Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಬಳಸಿದ ಟೀ ಬ್ಯಾಗ್ನಲ್ಲಿದೆ ಚರ್ಮ ಸಮಸ್ಯೆ ಗುಣಪಡಿಸುವ ಶಕ್ತಿ, ಅವುಗಳನ್ನು ಎಂದಿಗೂ ಎಸೆಯಬೇಡಿ,
ಟೀ ಎಲ್ಲರ ಫೇವರೆಟ್.. ದಿ ಶುರುವಾಗುವುದರಿಂದ ಹಿಡಿದು, ಆ ದಿನ ಮುಗಿಸುವ ತನಕ ವಿವಿಧ ರೀತಿಯ ಚಹಾ ಕುಡಿಯುವವರಿದ್ದಾರೆ. ಆದರೆ, ನಾವಿಂದ ಟೀಯ ಅನುಕೂಲ ಅಥವಾ ಅನಾನುಕೂಲಗಳ ಬಗ್ಗೆ ಮಾತನಾಡುತ್ತಿಲ್ಲ. ಟೀ ತಯಾರಿಸಿದ ಮೇಲೆ ಎಸೆಯುವ ಟೀ ಬ್ಯಾಗ್ ಬಗ್ಗೆ ಚರ್ಚಿಸಲಿದ್ದೇವೆ.
ವೇಸ್ಟ್ ಎಂದು ಎಸೆಯುವ ಟೀ ಬ್ಯಾಗ್ನ್ನು ಸಾಕಷ್ಟು ಚಿಕಿತ್ಸೆಗಳಿಗೆ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದು ಕೆಲವು ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇನ್ನುಮುಂದೆ ಟೀ ಬಳಸಿದ ಟೀ ಬ್ಯಾಗ್ಗಳನ್ನು ಬಿಸಾಡುವ ಮುನ್ನ ಒಮ್ಮೆ ಅದರ ಶಕ್ತಿಯನ್ನು ಯೋಚಿಸಿ. ಹಾಗಾದ್ರೆ, ಅವುಗಳಾವುವು ಎಂಬುದನ್ನು ನೋಡಿಕೊಂಡು ಬರೋಣ.
ಬಳಸಿದ ಟೀ ಬ್ಯಾಗ್ಗಳನ್ನು ಯಾವ ಚಿಕಿತ್ಸೆಗೆ ಬಳಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೀಟ ಕಡಿತದ ಮೇಲೆ:
ಚಹಾ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ. ಚರ್ಮದ ಮೇಲೆ ಕೀಟ ಕಡಿತದಿಂದಾದ ಗುಳ್ಳೆಗಳು ಅಥವಾ ಹುಳುವಿನ ಕಡಿತದಿಂದ ಸಣ್ಣ ಸಣ್ಣಕಣಗಳು ಬಂದಿದ್ದರೆ, ಬಳಸಿದ ಚಹಾ ಎಲೆಗಳು ಅಥವಾ ಟೀ ಬ್ಯಾಗ್ಗಳನ್ನು ಅದರ ಮೇಲಿಡಿ. ಇದರಿಂದಾಗಿ ಊತ ಕಡಿಮೆಯಾಗುತ್ತದೆ ಮತ್ತು ಸೋಂಕು ಹರಡುವುದಿಲ್ಲ.

ಕುರು ಅಥವಾ ಕುರಾಕ್ಕೆ ಪರಿಣಾಮಕಾರಿ:
ದೇಹದ ಯಾವುದೇ ಭಾಗದಲ್ಲಿ ಕುರಾ ಅಥವಾ ಕುರು ಆದರೆ, ಆ ನೋವನ್ನು ಸಹಿಸಲು ಅಸಾಧ್ಯ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಆದ್ದರಿಂದ ಅವುಗಳಿಗೆ ಬಳಸಿದ ಟೀ ಬ್ಯಾಗ್ನೊಂದಿಗೆ ಚಿಕಿತ್ಸೆ ನೀಡಿ. ಟೀ ಬ್ಯಾಗ್ಗಳನ್ನು ಕುರುವಿನ ಮೇಲೆ ಇಡುವುದರಿಂದ ಅಥವಾ ಬಳಸಿದ ಚಹಾ ಎಲೆಗಳನ್ನು ಕುರುವಿನ ಮೇಲಿಟ್ಟರೆ, ಅದರ ನೀರು ಸುಲಭವಾಗಿ ಬರಿದಾಗುತ್ತದೆ, ಅದು ನಿಧಾನವಾಗಿ ಒಣಗಲು ಪ್ರಾರಂಭಿಸುತ್ತದೆ.

ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ:
ಬಾಯಿಯ ಹುಣ್ಣುಗಳನ್ನು ಬಳಸಿದ ಟೀ ಬ್ಯಾಗ್ಗಳಿಂದಲೂ ಗುಣಪಡಿಸಬಹುದು, ಇದಕ್ಕಾಗಿ ಬಳಸಿದ ಟೀ ಬ್ಯಾಗ್ಗಳನ್ನು ಡೀಪ್ ಫ್ರಿಜ್ ಮಾಡಿದ ನಂತರ ಅವುಗಳನ್ನು ಗಾಯದ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಪರಿಹಾರ ಸಿಗುತ್ತದೆ.

ಸನ್ಬರ್ನ್ ಕಡಿಮೆಮಾಡುವುದು:
ಗ್ರೀನ್ ಟೀಯಲ್ಲಿ ಕಂಡುಬರುವ ಎಪಿಗಲ್ಲೊಕಟೆಚಿನ್ -3-ಗ್ಯಾಲೇಟ್ (ಇಜಿಸಿಜಿ) ಒಂದು ಸನ್ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುವ ಒಂದು ಅಂಶವಾಗಿದೆ. ಇದು ನಿಮ್ಮನ್ನು ಯುವಿ ವಿಕಿರಣದಿಂದ ರಕ್ಷಿಸುತ್ತದೆ. ಹಾಗಾಗಿ ಸನ್ಬರ್ನ್ ಆದ ಜಾಗಕ್ಕೆ ಒದ್ದೆಯಾದ ಟೀ ಬ್ಯಾಗ್ ಇಡಿ, ಸ್ವಲ್ಪ ಸಮಯ ಬಿಡಿ.

ರಕ್ತಸ್ರಾವವನ್ನು ನಿಲ್ಲಿಸುವುದು:
ಅನೇಕ ಬಾರಿ ಗಾಯದಿಂದಾಗಿ ರಕ್ತಸ್ರಾವ ನಿಲ್ಲುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆಗ ಇದಕ್ಕಾಗಿ ಬಳಸಿದ ಚಹಾ ಎಲೆಗಳನ್ನು ಪ್ರಯತ್ನಿಸಿ. ಇದರಲ್ಲಿರುವ ಟ್ಯಾನಿನ್ಗಳು ರಕ್ತವನ್ನು ಹೆಪ್ಪುಗಟ್ಟಿಸುತ್ತವೆ, ಇದು ರಕ್ತಸ್ರಾವವನ್ನು ನಿಲ್ಲಿಸುತ್ತದೆ.



Click it and Unblock the Notifications
