Just In
- 7 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 8 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 9 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Priyanka Gandhi: ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಮಂಗಳಸೂತ್ರ: ಮೋದಿಗೆ ಪ್ರಿಯಾಂಕಾ ತಿರುಗೇಟು
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಟಮಿನ್ ಕೆ ಪ್ರಾಮುಖ್ಯತೆ
ಪರಿಣಿತರ ಪ್ರಕಾರ ದಿನ ನಿತ್ಯದ ಆಹಾರ ಕ್ರಮದಲ್ಲಿ ಸೇವಿಸಲೇಬೇಕಾದ ಮುಖ್ಯವಾದ ವಿಟಮಿನ್ ಎಂದರೆ ವಿಟಮಿನ್ ಕೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ದೇಹದ ಇನ್ನಿತರ ಪ್ರಕ್ರಿಯೆಗಳಿಗೆ ನೆರವು ನೀಡುತ್ತದೆ. ಹಲವರು ಇದನ್ನು ಮರೆತುಹೋಗುವ ವಿಟಮಿನ್ ಎಂದೇ ಕರೆಯುತ್ತಾರೆ. ಏಕೆಂದರೆ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು ನಿರ್ಲಕ್ಷಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇದನ್ನು ವಿಟಮಿನ್ ಡಿಯೊಂದಿಗೆ ಸೇರಿಸ ಹೇಳಲಾಗುತ್ತಿದೆ. ಏಕೆಂದರೆ ಇವೆರಡೂ ಹೆಚ್ಚುಕಡಿಮೆ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ. ವಿಟಮಿನ್ ಡಿ ಹೃದಯ ಸಂಬಂಧಿ ವಿಷಯಗಳಲ್ಲಿ ಬಹಳ ಮುಖ್ಯವಾದುದು ಅದೇ ರೀತಿ ವಿಟಮಿನ್ ಕೆಯನ್ನು ಕೂಡ ಇದರೊಂದಿಗೆ ಬಳಸಲಾಗುವುದು. ಬೋಲ್ಡ್ ಸ್ಕೈ ಇಂದು ವಿಟಮಿನ್ ಕೆಯ ಪ್ರಾಮುಖ್ಯತೆಯನ್ನು ನಿಮಗೆ ತಿಳಿಸಿಕೊಡುತ್ತದೆ.
ವಿಟಮಿನ್
ಕೆಯ
ಪ್ರಾಮುಖ್ಯತೆ
ಮೂಳೆಗಳಿಗೆ
ಮೂಳೆಗಳ ಆರೋಗ್ಯವನ್ನು ಕಾಪಾಡಲು ವಿಟಮಿನ್ ಕೆ ಬಹಳ ಮುಖ್ಯವಾದದ್ದು. ಕ್ಯಾಲ್ಸಿಯಂ ಜೊತೆಯಲ್ಲಿ ಇದು ಕೂಡ ಮೂಳೆಗಳನ್ನು ಗಟ್ಟಿಮಾಡುತ್ತದೆ.
ಕ್ಯಾನ್ಸರ್
ನೀವು ಕ್ಯಾನ್ಸರ್ ರೋಗಿಯಾಗಿದ್ದಲ್ಲಿ ವಿಟಮಿನ್ ಕೆಯನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ಇದರಲ್ಲಿನ ಫ್ಲವೊನಾಯಿಡ್ಸ್ ಫೈಟೊನ್ಯೂಟ್ರಿಯೆಂಟ್ ಆಗಿದ್ದು ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಪಿನಾಚ್ ಮತ್ತು ಬ್ರೊಕೊಲಿಯಂತಹವುಗಳಲ್ಲಿ ಇದು ಹೆಚ್ಚಾಗಿದೆ.
ರಕ್ತದೊತ್ತಡ
ರಕ್ತದೊತ್ತಡದಿಂದ ಬಳಲುತ್ತಿರುವವರು ವಿಟಮಿನ್ ಕೆಯನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕು. ಇದು ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ದೃಷ್ಟಿ
ಕ್ಯಾರೆಟ್ ಜೊತೆಗೆ ಬ್ರೊಕೊಲಿ, ಕೋಸು ಮತ್ತು ಸ್ಪಿನಾಚ್ ನಂತಹ ತರಕಾರಿಗಳನ್ನು ಸೇವಿಸುವುದರಿಂದ ದೃಷ್ಟಿ ಉತ್ತಮಗೊಳ್ಳುತ್ತದೆ. ಈ ತರಕಾರಿಗಳಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇವುಗಳನ್ನು ವಾರಕ್ಕೊಮ್ಮೆಯಾದರೂ ಬಳಸಿದರೆ ಒಳ್ಳೆಯದು. ಇದು ಮಂದದೃಷ್ಟಿಯ ಸಮಸ್ಯೆಯನ್ನು ನಿವಾರಿಸುತ್ತದೆ.
ರೋಗ ನಿರೋಧಕಶಕ್ತಿ
ಇತ್ತೀಚಿನ ದಿನಗಳಲ್ಲಿ ಹಲವರು ರೋಗನಿರೋಧಕ ಶಕ್ತಿ ಹೆಚ್ಚಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಟಮಿನ್ ಕೆಯೊಂದೆ ಇದಕ್ಕೆ ಪರಿಹಾರ. ಹಸಿರೆಲೆ ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಮೆದುಳು
ನಿಮಗೆ ಒತ್ತಡವುಂಟಾದಾಗ ಮೆದುಳಿಗೆ ಅದನ್ನು ಸಹಿಸಲು ಶಕ್ತಿ ಬೇಕಾಗುತ್ತದೆ. ವಿಟಮಿನ್ ಕೆಯುಕ್ತ ಆಹಾರವನ್ನು ಮೆದುಳಿನ ಆಹಾರವೆಂದು ಕರೆಯುತ್ತಾರೆ. ಇದನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ.
ನರಸಂಬಂಧಿ ಸಮಸ್ಯೆಗಳು
ಅನಿಯಂತ್ರಿತ ಒತ್ತಡದಿಂದಾಗಿ ನರವ್ಯೂಹವು ತೊಂದರೆಗೆ ಒಳಗಾಗುತ್ತದೆ. ಆಗ ನೀವು ವಿಟಮಿನ್ ಕೆ ಆಹಾರವನ್ನು ಸೇವಿಸಬೇಕು. ಮೂರ್ಛೆರೋಗಕ್ಕೆ ಇದು ಉತ್ತಮವಾದದ್ದು.
ಶುದ್ಧಿ
ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವ ಹದಿಹರೆಯದವರು ತಮ್ಮ ರಕ್ತ ಶುದ್ಧಿಗೆ ಇದನ್ನು ಬಳಸುವುದು ಒಳ್ಳೆಯದು. ಇದಕ್ಕೆ ಇರುವ ಒಂದೇ ದಾರಿಯೆಂದರೆ ವಿಟಮಿನ್ ಕೆ ಹೆಚ್ಚಿರುವ ಹಸಿರು ತರಕಾರಿಗಳನ್ನು ತಿನ್ನುವುದು.
ಪೌಷ್ಟಿಕಾಂಶ
ಹೆಚ್ಚಿನ ಪೌಷ್ಟಿಕಾಂಶವಿರುವ ಆಹಾರಗಳಲ್ಲಿ ಇದು ಹೆಚ್ಚಿರುತ್ತದೆ. ಹಸಿರೆಲೆ ತರಕಾರಿಗಳಾದ ಎಲೆಕೋಸು ಮತ್ತು ಸ್ಪಿನಾಚ್ ಇದಕ್ಕೆ ಉತ್ತಮ ಉದಾಹರಣೆ.
