Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಎಲಾ ಇವನ! ತನ್ನ ಅಪ್ಪಣೆಯಿಲ್ಲದೇ ತನ್ನನ್ನು ಈ ಜಗತ್ತಿಗೆ ಹೇಗೆ ತಂದಿರಿ ಎಂದು ತಂದೆತಾಯಿಯರನ್ನೇ ಕಟಕಟೆಗೆ ತಂದನಲ್ಲಾ?
ಮಾತಾಪಿತರು ತಮ್ಮ ಮಕ್ಕಳಿಗೆ ಮಾಡುವ ಸೇವೆಯನ್ನು ಯಾವುದೇ ಋಣದ ಮೂಲಕ ತೀರಿಸಲು ಸಾಧ್ಯವಿಲ್ಲ. ಒಂದು ಮಗು ಜನ್ಮ ತಳೆದ ಬಳಿಕ ಆ ಮಗುವಿನ ಆರೈಕೆ, ಲಾಲನೆ ಪಾಲನೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೂಲಕ ಸಭ್ಯ ವ್ಯಕ್ತಿಯನ್ನಾಗಿ ಬೆಳೆಸುವ ತಂದೆತಾಯಿಯರ ಪ್ರೀತಿಯನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ಆದರೆ ಮುಂಬೈನ ಒರ್ವ ತರುಣನಾದ ರಫಾಯೆಲ್ ಸಾಮ್ಯುಯೆಲ್ ಎಂಬ ವ್ಯಕ್ತಿ ತನ್ನನ್ನು ತನ್ನ ಅಪ್ಪಣೆಯಿಲ್ಲದೇ ಈ ಜಗತ್ತಿಗೆ ತಂದುದನ್ನು ಪ್ರಶ್ನಿಸಿ ತನ್ನ ತಂದೆತಾಯಿಯರನ್ನೇ ನ್ಯಾಯಾಲಯಕ್ಕೆ ಎಳೆದಿದ್ದಾನೆ. ಈತನ ಪ್ರಕಾರ ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಗೆ 'ಬಲವಂತವಾಗಿ ಜೀವ ಕೊಡುವ' ಅಧಿಕಾರವಿರುವುದಿಲ್ಲ.
ನ್ಯಾಯಾಲಯಕ್ಕೆ ಎಳೆದಿದ್ದಾನೆ ಎಂಬ ಮಾಹಿತಿಯಿಂದ ಈತ ತನ್ನ ತಂದೆ ತಾಯಿಯರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿಲ್ಲ ಎಂದು ಅರ್ಥವಲ್ಲ. ಆದರೆ ಯಾವುದೇ ದಂಪತಿಗಳು ಕೇವಲ ತಮ್ಮ ದೈಹಿಕ ಕಾಮನೆಯನ್ನು ತಣಿಸಿಕೊಳ್ಳುವ ಪರಿಣಾಮವಾಗಿ ಜೀವವೊಂದನ್ನು ಈ ಜಗತ್ತಿಗೆ ತರುವುದು ಮಾತ್ರ ಈತನ ದೃಷ್ಟಿಯಲ್ಲಿ ಅಪರಾಧವಾಗಿದೆ.

ಮಾಧ್ಯಮಗಳಿಗೆ ನೀಡಿದ ವಿವರಗಳಲ್ಲಿ ಈತನ ಮಾತುಗಳು ಇಂತಿವೆ: "ನಾನು ಈ ಮೂಲಕ ಭಾರತದ ಎಲ್ಲಾ ಮಕ್ಕಳಲ್ಲಿ ನಿವೇಸಿಕೊಳ್ಳುವುದೇನೆಂದರೆ ಇವರಾರೂ ತಮ್ಮ ತಂದೆತಾಯಿಯರಿಗೆ ಏನನ್ನೂ ನೀಡಬೇಕಾಗಿಲ್ಲ. ನಾನು ನನ್ನ ತಂದೆ ತಾಯಿಯರನ್ನು ಪ್ರೀತಿಸುತ್ತೇನೆ ಹಾಗೂ ನಮ್ಮಲ್ಲಿ ಅದ್ಭುತವಾದ ಬಾಂಧವ್ಯವೂ ಇದೆ, ಆದರೆ ನಾನು ನನ್ನ ತಂದೆತಾಯಿಯರ ದೈಹಿಕ ಕಾಮನೆಗಳ ಸಂತೃಪ್ತಿಯ ಉತ್ಪನ್ನವಾಗಿದ್ದೇನೆ. ಆದರೆ ನಾನಾಗಿಯೇ ಕೇಳಿಕೊಳ್ಳದೇ ನನ್ನನ್ನು ಈ ಜಗತ್ತಿಗೆ ಕರೆತಂದು ಶಾಲೆಗೆ ಹೋಗಿ ಇಷ್ಟವಿಲ್ಲದ ವಿಷಯಗಳನ್ನು ಕಲಿತು ಇಷ್ಟವಿಲ್ಲದ ಕೆಲಸವನ್ನು ನಿರ್ವಹಿಸುವ ಹೊರೆಗಳನ್ನು ಹೊರಿಸುವುದಾದರೂ ಏಕೆ?"
ಈತ ಫೇಸ್ ಬುಕ್ ನಲ್ಲಿ ಒಂದು ಖಾತೆಯನ್ನು ಹೊಂದಿದ್ದು 'ನಿಹೀಲಾನಂದ್' ('Nihiilanand')ಎಂಬ ಹೆಸರಿನಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಈತನ ಪ್ರತಿಕ್ರಿಯೆಗಳು ಈ ತರಹ ಇರುತ್ತವೆ: "ಒಂದು ಮಗುವನ್ನು ಕೇಳದೆಯೇ ಈ ಜಗತ್ತಿಗೆ ಕರೆತರುವುದು ಮತ್ತು ತನ್ನದೇ ಆದ ಜೀವನೋಪಾಯ ಹೊಂದುವಂತೆ ಮಾಡುವುದು ಒಂದು ಬಗೆಯ ಗುಲಾಮಗಿರಿ ಅಥವಾ ಅಪಹರಣವಲ್ಲದೇ ಮತ್ತೇನು?"
ಆದರೆ ಈ ವ್ಯಾಜ್ಯದಿಂದೇನಾಯಿತು? ಯಾವ ತೀರ್ಪು ನೀಡಲ್ಪಟ್ಟಿತು ಎಂಬ ಬಗ್ಗೆ ಇನ್ನೂ ಮಾಹಿತಿಗಳು ಬರಬೇಕಾಗಿದೆ. ಆದರೆ ಈ ಇಡಿಯ ಪ್ರಹಸನವೇ ನಮಗೆ ಗೊಂದಲಭರಿತವಾಗಿದೆ ಹಾಗೂ ನಮ್ಮ ನಂಬಿಕೆಗಳನ್ನೇ ಅಲ್ಲಾಡಿಸುವಷ್ಟು ವೈರುಧ್ಯ ಹೊಂದಿದೆ. ನಿಮಗೇನನಿಸುತ್ತದೆ?



Click it and Unblock the Notifications












