Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಸೈನಸ್ ತೊಂದರೆಯೇ? ಬೆಳ್ಳುಳ್ಳಿ, ಈರುಳ್ಳಿ, ಮೂಲಂಗಿಯ ನೆರವು ಪಡೆಯಿರಿ
ಚಳಿಗಾಲ ಬಂದೇ ಬಿಟ್ಟಿದೆ, ಇದರೊಂದಿಗೆ ಚಳಿಗಾಲದ ಕಾಯಿಲೆಗಳು ಸಹಾ! ಈ ಸಮಯದಲ್ಲಿ ಗಾಳಿಯಲ್ಲಿ ಉಳಿದ ಸಮಯಕ್ಕಿಂತ ಹೆಚ್ಚೇ ವೈರಸ್ಸುಗಳು ತೇಲಾಡುತ್ತಿರುತ್ತವೆ. ವಿಶೇಷವಾಗಿ ಫ್ಲೂ ವೈರಸ್ ಹಲವರಲ್ಲಿ ಸೋಂಕು ಹರಡುತ್ತದೆ. ಈಗಾಗಲೇ ಫ್ಲೂ ಆವರಿಸಿರುವ ವ್ಯಕ್ತಿ ಸೀನಿದರೆ ಗಾಳಿಯಲ್ಲಿ ಈ ವೈರಸ್ಸುಗಳು ಹರಡುವ ಸಾಧ್ಯತೆ ಅಪಾರವಾಗಿ ಹೆಚ್ಚುವುದರಿಂದ ಈಗಾಗಲೇ ಮನೆಯಲ್ಲಿ ಕನಿಷ್ಠ ಒಬ್ಬರಿಗೆ ಸೋಂಕು ತಗಲಿದ್ದರೆ ಚಳಿಯ ನೆಪದಲ್ಲಿ ಮನೆಯಿಂದ ಹೊರಗೇ ಹೋಗದಿರುವ ವ್ಯಕ್ತಿಗಳಿಗೆ ಈ ವೈರಸ್ಸುಗಳು ಧಾಳಿ ಇಡುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.
ಮನೆಯೊಳಗೆ ಸಾಮಾನ್ಯವಾಗಿ ಬೆಚ್ಚಗಿರುವ ಕಾರಣ ಹೊರಗಿನ ಚಳಿಗಿಂತಲೂ ಮನೆಯೊಳಗೇ ಈ ವೈರಸ್ಸುಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಹೀಗೆ ಗಾಳಿಯ ಮೂಲಕ ಹರಡುವ ವೈರಸ್ಸುಗಳಿಂದ ಎದುರಾಗುವ ಇನ್ನೊಂದು ಕಾಯಿಲೆ ಎಂದರೆ ಕುಹರ ಅಥವಾ ಸೈನಸ್ ನ ಸೋಂಕು. ಮೂಗಿನ ಮೇಲೆ ಹಾಗೂ ಹಣೆಯ ನಡುವೆ ನಮ್ಮ ತಲೆಬುರುಡೆಯಲ್ಲಿ ಒಂದು ಟೊಳ್ಳು ಭಾಗವಿದೆ. ಇದೇ ಸೈನಸ್ ಅಥವಾ ಕುಹರ.

ಮೂಗಿನ ಮತ್ತು ಗಂಟಲ ಮೇಲ್ಭಾಗದಲ್ಲಿ ಗಾಳಿಯ ಪ್ರಮಾಣವನ್ನು ಹಾಗೂ ಕಫವನ್ನು ನಿಯಂತ್ರಿಸುವುದು ಈ ಕುಹರದ ಕೆಲಸ. ಉಸಿರಾಟದ ಮೂಲಕ ಒಳ ಬಂದ ವೈರಸ್ಸು ಮೂಗಿನ ಮೇಲ್ಭಾಗದ ತೇವಭಾಗದಲ್ಲಿ ಆಶ್ರಯ ಪಡೆದು ಉರಿಯೂತ ಉಂಟುಮಾಡುತ್ತದೆ. ಈ ಉರಿಯೂತದ ಪರಿಣಾಮವಾಗಿ ಗಾಳಿಯಾಡುವ ಭಾಗ ಕಿರಿದಾಗಿ ಕೆಲವೊಮ್ಮೆ ಮುಚ್ಚಿಯೇ ಬಿಡುತ್ತದೆ. ಇದನ್ನೇ ನಾವು ಕಟ್ಟಿಕೊಂಡ ಮೂಗು ಎಂದು ಕರೆಯುತ್ತೇವೆ.
