Just In
- 2 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 10 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 11 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 12 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- News ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಇಳಿಸಲು ಕಾಯುತ್ತಿದ್ದಾರೆ: ಕಾರಣ ಬಿಚ್ಚಿಟ್ಟ ಜನಾರ್ದನ ರೆಡ್ಡಿ
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸ್ವಲ್ಪ ಸ್ವೀಟ್ಸ್ ಕಡಿಮೆ ತಿನ್ನಿ!!
ಸಂತೋಷಕ್ಕೂ
ಸಿಹಿಗೂ
ನಿಕಟ
ಸಂಬಂಧವಿದೆ.
ಸಿಹಿ
ತಿಂದರೆ
ಮನ
ಮುದಗುಳ್ಳುತ್ತದೆ
ಹಾಗೂ
ಮನ
ಸಂತೋಷಗೊಂಡಾಗ
ಸಿಹಿ
ತಿನ್ನಲು
ಬಯಸುತ್ತೇವೆ.
ಅದರಲ್ಲೂ
ಸಿಹಿತಿಂಡಿಗಳು
ಎದುರಿಗಿದ್ದಾಗ
ಇವುಗಳನ್ನು
ತಿನ್ನದ
ಬಯಕೆ
ಮೂಡದಿರಲು
ಸಾಧ್ಯವೇ
ಇಲ್ಲ.
ಮಕ್ಕಳಿಗಂತೂ
ಸಿಹಿ
ಎಂದರೆ
ಭಾರೀ
ಇಷ್ಟ.
ಆದರೆ
ಇಂದು
ಬಹುತೇಕ
ಎಲ್ಲಾ
ಸಿಹಿವಸ್ತುಗಳು
ಸಕ್ಕರೆಯಿಂದ
ತಯಾರಾಗಿದೆ...
ಇನ್ನು
ದೀಪಾವಳಿ
ಹಬ್ಬದ
ಸಮಯದಲ್ಲಂತೂ
ಮನೆಯಲ್ಲಿ
ಮಾಡಿದ
ಸಿಹಿ
ತಿನಿಸುಗಳಿಗಿಂತ,
ಅಂಗಡಿಗಳಿಂದ
ತರಿಸಿದ
ಸ್ವೀಟ್ಸ್ಗಳಿಗೆಯೇ
ಎಲ್ಲರೂ
ಇಷ್ಟಪಡುತ್ತಾರೆ.
ಆದರೆ ಒಂದು ವಿಷಯ ನೆನಪಿರಲಿ, ಸಕ್ಕರೆ ಅತಿ ಸಾಂದ್ರೀಕೃತ ಸಿಹಿವಸ್ತುವಾಗಿದ್ದು ಇದರ ಹೆಚ್ಚಿನ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳು ಅತಿ ಕಡಿಮೆ ಇದ್ದು ಅನಾರೋಗ್ಯಕರ ಹಾಗೂ ಕೊಬ್ಬು ಹೆಚ್ಚಿಸುವ ಅಂಶಗಳೇ ಹೆಚ್ಚಾಗಿವೆ. ಸಕ್ಕರೆಯ ಪ್ರಮಾಣವನ್ನು ಹಾಗೂ ಸಿಹಿವಸ್ತುವಿಗೆ ಬಳಸಲಾದ ಇತರ ಸಾಮಾಗ್ರಿಗಳನ್ನು ಅನುಸರಿಸಿ ಪ್ರತಿಯೊಂದೂ ಸಿಹಿವಸ್ತು ತನ್ನದೇ ಆದ ಅಪಾಯವನ್ನು ತಿನ್ನುವವರಿಗೆ ಒಡ್ಡುತ್ತದೆ. ಬನ್ನಿ, ಸಕ್ಕರೆಯ ಸೇವನೆಯ ಭಯಾನಕ ಪರಿಣಾಮವನ್ನು ನೋಡೋಣ...
