Just In
- 20 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡುಗೆಮನೆಯ ಡಬ್ಬದಲ್ಲಿರುವ ಕರಿಮೆಣಸು, ತುಂಬಾನೇ ಪವರ್ಫುಲ್!
ಕರಿಮೆಣಸು ಅಥವಾ ಕಾಳುಮೆಣಸಿಗೆ ಖಾರ ನೀಡುವ ಪೋಷಕಾಂಶವೇ ಪೈಪರಿನ್ ಅಥವಾ ಪೈಪರೈನ್ (Piperine). ಕರಿಮೆಣಸನ್ನು ಔಷಧಿಗಿಂತಲೂ ರುಚಿ ಹೆಚ್ಚಿಸುವ ಸಾಂಬಾರ ಪದಾರ್ಥವಾಗಿಯೇ ಹೆಚ್ಚು ಸೇವಿಸಲಾಗುತ್ತದೆ. ಆದರೆ ಇದರ ನಿಜವಾದ ಶಕ್ತಿ ಔಷಧಿರೂಪದಲ್ಲಿಯೇ ಇದೆ. ಇಂದಿನ ಲೇಖನದಲ್ಲಿ ಇದು ಯಾವ ರೀತಿಯಾಗಿ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವೃದ್ಧಿಸುತ್ತದೆ ಎಂಬುದನ್ನು ನೋಡೋಣ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!
ಈ ಪೋಷಕಾಂಶದ ನಿಜವಾದ ಸಾಮರ್ಥ್ಯವಿರುವುದು ಕೊಬ್ಬು ಕರಗಿಸುವಿಕೆಯಲ್ಲಿ. ಅಂದರೆ ಈ ಪೋಷಕಾಂಶವನ್ನು ಅರಗಿಸಿಕೊಳ್ಳಲು ಶರೀರಕ್ಕೆ ಹೆಚ್ಚು ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದು ತೂಕ ಕಳೆದುಕೊಳ್ಳುವವರಿಗೆ ಒಂದು ವರದಾನವಾಗಿದೆ. ಅಲ್ಲದೇ ಈ ಕಾರ್ಯದಲ್ಲಿ ದೇಹದ ತಾಪಮಾನವೂ ಏರುತ್ತದೆ. ಇದರಿಂದ ದೇಹದ ಪ್ರತಿ ಜೀವಕೋಶದ ಶಕ್ತಿ ಹೆಚ್ಚುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಗಳೂ ಉತ್ತಮಗೊಳ್ಳುತ್ತವೆ. ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ
ಈ ಪೋಷಕಾಂಶದ ಇನ್ನೊಂದು ಗುಣವೆಂದರೆ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದು. ಅಂದರೆ ಇತರ ಆಹಾರಗಳ ಮೂಲಕ ಪಡೆದ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ವಿಶೇಷವಾಗಿ ಬೀಟಾ ಕ್ಯಾರೋಟೀನ್, ವಿಟಮಿನ್ ಬಿ6, ಅಮೈನೋ ಆಮ್ಲಗಳು, ಸೆಲೆನಿಯಂ, ಗ್ಲುಕೋಸ್ ಹಾಗೂ ಕುರ್ಕುಮಿನ್ ಎಂಬ ಪೋಷಕಾಂಶಗಳು ಪೈಪಿರೈನ್ ಪೋಷಕಾಂಶದ ಆಶ್ರಯದಲ್ಲಿ ಹೆಚ್ಚು ಫಲಪ್ರದವಾಗುತ್ತವೆ.
ಅಷ್ಟೇ ಅಲ್ಲ, ಇದು ಉರಿಯೂತವನ್ನು ಕಡಿಮೆಗೊಳಿಸಲೂ ಉತ್ತಮವಾಗಿದೆ. ಉರಿಯೂತದ ಮೂಲಕ ಎದುರಾಗುವ ಸಂಧಿವಾತ, ರ್ಹೂಮಾಟಾಯ್ಡ್ ಆರ್ಥೈಟಿಸ್ (rheumatoid arthritis)ಮೊದಲಾದ ತೊಂದರೆಗಳು ಕಡಿಮೆಯಾಗಲು ನೆರವಾಗುತ್ತವೆ.