ಈ ಉರಿಯೂತಕ್ಕೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಿನ ಕಫವನ್ನು ಉತ್ಪತ್ತಿ ಮಾಡಿ ವೈರಸ್ಸುಗಳನ್ನು ಕೊಂದು ನಿವಾರಿಸಲು ಯತ್ನಿಸುತ್ತದೆ. ಪರಿಣಾಮವಾಗಿ ಈ ಸೋಂಕು ಇನ್ನಷ್ಟು ಹೆಚ್ಚುತ್ತದೆ. ಕುಹರ ಯಾವಾಗ ಬಂದ್ ಆಯಿತೋ ಆಗ ಉಸಿರಾಟ ಕಷ್ಟಕರವಾಗುವ ಜೊತೆಗೇ ತಲೆನೋವೂ ಎದುರಾಗುತ್ತದೆ. ಏಕೆಂದರೆ ಇತರ ಸಮಯದಲ್ಲಿ ಕುಹರ ಖಾಲಿಯಾಗಿದ್ದು ತಲೆಯ ಭಾರ ಕಡಿಮೆಯಾಗಿರುತ್ತದೆ.
ಈಗ ಸೋಂಕು ಉಂಟಾದರೆ ಈ ಭಾಗ ತುಂಬಿಕೊಂಡು ತಲೆ ಭಾರವಾದಂತೆ ಅನ್ನಿಸುತ್ತದೆ. ಕುಹರದ ಸೋಂಕು ನಿತ್ಯದ ಕೆಲಸಗಳಿಗೆ ಬಾಧೆಯುಂಟುಮಾಡಬಹುದು. ವೈರಸ್ಸುಗಳ ಸೋಂಕನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಪ್ರಬಲವಾದ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಕುಹರದ ಸೋಂಕು ಗುಣಮಾಡಲು ಯತ್ನಿಸಬಹುದು.
ಬೆಳ್ಳುಳ್ಳಿಯ ಕಮಟು ವಾಸನೆ ಮತ್ತು ಒಗರು ರುಚಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಗುಣಗಳೇ ಕುಹರದ ಸೋಂಕು ನಿವಾರಿಸಲು ಅತ್ಯುತ್ತಮ ಅಸ್ತ್ರಗಲಾಗಿವೆ. ಬೆಳ್ಳುಳ್ಳಿ ಕುಹರದ ಸೋಂಕಿಗೆ ಕಾರಣವಾಗಿರುವ ಉರಿಯೂತವನ್ನು ನಿವಾರಿಸುವ ಮೂಲಕ ಈ ತೊಂದರೆಯ ಮೂಲವನ್ನು ಸರಿಪಡಿಸಿ ಸೋಂಕನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ಆಧಾರಿತ ಆಲಿಸಿನ್ ಎಂಬ ಪೋಷಕಾಂಶ ಈ ಉರಿಯೂತವನ್ನು ನಿವಾರಿಸುವ ಗುಣ ಹೊಂದಿದೆ.
ಉರಿಯೂತ ಕಡಿಮೆಯಾದ ತಕ್ಷಣವೇ ಊದಿಕೊಂಡಿದ್ದ ಭಾಗವೂ ಕಡಿಮೆಯಾಗಿ ಕಟ್ಟಿಕೊಂಡಿದ್ದ ಕಫ ಕರಗಿ ವಿಸರ್ಜನೆಗೊಳ್ಳುತ್ತದೆ ಹಾಗೂ ಉಸಿರಾಟ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳ್ಳುಳ್ಳಿ ಅತ್ಯುತ್ತಮ ಪ್ರತಿಜೀವಕವೂ ಆಗಿದೆ. ಬನ್ನಿ, ಕುಹರದ ಸೋಂಕು ಇದ್ದರೆ ಬೆಳ್ಳುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ..