ಮಧುಮೇಹದ
ಸಾಧ್ಯತೆ
ಹೆಚ್ಚಿಸುತ್ತದೆ
ಒಂದು
ವೇಳೆ
ನಿಮ್ಮ
ವಂಶದಲ್ಲಿ
ಮಧುಮೇಹ
ಕಂಡುಬಂದಿದ್ದರೆ
ನಿಮಗೂ
ಮಧುಮೇಹ
ಆವರಿಸುವ
ಸಾಧ್ಯತೆ
ಇದ್ದು
ಸಕ್ಕರೆಯ
ಸತತ
ಸೇವನೆಯಿಂದ
ಮಧುಮೇಹ
ಮುಂದೆಂದೋ
ಆವರಿಸಬಹುದಾಗಿದ್ದು
ಈಗಲೇ
ಆವರಿಸುವ
ಸಾಧ್ಯತೆ
ದಟ್ಟವಾಗಿರುತ್ತದೆ.
ಕೇವಲ
ಸಕ್ಕರೆ
ಮಾತ್ರವಲ್ಲ,
ಇತರ
ಆಹಾರಕ್ರಮಗಳೂ
ಇದಕ್ಕೆ
ಕಾರಣವಾಗಬಹುದು.
"The
Journal
of
Nutrition,
ಎಂಬ
ವೈಜ್ಞಾನಿಕ
ನಿಯತಕಾಲಿಕೆಯಲ್ಲಿ
ಜೂನ್
2007ರಲ್ಲಿ
ಪ್ರಕಟವಾದ
ವರದಿಯ
ಪ್ರಕಾರ
ದೇಹ
ತಾಳಿಕೊಳ್ಳುವುದಕ್ಕಿಂತ
ಹೆಚ್ಚಿನ
ಸಕ್ಕರೆ
(ಮಹಿಳೆಯರಿಗೆ
25
ಗ್ರಾಂ,
ಪುರುಷರಿಗೆ
38ಗ್ರಾಂ)
ಸೇವಿಸಿದರೆ
ಇದು
ಮಧುಮೇಹಕ್ಕೆ
ಆಹ್ವಾನ
ನೀಡಿದಂತೆ.
ಅದರಲ್ಲೂ
ಸಿಹಿವಸ್ತುಗಳನ್ನು
ಇನ್ನಷ್ಟು
ಸಿಹಿಯಾಗಿಸಲು
ಸೇರಿಸಿರುವ
ಸಿಹಿವಸ್ತುಗಳು
ದೇಹಕ್ಕೂ
ಅತಿ
ಹೆಚ್ಚಾಗಿ
ಬಾಧಿಸುತ್ತದೆ.
ಹಲ್ಲು
ಹುಳುಕು
ಮಕ್ಕಳ
ಹಲ್ಲು
ಹುಳುಕಾದರೆ
ಚಾಕಲೇಟು
ಹೆಚ್ಚು
ತಿಂದಿದ್ದಕ್ಕೇ
ಹಲ್ಲು
ಹುಳುಕಾಗಿದೆ
ಎಂದು
ನಾವೆಲ್ಲರೂ
ನಿರ್ಧರಿಸಿಬಿಡುತ್ತೇವೆ.
"Journal
of
the
American
Dental
Association"
ಎಂಬ
ದಂತವೈದ್ಯ
ನಿಯತಕಾಲಿಕೆಯಲ್ಲಿ
2002ರಲ್ಲಿ
ಪ್ರಕಟವಾದ
ವರದಿಯ
ಪ್ರಕಾರ
ಯಾವಾಗ
ಸಕ್ಕರೆ
ಹಲ್ಲುಗಳ
ಸಂಪರ್ಕಕ್ಕೆ
ಬರುತ್ತದೆಯೋ
ಆಗ
ಇದು
ಹಲ್ಲುಗಳನ್ನು
ಸವೆಸುತ್ತದೆ.
ಸಿಹಿತಿಂಡಿಗಳನ್ನು ತಿಂದ ಬಳಿಕ ಹಲ್ಲುಗಳ ಸಂಧುಗಳಲ್ಲಿ ಉಳಿಯುವ ತುಣುಕುಗಳಲ್ಲಿಯೂ ಸಕ್ಕರೆಯ ಅಂಶವಿದ್ದು ಇದು ಹಲ್ಲುಗಳನ್ನು ಕೊಳೆಸಲು ಪ್ರಮುಖ ಕಾರಣವಾಗಿದೆ. ಲಿಂಬೆಯ ಅಥವಾ ಫಾಸ್ಪರಿಕ್ ಆಮ್ಲದ ಅಂಶವಿರುವ ಬುರುಗು ಬರುವ ಪಾನೀಯಗಳಲ್ಲಿಯೂ ಹಲ್ಲುಗಳನ್ನು ಕರಗಿಸುವ ಶಕ್ತಿಯಿದೆ. ಹೀಗೆ ಕರಗುವ ಹಲ್ಲು ಶಾಶ್ವತವಾಗಿ ತನ್ನ ಅಂಶವನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ.
