ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಉಸಿರಿನ ವೇಗವನ್ನು ಹೆಚ್ಚಿಸುವ ಯಾವುದೇ ಕಾರ್ಯವನ್ನು ಕೈಗೊಳ್ಳಲು ಹಿಂಜರಿಯುತ್ತಾರೆ. ಇದರಲ್ಲಿ ಸಂಗಾತಿಯೊಂದಿಗೆ ಕೂಡುವ ಆತ್ಮೀಯ ಕ್ಷಣಗಳೂ ಒಂದು. ಏಕೆಂದರೆ ಈ ಸಮಯದಲ್ಲಿ ಏರುವ ಉಸಿರಾಟದ ಗತಿ ಅವರ ಆರೋಗ್ಯವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂಬ ಅನುಮಾನ ಇವರಿಗೆ ಕಾಡುತ್ತಿರುತ್ತದೆ. ಕೆಲವರು ಮಿಲನದ ಸಮಯದಲ್ಲಿ ಈ ಸ್ಥಿತಿಗೆ ತಲುಪಿ ತಮಗೂ, ತಮ್ಮ ಸಂಗಾತಿಯೂ ಅಪಾರವಾದ ಬೇಸರ ಹಾಗೂ ಉಸಿರುಗಟ್ಟುವ ಮೂಲಕ ಆಪಾಯವನ್ನೂ ಆಹ್ವಾನಿಸಿಕೊಂಡಿದ್ದಾರೆ.
ಆದರೆ ಈ ತೊಂದರೆ ಇದೆ ಎಂದ ಮಾತ್ರಕ್ಕೇ ಇವರು ನಿಸರ್ಗದ ಈ ಅಪ್ರತಿಮ ಕೊಡುಗೆಯಿಂದ ವಂಚಿತರಾಗಬೇಕಾಗಿಲ್ಲ. ತಜ್ಞರ ಪ್ರಕಾರ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆರೋಗ್ಯಕರ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಸಂಗಾತಿಯೊಂದಿಗೆ ಸುಖಕರ ಕ್ಷಣಗಳನ್ನು ಕಳೆಯಬಹುದು. ಉಸಿರಾಟದ ತೊಂದರೆಯನ್ನು ನಿರ್ವಹಿಸಲು ಯೋಗಾಭ್ಯಾಸಕ್ಕಿಂತ ಉತ್ತಮವಾದ ವ್ಯಾಯಾಮ ಮತ್ತೊಂದಿಲ್ಲ.
ಉಸಿರಾಟವನ್ನು ಉತ್ತಮಗೊಳಿಸುವ ಕೆಲವು ಆಸನಗಳನ್ನು ನಿಯಮಿತವಾಗಿ ಅನುಸರಿಸುತ್ತಾ ಬರುವ ಮೂಲಕ ನರಗಳನ್ನು ಶಾಂತಗೊಳಿಸಲು, ಮನಸ್ಸನ್ನು ಹತೋಟಿಯಲ್ಲಿಡಲು, ಧನಾತ್ಮಕ ಧೋರಣೆ ತಳೆಯಲು ಹಾಗೂ ಮುಖ್ಯವಾಗಿ ಶ್ವಾಸಕೋಶಗಳನ್ನು ಹಿಂಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಇದರ ಜೊತೆಗೇ ನಿಧಾನಗತಿಯ ಓಟ, ವೇಗದ ನಡಿಗೆ, ಧ್ಯಾನ ಹಾಗೂ ಈಜು ಸಹಾ ಶ್ವಾಸಕೋಶಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಇವು ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಮಿಲನದ ಸಮಯದಲ್ಲಿ ಅಗತ್ಯವಾದ ತ್ರಾಣವನ್ನು ಒದಗಿಸುತ್ತದೆ. ಅಲ್ಲದೇ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆಹಾರಗಳನ್ನು ವರ್ಜಿಸಬೇಕಾಗುತ್ತದೆ. ತಜ್ಞರ ಪ್ರಕಾರ ದೇಹವನ್ನು ತಂಪುಗೊಳಿಸುವ ಯಾವುದೇ ಆಹಾರಗಳು ಅಸ್ತಮಾ ಹಾಗೂ ಶ್ವಾಸಸಂಬಂಧಿ ತೊಂದರೆಗಳಿರುವ ವ್ಯಕ್ತಿಗಳಿಗೆ ಸಲ್ಲದು. ಅನಾನಾಸು, ಐಸ್ ಕ್ರೀಂ, ಪೇರಳೆ, ಲೆಟ್ಯೂಸ್ ಮೊದಲಾದ ದೇಹವನ್ನು ತಣಿಸುವ ಆಹಾರಗಳು ಈ ವ್ಯಕ್ತಿಗಳಿಗೆ ಸೂಕ್ತವಲ್ಲ.
ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು
ಈ ಆಹಾರಗಳ ಸೇವನೆಯಿಂದ ಶೀತ ಕೆಮ್ಮು ಆವರಿಸುವ ಸಾಧ್ಯತೆ ಇವರಿಗೆ ಹೆಚ್ಚಿರುತ್ತದೆ ಹಾಗೂ ಶ್ವಾಸಸಂಬಂಧಿ ತೊಂದರೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಹಾ ತಮ್ಮ ಸಂಗಾತಿಯೊಡನೆ ಆತ್ಮೀಯ ಕ್ಷಣಗಳನ್ನು ಆರೋಗ್ಯಕರವಾಗಿ ಕಳೆಯಲು ಕೆಲವು ಸಲಹೆಗಳನ್ನು ತಜ್ಞರು ಒದಗಿಸಿದ್ದು ಇವುಗಳನ್ನು ಅನುಸರಿಸುವ ಮೂಲಕ ಎಲ್ಲರಂತೆ ನೀವೂ ಪರಿಪೂರ್ಣ ಸುಖವನ್ನು ಪಡೆಯಲು ಸಾಧ್ಯ.....
ಕಾಮಕ್ರೀಡೆಗೂ ಮುನ್ನ ಸಾಕಷ್ಟು ಕೆಮ್ಮಿಕೊಳ್ಳಿ
ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ, ವಿಶೇಷವಾಗಿ ಎದೆಯಲ್ಲಿ ಚಳಿ ಹೊಂದಿರುವವರು ಬಲವಂತವಾಗಿಯಾದರೂ ಸರಿ, ಗಂಟಲಲ್ಲಿ ಸಂಗ್ರಹವಾಗಿದ್ದ ಕಫವನ್ನು ನಿವಾರಿಸಿಕೊಂಡೇ ಮುಂದುವರೆಯಬೇಕು. ಇದರಿಂದ ಪ್ರಣಯದ ಸಮಯದಲ್ಲಿ ಉಸಿರಾಟ ಹೆಚ್ಚು ಸರಾಗವಾಗಿರುತ್ತದೆ.
ಕೇವಲ ನಿರಾಳರಾಗಿದ್ದ ಸಮಯದಲ್ಲಿ ಮಾತ್ರವೇ ಈ ಕ್ರಿಯೆಗೆ ಮುಂದಾಗಿ
ಲೈಂಗಿಕ ಕ್ರಿಯೆ ಸರಾಗವಾಗಿ ನಡೆಯಲು ದೇಹ ಮತ್ತು ಮನಸ್ಸುಗಳೆರಡೂ ನಿರಾಳವಾಗಿದ್ದು ಯಾವುದೇ ಒತ್ತಡದಲ್ಲಿರದೇ ಇರುವುದು ಅವಶ್ಯ. ಈ ಸಮಯದಲ್ಲಿ ಕೂಡುವ ಮೂಲಕ ಶ್ವಾಸಕೋಶಗಳ ಮೇಲೆ ಅತಿ ಕಡಿಮೆ ಒತ್ತಡವಿರುವ ಕಾರಣ ಆತ್ಮೀಯ ಕ್ಷಣಗಳಲ್ಲಿಯೂ ಏನೂ ತೊಂದರೆಯಾಗುವುದಿಲ್ಲ.
ಮುಂಜಾನೆ ಕೂಡುವುದರಿಂದ ತಪ್ಪಿಸಿಕೊಳ್ಳಿ
ಮುಂಜಾನೆಯ ಹೊತ್ತಿನ ಕೂಡುವಿಕೆ ಈ ವ್ಯಕ್ತಿಗಳಿಗೆ ಸಲ್ಲದು. ಏಕೆಂದರೆ ರಾತ್ರಿಯ ಸಮಯದಲ್ಲಿ ದೇಹ ಸಾಕಷ್ಟು ಕಫವನ್ನು ಉತ್ಪಾದಿಸಿ ಉಸಿರು ಆಡುವ ನಾಳಗಳ ಒಳಭಾಗದಲ್ಲೆಲ್ಲಾ ಸಂಗ್ರಹಿಸಿ ಉಸಿರಾಟವನ್ನು ಕೊಂಚ ಕಷ್ಟಕರವಾಗಿರಿಸುತ್ತದೆ. ಹಾಗಾಗಿ ಈ ಸಮಯ ನಿಮಗೆ ಸರ್ವಥಾ ಸೂಕ್ತವಲ್ಲ. ಬದಲಿಗೆ ನಿದ್ರೆ ಬರುವ ಮುನ್ನಾ ಸಮಯ ಉತ್ತಮವಾಗಿದೆ.
ಊಟದ ಬಳಿಕವೂ ಕೂಡುವಿಕೆ ಬೇಡ
ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಊಟದ ಬಳಿಕ ಕೂಡುವುದು ಅಪಾಯಕರವಾಗಿದೆ. ಊಟದ ಬಳಿಕ ಹೊಟ್ಟೆ ತುಂಬಿರುವ ಕಾರಣ ಶ್ವಾಸಕೋಶ ವಿಸ್ತರಿಸಲು ಕೊಂಚ ಕಡಿಮೆ ಸ್ಥಳಾವಕಾಶ ಪಡೆಯುವ ಕಾರಣ ಕೊಂಚ ಶಕ್ತಿಗುಂದಿರುತ್ತವೆ. ಆದ್ದರಿಂದ ಮಿಲನದ ಬಳಿಕವೇ ಊಟದ ಕಾರ್ಯಕ್ರಮವಿಟ್ಟುಕೊಂಡರೆ ಉತ್ತಮ.
ಸುಲಭ ಮತ್ತು ಆರಾಮದಾಯಕ ಭಂಗಿಗಳನ್ನೇ ಅನುಸರಿಸಿ
ಉಸಿರಾಟದ ತೊಂದರೆ ಇರುವ ಪುರುಷರು ಗಂಡು ಮೇಲಿರುವ ಮಿಷನರಿ ಭಂಗಿಯನ್ನು ಅನುಸರಿಸಬಾರದು. ಏಕೆಂದರೆ ಈ ಭಂಗಿಯಲ್ಲಿ ಶ್ವಾಸಕೋಶಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರ ಬದಲಿಗೆ ಹೆಣ್ಣು ಮೇಲೆ ಬರುವ ಅಥವಾ ಪಕ್ಕಕ್ಕೆ ವಾಲಿರುವ ಭಂಗಿಗಳು ಸೂಕ್ತ. ಉಸಿರಾಟದ ತೊಂದರೆ ಇರುವ ಮಹಿಳೆಯ ಮೇಲೆ ಪುರುಷನ ಮೈಭಾರ ಬೀಳದ ಭಂಗಿಗಳು ಹೆಚ್ಚು ಸೂಕ್ತವಾಗಿವೆ.