ಬೆಳ್ಳುಳ್ಳಿ ಮತ್ತು ಮೂಲಂಗಿ ಪೇಯ
ಈ ಪೇಯದಲ್ಲಿ ಬೆಳ್ಳುಳ್ಳಿಯೊಂದಿಗೆ ಈರುಳ್ಳಿ ಮತ್ತು ಮೂಲಂಗಿಗಳನ್ನು ಬಳಸಲಾಗಿದ್ದು ಇವೆರಡೂ ಹೆಚ್ಚಿನ ಗಂಧಕದ ಅಂಶ ಹೊಂದಿರುವ ಆಹಾರಗಳಾಗಿವೆ. ಕುಹರದ ಸೋಂಕು ಇಳಿಸಲು ಗಂಧಕ ಪ್ರಮುಖ ಪಾತ್ರ ವಹಿಸುತ್ತದೆ. ಈರುಳ್ಳಿಯ ಘಾಟು ಕಟ್ಟಿಕೊಂಡಿದ್ದ ಮೂಗನ್ನು ತೆರೆಯಲು ಸಹಕರಿಸುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಈ ಸೋಂಕಿನಲ್ಲಿ ಆಶ್ರಯಪಡೆದಿದ್ದ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳನ್ನು ಕೊಂದು ಕಫವನ್ನು ನಿವಾರಿಸಿ ದೇಹದಿಂದ ವಿಸರ್ಜಿಸಲು ನೆರವಾಗುತ್ತದೆ.
ಅಗತ್ಯವಿರುವ ಸಾಮಾಗ್ರಿಗಳು
-5-6 ಬೆಳ್ಳುಳ್ಳಿ ಎಸಳು
-1 ದೊಡ್ಡ ಚಮಚ ಲಿಂಬೆರಸ
-1 ಈರುಳ್ಳಿ
-2-3 ಮೂಲಂಗಿಗಳು
-1 ದೊಡ್ಡ ಚಮಚ ಜೇನು
ವಿಧಾನ:
1) ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಸಿಪ್ಪೆ ಸುಲಿಯಿರಿ
2) ಈರುಳ್ಳಿ ಮತ್ತು ಮೂಲಂಗಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ
3) ಒಂದು ಪಾತ್ರೆಯಲ್ಲಿ ಇವು ಮುಳುಗುವಷ್ಟು ನೀರು ಹಾಕಿ ಕುದಿಸಿ
4) ಸುಮಾರು ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದ ಬಳಿಕ ಈ ನೀರನ್ನು ಸೋಸಿ
5) ಈ ನೀರಿಗೆ ಲಿಂಬೆರಸ ಮತ್ತು ಜೇನು ಬೆರೆಸಿ ಕುಡಿಯಿರಿ.
ಈ ನೀರು ಕುಡಿಯಲು ಸಾಧ್ಯವಾಗುವಷ್ಟು ಬಿಸಿ ಇರಬೇಕು. ಆಗಲೇ ಇದರ ಗುಣಗಳನ್ನು ಪಡೆಯಲು ಸಾಧ್ಯ. ಕುಹರದ ಸೋಂಕು ಇರುವ ವ್ಯಕ್ತಿ ಸೀನಿದಾಗ ಆ ಸ್ಥಳದಲ್ಲಿರುವ ಇತರರಿಗೂ ಸುಲಭವಾಗಿ ಸೋಂಕು ಹರಡುತ್ತದೆ. ಆದ್ದರಿಂದ ಸೀನುವಾಗ ಬಟ್ಟೆ ಅಥವಾ ಆ ಸಮಯದಲ್ಲಿ ತಕ್ಷಣಕ್ಕೆ ಏನು ಸಿಗದೇ ಇದ್ದರೆ ಕೇವಲ ಕೈಗಳಿಂದಲಾದರೂ ಸೀನುವಾಗ ಅಡ್ಡ ಹಿಡಿದು ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನೀರು ಲಭ್ಯವಿಲ್ಲದಿದ್ದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟೈಜರ್ ಗಳನ್ನೂ ಬಳಸಬಹುದು. ಹಾಗೂ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧಿಯನ್ನು ಸೇವಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
















