ ಪಲ್ಯದ ರೆಸಿಪಿ ನೋಡಿ ಇಲ್ಲಿದೆ.

ಅವಲಕ್ಕಿ ಪಾಯಸ
ಈ ದಿನ ಶ್ರಾದ್ಧಕ್ಕೆ ಪಾಯಸ ತಪ್ಪದೇ ಇರುತ್ತದೆ. ಸಾಮಾನ್ಯವಾಗಿ ಖೀರ್ ಪಾಯಸ ಮಾಡಲಾಗುವುದು, ಬೇಕಾದರೆ ಈ ಅವಲಕ್ಕಿ ಪಾಯಸ ಬೇಕಾದರೆ ಟ್ರೈ ಮಾಡಹುದು.

ಸಿಹಿ ಕುಂಬಳಕಾಯಿ ಪಾಯಸ
ಈ ದಿನದ ಅಡುಗೆಯಲ್ಲಿ ಸಿಹಿ ಕುಂಬಳಕಾಯಿಂದ ಮಾಡಿದ ಖಾದ್ಯ ಕಡ್ಡಾಯ. ನೀವು ಬೇಕಾದರೆ ಸಿಹಿ ಕುಂಬಳಕಾಯಿಯ ಪಾಯಸ ಬೇಕಾದರೂ ಮಾಡಬಹುದು.



Click it and Unblock the Notifications