Latest Updates
-
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ! -
ಮಾರ್ಚ್ನಲ್ಲಿ ಸೂರ್ಯ-ಕೇತು ಸಮನ್ವಯ ಚಲನೆ: ಮೂರು ರಾಶಿಯವರ ಬದುಕಲ್ಲಿ ಅದೃಷ್ಟ! -
Weekly Horoscope: ಮಾರ್ಚ್ 01 ರಿಂದ ಮಾರ್ಚ್ 07ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಈ ಜೂನ್ನಲ್ಲಿ ಹೆಚ್ಚಾಗಲಿದೆ ಕೊರೊನಾ: ಕರ್ನಾಟಕ ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್
ಭಾರತದಲ್ಲೀಗ ಕೊರೊನಾ ನಾಲ್ಕನೇ ಅಲೆಯ ಆತಂಕ ಶುರುವಾಗಿದೆ. ದಿನೇ ದಿನೇ ಕೇಸ್ಗಳು ಶೇ.90ರಷ್ಟು ವೇಗದಲ್ಲಿ ಹರಡುತ್ತಿದೆ, ಈಗ ಕೊರೊನಾ ಹರಡುವುದನ್ನು ತಡೆಗಟ್ಟಗಳು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಕರ್ನಾಟಕ ಕೂಡ ಈ ಕುರಿತು ಕಟ್ಟುನಿಟ್ಟಿನ ಎಚ್ಚರವಹಿಸಲು ಮುಂದಾಗಿದೆ. ಅದರಲ್ಲೂ ಹೊರ ದೇಶದಿಂದ ಬರುವವರ ಮೇಲೆ ನಿಗಾ ಇಡಲು ಮುಂದಾಗಿದೆ. ಅವರ ಕಾಂಟ್ಯಾಕ್ಟ್ ನಂಬರ್ ಹಾಗೂ ವಿಳಾಸ ತೆಗೆದುಕೊಂಡು ಅವರ ಆರೋಗ್ಯದ ಮೇಲೆ ನಿಗಾ ಇಡುತ್ತಿದೆ.
ಕರ್ನಾಟಕದಲ್ಲಿ ಜನರ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದೆ, ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ಹೇಳಿರುವುದೇನು ಎಂದು ನೋಡೋಣ ಬನ್ನಿ:

ಜೂನ್ನಲ್ಲಿ ಹೆಚ್ಚಾಗಲಿದೆ ಕೊರೊನಾ
ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ತಜ್ಞರ ಸಮಿತಿಯ ಸಲಹೆಯ ಬಳಿಕ ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಜೂನ್ನಲ್ಲಿ ಹೆಚ್ಚಾಗಲಿದೆ ಇದರ ಪ್ರಬಾವ ಅಕ್ಟೋಬರ್ವರೆಗೆ ಇರಲಿದೆ. ಆದ್ದರಿಂದ ಜನರು ಮುನ್ನೆಚ್ಚರಿಕೆವಹಿಸಬೇಕೆಂದು ಹೇಳಿದ್ದಾರೆ.

IIT ಕಾನ್ಪುರ್ ಅಧ್ಯಯನ ಈ ಮೊದಲೇ ಎಚ್ಚರಿಸಿತ್ತು
IIT ಕಾನ್ಪುರ್ ಅಧ್ಯಯನ ವರದಿಯೂ ಈ ಹಿಂದೆಯೇ ಜೂನ್ ಕೊನೆಯ ವಾರದಲ್ಲಿ ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಬರಲಿದೆ ಎಂದು ಹೇಳಿತ್ತು. ಆದರೆ ಈಗ ತಿಂಗಳ ಮುಂಚೆಯೇ ಬಂದಿದೆ. ಇದರ ಪ್ರಭಾವ ಅಕ್ಟೋಬರ್ವರೆಗೆ ಇರಲಿದೆ.

ಕೋವಿಡ್ 19 ಜೊತೆ ಬದುಕಲು ಕಲಿಯಬೇಕಾಗಿದೆ
ಕೊರೊನಾ ಈಗ ಹೊಸತಲ್ಲ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಬಂದು ಹೋಗುತ್ತಿರುವುದನ್ನು ನೋಡಿದ್ದೇವೆ ಹಾಗೂ ಅದು ಬೀರಿರುವ ದುಷ್ಪಾರಿಣಾಮ ನೋಡಿದ್ದೇವೆ. ಕೊರೊನಾ ತಡೆಗಟ್ಟಲು ಜನರು ಮುಖ್ಯವಾಗಿ ಮಾಡಬೇಕಾಗಿರುವುದು ಮುನ್ನೆಚ್ಚರಿಕೆವಹಿಸುವುದು. ಹೌದು ಜಾಗ್ರತೆಯಿಂದ ಕೊರೊನಾವನ್ನು ತಡೆಟ್ಟಬಹುದಾಗಿದೆ. ಆದ್ದರಿಂದ ಮತ್ತೆ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಹಾಗೇ ಮಾಡಿದರೆ ಲಾಕ್ಡೌನ್, ಆರ್ಥಿಕ ನಷ್ಟಗಳನ್ನು ತಡೆಗಟ್ಟಬಹುದು.

ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ
ರಾಜ್ಯ ಸರ್ಕಾರವು ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅದರಲ್ಲೂ ಡಬಲ್ ಮಾಸ್ಕ್ ಧರಿಸುವುದು ಒಳ್ಳೆಯದು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಬಳಸಿ.

ಕೊರೊನಾ ಲಕ್ಷಣಗಳು ಕಂಡು ಬಂದರೆ ಐಸೋಲೇಟ್ ಆಗಿ
ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣ ಸುಮ್ಮನೆ ತಿರುಗಾಡಬೇಡಿ, ನಿಮ್ಮ ಆರೋಗ್ಯ ಜೊತೆಗೆ ಇತರರ ಆರೋಗ್ಯ ಅಪಾಯಕ್ಕೆ ದೂಡಬೇಡಿ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಪ್ರತ್ಯೇಕವಾಗಿ ಹಾಗೂ ಚಿಕಿತ್ಸೆ ಮಾಡಿಸಿ. ರೋಗ ಲಕ್ಷಣಗಳು ಗಂಭೀರವಾಗುವ ಮೊದಲೇ ಚಿಕಿತ್ಸೆ ಪಡೆಯಿರಿ.



Click it and Unblock the Notifications











