Just In
Don't Miss
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಂಗ್ ಲುಕ್ ನಿಮ್ಮದಾಗಬೇಕೇ? ಇಲ್ಲಿದೆ ಸ್ಮಾರ್ಟ್ ಟಿಪ್ಸ್
ಇದುವರೆಗೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ನಿಮಗೆ ಈಗ ಹುಟ್ಟು ಹಬ್ಬ ಆಚರಿಸಿಕೊಳ್ಳಲು ದುಗುಡವಾಗುತ್ತಿದೆಯೇ? ವಯೋಸಹಜ ಚಿಹ್ನೆಗಳು ಚರ್ಮದಲ್ಲಿ ಕಾಣಿಸಿಕೊಂಡು ಇದನ್ನೆಲ್ಲಾದರೂ ಜನರು ಆಡಿಕೊಳ್ಳುತ್ತಾರೆಂಬ ಅಳುಕು ಕಾಡುತ್ತಿದೆಯೇ? ಇವನ್ನು ಮುಚ್ಚಲು ನೀವು ಪಡುತ್ತಿರುವ ಪಾಡು ಯಾರಿಗೂ ಬೇಡ ಅನ್ನಿಸುತ್ತಿದೆಯೇ? ವಯಸ್ಸಿಗಿಂತ ಚಿಕ್ಕವರಂತೆ ಕಾಣಬೇಕೆ?
ಒಂದು ವೇಳೆ ಇಂತಹ ಯಾವುದೇ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಈ ಸಮಸ್ಯೆ ನಡುವಯಸ್ಸಿನಲ್ಲಿರುವವರಿಗೆ ಸಾಮಾನ್ಯವಾದ ಚಿಂತೆಯಾಗಿದೆ. ಕೆಲವರಂತೂ ಇಪ್ಪತ್ತೈದು ವರ್ಷಕ್ಕೇ ಈ ಚಿಂತೆ ಆವರಿಸತೊಡಗುತ್ತದೆ.
ಏಕೆ ಈ ಚಿಂತೆ ಅಂದರೆ ನಮ್ಮ ಸಮಾಜ ನಮ್ಮ ಗುಣಕ್ಕಿಂತಲೂ ನೋಟಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು ಹಿಂದಿನ ದಿನದ ಮತ್ತು ಇಂದಿನ ದಿನದ ರೂಪದ ಹೋಲಿಕೆಯನ್ನೇ ತಮ್ಮ ಚರ್ಚೆಯ ವಿಷಯವಾಗಿಸುವ ಕಾರಣ ಇದು ನಮಗೆಲ್ಲರಿಗೂ ಮುಜುಗರದ ವಿಷಯವಾಗಿದೆ. ಅದರಲ್ಲೂ ಮುಖದಲ್ಲಿ ಬೀಳುವ ಸೂಕ್ಷ್ಮ ನೆರಿಗೆಗಳು, ವಯೋಸಹಜ ಕಲೆಗಳು, ಮಚ್ಚೆಗಳು, ತುಟಿಯ ಸುತ್ತ ಆವರಿಸುವ ಅರ್ಧವೃತ್ತಾಕಾರದ ನೆರಿಗೆಗಳು ನಗುವಾಗ ಸ್ಪಷ್ಟವಾಗಿ ಗೋಚರಿಸಿ ವೃದ್ಧರಾದರೆ ಹೇಗಿರುತ್ತಾರೆ ಎಂದು ಎದುರಿನವರು ಊಹಿಸುವಂತೆ ಮಾಡುತ್ತದೆ. ಬ್ಯೂಟಿ ಟಿಪ್ಸ್: ಬರೀ ಒಂದೇ ವಾರದಲ್ಲಿ 16ರ ಸೌಂದರ್ಯ!
