Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಸೌಂದರ್ಯ ವೃದ್ಧಿಸಬೇಕೇ? ಇಲ್ಲಿದೆ ನೋಡಿ ನೈಸರ್ಗಿಕ ಔಷಧಿ!
ವ್ಯಕ್ತಿಯೊಬ್ಬನ ತ್ವಚೆಯನ್ನು ನೋಡಿದ ತಕ್ಷಣ ಆತ ಆರೋಗ್ಯವಂತನಾಗಿದ್ದಾನೆಯಾ ಎಂದು ಹೇಳಬಹುದಂತೆ. ತ್ವಚೆಗೆ ಅಷ್ಟು ಮಹತ್ವವಿದೆ. ನಿಮ್ಮ ತ್ವಚೆಯಿಂದಲೇ ದೇಹದ ಸೌಂದರ್ಯವೂ ಎದ್ದು ಕಾಣುತ್ತದೆ. ಚರ್ಮದ ಆರೈಕೆ ಮಾಡಲು ಹಲವಾರು ರೀತಿಯ ಕ್ರೀಮ್, ಲೋಷನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವರು ಇದನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡುತ್ತಾರೆ. ಆದರೆ ಇದರಲ್ಲಿ ಕೆಲವೊಂದು ರಾಸಾಯನಿಕಗಳನ್ನು ಬಳಸಿರುವುದರಿಂದ ಅದು ಮುಂದೆ ಚರ್ಮದ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

ಚರ್ಮದಲ್ಲಿನ ನೆರಿಗೆ, ಕಲೆಗಳು ಮಾಯವಾಗಬಹುದಾದರೂ ಇದರ ಅಡ್ಡಪರಿಣಾಮಗಳ ಬಗ್ಗೆ ಯೋಚಿಸುವುದು ಅತೀ ಅಗತ್ಯ. ಇದಕ್ಕಾಗಿಯೇ ನಾವು ನೈಸರ್ಗಿಕ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಚರ್ಮದ ಆರೈಕೆ ಮಾಡಬಲ್ಲ ಮನೆಮದ್ದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಮನೆಯಲ್ಲೇ ಮಾಡಿದ ಈ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಕಾಂತಿಯುತ ಮತ್ತು ಯೌವನಭರಿತವಾಗಿ ಕಾಣಬಹುದು. ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್ನಲ್ಲಿರಲಿ!
ಬಾದಾಮಿ ಹುಡಿ, ಜೇನು ಮತ್ತು ಬಿಸಿ ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ತ್ವಚೆಯ ಬಣ್ಣ ಹೊಳೆಯುವುದು. ಇದು ಒಣಗಿರುವ ಚರ್ಮಕ್ಕೆ ತೇವಾಂಶವನ್ನು ನೀಡಿ ಚರ್ಮ ಕಾಂತಿಯನ್ನು ಪಡೆಯಲು ನೆರವಾಗುವುದು. ನೆಲಕಡಲೆ ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ಜಿಡ್ಡಿನ ಚರ್ಮದವರು ಕಾಂತಿಯನ್ನು ಪಡೆಯಬಹುದಾಗಿದೆ. ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು
ನೆಲಕಡಲೆ, ಲಿಂಬೆರಸ, ಹಳದಿ ಮತ್ತು ಮೊಸರಿನಿಂದ ಮಾಡಿರುವ ಪೇಸ್ಟ್ನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿ ಬಣ್ಣವನ್ನು ಪಡೆದು ಹೊಳೆಯುವುದು. ಕುದಿಸದೆ ಇರುವ ಹಾಲನ್ನು ಚರ್ಮಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಕಾಂತಿ ಬರುವುದು. ಇದು ತುಂಬಾ ಸಾಂಪ್ರದಾಯಿಕ ಹಾಗೂ ಪರಿಣಾಮಕಾರಿ ಸೌಂದರ್ಯ ವರ್ಧಕ ವಿಧಾನವಾಗಿದೆ. ಸಾಸಿವೆ ಹುಡಿ ಮತ್ತು ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಂಡರೆ ಕಲೆಗಳು ನಿವಾರಣೆಯಾಗುವುದು.
ಸೂರ್ಯನ ಕಿರಣಗಳಿಂದ ಸುಟ್ಟ ಚರ್ಮಕ್ಕೆ ಇಲ್ಲಿ ಕೆಲವೊಂದು ಮದ್ದುಗಳನ್ನು ಸೂಚಿಸಲಾಗಿದೆ. ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಸುಟ್ಟ ಕಲೆಗಳು ಆಗಿದ್ದರೆ ಅಲೋವೆರಾದ ಜ್ಯೂಸ್ ನಿಂದ ಚರ್ಮವನ್ನು ಉಜ್ಜಿಕೊಳ್ಳಿ. ಆ್ಯಪಲ್ ಸೀಡರ್ ವಿನೇಗರ್ ಕೂಡ ಸೂರ್ಯನಿಂದ ಸುಟ್ಟ ಚರ್ಮಕ್ಕೆ ಅತ್ಯಂತ ನೈಸರ್ಗಿಕ ಮದ್ದು. ಎರಡು ಚಮಚ ಮಜ್ಜಿಗೆ ಮತ್ತು ಸ್ವಲ್ಪ ಟೊಮೆಟೊ ರಸವನ್ನು ಹಾಕಿಕೊಂಡು ಮೈಗೆ ಹಚ್ಚಿಕೊಂಡರೆ
ಸೂರ್ಯನಿಂದ ಸುಟ್ಟ ಚರ್ಮಗಳು ನಿವಾರಣೆಯಾಗುವುದು. ನೆರಿಗೆಯನ್ನು ದೂರ ಮಾಡಲು ಹಲವಾರು ರೀತಿಯ ವಿಧಾನಗಳಿವೆ. ತೆಂಗಿನ ಎಣ್ಣೆಯನ್ನು ಮೈಗೆ ಚೆನ್ನಾಗಿ ತಿಕ್ಕಿಕೊಳ್ಳಬೇಕು. ಅನಾನಸಿನ ಸಿಪ್ಪೆಯನ್ನು ಚರ್ಮಕ್ಕೆ ಸರಿಯಾಗಿ ತಿಕ್ಕಿಕೊಂಡರೆ ನೆರಿಗೆಗೆಳು ದೂರವಾಗಿ ಚರ್ಮವು ಕಾಂತಿಯುತವಾಗುವುದು. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!



Click it and Unblock the Notifications


