Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಆರೋಗ್ಯ ಟಿಪ್ಸ್: ಹಿಂಸೆ ನೀಡುವ ಈ 'ಕೀಲು ನೋವಿಗೆ' ತ್ವರಿತ ಪರಿಹಾರ
ಉತ್ತಮ ಆರೋಗ್ಯಕ್ಕೆ ಸಾಕಷ್ಟು ವ್ಯಾಯಾಮ ಅಗತ್ಯ. ಆದರೆ ವ್ಯಾಯಾಮ ಹೆಚ್ಚಾದರೆ ಇದರ ಹೆಚ್ಚಿನ ಭಾರ ಮೂಳೆ ಸಂದುಗಳ ಮೇಲೆ ಬೀಳುತ್ತದೆ. ಪರಿಣಾಮವಾಗಿ ಈ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ವ್ಯಾಯಾಮದ ಉತ್ಸಾಹವನ್ನೇ ಉಡುಗಿಸಿಬಿಡುತ್ತದೆ. ಬರೆಯ ವ್ಯಾಯಾಮದ ಉತ್ಸಾಹ ಮಾತ್ರವಲ್ಲ, ದಿನನಿತ್ಯದ ಚಟುವಟಿಕೆಗಳೂ ಕಷ್ಟಕರವಾಗುತ್ತದೆ.
ಇದು ಮನೆಯ ಸದಸ್ಯರಿಗೂ ಅನಾನುಕೂಲತೆ ಉಂಟಾಗಬಹುದು. ಕೀಲು ನೋವಿಗೆ ಮೂಳೆಸಂಧುಗಳ ಸೋಂಕು, ಮೂಳೆ ಮತ್ತು ಸ್ನಾಯುಗಳು ಸಂಧಿಸುವ ಅಂಗಾಂಶಗಳು ಅಗತ್ಯಕ್ಕೂ ಹೆಚ್ಚು ಸೆಳೆತಕ್ಕೊಳಪಡುವುದು ಅಥವಾ ಸೋಂಕಿಗೆ ಒಳಗಾಗುವ ಮೂಲಕ ನೋವಿಗೆ ಕಾರಣವಾಗುತ್ತದೆ. ಕೀಲುಗಳ ನೋವು: ಶೀಘ್ರ ಪರಿಹಾರಕ್ಕೆ ಸುಲಭ ಉಪಾಯಗಳು
ಕೀಲು ನೋವಿಗೆ ಇನ್ನೂ ಕೆಲವಾರು ಕಾರಣಗಳಿವೆ. ಬಿದ್ದು ಆದ ಪೆಟ್ಟು, ವೈರಲ್ ಸೋಂಕು, ಸ್ಥೂಲಕಾಯ, ಅಸಮರ್ಪಕ ಆಹಾರ ಕ್ರಮ, ವ್ಯಾಯಾಮದ ಕೊರತೆ, ಸಂಧಿವಾತ, ಕ್ಯಾಲ್ಸಿಯಂ ಕೊರತೆ ಮೊದಲಾದವು ನೋವಿಗೆ ಕಾರಣವಾಗಬಹುದು. ಸಂಧುಗಳಲ್ಲಿ ನೋವು ನಿತ್ಯದ ಕೆಲಸಗಳು, ಓಡಾಟ, ಪ್ರಾರ್ಥನೆ ಮೊದಲಾದ ನಿತ್ಯಕರ್ಮಗಳಿಗೆ ಬಾಧೆಯುಂಟುಮಾಡಬಹುದು. ಅಲ್ಲದೇ ಸತತವಾಗಿ ನೋವು ಬಾಧಿಸುವುದು ಮಾನಸಿಕವಾಗಿಯೂ ಕುಗ್ಗಿಸಬಹುದು. ಆದ್ದರಿಂದ ನೋವು ಕಾಣಿಸಿಕೊಂಡ ಪ್ರಾರಭಂದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇದ್ದರೆ ಈ ನೋವು ದಿನೇದಿನೇ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?
ತಜ್ಞರು ಈ ನೋವಿಗೆ ನುಂಗುವ ಮಾತ್ರೆ, ನೋವಿರುವ ಭಾಗದಲ್ಲಿ ಹಚ್ಚಲು ಮುಲಾಮು ಮೊದಲಾದವುಗಳನ್ನು ಸಲಹೆ ಮಾಡುತ್ತಾರೆ. ನೋವು ಕಡಿಮೆ ಮಾಡಲು ನೋವು ನಿವಾರಕ ಗುಳಿಗೆಗಳನ್ನೂ ಶಿಫಾರಸ್ಸು ಮಾಡಬಹುದು. ಆದರೆ ಈ ಔಷಧಿಗಳು ಅಡ್ಡಪರಿಣಾಮದಿಂದ ಹೊರತಾಗಿಲ್ಲ. ಆದರೆ ನಿಸರ್ಗ ಈ ನೋವನ್ನು ಕಡಿಮೆ ಮಾಡಲು ಒಂದು ವಿಧಾನವನ್ನು ನೀಡಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ ಹಾಗೂ ಶೀಘ್ರವಾಗಿ ಸಂಧುನೋವನ್ನು ಕಡಿಮೆ ಮಾಡುತ್ತದೆ. ಬನ್ನಿ, ಈ ವಿಧಾನ ಯಾವುದೆಂದು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು
ಕೊಬ್ಬರಿ ಎಣ್ಣೆ: ಒಂದು ದೊಡ್ಡಚಮಚ
ಎಲೆಕೋಸಿನ ರಸ: ಕಾಲು ಕಪ್

ಎಲೆಕೋಸು
ಎಲೆಕೋಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತಸಂಚಾರವನ್ನು ಮೂಳೆಸಂದುಗಳಿಗೆ ಹೆಚ್ಚಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಒಮೆಗಾ-3-ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಮೂಳೆಸಂಧುಗಳಿಗೆ ಅಗತ್ಯವಿರುವ ಜಾರುಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಮೂಳೆಗಳ ಚಲನೆ ಸುಲಭವಾಗಿ ನೋವು ಕಡಿಮೆಯಾಗುತ್ತದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಬ್ಬರಿ ಎಣ್ಣೆ ಬಳಕೆಯ ಮಹತ್ವವೇನು?

ತಯಾರಿಕಾ ವಿಧಾನ
ಒಂದು ಕಪ್ನಲ್ಲಿ ಇವೆರಡೂ ಸಾಮಾಗ್ರಿಗಳನ್ನು ಬೆರೆಸಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಸೇವಿಸಿ ಕೊಂಚ ಹೊತ್ತಿನ ಬಳಿಕ ಉಪಾಹಾರ ಸೇವಿಸಿ. ಈ ಕ್ರಮವನ್ನು ಸತತವಾಗಿ ಎರಡು ತಿಂಗಳ ಕಾಲ ಮುಂದುವರೆಸಿ.



Click it and Unblock the Notifications