ಹೊಟ್ಟೆನೋವು
ನೀವು ಕೆಲವು ಸಾರಿ ಸಿಕ್ಕಾಪಟ್ಟೆ ಹೊಟ್ಟೆನೋವಿನಿಂದ ಬಳಲಬಹುದು. ಅಂತಹ ಸಮಯದಲ್ಲಿ ವಿಟಮಿನ್ ಕೆ ಹೆಚ್ಚಿರುವ ಆಹಾರಗಳು ಈ ನೋವಿನಿಂದ ಹೊರಬರಲು ನೆರವು ನೀಡುತ್ತವೆ. ನಿಮಗೆ ಹೊಟ್ಟೆ ನೋವು ಶುರುವಾದ ತಕ್ಷಣ ತರಕಾರಿ ಜ್ಯೂಸ್ ಕುಡಿಯಿರಿ.
ತಲೆನೋವು
ಪದೇ ಪದೇ ಕಾಡುವ ತಲೆನೋವಿನಿಂದ ಹೊರಬರಲು ನಿಮ್ಮ ಡಯೆಟ್ ನಲ್ಲಿ ವಿಟಮಿನ್ ಕೆ ಸೇರಿಸಿಕೊಳ್ಳಿ. ಇದರಿಂದ ನೀವು ತಲೆನೋವಿನಿಂದ ಮುಕ್ತರಾಗಬಹುದು.
ರಕ್ತ ಹೆಪ್ಪುಗಟ್ಟುವಿಕೆ
ಇತ್ತೀಚಿನ ದಿನಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಜನ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇವು ನಿಮ್ಮ ಹೃದಯಕ್ಕೆ ಹಾನಿಯುಂಟುಮಾಡುತ್ತದೆ. ಆದ್ದರಿಂದ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಮುನ್ನಚ್ಚರಿಕೆಯ ಕ್ರಮವಾಗಿ ವಿಟಮಿನ್ ಕೆಯುಕ್ತ ಆಹಾರ ಸೇವಿಸಿ.
ಗರ್ಭಿಣಿಯರು
ಪರಿಣಿತರ ಪ್ರಕಾರ ನೀವು ಗರ್ಭಿಣಿಯರಾಗಿದ್ದಾಗ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ವಿಟಮಿನ್ ಕೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬ್ರೊಕೊಲಿ ಮತ್ತು ಎಲೆಕೋಸು ಈ ಸಮಯದಲ್ಲಿ ಗರ್ಭಿಣಿಯರಿಗೆ ಒಳ್ಳೆಯದು.
ಹೊಟ್ಟೆ ಉಬ್ಬರ
ನೀವು ಹೊಟ್ಟೆ ಉಬ್ಬರದಿಂದ ನರಳುತ್ತಿರುವಿರಾದರೆ ನಿಮಗೆ ವಿಟಮಿನ್ ಕೆ ಅವಶ್ಯಕತೆಯಿದೆ ಎಂದರ್ಥ. ನಿಮಗೆ ಹೊಟ್ಟೆ ಉಬ್ಬರ ಕಾಣಿಸಿಕೊಂಡ ತಕ್ಷಣ ಹಸಿರೆಲೆ ತರಕಾರಿಗಳನ್ನು ತಿನ್ನಿ. ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.
ಇರುಸುಮುರಿಸು
ನೀವು ಸಣ್ಣ ಸಣ್ಣ ಸಂಗತಿಗಳಿಂದಲೂ ಇರಿಸುಮುರಿಸಾಗುತ್ತಿರುವಿರಾ? ಪರಿಣಿತರ ಪ್ರಕಾರ ಇದಕ್ಕೆ ಕಾರಣ ವಿಟಮಿನ್ ಕೆಯ ಕೊರತೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ವಿಟಮಿನ್ ಕೆಯುಕ್ತ ಆಹಾರವನ್ನು ಸೇವಿಸಿ.