Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ನೋಡಿ ಇದೇ ಕಾರಣಕ್ಕೆ ಗ್ರಹಣದ ಸಮಯದಲ್ಲಿ ಆಹಾರ ಸೇವಿಸಲೇಬಾರದು...
ಭಾರತ ಎಂದರೆ ನೂರಾರು ಸಂಪ್ರದಾಯಗಳ ಪವಿತ್ರ ಭೂಮಿ. ಇಲ್ಲಿ ಹಲವಾರು ಆಚರಣೆ ಹಾಗೂ ನಂಬಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ವಿಭಿನ್ನ ಬಗೆಯ ಧರ್ಮ, ಜಾತಿ, ಪಂಗಡ ಹಾಗೂ ಉಪಜಾತಿಗಳನ್ನು ಹೊಂದಿರುವುದರಿಂದ ವಿವಿಧ ಬಗೆಯಲ್ಲಿ ಧಾರ್ಮಿಕ ಆಚರಣೆಗಳು ನಡೆಯುವುದನ್ನು ಗಮನಿಸಬಹುದು.
ಆದರೆ ಕೆಲವೊಂದು ನಂಬಿಕೆಗಳಿಗೆ ಎಲ್ಲಾ ವರ್ಗದವರೂ ಒಂದೇ ಬಗೆಯ ನಿಲುವನ್ನು ಹೊಂದಿರುತ್ತಾರೆ. ಅದೇ ಇಲ್ಲಿಯ ವಿಶೇಷ. ಅಂತಹ ಒಂದು ವಿಚಾರಗಳಲ್ಲಿ "ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು" ಎನ್ನುವುದು ಒಂದು. ವಿವಿಧ ಜನಾಂಗದವರು ಹಲವು ಬಗೆಯ ಆಚರಣೆ ಮತ್ತು ನಂಬಿಕೆ ಇಟ್ಟುಕೊಂಡಿದ್ದರೂ ಪ್ರತಿಯೊಂದು ಪದ್ಧತಿಯ ಹಿಂದೆಯೂ ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿರುವುದಾಗಿದೆ.

ಕೆಲವು ನಂಬಿಕೆಗಳಿಗೆ ಉದಾರಹಣೆ ನೀಡ ಬೇಕೆಂದರೆ..."ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಸ್ವರ್ಗದಲ್ಲಿ ಸ್ಥಾನವಿದೆ ಎನ್ನುವುದು", "ಮಹಿಳೆಯರಿಗೆ ಪ್ರತಿ ತಿಂಗಳ ಋತುಚಕ್ರದ 3ನೇ ದಿನ ತಲೆ ಸ್ನಾನ ಮಾಡಬೇಕು. ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹದಿಂದ ಹೆಚ್ಚು ಸಕ್ಕರೆ ಹಾಗೂ ಎಣ್ಣೆಅಂಶವು ದೇಹದಿಂದ ಹೊರ ಸೂಸುತ್ತದೆ. ಈ ಸಮಯದಲ್ಲಿ ಮೂರನೇ ದಿನ ಸ್ನಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ಪರಿಗಣಿಸಲಾಗುವುದು."
ಹೀಗೆಯೇ ನೈಸರ್ಗಿಕ ವಿದ್ಯಮಾನಗಳ ವಿಚಾರಕ್ಕೆ ಬಂದರೆ ಗ್ರಹಣಗಳ ವಿಚಾರದಲ್ಲೂ ಭಾರತೀಯರು ಕೆಲವು ನಂಬಿಕೆಯನ್ನು ಹೊಂದಿದ್ದಾರೆ. ಗ್ರಹಣದ ಸಮಯದಲ್ಲಿ ಹೊರಗಡೆ ಬರಬಾರದು, ಊಟ-ತಿಂಡಿಗಳನ್ನು ಸೇವಿಸಬಾರದು. ಹೀಗೆ ಮಾಡಿದರೆ ವಿಪತ್ತು ಹಾಗೂ ಅನಾರೋಗ್ಯ ಉಂಟಾಗುವುದು ಎಂದು ಹೇಳಲಾಗುತ್ತದೆ. ಇಂತಹ ನಂಬಿಕೆಗಳ ಹಿನ್ನೆಲೆಯೇನು? ಏಕೆ ಈ ಆಚರಣೆಯನ್ನು ಮಾಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ...
ಕಾರಣ -1
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಭೂಮಿಗೆ ಸೂರ್ಯನು ಕಾಣಿಸಿಕೊಳ್ಳುವುದಿಲ್ಲ ಅಥವಾ ಅಸ್ಪಷ್ಟಗೊಳ್ಳುತ್ತದೆ. ಆ ಸಂದರ್ಭವನ್ನೇ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಖಗೋಳಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಹೇಳುವ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವು ವಿಕಿರಣಗಳು ಭೂಮಿಯನ್ನು ತಲುಪುತ್ತವೆ. ಇವು ಆಹಾರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ವೇಗವಾಗಿ ಹೆಚ್ಚುವಂತೆ ಮಾಡುತ್ತವೆ. ಅಂತಹ ಆಹಾರವನ್ನು ಸೇವಿಸುವುದರಿಂದ ದೈಹಿಕ ಆರೋಗ್ಯ ಹಾಳಾಗುವುದು ಎನ್ನುವ ಉದ್ದೇಶದಿಂದ, ಗ್ರಹಣದ ಸಂದರ್ಭದಲ್ಲಿ ಆಹಾರವನ್ನು ಸೇವಿಸಬಾರದು ಎನ್ನುವ ಆಚರಣೆಯನ್ನು ತರಲಾಯಿತು.
ಕಾರಣ-2
ಗ್ರಹಣದ ಸಮಯದಲ್ಲಿ ಆಹಾರದ ಮೇಲೆ ವಿಕಿರಣಗಳು ಕೆಟ್ಟ ಪರಿಣಾಮವನ್ನು ಬೀರುತ್ತವೆ. ಇಂತಹ ಅಶುದ್ಧವಾದ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆಯ ಮೇಲೆ ಮಹತ್ತರವಾದ ಪರಿಣಾಮ ಬೀರುವುದು ಎನ್ನಲಾಗುವುದು. ಈ ವಿಚಾರದ ಕುರಿತು ಹಲವಾರು ಸಂಶೋಧನೆ ಹಾಗೂ ಅಧ್ಯಯನಗಳನ್ನು ನಡೆಸಲಾಗಿದೆ. ಇವು ಹೇಳುವ ಪ್ರಕಾರ "ಗ್ರಹಣದಿಂದ ನೇರವಾಗಿ ಬೀಳುವ ವಿಕರಣಗಳು ಆಹಾರದ ಮೇಲೆ ಬಿದ್ದಾಗ ಅದು ವಿಷಕಾರಿ ಆಹಾರವಾಗಿರುತ್ತದೆ". ಇವುಗಳನ್ನು ಸೇವಿಸಿದರೆ ಅನಾರೋಗ್ಯ ಉಂಟಾಗುವುದು ಎನ್ನುತ್ತಾರೆ. ಅದಕ್ಕಾಗಿಯೇ ಅನೇಕ ಭಾರತೀಯರು ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

