Just In
- 4 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 11 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 12 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 13 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News ಕೋಲಾರ ಟಿಕೆಟ್ ಗಾಗಿ ಫೈಟಿ; ಶಾಸಕರ ರಾಜೀನಾಮೆ ಎಚ್ಚರಿಕೆ - ಡಿಕೆ ಶಿವಕುಮಾರ್ ಏನಂದ್ರು?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Finance ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆ ಕಾಂಕಾರ್ಡ್ನಿಂದ 100 ಕೋಟಿಗೆ 4.5 ಎಕರೆ ಭೂಮಿ ಸ್ವಾಧೀನ
- Movies ಶಾರುಖ್ ಖಾನ್ ಹಾಗೂ ನಾನು ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದ ಕಂಗನಾ..!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನಕ್ಕೆ ಎರಡೇ ಎರಡು ಖರ್ಜೂರ, ಲಾಭಗಳು ಅಪಾರ!
ಕಾಯಿಲೆಯಿಂದ ಚೇತರಿಸಿಕೊಳ್ಳುವವರಿಗೆ ಖರ್ಜೂರ ಅಮೃತಸಮಾನವಾಗಿದೆ. ನಿಯಮಿತವಾದ ಖರ್ಜೂರದ ಸೇವನೆಯಿಂದ, ಆರೋಗ್ಯ ವೃದ್ಧಿಸಿಕೊಳ್ಳಬಹುದು...
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರ ಅಗತ್ಯವೇ ಬೀಳದಷ್ಟು ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸೇಬು ಹಣ್ಣನ್ನು ದಿನಿತ್ಯ ಸೇವಿಸಲು ಆಗದಿದ್ದರೆ, ಇದರ ಲಾಭವನ್ನು ಎರಡು ಖರ್ಜೂರಗಳನ್ನು ತಿನ್ನುವುದರಿಂದಲೂ ಪಡೆದುಕೊಳ್ಳಬಹುದೆಂದು ಅನುಭವದಿಂದ ಹಿರಿಯರು ಹೇಳುತ್ತಾರೆ. ಇದಕ್ಕೆ ಹಸಿ ಖರ್ಜೂರಗಳೇ ಆಗಬೇಕೆಂದೇನಿಲ್ಲ, ಒಣ ಖರ್ಜೂರವೂ ಆಗಬಹುದು. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?
ಖರ್ಜೂರಗಳಲ್ಲಿರುವ ಖನಿಜಗಳು ಮತ್ತು ಅಮೈನೋ ಆಮ್ಲಗಳು ಒಣಗಿದ ಬಳಿಕವೂ ಹಾಗೇ ಉಳಿಯುವ ಕಾರಣ ನಿಮ್ಮ ಇಷ್ಟದ ಖರ್ಜೂರಗಳನ್ನು ಆಯ್ದುಕೊಳ್ಳಬಹುದು. ಪಾಕಶಾಲೆಯಲ್ಲಿ ಸಿಹಿ ಸಿಹಿ ಖರ್ಜೂರದ ಹೊಸ ಪಾಯಸ
ಬನ್ನಿ, ದಿನಕ್ಕೆರಡು ಖರ್ಜೂರಗಳನ್ನು ಕೆಲವು ವಾರಗಳಾದರೂ ತಿನ್ನುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....
ಹೃದಯದ ಕ್ಷಮತೆಗೆ
ಹೃದಯದ ಕ್ಷಮತೆ ಉತ್ತಮಗೊಳ್ಳಲು ಎರಡು ಖರ್ಜೂರಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಈ ಖರ್ಜೂರಗಳನ್ನು ಬೀಜ ನಿವಾರಿಸಿ ನೀರಿನೊಂದಿಗೇ ಕಡೆದು ಕುಡಿಯಿರಿ...ಹೊಸ ರುಚಿ: ಖರ್ಜೂರ ಕಾಫಿ ಮಿಲ್ಕ್ ಶೇಕ್ ರೆಸಿಪಿ
ದಿನಕ್ಕೆ ಎರಡು ಖರ್ಜೂರ....
ನಿತ್ಯವೂ ಸೇವಿಸುವ ಎರಡು ಖರ್ಜೂರಗಳಲ್ಲಿರುವ ಪೊಟ್ಯಾಶಿಯಂ ಪ್ರಮಾಣ ಹೃದಯ ಸ್ತಂಭನದ ಸಾಧ್ಯತೆಯನ್ನು 39% ರಷ್ಟು ಕಡಿಮೆಗೊಳಿಸುತ್ತದೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಒಂದೇ ವಾರದಲ್ಲಿ ಮಲಬದ್ಧತೆ ಸಮಸ್ಯೆಯ ತೊಂದರೆಯನ್ನು ಇಲ್ಲವಾಗಿಸುತ್ತದೆ.
ಹಾಲಿನಲ್ಲಿ ನೆನೆಸಿಟ್ಟ ಖರ್ಜೂರ...
ಎರಡು ಖರ್ಜೂರಗಳನ್ನು ಒಂದು ಲೋಟ ಹಾಲಿನಲ್ಲಿ ನೆನೆಸಿಟ್ಟು ಇದಕ್ಕೆ ಒಂದು ಚಮಚ ಜೇನು ಬೆರೆಸಿ ಕುದಿಸಿ ಕುಡಿಯುವ ಮೂಲಕ ಲೈಂಗಿಕ ಶಕ್ತಿ ಹೆಚ್ಚುತ್ತದೆ.
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ....
ಪ್ರತಿದಿನ ಸೇವಿಸುವ ಎರಡು ಖರ್ಜೂರಗಳಿಂದ 20-25mg ನಷ್ಟು ಮೆಗ್ನೀಶಿಯಂ ದೊರಕುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.
ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು
ಖರ್ಜೂರದಲ್ಲಿರುವ ಗಂಧಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ಮಲಬದ್ಧತೆ ಸಮಸ್ಯೆಗೆ....
ಒಂದು ವೇಳೆ ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ ಒಂದು ಲೋಟ ನೀರಿನಲ್ಲಿ ಎರಡು ಖರ್ಜೂರಳನ್ನು ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿದು ಖರ್ಜೂರವನ್ನೂ ತಿನ್ನುವ ಮೂಲಕ ಮಲಬದ್ಧತೆಯನ್ನು ದೂರಾಗಿಸಬಹುದು.
ರಕ್ತಹೀನತೆಯಾಗದಂತೆ...
ಖರ್ಜೂರದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಾಗದಂತೆ ತಡೆಯುತ್ತದೆ.
ಜೀರ್ಣಾಂಗ ಸ್ನೇಹಿ....
ಮೊಸರಿನಲ್ಲಿರುವಂತೆಯೇ ಖರ್ಜೂರದಲ್ಲಿಯೂ ಹೊಟ್ಟೆಯಲ್ಲಿರುವ ಜೀರ್ಣಾಂಗ ಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಪೂರಕವಾದ ಪೋಷಕಾಂಶಗಳಿರುವ ಕಾರಣ, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆಮಶಂಕೆ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.