Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಪಾಲಿಸಿ ಈ ಸರಳ ಆಯುರ್ವೇದ ಟಿಪ್ಸ್
ಮೇ ತಿಂಗಳಿನಲ್ಲಿಯೇ ಕೆಲವು ಕಡೆ ಪ್ರವಾಹದ ಭೀತಿ ಎದುರಾಗಿದೆ. ಧೋ ಎಂದು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಜನರು ಕಂಗಲಾಗಿದ್ದಾರೆ. ಇನ್ನು ನಾಲ್ಕು ತಿಂಗಳು ಮಳೆಗಾಲ.
ಮಳೆಗಾಲ ಎಂದರೆ ಆರೋಗ್ಯ ಸಮಸ್ಯೆ ತುಸು ಹೆಚ್ಚಾಗಿಯೇ ಕಾಡುತ್ತದೆ. ನೆಗಡಿ, ಕೆಮ್ಮು, ಜ್ವರ ಈ ಸಮಸ್ಯೆಗಳು ಹೆಚ್ಚಿನವರನ್ನು ಕಾಡುವುದು. ಅದರಲ್ಲೂ ಮಳೆಗಾಲದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ. ಇನ್ನು ಜೀರ್ಣಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಇರುತ್ತದೆ. ಈ ಸಮಯದಲ್ಲಿ ನಮ್ಮ ಜೀವನಶೈಲಿ ಹಾಗೂ ಆರೋಗ್ಯಶೈಲಿಯಲ್ಲಿ ಬದಲಾವಣೆ ತಂದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು.

ಇನ್ನು ಕೊರೊನಾ ಅತಂಕ ಮತ್ತೆ ಕಾಡಿರುವುದರಿಂದ ಸಾಮಾನ್ಯ ನೆಗಡಿ, ಕೆಮ್ಮು ಬಂದರೂ ಕೊರೊನಾ ಇರಬಹುದಾ ಎಂಬ ಆತಂಕ ಕಾಡಬಹುದು ಅಥವಾ ಕೊರೊನಾ ಲಕ್ಷಣಗಳು ಕಂಡು ಬಂದರೂ ಪ್ರಾರಂಭದಲ್ಲಿ ಅದು ಸಾಮಾನ್ಯ ಶೀತ-ಕೆಮ್ಮು ಅಂತ ಭಾವಿಸಿ ಮತ್ತಷ್ಟು ಜನರಿಗೆ ಕೊರೊನಾ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಮಳೆಗಾಲದಲ್ಲಿ ತುಂಬಾನೇ ಹುಷಾರಾಗಿರಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು ಎಂಬುವುದು ಆಯುರ್ವೇದದಲ್ಲಿ ಹೇಳಲಾಗಿದೆ.
ಈ ಆಯುರ್ವೇದ ಟಿಪ್ಸ್ ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಲು ಸಹಕಾರಿ:

ವಾತ, ಪಿತ್ತ, ಕಫ ದೋಷದ ಬಗ್ಗೆ ಎಚ್ಚರವಹಿಸಬೇಕು
ಆಯುರ್ವೇದ ಪ್ರಕಾರ ಮಳೆಗಾಲದಲ್ಲಿ ವಾತ, ಪಿತ್ತ, ಕಫದ ಸಮಸ್ಯೆ ಹೆಚ್ಚಾಗಿ ಕಾಡುವುದು, ಈ ದೋಷದಿಂದಾಗಿ ರೋಗ ನಿರೋಧಕ ಸಾಮಾರ್ಥ್ಯ ಕಡಿಮೆಯಾಗುವುದು. ಕಫ, ಪಿತ್ತ ದೋಷದಿಂದಾಗಿ ದೇಹದಲ್ಲಿ ಜೀರ್ಣಕ್ರಿಯೆ ಕೂಡ ಕಡಿಮೆಯಾಗುವುದು, ಇದರಿಂದಾಗಿ ದೇಹದಲ್ಲಿ ಕಶ್ಮಲ ಹೆಚ್ಚುವುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ದೇಹದಲ್ಲಿ ಕಶ್ಮಲ ಹೆಚ್ಚುವುದು. ಅದನ್ನು ಹೊರಹಾಕಬೇಕು ಇಲ್ಲದಿದ್ದರೆ ಕಾಯಿಲೆ ಹೆಚ್ಚುವುದು.

