Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಇಂತಹ ಆಹಾರಗಳಲ್ಲಿದೆ!
ನೈಸರ್ಗಿಕವಾಗಿ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನುವುದು ಮತ್ತಷ್ಟು ಒಳ್ಳೆಯದು. ಈ ಆಹಾರಗಳು ಹೃದಯದ ಆರೋಗ್ಯವನ್ನು ಕಾಪಾಡಿ ಹೃದಯಾಘಾತವಾಗದಂತೆ ತಡೆಯುವುದು....
ಒತ್ತಡ ಹಾಗೂ ದೇಹಕ್ಕೆ ಬೇಕಾದ ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವುದು ಇಂದಿನ ದಿನಗಳಲ್ಲಿ ಜನರ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ದೇಹವನ್ನು ಹಲವಾರು ರೋಗಗಳು ಕಾಡುತ್ತದೆ. ಪ್ರಮುಖವಾಗಿ ಅನಾರೋಗ್ಯಕರ ಆಹಾರದಿಂದಾಗಿ ಕೊಬ್ಬು ಹೆಚ್ಚಾಗುತ್ತದೆ. ಇದು ಹೃದಯಘಾತ ಹಾಗೂ ಇತರ ಕಾಯಿಲೆಗಳಿಗೆ ರಹದಾರಿಯಾಗುವುದು. ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!
ಅಪಧಮನಿಗಳಲ್ಲಿ ತಡೆಯಾಗುವುದರಿಂದ ಸರಿಯಾಗಿ ರಕ್ತಸಂಚಾರವಾಗದೆ ಹೃದಯಾಘಾತ ಉಂಟಾಗುತ್ತದೆ. ಈ ಲೇಖನದಲ್ಲಿ ಹೃದಯಾಘಾತವನ್ನು ತಡೆಯುವಂತಹ ಕೆಲವೊಂದು ಆಹಾರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಆಹಾರಗಳು ಹೃದಯವನ್ನು ಕಾಪಾಡುತ್ತದೆ. ಈ ಆಹಾರಗಳು ಅಪಧನಿಮಗಳನ್ನು ಸ್ವಚ್ಛಗೊಳಿಸಿ ಯಾವುದೇ ರೀತಿಯ ತಡೆಯಾಗದಂತೆ ನೋಡಿಕೊಳ್ಳುತ್ತದೆ. ಹಲವಾರು ರೀತಿಯ ಹಣ್ಣುಗಳು ಹಾಗೂ ತರಕಾರಿಗಳು ಹೃದಯದ ಆರೋಗ್ಯವನ್ನು ಕಾಪಾಡುವುದು. ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ
ನೈಸರ್ಗಿಕವಾಗಿ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನುವುದು ಮತ್ತಷ್ಟು ಒಳ್ಳೆಯದು. ಈ ಆಹಾರಗಳು ಹೃದಯದ ಆರೋಗ್ಯವನ್ನು ಕಾಪಾಡಿ ಹೃದಯಾಘಾತವಾಗದಂತೆ ತಡೆಯುವುದು. ಏನು ತಿನ್ನುತ್ತೇವೆ ಮತ್ತು ಏನು ಕುಡಿಯುತ್ತೇವೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುವುದು. ಹೃದಯಾಘಾತವನ್ನು ತಡೆಯುವಂತಹ ಕೆಲವೊಂದು ಆಹಾರಗಳ ಬಗ್ಗೆ ತಿಳಿದುಕೊಳ್ಳಿ.....
ಸಾಲ್ಮನ್ ಮೀನು
ಸಾಲ್ಮನ್ ಮೀನಿನಲ್ಲಿ ಆರೋಗ್ಯಕರ ಕೊಬ್ಬಿನಾಮ್ಲವಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ. ಹೃದಯಾಘಾತಕ್ಕೆ ಕೊಲೆಸ್ಟ್ರಾಲ್ ಮತ್ತು ಉರಿಯೂತ ಪ್ರಮುಖ ಕಾರಣವಾಗಿದೆ.
ಕಿತ್ತಳೆ ಜ್ಯೂಸ್
ಕಿತ್ತಳೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಇದೆ. ರಕ್ತನಾಳಗಳು ಹಾನಿಗೊಳಗಾಗುವುದನ್ನು ಇದು ತಡೆಯುತ್ತದೆ ಹಾಗೂ ರಕ್ತದೊತ್ತಡವನ್ನು ಸಾಮಾನ್ಯವಾಗಿಡುವುದು. ದಿನಕ್ಕೆ ಎರಡು ಲೋಟ ಕಿತ್ತಳೆ ಜ್ಯೂಸ್ ಕುಡಿದರೆ ಹೃದಯಾಘಾತದಿಂದ ಪಾರಾಗಬಹುದು ಎಂದು ಅಧ್ಯಯನಗಳು ಹೇಳಿವೆ.
ಬೀಜಗಳು
ಬೀಜಗಳು ತುಂಬಾ ಆರೋಗ್ಯಕಾರಿ ಆಹಾರವಾಗಿದೆ. ಇದು ಕೊಬ್ಬಿನಾಮ್ಲಗಳು, ಅಪರ್ಯಾಪ್ತ ಕೊಬ್ಬು ಮತ್ತು ಒಮೆಗಾ3 ಕೊಬ್ಬಿನಾಮ್ಲವು ಬೀಜಗಳಲ್ಲಿ ಇದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುವುದು ಮಾತ್ರವಲ್ಲದೆ ಗಂಟು ಹಾಗೂ ಹೃದಯದ ಆರೋಗ್ಯವು ಚೆನ್ನಾಗಿರುವುದು.
ಅರಿಶಿನ
ಅರಿಶಿನದಲ್ಲಿ ತುಂಬಾ ಬಲಿಷ್ಠವಾಗಿರುವಂತಹ ಉರಿಯೂತ ಶಮನಕಾರಿ ಗುಣವಾದ ಸಿರ್ಕುಮಿನ್ ಲಭ್ಯವಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಿ ಅತಿಯಾಗಿ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳುವುದು. ಅರಿಶಿನವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೃದಯಾಘಾತವನ್ನು ತಡೆಯಬಹುದು.
ಗ್ರೀನ್ ಟೀ
ಹೃದಯಾಘಾತವನ್ನು ತಡೆಯುವಂತಹ ಮತ್ತೊಂದು ಪ್ರಮುಖವಾಗಿರುವ ಆಹಾರವೆಂದರೆ ಅದು ಗ್ರೀನ್ ಟೀ. ಗ್ರೀನ್ ಟೀಯಲ್ಲಿರುವ ಕಾಟೆಚಿನ್ ಎನ್ನುವ ಅಂಶವು ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಹೃದಯವನ್ನು ಕಾಪಾಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುವುದು. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ ಫಲಿತಾಂಶ ನೀಡುವುದು.