ಮಿಲನದ ನಡುವೆ ಕೊಂಚ ವಿಶ್ರಾಂತಿ ಪಡೆಯಿರಿ
ಮಿಲನ ಕ್ರಿಯೆ ಪ್ರಾರಂಭವಾದ ಬಳಿಕ ಉಸಿರಾಟದ ಗತಿಯೂ ಅನಿವಾರ್ಯವಾಗಿ ಹೆಚ್ಚಿಯೇ ಹೆಚ್ಚುತ್ತದೆ. ಆದರೆ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಈಗತಿ ಒಂದು ಮಿತಿಯನ್ನು ದಾಟಬಾರದು. ಆದ ಕಾರಣ ಮಿಲನ ಕ್ರಿಯೆಯನ್ನು ಉಸಿರು ಕೊಂಚ ತೀವ್ರವಾಗುತ್ತಿದ್ದಂತೆಯೇ ನಿಲ್ಲಿಸಿ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕು ಹಾಗೂ ಉಸಿರು ಮೊದಲಿನ ಗತಿಗೆ ಹಿಂದಿರುಗಲು ಬಿಡಬೇಕು. ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಇದೊಂದು ಅಮೂಲ್ಯವಾದ ಸಲಹೆಯಾಗಿದೆ.
ಉಸಿರಾಟದ ತೊಂದರೆಗೆ ಕೆಲವು ಮನೆಮದ್ದುಗಳು
ಯೋಗಾಭ್ಯಾಸ, ಈಜು, ಧ್ಯಾನ ಈ ಮೂರೂ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ವ್ಯಾಯಾಮಗಳಾಗಿವೆ. ಇದರ ಹೊರತಾಗಿ ಯಾವಾಗ ಉಸಿರು ಕಷ್ಟಕರ ಎನಿಸತೊಡಗಿತೋ ಆಗ ಬಿಸಿನೀರನ್ನು ನಿಧಾನವಾಗಿ ಗುಟುಕರಿಸುವುದರಿಂದಲೂ ಕೊಂಚ ಉಪಶಮನ ದೊರಕಬಹುದು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
8 ಗಂಟೆ ನಿದ್ದೆ ಮಾಡಿದ್ರೂ ಇನ್ನೂ ಸುಸ್ತಾದಂತಾಗುತ್ತಾ ?
ಲಿಂಬೆಸಿಪ್ಪೆ-ಸಂಧಿವಾತದ ಚಿಕಿತ್ಸೆ ಹಾಗೂ ಇತರ ಪ್ರಯೋಜನಗಳು
ಯಾವ್ಯಾವ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್
ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸುವುದು ಆರೋಗ್ಯಕರವೇ?
ಶೀತ-ಕೆಮ್ಮಿನಿಂದ ರಕ್ಷಣೆ ನೀಡುತ್ತವೆ ಈ ಅದ್ಭುತ ಹತ್ತು ಸರಳ ಟ್ರಿಕ್ಸ್
ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು
ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?
ನಿಮ್ಮ ಹಲ್ಲುಗಳನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾದ 5 ವಿಧಾನಗಳು
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದೀರೇ? ಹಾಗಾದ್ರೆ ಸೇವಿಸುವ ಆಹಾರ ಹೀಗಿರಲಿ…
ಆರೋಗ್ಯ ಟಿಪ್ಸ್: ಕ್ಯಾನ್ಸರ್ನ್ನು ನಿಯಂತ್ರಿಸುವ ಪವರ್ ಈ ತರಕಾರಿಗಳಲ್ಲಿದೆ!
ದೇಹದ ಲಿವರ್ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು
ಏಲಕ್ಕಿ ನೀರನ್ನು ಒಂದು ವಾರ ಕುಡಿಯಿರಿ-ಪರಿಣಾಮ ಗಮನಿಸಿ
ಈಗೆಲ್ಲಾ ಸಮಸ್ಯೆ ಬಂದರೆ, ನಾಚಿಕೆ ಮಾಡಿಕೊಳ್ಳಬೇಡಿ! ಕೂಡಲೇ ವೈದ್ಯರಿಗೆ ತೋರಿಸಿ...
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಮತ ಹಾಕಿ ಉಚಿತ ಇಂಟರ್ ನೆಟ್ ಸೇವೆ ಪಡೆಯಿರಿ
ಕರ್ನಾಟಕ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ
ಸಿದ್ಧರಾಮಯ್ಯ ಒಬ್ಬ ಕ್ರೂರಿ, ಧರ್ಮ, ಜಾತಿ, ಸಮಾಜ ಒಡೆದ ಸಿಎಂ: ಕರಂದ್ಲಾಜೆ