ಆದರೆ ಈ ಚಿಂತೆಯನ್ನು ತಲೆಗೆ ಹಚ್ಚಿಕೊಂಡು ಕೊರಗಬೇಕಾಗಿಲ್ಲ. ಏಕೆಂದರೆ ಈ ತೊಂದರೆಯನ್ನು ಸಮರ್ಥವಾಗಿ ನಿವಾರಿಸಬಲ್ಲ ಮನೆಮದ್ದು ಲಭ್ಯವಿದ್ದು ಇದರ ಸರಿಯಾದ ಉಪಯೋಗದಿಂದ ಸುಮಾರು ಐದು ವರ್ಷದ ಹಿಂದಿನ ಚರ್ಮದ ಸೆಳೆತವನ್ನು ಪಡೆಯಬಹುದು. ಆ ಮೂಲಕ ಆವರಿಸುತ್ತಿರುವ ವೃದ್ಧಾಪ್ಯವನ್ನು ಕನಿಷ್ಠ ಐದು ವರ್ಷಗಳಾದರೂ ತಡವಾಗಿಸಬಹುದು.
ಮುಖಲೇಪ
ತಯಾರಿಸುವ
ವಿಧಾನ:
ಅಗತ್ಯವಿರುವ
ಸಾಮಾಗ್ರಿಗಳು:
*ಪಪ್ಪಾಯಿ:
ಒಂದು
ಚಿಕ್ಕ
ತುಂಡು
(ಮಧ್ಯಮ
ಗಾತ್ರದ
ಪಪ್ಪಾಯಿ
ಹಣ್ಣಿನ
ಅರ್ಧಭಾಗದ
ಸುಮಾರು
ಒಂದಿಂಚು
ಅಗಲದ
ಹೋಳು)
*ಗುಲಾಬಿ
ನೀರು:
ಎರಡು
ಚಿಕ್ಕ
ಚಮಚ
*ಎಳೆ
ಸೌತೆಕಾಯಿ:
ನಾಲ್ಕೈದು
ಬಿಲ್ಲೆಗಳು
(ಸಿಪ್ಪೆ
ಸಹಿತ)
ಸುಮ್ಮನೆ
ನಕ್ಕು
ಬಿಡಿ
ವಯಸ್ಸು
ಕಾಣೋದಿಲ್ಲ..
ಈ ಮೂರೂ ಸಾಮಾಗ್ರಿಗಳಲ್ಲಿರುವ ಪೋಷಕಾಂಶಗಳು ಒಟ್ಟಾದಾಗ ಚರ್ಮದ ಸೆಳೆತ ಹೆಚ್ಚಿಸಲು ಅತ್ಯುತ್ತಮವಾದ ಆರೈಕೆ ದೊರಕುತ್ತದೆ. ಅಲ್ಲದೇ ಕಲೆಗಳನ್ನು ತಿಳಿಯಾಗಿಸಿ ಚರ್ಮ ಸಹಜವರ್ಣ ಪಡೆಯಲೂ, ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ.
ಈ ಲೇಪದಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಚರ್ಮದ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುವ ಕಾರಣ ಸತ್ತ ಜೀವಕೋಶಗಳ ಜಾಗದಲ್ಲಿ ತುಂಬಿಕೊಂಡ ಜೀವಕೋಶಗಳು ಹುಟ್ಟಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತವೆ. ಇದೇ ಕಾರಣಕ್ಕೆ ಚರ್ಮ ಹಿಂದಿನ ಸೌಂದರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದರೊಂದಿಗೆ ಗುಲಾಬಿ ನೀರು ಜೀವಕೋಶಗಳಿಗೆ ಅಗತ್ಯವಿರುವ ದ್ರವವನ್ನು ಪೂರೈಸಿ ಚರ್ಮ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದರಿಂದ ನೆರಿಗೆಗಳು ಮಾಯವಾಗುತ್ತವೆ. ಸೌತೆಯಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಆರ್ದ್ರತೆ ಪೂರೈಸುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ಒದಗಿಸಿ ಕೋಮಲವಾಗಿಸುತ್ತದೆ. ಒಂದೇ ವಾರದಲ್ಲಿ ನೀವು ಬೆಳ್ಳಗೆ ಕಾಣುವಿರಿ! ಚಾಲೆಂಜ್ಗೆ ರೆಡಿನಾ?
