Latest Updates
-
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ
‘ಕಣ್ಣ ದೃಷ್ಟಿ ತಗಲುವುದು’ ಎಂದರೇನು? ಇದಕ್ಕೆ ಪರಿಹಾರವೇನು?
ಹಳ್ಳಿಗಳಲ್ಲಿ ಈಗಲೂ ಕೆಲವೊಂದು ಮೂಢನಂಬಿಕೆಗಳು ಬಲವಾಗಿ ಬೇರೂರಿದೆ. ಇದರಲ್ಲಿ ಕೆಲವು ನಮಗೆ ಅತಿರೇಕದ್ದು ಎಂದು ಅನಿಸಿದರೆ ಮತ್ತೆ ಕೆಲವು ನಮಗೆ ನಂಬಿಕೆಯನ್ನು ಉಂಟು ಮಾಡುವಂತಿರುತ್ತದೆ. ಅದರಲ್ಲೂ ದೃಷ್ಟಿ, ಕಣ್ಣಿನ ದೃಷ್ಟಿ ಎನ್ನುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ಹಣವಂತ ವ್ಯಕ್ತಿ ಹಣ ಕಳೆದುಕೊಂಡರೆ ಅಥವಾ ಇನ್ನೇನಾದರೂ ಸಂಭವಿಸಿದರೆ ಆತನಿಗೆ ದೃಷ್ಟಿಯಾಗಿರಬಹುದು ಎಂದು ಹೇಳುವ ಪರಿಪಾಠವಿದೆ.
ಹಿಂದೂ ಪುರಾಣಗಳಲ್ಲೂ ಕಣ್ಣದೃಷ್ಟಿಯ ಬಗ್ಗೆ ಉಲ್ಲೇಖವಿದೆ. ಮಾನಸಿಕ ಶಕ್ತಿಯು ಆಲೋಚನೆ, ಏಕಾಗ್ರತೆ, ದೃಷ್ಟಿ, ಹೊಟ್ಟೆಯುರಿ ಮತ್ತು ಮಾತಿನ ಮೂಲಕ ಹೊರಬರುವುದು. ಇದು ಇನ್ನೊಬ್ಬನ ಅಭಿವೃದ್ಧಿ, ಏಳಿಗೆ ಮತ್ತು ಸೌಂದರ್ಯದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದೇ ಕಣ್ಣ ದೃಷ್ಟಿ ಎನ್ನುವುದು.
ನಮ್ಮ ದೇಹದ ಕಾಲಿನಿಂದ ಹಿಡಿದು ಹಣೆಯ ತನಕ ಏಳು ಚಕ್ರಗಳಿವೆ. ಈ ಚಕ್ರಗಳು ತಿರುಗಳು ಪ್ರಾರಂಭಿಸಿದಾಗ ಮತ್ತು ಸಕ್ರಿಯವಾದಾಗ ನಮ್ಮ ದೇಹದಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಶಕ್ತಿಯು ಚಟುವಟಿಕೆಯನ್ನು ಆರಂಭಿಸುವುದು. ನಕಾರಾತ್ಮಕ ಅಂಶಗಳು ಇವುಗಳ ಮೇಲೆ ಪರಿಣಾಮ ಬೀರಿದಾಗ ನಮ್ಮ ದೇಹದ ಚಕ್ರಗಳು ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಿಧಾನವಾಗುವಂತೆ ಮಾಡುತ್ತದೆ. ಇಂತಹ ಕಣ್ಣದೃಷ್ಟಿಯನ್ನು ನಿವಾರಿಸಲು ಇರುವ ಕೆಲವೊಂದು ವಿಧಾನಗಳನ್ನು ನಾವು ಇಂದು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ, ಮುಂದೆ ಓದಿ..

ಕಪ್ಪು ನೂಲನ್ನು ಕಟ್ಟುವುದು
ದೃಷ್ಟಿಯಾಗದಂತೆ ತಡೆಯಲು ಹೆಚ್ಚಾಗಿ ನಾವು ಕಪ್ಪು ಚುಕ್ಕೆಯನ್ನು ಹಾಕಿಕೊಳ್ಳುತ್ತೇಚೆ. ಮಕ್ಕಳು, ಮದುಮಗಳು ಅಥವಾ ಮದುಮಗನಿಗೆ ಕಪ್ಪುಚುಕ್ಕೆಯನ್ನು ಹಾಕುತ್ತೇವೆ. ಸಣ್ಣ ಮಕ್ಕಳ ಸೊಂಟಕ್ಕೆ ಇದೇ ಕಾರಣದಿಂದಾಗಿ ಕಪ್ಪು ನೂಲನ್ನು ಕಟ್ಟಿರುತ್ತಾರೆ.

