Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸೌಂದರ್ಯ ವೃದ್ಧಿಸಬೇಕೇ? ಇಲ್ಲಿದೆ ನೋಡಿ ನೈಸರ್ಗಿಕ ಔಷಧಿ!
ವ್ಯಕ್ತಿಯೊಬ್ಬನ ತ್ವಚೆಯನ್ನು ನೋಡಿದ ತಕ್ಷಣ ಆತ ಆರೋಗ್ಯವಂತನಾಗಿದ್ದಾನೆಯಾ ಎಂದು ಹೇಳಬಹುದಂತೆ. ತ್ವಚೆಗೆ ಅಷ್ಟು ಮಹತ್ವವಿದೆ. ನಿಮ್ಮ ತ್ವಚೆಯಿಂದಲೇ ದೇಹದ ಸೌಂದರ್ಯವೂ ಎದ್ದು ಕಾಣುತ್ತದೆ. ಚರ್ಮದ ಆರೈಕೆ ಮಾಡಲು ಹಲವಾರು ರೀತಿಯ ಕ್ರೀಮ್, ಲೋಷನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವರು ಇದನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡುತ್ತಾರೆ. ಆದರೆ ಇದರಲ್ಲಿ ಕೆಲವೊಂದು ರಾಸಾಯನಿಕಗಳನ್ನು ಬಳಸಿರುವುದರಿಂದ ಅದು ಮುಂದೆ ಚರ್ಮದ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

ಚರ್ಮದಲ್ಲಿನ ನೆರಿಗೆ, ಕಲೆಗಳು ಮಾಯವಾಗಬಹುದಾದರೂ ಇದರ ಅಡ್ಡಪರಿಣಾಮಗಳ ಬಗ್ಗೆ ಯೋಚಿಸುವುದು ಅತೀ ಅಗತ್ಯ. ಇದಕ್ಕಾಗಿಯೇ ನಾವು ನೈಸರ್ಗಿಕ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಚರ್ಮದ ಆರೈಕೆ ಮಾಡಬಲ್ಲ ಮನೆಮದ್ದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಮನೆಯಲ್ಲೇ ಮಾಡಿದ ಈ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಕಾಂತಿಯುತ ಮತ್ತು ಯೌವನಭರಿತವಾಗಿ ಕಾಣಬಹುದು. ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್ನಲ್ಲಿರಲಿ!
ಬಾದಾಮಿ ಹುಡಿ, ಜೇನು ಮತ್ತು ಬಿಸಿ ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ತ್ವಚೆಯ ಬಣ್ಣ ಹೊಳೆಯುವುದು. ಇದು ಒಣಗಿರುವ ಚರ್ಮಕ್ಕೆ ತೇವಾಂಶವನ್ನು ನೀಡಿ ಚರ್ಮ ಕಾಂತಿಯನ್ನು ಪಡೆಯಲು ನೆರವಾಗುವುದು. ನೆಲಕಡಲೆ ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ಜಿಡ್ಡಿನ ಚರ್ಮದವರು ಕಾಂತಿಯನ್ನು ಪಡೆಯಬಹುದಾಗಿದೆ. ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು
ನೆಲಕಡಲೆ, ಲಿಂಬೆರಸ, ಹಳದಿ ಮತ್ತು ಮೊಸರಿನಿಂದ ಮಾಡಿರುವ ಪೇಸ್ಟ್ನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿ ಬಣ್ಣವನ್ನು ಪಡೆದು ಹೊಳೆಯುವುದು. ಕುದಿಸದೆ ಇರುವ ಹಾಲನ್ನು ಚರ್ಮಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಕಾಂತಿ ಬರುವುದು. ಇದು ತುಂಬಾ ಸಾಂಪ್ರದಾಯಿಕ ಹಾಗೂ ಪರಿಣಾಮಕಾರಿ ಸೌಂದರ್ಯ ವರ್ಧಕ ವಿಧಾನವಾಗಿದೆ. ಸಾಸಿವೆ ಹುಡಿ ಮತ್ತು ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಂಡರೆ ಕಲೆಗಳು ನಿವಾರಣೆಯಾಗುವುದು.
ಸೂರ್ಯನ ಕಿರಣಗಳಿಂದ ಸುಟ್ಟ ಚರ್ಮಕ್ಕೆ ಇಲ್ಲಿ ಕೆಲವೊಂದು ಮದ್ದುಗಳನ್ನು ಸೂಚಿಸಲಾಗಿದೆ. ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಸುಟ್ಟ ಕಲೆಗಳು ಆಗಿದ್ದರೆ ಅಲೋವೆರಾದ ಜ್ಯೂಸ್ ನಿಂದ ಚರ್ಮವನ್ನು ಉಜ್ಜಿಕೊಳ್ಳಿ. ಆ್ಯಪಲ್ ಸೀಡರ್ ವಿನೇಗರ್ ಕೂಡ ಸೂರ್ಯನಿಂದ ಸುಟ್ಟ ಚರ್ಮಕ್ಕೆ ಅತ್ಯಂತ ನೈಸರ್ಗಿಕ ಮದ್ದು. ಎರಡು ಚಮಚ ಮಜ್ಜಿಗೆ ಮತ್ತು ಸ್ವಲ್ಪ ಟೊಮೆಟೊ ರಸವನ್ನು ಹಾಕಿಕೊಂಡು ಮೈಗೆ ಹಚ್ಚಿಕೊಂಡರೆ
ಸೂರ್ಯನಿಂದ ಸುಟ್ಟ ಚರ್ಮಗಳು ನಿವಾರಣೆಯಾಗುವುದು. ನೆರಿಗೆಯನ್ನು ದೂರ ಮಾಡಲು ಹಲವಾರು ರೀತಿಯ ವಿಧಾನಗಳಿವೆ. ತೆಂಗಿನ ಎಣ್ಣೆಯನ್ನು ಮೈಗೆ ಚೆನ್ನಾಗಿ ತಿಕ್ಕಿಕೊಳ್ಳಬೇಕು. ಅನಾನಸಿನ ಸಿಪ್ಪೆಯನ್ನು ಚರ್ಮಕ್ಕೆ ಸರಿಯಾಗಿ ತಿಕ್ಕಿಕೊಂಡರೆ ನೆರಿಗೆಗೆಳು ದೂರವಾಗಿ ಚರ್ಮವು ಕಾಂತಿಯುತವಾಗುವುದು. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!



Click it and Unblock the Notifications