ಈ ಅಪ್ಪಟ ನೈಸರ್ಗಿಕ ಮುಖಲೇಪವನ್ನು ನಿಯಮಿತವಾಗಿ ಮತ್ತು ಸರಿಯಾದ ಕ್ರಮದಲ್ಲಿ ಹಚ್ಚಿಕೊಳ್ಳುತ್ತಾ ಬಂದರೆ ಹೊಸ ಜೀವಕೋಶಗಳು ಹಿಂದಿನ ಗಾಯಗಳಿಂದ, ಮೊಡವೆಗಳಿಂದಾಗಿದ್ದ ಕಲೆಗಳನ್ನೂ ನಿವಾರಿಸಲು ನೆರವಾಗಿ ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ. ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಸಹಾ ಚರ್ಮದ ಆರೈಕೆಗೆ ಹಲವು ವಿಧದಲ್ಲಿ ನೆರವಾಗುತ್ತದೆ. ಅಲ್ಲದೇ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಿ ಕಾಂತಿ ಹೆಚ್ಚಿಸಲು ಸಾಧ್ಯವಾಗುತ್ತದೆ.
ಈ
ಅದ್ಭುತ
ಮುಖಲೇಪ
ತಯಾರಿಸುವ
ವಿಧಾನ:
1)
ಮೇಲೆ
ತಿಳಿಸಿದ
ಎಲ್ಲಾ
ಸಾಮಾಗ್ರಿಗಳನ್ನು
ಮಿಕ್ಸಿಯ
ಬ್ಲೆಂಡರಿನಲ್ಲಿ
ಹಾಕಿ
ಚೆನ್ನಾಗಿ
ಗೊಟಾಯಿಸಿ.
ನೀರು
ಸೇರಿಸಬೇಡಿ.
2)
ಈ
ಲೇಪನವನ್ನು
ಈಗತಾನೇ
ತಣ್ಣೀರಿನಿಂದ
ತೊಳೆದುಕೊಂಡ
ಮುಖ,
ಕುತ್ತಿಗೆ
ಹಣೆಗಳಿಗೆ
ತೆಳುವಾಗಿ
ಹಚ್ಚಿ.
3)
ಕಣ್ಣಿನ
ಕೆಳಭಾಗ,
ತುಟಿಯ
ಸುತ್ತ,
ಹಣೆಯ
ಪಕ್ಕ,
ಅಂದರೆ
ನೆರಿಗೆಗಳು
ಹೆಚ್ಚು
ಬೀಳುವ
ಸ್ಥಳಗಳಲ್ಲಿ
ಹೆಚ್ಚು
ದಪ್ಪನಾಗಿ
ಹಚ್ಚಿ,
ಕಣ್ಣುರೆಪ್ಪೆಗಳ
ಮೇಲೆ
ಕೊಂಚವೇ
ಸವರಿದರೆ
ಸಾಕು.
4)
ಬಳಿಕ
ಹದಿನೈದು
ನಿಮಿಷಗಳ
ಕಾಲ
ಹಾಗೇ
ಒಣಗಲು
ಬಿಡಿ.
5)
ನಂತರ
ತಣ್ಣೀರು
ಉಪಯೋಗಿಸಿ
ತೊಳೆದುಕೊಳ್ಳಿ.
ಕೊಂಚ
ಉರಿ
ಅನ್ನಿಸಿದರೆ
ಮಾತ್ರ
ಸೌಮ್ಯ
ಫೇಸ್
ವಾಶ್
ಬಳಸಿ
ತೊಳೆದುಕೊಳ್ಳಿ.
ಉತ್ತಮ
ಪರಿಣಾಮ
ಪಡೆಯಲು
ಕೇವಲ
ತಣ್ಣೀರು
ಮಾತ್ರ
ಸಾಕು.
ಸೋಪು
ಉಪಯೋಗಿಸಬೇಡಿ.
ಬಳಿಕ
ಟವೆಲ್
ನಿಂದ
ಒತ್ತಿ
ಒರೆಸಿಕೊಳ್ಳಿ.
6)
ಉತ್ತಮ
ಪರಿಣಾಮಕ್ಕಾಗಿ
ದಿನ
ಬಿಟ್ಟು
ದಿನ
ಅನುಸರಿಸಿ.
ಕೆಲವೇ
ದಿನಗಳಲ್ಲಿ
ಉತ್ತಮ
ಪರಿಣಾಮವನ್ನು
ನೋಡಬಹುದು.