ಪ್ರಕೃತ್ತಿ ಕಡೆ ಗಮನ ನೀಡಿ
ಕಾಲಕ್ಕೆ ಬದಲಾದಂತೆ ನಮ್ಮ ಆಹಾರಶೈಲಿಯಲ್ಲಿ ಬದಲಾವಣೆ ಮಾಡಬೇಕು. ಮಳೆಗಾಲದಲ್ಲಿ ಮಳೆಗಾಲಕ್ಕೆ ಸೂಕ್ತವಾದ ಆಹಾರ ಸೇವಿಸಬೇಕು. ಮೈ ಬೆಚ್ಚಗಿಡುವ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಘನ ಅಹಾರ ಬದಲಿಗೆ ಸುಲಭದಲ್ಲಿ ಜೀರ್ಣವಾಗುವಂಥ ಲಘು ಆಹಾರ, ಸೂಪ್ನಂಥ ದ್ರವಾಹಾರ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ಕಶ್ಮಲವನ್ನು ಹೊರಹಾಕಬಹುದು. ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ದೇಹ ನಿರೋಧಕ ಶಕ್ತಿ ಹೆಚ್ಚಾದರೆ ಕೊರೊನಾ ವೈರಸ್ ಬಗ್ಗೆಯೂ ಭಯ ಪಡಬೇಕಾಗಿಲ್ಲ, ರೋಗ ನಿರೋಧಕ ಶಕ್ತಿ ಚೆನ್ನಾಗಿರುವವರ ಮೇಲೆ ಕೊರೊನಾ ವೈರಸ್ ಯಾವುದೇ ಪರಿಣಾಮ ಬೀರಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಜೊತೆಗೆ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನೂ ತಡೆಗಟ್ಟಬಹುದು.

ಮಳೆಗಾಲದಲ್ಲಿ ಆಹಾರಕ್ರಮ
* ಹುಳಿ, ಸಿಹಿ, ಉಪ್ಪು ಇರುವ ಆಹಾರವನ್ನು ಸೇವಿಸಿ.
* ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಲಘುವಾಗಿ ಸೇವಿಸಿ.
* ಬಿಸಿ-ಬಿಸಿ ಆಹಾರ ಸೇವಿಸಿ.
* ಶುಂಠಿ-ಬೆಳ್ಳುಳ್ಳಿ, ಕಾಳು ಮೆಣಸು, ಇಂಗು, ನಿಂಬೆ ಹಣ್ಣು ನಿಮ್ಮ ಆಹಾರದಲ್ಲಿ ಇರಲಿ, ಇವುಗಳು ಜೀರ್ಣಕ್ರಿಯೆಗೆ ಸಹಕಾರಿ.
* ಈ ಸಮಯದಲ್ಲಿ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ.
* ಕರಿ ಜೀರಿಗೆ ಇದ್ದರೆ ಸೇವಿಸಿ.
* ಹೆಸರುಕಾಳು, ಚೆನ್ನಾ, ಜೋಳ, ಕಡ್ಲೆ ಹಿಟ್ಟಿನ ಪದಾರ್ಥ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ ಈ ಬಗೆಯ ಆಹಾರ ಸೇವಿಸಿ.

ಜೀವನಶೈಲಿ
* ದೇಹವನ್ನು ಬೆಚ್ಚಗೆ ಇಡಿ
* ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಾಡಿ.
* ಪಾದಗಳ ಆರೈಕೆ ಕಡೆ ಗಮನ ನೀಡಿ.
* ಪ್ರತಿದಿನ ದೇಹಕ್ಕೆ ಎಣ್ಣೆ ಹಚ್ಚಿ ಆರೈಕೆ ಮಾಡುವುದು ಒಳ್ಳೆಯದು.
* ಹಗಲು ಹೊತ್ತಿನಲ್ಲಿ ನಿದ್ರಿಸಬೇಡಿ
* ಮಳೆಯಲ್ಲಿ ಒದ್ದೆಯಾದರೆ ಕೂಡಲೇ ಬಟ್ಟೆ ಬದಲಾಯಿಸಿ
* ಮಳೆಗಾಲದಲ್ಲಿ ಮಧ್ಯಾಹ್ನದ ನಂತರ ಬರುವ ಬಿಸಿಲಿನಲ್ಲಿ ನಿಲ್ಲಬೇಡಿ
* ಈ ಸಮಯದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದರೆ ಒಳ್ಳೆಯದು.



Click it and Unblock the Notifications











