Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೇಸ್ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ

ಇನ್ನು ರಾಜಕಾರಣಿಗಳು ಸಂಕಷ್ಟ ಎದುರಾದಾಗ, ಸಂಸತ ಹಂಚಿಕೊಳ್ಳುವಾಗ, ಬೇರೇನೂ ಕೆಲಸವಿಲ್ಲದಾಗ, ಸುಖಾಸುಮ್ಮನೆ ಸ್ವಾಮೀಜಿಗಳ ಕಾಲಿಗೆ ಎರಗಿ ಆಶೀರ್ವಾದ ಪಡೆಯುವುದು, ಸಲಹೆಸೂಚನೆಗಳನ್ನು ತೆಗೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರನ್ನು ನಂಬುವ ಜನಸಾಮಾನ್ಯರ ಮಾತಂತೂ ಕೇಳುವುದೇ ಬೇಡ. ಸ್ವಾಮೀಜಿಗಳು ಹೇಳಿದ್ದೇ ವೇದವಾಕ್ಯ.
ಇದೇ ಸಮಾಜದಲ್ಲಿ ಖೊಟ್ಟಿ ಸ್ವಾಮೀಜಿಗಳು, ಕಳ್ಳ ಸ್ವಾಮೀಜಿಗಳು, ದಗಲಬಾಜಿ ಸ್ವಾಮೀಜಿಗಳೂ ಇರುತ್ತಾರೆ. ಇವರೆಲ್ಲರ ನಡುವೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಲೋಕದ ವ್ಯಾಪಾರವನ್ನು ಗಮನಿಸುತ್ತ, ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುತ್ತ, ಕಾಲಕ್ಕೆ ತಕ್ಕಂತೆ ತಮ್ಮನ್ನೂ ಅಪ್ಡೇಡ್ ಮಾಡಿಕೊಳ್ಳುವ ವಿದ್ಯಾವಂತ ಸ್ವಾಮೀಜಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (ಹುಟ್ಟಿದ್ದು 1984ರಲ್ಲಿ).
ನಮಗೆ ತಿಳಿದಿರುವುದು ಒಂದು ಬಿಂದುವಿನಷ್ಟು, ತಿಳಿಯದಿರುವುದು ಸಾಗರದಷ್ಟು ಎಂಬ ನೀತಿವಾಣಿ ಪಾಲಿಸುತ್ತಿರುವ ಯುವ ಸ್ವಾಮೀಜಿಗಳಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿಯೂ ಒಬ್ಬರು. ಮೂಲತಃ ದಾವಣಗೆರೆಯವರಾದ ಸ್ವಾಮೀಜಿಗಳು ಸದ್ಯಕ್ಕೆ ವಾಸಿಸುತ್ತಿರುವುದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ ಇಷ್ಟಪಡುವ ಸ್ವಾಮೀಜಿಯನ್ನು ಅಪ್ಟುಡೇಟ್ ಸ್ವಾಮೀಜಿ ಅಂದರೂ ಪರವಾಗಿಲ್ಲ. ಧ್ಯಾನ ಮತ್ತು ಬ್ಯಾಡ್ಮಿಂಟನ್ ಆಟವಾಡುವುದು ಅವರಿಗೆ ಅತಿ ಇಷ್ಟವಾದ ಸಂಗತಿಗಳು.
ಫೇಸ್ ಬುಕ್ ನಲ್ಲಿ ಅಡಿಗಾಲಿಟ್ಟಿರುವ ಸ್ವಾಮೀಜಿಗಳು ಸಂಪಾದಿಸಿರುವ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು. ಸ್ವಾಮೀಜಿ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ. ಇಂಥವರ ಹೆಚ್ಚಿನ ಅಗತ್ಯ ಸಮಾಜಕ್ಕೆ ಯಾವತ್ತಿಗೂ ಇದ್ದೇ ಇರುತ್ತದೆ. ಇದೇ ಡಿಸೆಂಬರ್ 1ರಂದು ತಮ್ಮ 27ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಂಡ ಬಸವ ಮರುಳಸಿದ್ಧ ಸ್ವಾಮೀಜಿಗಳ ಫೇಸ್ ಬುಕ್ ಗೆಳೆಯರ ಬಳಗ ಇನ್ನಷ್ಟು ಹೆಚ್ಚಲಿ. [ದಟ್ಸ್ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications