Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೂಲವ್ಯಾಧಿ ಗುಣವಾಗಲು ಪಾಲಿಸಲೇಬೇಕಾದ ಪಥ್ಯ
ಪೈಲ್ಸ್ ಅಥವಾ ಮೂಲವ್ಯಾಧಿ ಏಕೆ ಬರುತ್ತದೆ? ಈ ರೀತಿ ಉಂಟಾಗಲು ಕಾರಣವೇನು? ಬಂದರೆ ಯಾವ ಬಗೆಯ ಮನೆ ಮದ್ದುಗಳನ್ನು ತೆಗೆದುಕೊಂಡರೆ ಗುಣವಾಗುವುದು ಎಂದು ತಿಳಿಸಿದ್ದೆವು. ಆದರೆ ಈ ಔಷಧಿಗಳನ್ನು ಪಾಲಿಸುವುದರ ಜೊತೆಗೆ ಪಥ್ಯದ ಆಹಾರ ಸೇವಿಸಿದರೆ ಕಾಯಿಲೆ ಬೇಗ ಗುಣಮುಖವಾಗುತ್ತದೆ. ಆದ್ದರಿಂದ ಮೂಲವ್ಯಾಧಿ ಇರುವವರು ಈ ಕೆಳಗಿನ ಪಥ್ಯದ ಆಹಾರಕ್ರಮ ಪಾಲಿಸುವುದು ಒಳ್ಳೆಯದು.

1. ತಂಗಳನ್ನ:ಬಿಸಿ ಅನ್ನ ತಿನ್ನುವುದರ ಬದಲು ತಂಗಳನ್ನ ತಿನ್ನುವುದು ಒಳ್ಳೆಯದು. ಹೆಸರು ಬೇಳೆ, ತೊಗರಿಬೇಳೆ,ಮಜ್ಜಿಗೆ, ಹಾಲು, ತುಪ್ಪ, ಬೆಣ್ಣೆ ಸೇವಿಸಿ. ಮೂಲಂಗಿ, ಪಡವಲಕಾಯಿ, ಬಸಳೆ, ಜೀರಿಗೆ, ಹಿಂಗು, ಬಾಳೆಹಣ್ಣು ಆಹಾರಕ್ರಮದಲ್ಲಿದ್ದರೆ ಒಳ್ಳೆಯದು.
2. ಬಾಳೆಹಣ್ಣು: ಬಾಳೆಹಣ್ಣನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಿಂದರೆ ತುಂಬಾ ಒಳ್ಳೆಯದು.
3. ಬಾಳೆ: ಬಾಳೆಯ ಹೂವಿನಿಂದ ಮತ್ತು ಬಾಳೆದಿಂಡಿನಿಂದ ಸಾರು, ಪಲ್ಯ ಮಾಡಿ ತಿನ್ನುವುದು ಮಾಡಿದರೆ ಮೂಲವ್ಯಧಿಗೆ ಮಾತ್ರವಲ್ಲ ಕಿಡ್ನಿಗೂ ಒಳ್ಳೆಯದು. ಬಾಳೆ ಹೂವನ್ನು ಅರೆದು ಅದರಿಂದ ರಸ ತೆಗೆದು ಮಜ್ಜಿಗೆ ಜೊತೆ ಬೆರೆಸಿ ಬೆರೆಸಿ ಕುಡಿದರೆ ಒಳ್ಳೆಯದು.
4.ಕರಿಬೇವಿನ ಚಟ್ನಿ: ಕರಿಬೇವನ್ನುನೆರಳಿನಲ್ಲಿ ಒಣಗಿಸಿಕೊಳ್ಳಬೇಕು. ನಂತರ ಸ್ವಲ್ಪ ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಹಿಂಗು, ಒಣಗಿದ ಕರಿಬೇವಿನ ಎಲೆ ಹುರಿದು ಹುರಿಗಡಲೆಯೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡು ಅನ್ನ, ಚಪಾತಿ, ರೊಟ್ಟಿ, ದೋಸೆ ತಿನ್ನಲು ಬಳಸಬೇಕು.
5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಚಟ್ನಿ ಮಾಡಿ ತಿಂದರೆ ಒಳ್ಳೆಯದು. ಈ ರೀತಿ ಚಟ್ನಿ ಮಾಡುವಾಗ ಕೊತ್ತಂಬರಿ ಸೊಪ್ಪನ್ನು ಎಣ್ಣೆಯಲ್ಲಿ ಹುರಿದು ಅದನ್ನು ಉಳಿದ ಚಟ್ನಿ ಸಾಮಾಗ್ರಿಗಳ ಜೊತೆ ಹಾಕಿ ತಯಾರಿಸಿದ ಚಟ್ನಿ ಮೂಲವ್ಯಾಧಿ ನಿವಾರಣೆಗೆ ರಾಮಬಾಣವಾಗಿದೆ. ಈ ಚಟ್ನಿಯನ್ನು, ದೋಸೆ, ಇಡ್ಲಿ, ಅನ್ನದ ಜೊತೆ ತಿನ್ನಬಹುದಾಗಿದೆ.
