Just In
- 8 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 8 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 8 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 10 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News 21 ರಾಜ್ಯ, 102 ಲೋಕಸಭಾ ಸ್ಥಾನ, 1625 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮತದಾರ ಪ್ರಭು ಸಿದ್ಧ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲಾ ಇವನ! ತನ್ನ ಅಪ್ಪಣೆಯಿಲ್ಲದೇ ತನ್ನನ್ನು ಈ ಜಗತ್ತಿಗೆ ಹೇಗೆ ತಂದಿರಿ ಎಂದು ತಂದೆತಾಯಿಯರನ್ನೇ ಕಟಕಟೆಗೆ ತಂದನಲ್ಲಾ?
ಮಾತಾಪಿತರು ತಮ್ಮ ಮಕ್ಕಳಿಗೆ ಮಾಡುವ ಸೇವೆಯನ್ನು ಯಾವುದೇ ಋಣದ ಮೂಲಕ ತೀರಿಸಲು ಸಾಧ್ಯವಿಲ್ಲ. ಒಂದು ಮಗು ಜನ್ಮ ತಳೆದ ಬಳಿಕ ಆ ಮಗುವಿನ ಆರೈಕೆ, ಲಾಲನೆ ಪಾಲನೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೂಲಕ ಸಭ್ಯ ವ್ಯಕ್ತಿಯನ್ನಾಗಿ ಬೆಳೆಸುವ ತಂದೆತಾಯಿಯರ ಪ್ರೀತಿಯನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ಆದರೆ ಮುಂಬೈನ ಒರ್ವ ತರುಣನಾದ ರಫಾಯೆಲ್ ಸಾಮ್ಯುಯೆಲ್ ಎಂಬ ವ್ಯಕ್ತಿ ತನ್ನನ್ನು ತನ್ನ ಅಪ್ಪಣೆಯಿಲ್ಲದೇ ಈ ಜಗತ್ತಿಗೆ ತಂದುದನ್ನು ಪ್ರಶ್ನಿಸಿ ತನ್ನ ತಂದೆತಾಯಿಯರನ್ನೇ ನ್ಯಾಯಾಲಯಕ್ಕೆ ಎಳೆದಿದ್ದಾನೆ. ಈತನ ಪ್ರಕಾರ ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಗೆ 'ಬಲವಂತವಾಗಿ ಜೀವ ಕೊಡುವ' ಅಧಿಕಾರವಿರುವುದಿಲ್ಲ.
ನ್ಯಾಯಾಲಯಕ್ಕೆ ಎಳೆದಿದ್ದಾನೆ ಎಂಬ ಮಾಹಿತಿಯಿಂದ ಈತ ತನ್ನ ತಂದೆ ತಾಯಿಯರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿಲ್ಲ ಎಂದು ಅರ್ಥವಲ್ಲ. ಆದರೆ ಯಾವುದೇ ದಂಪತಿಗಳು ಕೇವಲ ತಮ್ಮ ದೈಹಿಕ ಕಾಮನೆಯನ್ನು ತಣಿಸಿಕೊಳ್ಳುವ ಪರಿಣಾಮವಾಗಿ ಜೀವವೊಂದನ್ನು ಈ ಜಗತ್ತಿಗೆ ತರುವುದು ಮಾತ್ರ ಈತನ ದೃಷ್ಟಿಯಲ್ಲಿ ಅಪರಾಧವಾಗಿದೆ.
Most Read: ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ಮಹಿಳೆ!
ಮಾಧ್ಯಮಗಳಿಗೆ ನೀಡಿದ ವಿವರಗಳಲ್ಲಿ ಈತನ ಮಾತುಗಳು ಇಂತಿವೆ: "ನಾನು ಈ ಮೂಲಕ ಭಾರತದ ಎಲ್ಲಾ ಮಕ್ಕಳಲ್ಲಿ ನಿವೇಸಿಕೊಳ್ಳುವುದೇನೆಂದರೆ ಇವರಾರೂ ತಮ್ಮ ತಂದೆತಾಯಿಯರಿಗೆ ಏನನ್ನೂ ನೀಡಬೇಕಾಗಿಲ್ಲ. ನಾನು ನನ್ನ ತಂದೆ ತಾಯಿಯರನ್ನು ಪ್ರೀತಿಸುತ್ತೇನೆ ಹಾಗೂ ನಮ್ಮಲ್ಲಿ ಅದ್ಭುತವಾದ ಬಾಂಧವ್ಯವೂ ಇದೆ, ಆದರೆ ನಾನು ನನ್ನ ತಂದೆತಾಯಿಯರ ದೈಹಿಕ ಕಾಮನೆಗಳ ಸಂತೃಪ್ತಿಯ ಉತ್ಪನ್ನವಾಗಿದ್ದೇನೆ. ಆದರೆ ನಾನಾಗಿಯೇ ಕೇಳಿಕೊಳ್ಳದೇ ನನ್ನನ್ನು ಈ ಜಗತ್ತಿಗೆ ಕರೆತಂದು ಶಾಲೆಗೆ ಹೋಗಿ ಇಷ್ಟವಿಲ್ಲದ ವಿಷಯಗಳನ್ನು ಕಲಿತು ಇಷ್ಟವಿಲ್ಲದ ಕೆಲಸವನ್ನು ನಿರ್ವಹಿಸುವ ಹೊರೆಗಳನ್ನು ಹೊರಿಸುವುದಾದರೂ ಏಕೆ?"
Most Read: ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!
ಈತ ಫೇಸ್ ಬುಕ್ ನಲ್ಲಿ ಒಂದು ಖಾತೆಯನ್ನು ಹೊಂದಿದ್ದು 'ನಿಹೀಲಾನಂದ್' ('Nihiilanand')ಎಂಬ ಹೆಸರಿನಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಈತನ ಪ್ರತಿಕ್ರಿಯೆಗಳು ಈ ತರಹ ಇರುತ್ತವೆ: "ಒಂದು ಮಗುವನ್ನು ಕೇಳದೆಯೇ ಈ ಜಗತ್ತಿಗೆ ಕರೆತರುವುದು ಮತ್ತು ತನ್ನದೇ ಆದ ಜೀವನೋಪಾಯ ಹೊಂದುವಂತೆ ಮಾಡುವುದು ಒಂದು ಬಗೆಯ ಗುಲಾಮಗಿರಿ ಅಥವಾ ಅಪಹರಣವಲ್ಲದೇ ಮತ್ತೇನು?"
ಆದರೆ ಈ ವ್ಯಾಜ್ಯದಿಂದೇನಾಯಿತು? ಯಾವ ತೀರ್ಪು ನೀಡಲ್ಪಟ್ಟಿತು ಎಂಬ ಬಗ್ಗೆ ಇನ್ನೂ ಮಾಹಿತಿಗಳು ಬರಬೇಕಾಗಿದೆ. ಆದರೆ ಈ ಇಡಿಯ ಪ್ರಹಸನವೇ ನಮಗೆ ಗೊಂದಲಭರಿತವಾಗಿದೆ ಹಾಗೂ ನಮ್ಮ ನಂಬಿಕೆಗಳನ್ನೇ ಅಲ್ಲಾಡಿಸುವಷ್ಟು ವೈರುಧ್ಯ ಹೊಂದಿದೆ. ನಿಮಗೇನನಿಸುತ್ತದೆ?