Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 7 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 8 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷಯ ತೃತೀಯ ಹಬ್ಬ ಆರಂಭವಾಗಿದ್ದು ಹೇಗೆ? ಅದರ ಹಿನ್ನೆಲೆಯೇನು?
ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಆ ಪ್ರತಿ ಹಬ್ಬಗಳಿಗೂ ಒಂದೊಂದು ಹಿನ್ನೆಲೆ ಇದೆ. ಅದೇ ರೀತಿ ಅಕ್ಷಯ ತೃತೀಯ ಹಬ್ಬವನ್ನು ಹಿಂದೂ ಹಾಗೂ ಜೈನ ಧರ್ಮದವರು ಆಚರಣೆ ಮಾಡುತ್ತಾರೆ. ಅಷ್ಟಕ್ಕು ಅಕ್ಷಯ ತೃತೀಯ ಹಬ್ಬದ ಹಿನ್ನೆಲೆ ಏನು? ಪುರಾಣಗಳು ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಅಕ್ಷಯ ತೃತೀಯ ಎಂದರೆ ಅದೊಂದು ಮುಗಿಯದ ಸಂಪತ್ತು ಎಂಬ ನಂಬಿಕೆ ಇದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪವಿತ್ರ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದಿನ ಲೇಖನದಲ್ಲಿ ಈ ಹಬ್ಬವನ್ನು ಏಕೆ ಮತ್ತು ಯಾವ ದಿನ ಆಚರಿಸಬೇಕು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. ಕಷ್ಟಕಾರ್ಪಣ್ಯ ಮರೆಯಾಗಲು 'ಅಷ್ಟ ಲಕ್ಷ್ಮೀ ಸ್ತೋತ್ರ' ನಿತ್ಯ ಪಠಿಸಿ
ಛತ್ತೀಸ್ಗಢದಲ್ಲಿ ಅಕ್ತಿ ಎಂಬುದಾಗಿ ಇದನ್ನು ಕರೆದರೆ, ಗುಜರಾತ್ ಮತ್ತು ರಾಜಸ್ತಾನದಲ್ಲಿ ಅಕಾ ತೀಜ್ ಎಂದೇ ಪ್ರಸಿದ್ಧವಾಗಿದೆ. ಲಕ್ಷ್ಮೀ ಮತ್ತು ಕುಬೇರನಿಗೆ ಈ ದಿನ ಪ್ರತ್ಯೇಕ ಮಹತ್ವವಿದ್ದು ಸಂಪತ್ತನ್ನು ಪಡೆದುಕೊಳ್ಳಲು ಈ ದಿನ ಈ ದೇವರುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವರನ್ನು ಸಂಪ್ರೀತಿಪಡಿಸಲು ಆಯಾಯ ದೇವರುಗಳ ಮಂತ್ರವನ್ನು ಪಠಿಸಬೇಕಾಗಿದ್ದು ಇದರಿಂದ ನಾವು ಮನಸ್ಸಲ್ಲಿರುವ ಇಚ್ಛೆ ಈಡೇರಲಿದೆ....
ಹಿಂದೂ ಹಾಗೂ ಜೈನರು ಆಚರಣೆ ಮಾಡುತ್ತಾರೆ
ಅಕ್ಷಯ ತೃತೀಯವನ್ನು ಹಿಂದೂಗಳು ಮಾತ್ರವಲ್ಲದೆ ಜೈನರು ಕೂಡ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಪ್ರತಿಯೊಂದು ರಾಜ್ಯದಲ್ಲೂ ಈ ಹಬ್ಬಕ್ಕೆ ಪ್ರಾಧಾನ್ಯತೆ ಇದ್ದು ಐಶ್ವರ್ಯ ಮತ್ತು ಸಂಪತ್ತಿನ ಗುರುತಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಪೂಜೆಗಾಗಿ ಉತ್ತಮ ಸಮಯ
ಅಕ್ಷಯ ತೃತೀಯದ ದಿನ ಶುಭ ಗಳಿಗೆಯನ್ನು ನೋಡಿಕೊಂಡು ಪೂಜೆ ಸಲ್ಲಿಸಬೇಕು.
ಪರಶುರಾಮ ಜನನ
ಅಕ್ಷಯ ತೃತೀಯದ ಮುಹತ್ವವನ್ನು ಅರಿತುಕೊಳ್ಳುವಾಗ, ಈ ದಿನ ಪರಶುರಾಮನ ಜನ್ಮದಿನವಾಗಿದೆ. 21 ನೆಯ ಬಾರಿ ಸರಿಯಾಗಿ ಆಡಳಿತ ನಡೆಸದ ರಾಜರುಗಳಿಂದ ವಿಶ್ವವನ್ನು ಮುಕ್ತಿಗೊಳಿಸಿದ ವಿಷ್ಣುವಿನ ಅವತಾರವಾಗಿದೆ ಪರಶುರಾಮ ಅವತಾರ.