6. ಗುಲ್ಕಂದ್ : ಗುಲ್ಕಂದ್ ತಿನ್ನುವುದು ತುಂಬಾ ಒಳ್ಳೆಯದು (ಇದನ್ನು ಮಾಡುವ ರೆಸಿಪಿ ನೋಡಿ ಇಲ್ಲಿದೆ). ದಿನಕ್ಕೆ ಒಂದು ಚಮಚದಂತೆ ತಪ್ಪದೇ ತಿನ್ನಿ (ಗುಲ್ಕಂದ್ ತಿಂದರೆ ದೊರೆಯುವ ಪ್ರಯೋಜನಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಗುಲಾಬಿ ದಳದ ಜ್ಯೂಸ್ ಕೂಡ ತುಂಬಾ ಒಳ್ಳೆಯದು. ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದಲ್ಲಿ ಇದು ಅತ್ಯುತ್ತಮ ಆಹಾರ ಮತ್ತು ಔಷಧಿಯಾಗಿ ಕೆಲಸ ಮಾಡುತ್ತವೆ. ಒಂದು ಚಮಚೆ ಗುಲ್ಕಂದ್ ತಿಂದು ಹಾಲು ಕುಡಿಯಬೇಕು. ಅಥವಾ ಬಾಳೆಹಣ್ಣಿನ ಜೊತೆ ಕೂಡ ತಿನ್ನಬಹುದು.
7. ಪಪ್ಪಾಯಿ: ಪಪ್ಪಾಯಿ ಹಣ್ಣನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಹಾಲು, ಜೇನು ಬೆರೆಸಿ ತಿಂದರೆ ಒಳ್ಳೆಯದು. ಪಪ್ಪಾಯಿ ಜೊತೆ ಬಾಳೆಹಣ್ಣು, ಕರಬೂಜ ಹಣ್ಣುಗಳನ್ನು ಕೂಡ ತಿನ್ನಬಹುದು.
8. ಕರಿಬೇವಿನ ಎಲೆ: ಅಡುಗೆಯಲ್ಲಿ ಸಾಕಷ್ಟು ಕರಿಬೇವಿನ ಎಲೆ ಹಾಕಿ ತಯಾರಿಸುವುದು ಒಳ್ಳೆಯದು. ಕರಿಬೇವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೂಡ ತಿನ್ನಬಹುದು.
9. ಮೂಲಂಗಿ: ಮೂಲಂಗಿಯನ್ನು ಅಡುಗೆಯಲ್ಲಿ ಅಧಿಕ ಬಳಸಿ. ಅದರ ಸೊಪ್ಪಿನಿಂದ ಪಲ್ಯ ತಯಾರಿಸಿ ತಿನ್ನುವುದು ತುಂಬಾ ಒಳ್ಲೆಯದು. ಆಹಾರಗಳಲ್ಲಿ ಅಧಿಕ ನಾರಿನ ಪದಾರ್ಥವಿರುವ ಆಹಾರವನ್ನು ಹೆಚ್ಚಗಿ ಸೇವಿಸಬೇಕು.
10. ನೀರು: ದಿನಕ್ಕೆ ಎಂಟು ಲೋಟ ನೀರು ತಪ್ಪದೆ ಕುಡಿಯಬೇಕು. ಜ್ಯೂಸ್ ಕೂಡ ಕುಡಿಯಬಹುದು. ಕುರುಕಲು ತಿಂಡಿ ಮತ್ತು ಸಾಫ್ಟ್ ಪದಾರ್ಥಗಳನ್ನು (ಪಿಜ್ಜಾ, ಬರ್ಗರ್ ನಂತಹ ವಸ್ತುಗಳು) ತಿನ್ನಬಾರದು.
ಅತೀ ಮುಖ್ಯವಾಗಿ ಜೀವನ ಶೈಲಿ ಬಗ್ಗೆ ಗಮನವಿರಲಿ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡು ಅದರಂತೆ ಆಹಾರ ಪದಾರ್ಥಗಳನ್ನು ಪಾಲಿಸಿದರೆ ಅನೇಕ ಕಾಯಿಲೆಗಳು ಉಂಟಾಗುವುದು. ಮೂಲವ್ಯಾಧಿ ಮನೆಯಲ್ಲಿ ಯಾರಿಗಾದರು ಇದ್ದರೆ ಈ ಸಲಹೆಗಳನ್ನು ಪಾಲಿಸಲು ಹೇಳಿ, ಅಲ್ಲದೆ ಇದನ್ನು ಬರದಂತೆ ತಡೆಯಲು ಈ ಮೇಲಿನ ಆಹಾರಗಳನ್ನು ನಮ್ಮ ಆಹಾರಕ್ರಮದಲ್ಲಿ ಅಳವಡಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