ಇದರ ಉತ್ತಮಗುಣಗಳಲ್ಲೇ ಉತ್ತಮವಾದುದು ಎಂದರೆ ಇದರ ಕ್ಯಾನ್ಸರ್ ನಿರೋಧಕ ಗುಣ. ಹಲವು ಸಂಶೋಧನೆಗಳ ಮೂಲಕ ಹಲವು ರೀತಿಯ ಕ್ಯಾನ್ಸರ್ ಬರುವುದನ್ನು ಈ ಪೋಷಕಾಂಶದ ಮೂಲಕ ತಡೆಗಟ್ಟಬಹುದು. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕ್ಯಾನ್ಸರ್ ಬರದಿರಲು ಈ ಪೋಷಕಾಂಶ ಮಹತ್ತರ ಪಾತ್ರ ವಹಿಸಿರುವುದು ಖಚಿತವಾಗಿದೆ. ಇಲಿಯ ಶ್ವಾಸಕೋಶದ ಕ್ಯಾನ್ಸರ್ ಪೀಡಿತ ಅಂಗಾಂಶದ ಬೆಳವಣಿಗೆಯನ್ನು ಈ ಪೋಷಕಾಂಶ ತಡೆಗಟ್ಟಿರುವುದು ಕಂಡುಬಂದಿದೆ. ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...
ಈ ಖಾರವಾದ ಪೋಷಕಾಂಶ ನಾಲಿಗೆಗೆ ಚುರುಕುಮುಟ್ಟಿಸಿದರೂ ಮೆದುಳಿಗೆ ಮಾತ್ರ ಆರಾಮದಾಯಕವಾಗಿದೆ. ಏಕೆಂದರೆ ಮೆದುಳಿನಲ್ಲಿ ಮುದನೀಡುವ ಸೆರೋಟೋನಿನ್ ಎಂಬ ರಸದೂತದ ಉತ್ಪತ್ತಿ ಹೆಚ್ಚಿಸಲು ನೆರವಾಗುವ ಮೂಲಕ ಮನೋಭಾವ ಉತ್ತಮಗೊಳ್ಳಲೂ ನೆರವಾಗುತ್ತದೆ. ಅಲ್ಲದೇ ಈ ರಸದೂತ ನೋವನ್ನು ಮರೆಸುವ ಗುಣವನ್ನೂ ಹೊಂದಿದೆ.
ಆದರೆ ಈ ಪೋಷಕಾಂಶದ ಪ್ರಮಾಣಕ್ಕೆ ಒಂದು ಮಿತಿ ಇದೆ. ಏಕೆಂದರೆ ಇದೊಂದು ಅಲ್ಕಲಾಯ್ಡ್ ಅಂದರೆ ಜೀವರಾಸಾಯನಿಕ ಕ್ರಿಯೆಯನ್ನೇ ಏರುಪೇರುಗೊಳಿಸುವ ಕ್ಷಮತೆ ಇರುವ ಔಷಧಿಯಾಗಿದೆ. ಆದ್ದರಿಂದ ಇದರ ಪ್ರಮಾಣ ಹೆಚ್ಚಾದರೆ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಚಿಕ್ಕ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಇದು ಆರೋಗ್ಯಕರವಾಗಿದೆ.
ಇದು ರಸದೂತಗಳ ಮೇಲೆಯೂ ಪ್ರಭಾವ ಬೀರುವ ಕಾರಣ ಗರ್ಭಿಣಿಯರು, ಬಾಣಂತಿಯರು, ರೋಗಿಗಳು ಇದರ ಸೇವನೆಗೂ ಮುನ್ನ ತಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಬೇಕು. ಈ ಪೋಷಕಾಂಶ ಕಾಳುಮೆಣಸು, ಖಾರವಾದ ಗಿಡ್ಡ ಮೆಣಸು (peppercorn) ಮತ್ತು ಪೆಪ್ಪರ್ ಬೆರ್ರಿ ಹಣ್ಣುಗಳಿಂದ ದೊರಕುತ್ತದೆ. ಈ ಪೋಷಕಾಂಶವನ್ನು ಹಾಗೇ ಸೇವಿಸುವ ಬದಲು ಅಮೈನೋ ಆಮ್ಲ, ಗಿಡಮೂಲಿಕೆಗಳ ರಸಗಳ ಜೊತೆಗೆ ಸೇವಿಸುವುದೇ ಉತ್ತಮ. ಇದರಿಂದ ಜಠರದಲ್ಲಿ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.