ಒಳ್ಳೆಯ
ಕೊಲೆಸ್ಟ್ರಾಲ್
ಕಡಿಮೆ
ಮಾಡುತ್ತದೆ
ನಮ್ಮ
ದೇಹದಲ್ಲಿ
ಎರಡು
ರೀತಿಯ
ಕೊಲೆಸ್ಟ್ರಾಲ್
ಗಳಿವೆ.
ಒಂದು
ಒಳ್ಳೆಯ
ಅಥವಾ
(HDL-high-density
lipoprotein)
ಹಾಗೂ
ಕೆಟ್ಟ
(LDL-low-density
lipoprotein)
ಕೊಲೆಸ್ಟ್ರಾಲ್.
ಇವೆರಡೂ
ಕೊಲೆಸ್ಟ್ರಾಲುಗಳ
ಒಟ್ಟಾರೆ
ಮಟ್ಟ
ನಮ್ಮ
ಆರೋಗ್ಯವನ್ನು
ನಿರ್ಧರಿಸುತ್ತದೆ.
ಉತ್ತಮ
ಆರೋಗ್ಯಕ್ಕೆ
ಕೆಟ್ಟದ್ದು
ಕಡಿಮೆಯೂ
ಹಾಗೂ
ಒಳ್ಳೆಯದು
ಹೆಚ್ಚಾಗಿಯೂ
ಇರಬೇಕು.
ಈ
ಮಟ್ಟವನ್ನು
ವ್ಯಾಯಾಮ,
ಆಹಾರಕ್ರಮ
ಹಾಗೂ
ಜೀವನಶೈಲಿ
ನಿರ್ಧರಿಸುತ್ತವೆ.
"The
Journal
of
the
American
Medical
Association"
ಎಂಬ
ವೈದ್ಯಕೀಯ
ನಿಯತಕಾಲಿಕೆಯ
ಏಪ್ರಿಲ್
2010ರ
ಸಂಚಿಕೆಯಲ್ಲಿ
ಪ್ರಕಟವಾದ
ವರದಿಯ
ಪ್ರಕಾರ
ಸಕ್ಕರೆಭರಿತ
ಆಹಾರಗಳನ್ನು
ಸೇವಿಸುವ
ಮೂಲಕ
ದೇಹದಲ್ಲಿ
ಒಳ್ಳೆಯ
ಕೊಲೆಸ್ಟ್ರಾಲ್
ಮಟ್ಟ
ಕಡಿಮೆಯಾಗುತ್ತದೆ.
ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ
ಅಂದರೆ ಸಿಹಿವಸ್ತುಗಳನ್ನು ತಿಂದ ಬಳಿಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತಿ ಕಡಿಮೆ ಸಮಯದಲ್ಲಿ ಏರುತ್ತದೆ.ಜೂನ್ 2011ರ "The Journal of Nutrition"ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸ್ಥೂಲಕಾಯ ಹೆಚ್ಚಿಸುತ್ತದೆ. ತೂಕ ಇಳಿಸಬೇಕೆಂದರೆ ಗ್ಲೈಸೆಮಿಕ್ ಕೋಷ್ಟಕದಲ್ಲಿ ಕಡಿಮೆ ಮಾಪನ ಹೊಂದಿರುವ ಆಹಾರಗಳನ್ನೇ ಸೇವಿಸಬೇಕು. ಅಂದರೆ ತೂಕ ಇಳಿಸಬೇಕೆಂದರೆ ಸಕ್ಕರೆಯನ್ನು ಅನಿವಾರ್ಯವಾಗಿ ವರ್ಜಿಸಬೇಕಾಗುತ್ತದೆ.