ಮಹಾಭಾರತದ ಆರಂಭ
ಭಗವಾನ್ ಗಣೇಶನು ಈ ಶುಭ ದಿನದಂದೇ ಮಹಾಭಾರತವನ್ನು ಬರೆಯಲು ಆರಂಭಿಸಿದರು ಎಂಬುದಾಗಿ ಐತಿಹ್ಯವಿದ್ದು ವೇದ ವ್ಯಾಸರು ಇವರಿಗೆ ಮಾರ್ಗದರ್ಶನ ನೀಡಿದ್ದರು.
ಪಾಂಡವರಿಗೆ ವಿಜಯದ ದಿನ
ಅಕ್ಷಯ ತೃತೀಯ ಮತ್ತು ಮಹಾಭಾರತಕ್ಕೆ ಸಂಬಂಧಿಸಿದಂತೆ ಇನ್ನೊಂದು ಕಥೆಯಿದೆ. ಈ ದಿನ ಪಾಂಡವರಿಗೆ ಮರದಲ್ಲಿ ಅವಿತಿಟ್ಟ ಆಯುಧಗಳು ದೊರೆತಿದ್ದು, ಇದರಿಂದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ವಿರುದ್ಧ ಪಾಂಡವರಿಗೆ ಜಯ ಗಳಿಸಲು ಸಾಧ್ಯವಾಯಿತು.
ಕುಬೇರನ ದಿನ
ಹಲವಾರು ಪುರಾಣಗಳಲ್ಲಿ ಅಕ್ಷಯ ತೃತೀಯವನ್ನು ಪವಿತ್ರ ದಿನವಾಗಿ ಕಂಡುಕೊಳ್ಳಲಾಗಿದೆ. ಶಿವಪುರಾಣದ ಪ್ರಕಾರ ಶಿವ ದೇವರ ವರದಿಂದ ಕುಬೇರನು ಎಲ್ಲಾ ಧನ ಧಾನ್ಯಗಳನ್ನು ಪಡೆದುಕೊಂಡಿದ್ದರು ಮತ್ತು ಲಕ್ಷ್ಮೀ ದೇವತೆಯಂತೆ ಅವರು ಕೂಡ ಸಂಪತ್ತಿನ ಒಡೆಯರು ಎಂದೆನಿಸಿದ್ದಾರೆ.
ಚಿನ್ನವನ್ನು ಖರೀದಿ ಮಾಡುವ ಮಹತ್ವ
ವ್ಯವಹಾರದೊಂದಿಗೆ ಈ ದಿನ ಸಂಯೋಜನೆಯನ್ನು ಪಡೆದುಕೊಂಡಿದೆ. ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಶುಭ ಎಂದಾಗಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಶುಭ ಮತ್ತು ಉತ್ತಮ ದಿನಗಳು ನಿಮಗೆ ಒದಗಲಿವೆ.
ಹೊಸ ವರ್ಷದ ಆರಂಭ
ಶಾಸ್ತ್ರಗಳ ಪ್ರಕಾರ, ತ್ರೇತಾಯುಗ ಅಥವಾ ಶ್ರೀರಾಮ ದೇವರ ಯುಗದ ಆರಂಭವೆಂದು ಈ ದಿನವನ್ನು ಕರೆಯಲಾಗುತ್ತದೆ. ಧರ್ಮದ ಹಾದಿಯನ್ನು ಜನರು ಈ ದಿನ ಅನುಸರಿಸಿದ್ದಾರೆ. ಅಕ್ಷಯ ತೃತೀಯವೆಂಬುದು ಪಾವಿತ್ರ್ಯತೆಯ ಸಂಕೇತವಾಗಿದೆ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳುವ ಶುಭವಸರವಾಗಿದೆ. ಈ ದಿನ ನೀವು ಯಾವುದೇ ಶುಭ ಕಾರ್ಯವನ್ನು ಆರಂಭಿಸಿದರೂ ನಿಮಗೆ ಅರದಲ್ಲಿ ಜಯ ನಿಶ್ಚಿತವಾಗಿದೆ. ಜಪ, ದಾನ-ಪುಣ್ಯ,ಪಿತೃ ತರ್ಪಣ ಮೊದಲಾದವನ್ನು ನಡೆಸುವುದರಿಂದ ಅವರುಗಳ ಶುಭಾಶಿರ್ವಾದ ನಿಮಗೆ ದೊರೆಯಲಿದೆ.