ದ್ವಿಚಕ್ರ ವಾಹನಗಳಿಗೆ
ದ್ವಿಚಕ್ರ ವಾಹನ, ಕಾರುಗಳು, ಟ್ರಕ್ ಗಳು ಮತ್ತು ಮನೆಗಳ ಮೇಲೆ ಯಾವುದಾದರೂ ಒಂದು ರಾಕ್ಷಸನಂತೆ ಕಾಣುವ ಚಿತ್ರವನ್ನು ತೂಗು ಹಾಕಿರುತ್ತಾರೆ ಅಥವಾ ನಿಂಬೆಕಾಯಿ, ಮೆಣಸನ್ನು ಕಟ್ಟಿರುತ್ತಾರೆ. ಹೊಸ ವಾಹನವನ್ನು ಖರೀದಿಸಿದಾಗ ಅದಕ್ಕೆ ಯಾವುದೇ ಕಣ್ಣು ಬೀಳದಿರಲೆಂದು ಚಕ್ರದಡಿಗೆ ನಿಂಬೆಹಣ್ಣನ್ನು ಇಟ್ಟು ವಾಹನವನ್ನು ಓಡಿಸುತ್ತಾರೆ.

ದ್ವಿಚಕ್ರ ವಾಹನಗಳಿಗೆ
ಕೆಲವೊಂದು ಅಂಗಡಿ ಹಾಗೂ ಮನೆಗಳಲ್ಲಿಯೂ ನಿಂಬೆ ಹಾಗೂ ಮೆಣಸಿನ ಮಾಲೆಯನ್ನು ಕಟ್ಟಿರುವುದನ್ನು ನೋಡಬಹುದಾಗಿದೆ. ಕೆಲವೊಂದು ಅಂಗಡಿಯವರು ರಾತ್ರಿ ಬೀಗ ಹಾಕಿದ ಬಳಿಕ ಸಣ್ಣ ಪೇಪರಿನ ತುಂಡನ್ನು ಸುಟ್ಟು ಅದರನ್ನು ವೃತ್ತಾಕಾರದಲ್ಲಿ ಬಿಡಿಸಿದ ಬಳಿಕ ಮನೆಗೆ ತೆರಳುವುದು ಒಂದು ನಂಬಿಕೆ.

ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?
ದೃಷ್ಟಿ ದೋಷವನ್ನು ಹಲವಾರು ರೀತಿಯಿಂದ ನಿವಾರಿಸುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಅನುಸರಿಕೊಂಡು ಬರುತ್ತಿರುವಂತಹ ವಿಧಾನವೆಂದರೆ ಕೆಂಪು ಮೆಣಸು, ಸಾಸಿವೆ ಮತ್ತು ಕರಿಮೆಣಸಿನ ಕಾಯಿ ಮತ್ತು ಉಪ್ಪನ್ನು ನಿಮ್ಮ ಬಲದ ಅಂಗೈಯಲ್ಲಿ ಹಿಡಿದುಕೊಂಡು ಯಾರೊಂದಿಗೂ ಮಾತನಾಡದೆ ಏಕಾಗ್ರತೆಯಿಂದ ಬಲದ ಅಂಗೈನ್ನು ಎದುರಿಗಿನ ವ್ಯಕ್ತಿಯ ತಲೆಗೆ ಮೂರು, ಐದು ಅಥವಾ ಏಳು ಸುತ್ತು ಹಾಕಬೇಕು. ಇದರ ಬಳಿಕ ಇದನ್ನು ಒಲೆ ಅಥವಾ ಮಾರ್ಗ ಮಧ್ಯಕ್ಕೆ ಎಸೆಯಬೇಕು. ಇದನ್ನು ಒಲೆ ಅಥವಾ ನಿಮ್ಮ ಅಡುಗೆ ಮನೆಯ ಸಿಂಕ್ ಗೆ ಎಸೆಯುವಾಗ ಸ್ವಲ್ಪ ದೂರ ನಿಂತುಕೊಂಡು ಎಸೆಯಿರಿ.