Crohn's
Disease
(ಕರುಳುಳ
ಒಳಗಿನ
ಉರಿಯೂತ)
ಜಠರದಲ್ಲಿ
ಆಹಾರ
ಜೀರ್ಣಗೊಂಡ
ಬಳಿಕ
ಸಣ್ಣಕರುಳಿನಲ್ಲಿ
ಹೆಚ್ಚಿನ
ಜೀರ್ಣತೆ
ಹಾಗೂ
ಪೋಷಕಾಂಶಗಳನ್ನು
ಹೀರಿಕೊಳ್ಳಲಾಗುತ್ತದೆ.
ಬಳಿಕ
ದೊಡ್ಡ
ಕರುಳಿನಲ್ಲಿ
ನೀರಿನಂಶವನ್ನು
ಹೀರಿಕೊಂಡು
ಕಲ್ಮಶಗಳನ್ನು
ವಿಸರ್ಜಿಸಲಾಗುತ್ತದೆ.
ಸಕ್ಕರೆ
ಹೆಚ್ಚಿರುವ
ಆಹಾರಗಳ
ಸೇವನೆಯಿಂದ
ಸಣ್ಣಕರುಳು
ಹಾಗೂ
ದೊಡ್ಡಕರುಳುಗಳಲ್ಲಿ
ಉರಿಯೂತವುಂಟಾಗುವ
ಸಾಧ್ಯತೆ
ಹೆಚ್ಚು.
ಪರಿಣಾಮವಾಗಿ ಹೊಟ್ಟೆನೋವು, ಜ್ವರ, ಸತತ ಬೇಧಿ, ಹಸಿವಾಗದಿರುವುದು ಮೊದಲಾದ ತೊಂದರೆಗಳು ಎದುರಾಗಬಹುದು. University of Maryland Medical Center ಎಂಬ ವಿಶ್ವವಿದ್ಯಾಲಯ ಪ್ರಕಟಿಸಿರುವ ಪ್ರಕಾರ ಸಂತೃಪ್ತ ಕೊಬ್ಬು ಹಾಗೂ ಸಕ್ಕರೆಯ ಅಂಶಗಳು ಹೆಚ್ಚಾಗಿರುವ ಆಹಾರಗಳ ಸೇವನೆಯಿಂದ (ಇವೆರಡೂ ಸಿಹಿಪದಾರ್ಥಗಳಲ್ಲಿ ಯಥೇಚ್ಛವಾಗಿವೆ) ಕ್ರೋನ್ಸ್ ಕಾಯಿಲೆ ಆವರಿಸುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ.
ಮೂಳೆಗಳ
ದೃಢತೆ
ಕಡಿಮೆ
ಮಾಡುತ್ತದೆ
ಸತತವಾಗಿ
ಸಿಹಿಗಳನ್ನು
ಸೇವಿಸುವ
ದುಷ್ಪರಿಣಾಮ
ಮೂಳೆಗಳ
ಮೇಲೆ
ನೇರವಾಗಿ
ಆಗುತ್ತದೆ.
"Nutrition
Reviews"ಎಂಬ
ನಿಯತಕಾಲಿಕೆಯ
ಜೂನ್
2008ರಲ್ಲಿ
ಪ್ರಕಟವಾದ
ವರದಿಯ
ಪ್ರಕಾರ
ಸಕ್ಕರೆ
ಹೆಚ್ಚಿರುವ
ಆಹಾರಗಳ
ಸೇವನೆಯಿಂದ
ಮೂಳೆಗಳ
ದೃಢತೆ
ಕಡಿಮೆಯಾಗುತ್ತದೆ.
ಪರಿಣಾಮವಾಗಿ
ಚಿಕ್ಕಪುಟ್ಟ
ಅಪಘಾತಗಳಲ್ಲಿ,
ಮನೆಯಲ್ಲಿ
ಚಿಕ್ಕದಾಗಿ
ಜಾರಿಬಿದ್ದ
ನೆಪವೇ
ಮೂಳೆಗಳು
ತುಂಡಾಗಲು
ಕಾರಣವಾಗಬಹುದು.
ಪರಿಣಾಮವಾಗಿ
ನಿತ್ಯದ
ಚಟುವಟಿಕೆಗಳೆಲ್ಲಾ
ಏರುಪೇರಾಗಬಹುದು.