Latest Updates
-
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ!
ಇನ್ನು ಸಣ್ಣ-ಪುಟ್ಟ ಕಾಯಿಲೆಗಳಿಗೆ ವೈದ್ಯರ ಬಳಿ ಹೋಗಬೇಡಿ!
ಮನೆಮದ್ದುಗಳು ಹಿಂದಿನಿಂದಲೂ ಹಲವಾರು ರೀತಿಯ ಕಾಯಿಲೆಗಳನ್ನು ನಿವಾರಣೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಮನೆಮದ್ದು ಎಂದರೆ ಕೆಲವರಿಗೆ ನಿರ್ಲಕ್ಷ್ಯ ಧೋರಣೆ. ಮನೆಮದ್ದು ಬಳಸಿಕೊಂಡು ನಮ್ಮ ಹಿರಿಯರು ತುಂಬಾ ಆರೋಗ್ಯವಾಗಿದ್ದರು ಮತ್ತು ಇಂದಿಗೂ ಅವರು ನಮಗಿಂತ ತುಂಬಾ ಆರೋಗ್ಯವಾಗಿದ್ದಾರೆ.
ಹಿಂದಿನವರು ಆಸ್ಪತ್ರೆಗಳಿಗೆ ಹೋಗಿರುವುದೇ ಕಡಿಮೆ. ಯಾಕೆಂದರೆ ಮನೆಯಲ್ಲಿಯೇ ಸಿಗುವಂತಹ ಮನೆಮದ್ದನ್ನುಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಇದ್ದರು. ಎದೆಯುರಿ, ಕೆಮ್ಮು, ಜ್ವರ ಮತ್ತು ಕಫದಂತಹ ಸಮಸ್ಯೆಗಳಿಗೆ ಮನೆಮದ್ದು ತುಂಬಾ ಪರಿಣಾಮಕಾರಿ..... ಮುಂದೆ ಓದಿ....

ಬಿಕ್ಕಳಿಗೆ ಬರುತ್ತಾ ಇದ್ದರೆ
ನಿಮಗೆ ಬಿಕ್ಕಳಿಗೆ ಬರುತ್ತಾ ಇದ್ದರೆ ಎರಡು ಚಮಚ ಸಕ್ಕರೆ ಬಾಯಿಗೆ ಹಾಕಿ ಅದನ್ನು ಗಬಗಬನೆ ನುಂಗಬೇಕು. ಒಣ ಸಕ್ಕರೆಯ ಹರಳುಗಳು ಧ್ವನಿಫಲಕದ ನರಗಳಲ್ಲಿ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುವುದು. ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಟಿಪ್ಸ್

ಗಂಟಲು ಕರೆತ
ಗಂಟಲು ಕರೆತವಿದ್ದರೆ ನಿಮಗೆ ಬೆಳ್ಳುಳ್ಳಿಯು ತುಂಬಾ ನೆರವಿಗೆ ಬರಲಿದೆ. ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಗಂಟಲಿನಲ್ಲಿ ನೋವು ಹಾಗೂ ಕಿರಕಿರಿ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡುವುದು. ಆರರಿಂದ ಏಳು ಬೆಳ್ಳುಳ್ಳಿಯ ಎಸಲುಗಳನ್ನು ಜಜ್ಜಿಕೊಂಡು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ದಿನದಲ್ಲಿ ಎರಡು ಸಲ ಬಾಯಿ ಮುಕ್ಕಳಿಸಿಕೊಳ್ಳಿ.ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

ಎದೆಯುರಿ
ಎದೆಯುರಿಗೆ ನಾಲ್ಕೈದು ತುಳಸಿ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಎರಡೇ ನಿಮಿಷದಲ್ಲಿ ನಿಮಗೆ ಪರಿಹಾರ ಸಿಗುವುದು. ಭಾರತದಲ್ಲಿ ತುಂಬಾ ಪವಿತ್ರವೆಂದು ನಂಬಲಾಗಿರುವ ತುಳಸಿಯು ಪವಾಡವನ್ನೇ ಮಾಡಲಿದೆ. ಇದು ಜೀರ್ಣಕ್ರಿಯೆಯ ಸಮಸ್ಯೆನ್ನು ಬೇಗನೆ ನಿವಾರಿಸಲಿದೆ.

ತುಟಿಗಳು ಒಡೆಯುವ ಸಮಸ್ಯೆ
ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತುಟಿಗಳು ಒಡೆಯುವ ಸಮಸ್ಯೆಯನ್ನು ನಿವಾರಣೆ ಮಾಡಬೇಕಾದರೆ ನೀವು ಈಗಾಗಲೇ ಹಲವಾರು ಮಲಾಮ್ಗಳನ್ನು ಬಳಸಿರಬಹುದು. ಇದರಿಂದ ಯಾವುದೇ ಪ್ರಯೋಜವಾಗಿರಲಿಕ್ಕಿಲ್ಲ.

ತುಟಿಗಳು ಒಡೆಯುವ ಸಮಸ್ಯೆ
ಆದರೆ ಆಲಿವ್ ಎಣ್ಣೆಯನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ. ಇದು ಒಡೆದ ತುಟಿಗಳಿಗೆ ತುಂಬಾ ಒಳ್ಳೆಯದು. ಬೆಣ್ಣೆ ಹಚ್ಚಿಕೊಂಡರೂ ಒಡೆದ ತುಟಿಗಳಿಗೆ ಪರಿಹಾರ ಸಿಗುವುದು. ತುಟಿಗಳು ಒಡೆಯದಂತೆ ಸಣ್ಣ ಮಕ್ಕಳ ತುಟಿಗಳಿಗೆ ಇಂದಿಗೂ ಬೆಣ್ಣೆ ಹಚ್ಚುತ್ತಾರೆ.



Click it and Unblock the Notifications