ಹಾಗಾದರೆ ದೃಷ್ಟಿ ದೋಷ ನಿವಾರಣೆ ಹೇಗೆ?
ಇನ್ನೊಂದು ವಿಧಾನವೆಂದರೆ ಲಿಂಬೆ/ ತೆಂಗಿನಕಾಯಿ ಅಥವಾ ಬೂದುಕುಂಬಳದಲ್ಲಿ ಆರತಿಯನ್ನು ಎತ್ತಿ ಬಳಿಕ ಅದನ್ನು ನೆಲಕ್ಕೆ ಬಡಿಯಬೇಕು. ಮತ್ತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಆರತಿ ಎತ್ತುವಾಗ ಸುಣ್ಣ, ಅರಿಶಿನ ನೀರನ್ನು ಮಿಶ್ರಣ ಮಾಡಿ ಅದನ್ನು ಅಡಕೆ ಎಲೆಯಲ್ಲಿ ಹಾಕಿ ಮುಖದ ಸುತ್ತ ಎಡಕ್ಕೆ ಮತ್ತು ಬಲಕ್ಕೆ ಸುತ್ತು ತಿರುಗಿಸಿದರೆ ಆಗ ನಕಾರಾತ್ಮಕ ಅಂಶಗಳು ದೂರ ಹೋಗುವುದು.

ಕರ್ಪೂರ ಚಿಕಿತ್ಸೆ
ರಾತ್ರಿ ಮಲಗುವ ಮೊದಲು ಕರ್ಪೂರವನ್ನು ಹಿಡಿದುಕೊಂಡು ವ್ಯಕ್ತಿಯ ತಲೆಯ ಸುತ್ತಲು ತಿರುಗಿಸಿ ಇದನ್ನು ನಿಮ್ಮ ಮನೆಯ ಹೊರಗಡೆ ಬಾಗಿಲಿನ ಎದುರುಗಡೆ ಉರಿಸಿ.

ದೃಷ್ಟಿ ದೋಷ ತಡೆಯುವುದು ಹೇಗೆ
ದೃಷ್ಟಿ ದೋಷವನ್ನು ಪ್ರಮುಖವಾಗಿ ನಿವಾರಿಸುವ ಉಪಾಯವೆಂದರೆ ಕಣ್ಣದೃಷ್ಟಿ ಗಣಪತಿ. ನೀಲಿ ಕಣ್ಣಿನ ತಾಯಿತ ಅಥವಾ ನರಸಿಂಹ ದೇವರ ಫೋಟೊವನ್ನು ಮನೆಯ ಪ್ರವೇಶದ್ವಾರದಲ್ಲಿ ತೂಗು ಹಾಕಬೇಕು. ಇದರಿಂದ ನಿಮ್ಮ ಮನೆ ಅಥವಾ ಅಂಗಡಿಯೊಳಗೆ ನಕಾರಾತ್ಮಕ ಪರಿಣಾಮ ಬೀರುವುದು ಕಡಿಮೆಯಾಗುವುದು.

ತೂಗಾಡುವ ಆಲಾಮ್
ಮನೆಯ ಪ್ರವೇಶ ದ್ವಾರದಲ್ಲಿ ತೂಗಾಡುವ ಆಲಾಮ್ ಮತ್ತು ಪ್ರತ್ಯೇಕ ಡಬ್ಬಿಯಲ್ಲಿ ಕಲ್ಲುಉಪ್ಪನ್ನು ಇಡಬೇಕು. ಒಂದು ಗಾಜಿನ ಡಬ್ಬಿಯಲ್ಲಿ ನೀರು ಹಾಗೂ ಕಲ್ಲುಉಪ್ಪನ್ನು ಹಾಕಿ ನಿಮ್ಮ ಹಾಲ್ ನಲ್ಲಿ ಇಡಿ. ಇದನ್ನು ಎಲ್ಲರೂ ನೋಡುವಂತಿರಲಿ. ನಮಗೆ ದೃಷ್ಟಿಯಾಗುತ್ತದೆ ಎನ್ನುವ ಜಾಗಕ್ಕೆ ಡಬ್ಬಿಯಲ್ಲಿರುವ ನೀರನ್ನು ಚೆಲ್ಲಿ ಮತ್ತೆ ಅದಕ್ಕೆ ಹೊಸ ನೀರು ಹಾಗೂ ಉಪ್ಪನ್ನು ಹಾಕಿ. ವಾರಕ್ಕೊಮ್ಮೆ ಹೀಗೆ ಮಾಡಿ.



Click it and Unblock the Notifications











