Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸಿಗರೇಟ್ ಸೇದುವವರಿಗೆ ಸೀಕ್ರೆಟ್ ಡಯಟ್ ಇದು

ಕೆಲವು ಆಹಾರ ಸೇವನೆಯಿಂದ ಸಿಗರೇಟ್ ದುಶ್ಚಟದಿಂದ ದೇಹದಲ್ಲಿ ತುಂಬಿಕೊಂಡ ವಿಷಕಾರಿ ಅಂಶವನ್ನು ತೆಗೆದು ಹಾಕಲು ಸಾಧ್ಯವಿದೆ. ಧೂಮಪಾನದಿಂದ ದೇಹಕ್ಕೆ ಆಗುವ ಅಪಾಯವನ್ನು ಆಹಾರಗಳಿಂದ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಈ ಚಟದಿಂದಾಗುವ ಕೆಲವು ಅಪಾಯವನ್ನು ನಿಯಂತ್ರಣ ಮಾಡಬಹುದಷ್ಟೇ.
ಧೂಮಪಾನಿಗಳ ಡಯಟ್ ನಲ್ಲಿ ಏನೇನಿರಬೇಕು?
1. ಗ್ರೀನ್ ಟೀ: ನೀವು ಟೀ ಅಥವಾ ಕಾಫಿ ಸೇವಿಸುವುದಾದರೆ ತಕ್ಷಣವೇ ಅದನ್ನು ನಿಲ್ಲಿಸಿ. ಈಗಾಗಲೇ ಸಿಗರೇಟ್ ಸೇವನೆಯಿಂದ ದೇಹದಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿರುತ್ತವೆ. ಜೊತೆಗೆ ಟೀ ಕಾಫಿ ಇದ್ದರೆ ಇನ್ನಷ್ಟು ಪ್ರಚೋದನೆ ನೀಡಿದಂತೆ. ಕಾಫಿಯಲ್ಲಿನ ಕೆಲ ಅಂಶ ಇನ್ನಷ್ಟು ವಿಷವನ್ನು ದೇಹಕ್ಕೆ ಸೇರಿಸುತ್ತದೆ.
ಆದ್ದರಿಂದ ನಿಮ್ಮ ಅಭ್ಯಾಸವನ್ನು ಗ್ರೀನ್ ಟೀಗೆ ಬದಲಿಸಿಕೊಳ್ಳಿ. ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡಂಟ್ ಇರುವುದರಿಂದ ತುಂಬಾ ಅನುಕೂಲವಿದೆ. ಇದನ್ನು ಔಷಧಿಯಂತೆ ಕುಡಿಯಬೇಕಿಲ್ಲ. ಒಮ್ಮೆ ಗ್ರೀನ್ ಟೀ ಟೇಸ್ಟ್ ಮಾಡಿದರೆ ಸಾಕು, ನೀವೇ ಕಾಫಿ ಟೀ ಬದಿಗಿಟ್ಟು, ಗ್ರೀನ್ ಟೀ ಚಟವನ್ನೂ ಅಂಟಿಸಿಕೊಳ್ಳುತ್ತೀರ.
2. ಬೆಳ್ಳುಳ್ಳಿ: ನೀವು ತಿನ್ನುವ ಆಹಾರಕ್ಕೆಲ್ಲಾ ಬೆಳ್ಳುಳ್ಳಿ ಬಳಸಿ. ಸಲಾಡ್, ಸೂಪು, ಕರಿ ಯಾವುದಕ್ಕಾದರೂ ಸರಿ ಬೆಳ್ಳುಳ್ಳಿ ಮಿಶ್ರಣವಿರಲಿ. ನಿಮಗೆ ಬೆಳ್ಳುಳ್ಳಿ ವಾಸನೆ ಅಹಿತವೆನಿಸಲಿಲ್ಲ ಎಂದರೆ ದಿನಕ್ಕೆ 4-5 ಎಸಳು ಬೆಳ್ಳುಳ್ಳಿಯನ್ನೂ ಹಾಗೆಯೂ ತಿಂದರೆ ಇನ್ನೂ ಹೆಚ್ಚು ಅನುಕೂಲ. ಬೆಳ್ಳುಳ್ಳಿಯಲ್ಲಿ ವಿಶೇಷವಾದ ಗಡ್ಡೆ ನಿವಾರಕ ಅಂಶವಿರುವುದರಿಂದ ಧೂಮಪಾನಿಗಳಿಗೆ ಹೆಚ್ಚು ನೆರವಾಗುತ್ತದೆ. ಸಿಗರೇಟ್ ದೇಹದಲ್ಲಿ ಕ್ಯಾರ್ಸಿಮೊನಾ ಉತ್ಪಾದಿಸಿದರೆ, ಬೆಳ್ಳುಳ್ಳಿ ಅದನ್ನು ನಿರ್ಣಾಮ ಮಾಡಲು ಸಹಕರಿಸುತ್ತದೆ.
