Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಮಹಿಳೆಯರನ್ನು ಕಾಡುವ ಅಂಡಾಶಯ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಿವು
ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ನಂತರ ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಎಂದರೆ ಅದು ಅಂಡಾಶಯದ ಕ್ಯಾನ್ಸರ್ ಆಗಿದೆ. ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಗೆಡ್ಡೆ ಬೆಳೆಯಲು ಕಾರಣವಾಗುವುದು.
ಕುಟುಂಬದ ಇತಿಹಾಸ, ತಡವಾಗಿ ಮುಟ್ಟುನಿಲ್ಲುವುದು ಅಥವಾ ಸ್ತನ ಕ್ಯಾನ್ಸರ್ ಇತಿಹಾಸ ಹೊಂದಿರುವ ಕುಟುಂಬಗಳು ಮತ್ತು ಮಧುಮೇಹ ರೋಗಿಗಳು ಈ ಕ್ಯಾನ್ಸರ್ ಗೆ ತುತ್ತಾಗುವ ಸಾದ್ಯತೆ ಹೆಚ್ಚು. ರಕ್ತದಲ್ಲಿ ಇನ್ಸುಲಿನ್ ಹೆಚ್ಚಳದಿಂದಾಗಿ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಹಲವಾರು ಅಧ್ಯಯನಗಳು ಹೇಳಿವೆ.
ಈ ಅಂಡಾಶಯದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ, ಅದನ್ನು ನಿರ್ವಹಿಸಲು ಸುಲಭವಾಗುವುದು. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಿಬ್ಬೊಟ್ಟೆ ಉಬ್ಬುವುದು:
ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೊಟ್ಟೆ ಉಬ್ಬುವಿಕೆ ಅನುಭವಿಸುವುದು ಸಾಮಾನ್ಯ ಆದರೆ ನಿರಂತರ ಉಬ್ಬುವುದು ಅಥವಾ ಹೊಟ್ಟೆ ತುಂಬಿದ ಭಾವನೆ ಆತಂಕಕ್ಕೆ ಕಾರಣವಾಗಬಹುದು. ಮೂರು ವಾರಗಳವರೆಗೆ ಯಾವುದೇ ನಿರಂತರ ಹೊಟ್ಟೆ ಉಬ್ಬುವಿಕೆ ಅಥವಾ ಊತ ಕಂಡುಬಂದರೆ ತಕ್ಷಣವೇ ಪರಿಹರಿಸಬೇಕು, ವೈದ್ಯರ ಬಳಿ ಹೋಗಬೇಕು.

ಮಲಬದ್ಧತೆ:
ಕರುಳಿನ ಚಲನೆಯಲ್ಲಿನ ಬದಲಾವಣೆ ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಗೆಡ್ಡೆಯು ಕರುಳಿನ ಮೇಲೆ ಒತ್ತಡವನ್ನುಂಟುಮಾಡುತ್ತದೆ, ಇದರಿಂದಾಗಿ ಮಲಬದ್ಧತೆಯ ಸಮಸ್ಯೆ ಉಂಟಾಗುವುದು.

ಆಯಾಸ:
ಏನಾದರೂ ಕೆಲಸ ಮಾಡಿದರೆ ಆಯಾಸ ಮಾಮೂಲಿ, ಆದರೆ ಏನೂ ಕೆಲಸ ಮಾಡದೇ ಕೇವಲ ನಡೆದರೇ ಅಥವಾ ದೈನಂದಿನ ಕೆಲಸಗಳನ್ನಷ್ಟೇ ಮಾಡಿದರೆ ಹೆಚ್ಚು ಆಯಾಸವಾಗುತ್ತಿದೆ ಎಂದರೆ ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸವುದು ಉತ್ತಮ, ಏಕೆಂದರೆ ಇದು ಕೂಡ ಅಂಡಾಶಯದ ಕ್ಯಾನ್ಸರ್ ಇರುವ ಸೂಚನೆಯಿರಬಹುದು.

ಹಸಿವಿನ ಕೊರತೆ:
ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದಾಗ ವ್ಯಕ್ತಿ ತಿನ್ನಲು ಹಿಂದೇಟು ಹಾಕುವುದನ್ನು ಗಮನಿಸಬಹುದು. ಅವರಿಗೆ ಹಸಿವಾಗದೇ ಇರಬಹುದು. ಹಸಿವಿನ ಕೊರತೆಯೂ ಸಹ ಅಂಡಾಶಯದ ಕ್ಯಾನನ್ಸರ್ ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

ಹೆಚ್ಚು ಮೂತ್ರ ವಿಸರ್ಜನೆ:
ಅಂಡಾಶಯದಲ್ಲಿ ರೂಪುಗೊಂಡ ಗೆಡ್ಡೆ ಅಂಗಾಂಶಗಳು ಮೂತ್ರಕೋಶದ ಮೇಲೆ ಹೆಚ್ಚು ಒತ್ತಡವನ್ನು ಹಾಕಬಹುದು. ಇದು ಹೆಚ್ಚು ಮೂತ್ರ ವಿಸರ್ಜಿಸುವ ಪ್ರಚೋದನೆಗೆ ಒಳಪಡುವಂತೆ ಮಾಡುವುದು. ಆದ್ದರಿಂದ ಹೆಚ್ಚು ಮೂತ್ರ ವಿಸರ್ಜನೆ ಅಥವಾ ಪದೇ ಪದೇ ಮುತ್ರ ವಿಸರ್ಜನೆಯಾಗುತ್ತಿದ್ದರೂ ನಿರ್ಲಕ್ಷ್ಯ ಮಾಡಬಾರದು.
ಈ ರೋಗಲಕ್ಷಣಗಳು, ಗಂಭೀರವಾಗಿಲ್ಲವಾದರೂ, ಅವರು ದೀರ್ಘಕಾಲದವರೆಗೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.



Click it and Unblock the Notifications