* 3-4 ಅಂಶ ಹಸಿರು: ಹಸಿರು ತರಕಾರಿ, ಸೊಪ್ಪಿನಲ್ಲಿ ದೇಹಕ್ಕೆ ಅವಶ್ಯಕವಾದ ಆಂಟಿಯಾಕ್ಸಿಡೆಂಟ್ ಹೇರಳವಾಗಿರುತ್ತೆ. ಅಷ್ಟೇ ಅಲ್ಲ, ಇವುಗಳಲ್ಲಿ ಕ್ಯಾನ್ಸರ್ ನಿವಾರಕ ವಿಶೇಷವಾದ ಕ್ಯಾರೊಟೊನಾಯ್ಡ್ ಕೂಡ ಇರುವುದರಿಂದ ಧೂಮಪಾನಿಗಳು ನಿರಂತರವಾಗಿ ಸೇವಿಸಿದರೆ ಕ್ಯಾನ್ಸರ್ ಮತ್ತು ಇನ್ನಿತರ ಶ್ವಾಸಕೋಶ ಸಂಬಂಧಿ ಸಮಸ್ಯೆ ಉಂಟಾಗುವುದು ತಪ್ಪುತ್ತದೆ. ಪಾಲಾಕ್, ಬ್ರೊಕೊಲಿ ಮುಂತಾದುವು ಆಹಾರದಲ್ಲಿ ಕಡ್ಡಾಯವಾಗಿ ಇರಲೇಬೇಕು.
* ಕ್ಯಾಪ್ಸಿಕಂ: ದುಂಡುಮೆಣಸಿನಕಾಯಿಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿದೆ. ದುಂಡು ಮೆಣಸಿನಕಾಯಿ ಸೇವಿಸಲು ಕ್ಯಾನ್ಸರ್ ರೋಗಿಗಳಿಗೂ ಸಲಹೆ ನೀಡುತ್ತಾರೆ. ಆದ್ದರಿಂದ ಧೂಮಪಾನಿಗಳು ದುಂಡು ಮೆಣಸಿನಕಾಯಿಯನ್ನು ಹೆಚ್ಚು ತಿಂದಷ್ಟೂ ಒಳ್ಳೆಯದು. ಇದನ್ನು ಹಸಿ ತಿನ್ನಬೇಕು. ಫ್ರೈ ಅಥವಾ ಅತಿಯಾಗಿ ಬೇಯಿಸಿದ ದುಂಡು ಮೆಣಸಿನಕಾಯಿ ಪ್ರಯೋಜನಕ್ಕೆ ಬರುವುದಿಲ್ಲ.
* 2-3 ಅಂಶ ಸಿಟ್ರಸ್ ಹಣ್ಣು: ಧೂಮಪಾನಿಗಳ ಆರೋಗ್ಯಕ್ಕೆ ವಿಟಮಿನ್ ಸಿ ಪೂರಿತ ಹಣ್ಣುಗಳು ಅಮೃತವಿದ್ದಂತೆ. ನೀವು ಎಷ್ಟು ಹಣ್ಣುಗಳನ್ನು ತಿನ್ನುತ್ತೀರೊ ಹೆಚ್ಚು ವರ್ಷ ಬದುಕುತ್ತೀರ. ಆದ್ದರಿಂದ ದಿನಕ್ಕೆ ಒಂದಾದರೂ ವಿಟಮಿನ್ ಸಿ ಇರುವ ಹಣ್ಣನ್ನು ಸೇವಿಸಿ. ಟೊಮೆಟೊ, ಕಿತ್ತಳೆ ಮುಂತಾದ ಹಣ್ಣುಗಳು ಧೂಮಪಾನ ಚಟದಿಂದ ಮೈಗಂಟಿಸಿಕೊಳ್ಳಬಹುದಾದ ರೋಗವನ್ನು ಸ್ವಲ್ಪ ಮಟ್ಟಿಗೆ ತಡೆಯಲು ರೋಗನಿರೋಧಕ ಶಕ್ತಿ ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











