Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಫೇಸ್ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ

ಇನ್ನು ರಾಜಕಾರಣಿಗಳು ಸಂಕಷ್ಟ ಎದುರಾದಾಗ, ಸಂಸತ ಹಂಚಿಕೊಳ್ಳುವಾಗ, ಬೇರೇನೂ ಕೆಲಸವಿಲ್ಲದಾಗ, ಸುಖಾಸುಮ್ಮನೆ ಸ್ವಾಮೀಜಿಗಳ ಕಾಲಿಗೆ ಎರಗಿ ಆಶೀರ್ವಾದ ಪಡೆಯುವುದು, ಸಲಹೆಸೂಚನೆಗಳನ್ನು ತೆಗೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರನ್ನು ನಂಬುವ ಜನಸಾಮಾನ್ಯರ ಮಾತಂತೂ ಕೇಳುವುದೇ ಬೇಡ. ಸ್ವಾಮೀಜಿಗಳು ಹೇಳಿದ್ದೇ ವೇದವಾಕ್ಯ.
ಇದೇ ಸಮಾಜದಲ್ಲಿ ಖೊಟ್ಟಿ ಸ್ವಾಮೀಜಿಗಳು, ಕಳ್ಳ ಸ್ವಾಮೀಜಿಗಳು, ದಗಲಬಾಜಿ ಸ್ವಾಮೀಜಿಗಳೂ ಇರುತ್ತಾರೆ. ಇವರೆಲ್ಲರ ನಡುವೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಲೋಕದ ವ್ಯಾಪಾರವನ್ನು ಗಮನಿಸುತ್ತ, ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುತ್ತ, ಕಾಲಕ್ಕೆ ತಕ್ಕಂತೆ ತಮ್ಮನ್ನೂ ಅಪ್ಡೇಡ್ ಮಾಡಿಕೊಳ್ಳುವ ವಿದ್ಯಾವಂತ ಸ್ವಾಮೀಜಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (ಹುಟ್ಟಿದ್ದು 1984ರಲ್ಲಿ).
ನಮಗೆ ತಿಳಿದಿರುವುದು ಒಂದು ಬಿಂದುವಿನಷ್ಟು, ತಿಳಿಯದಿರುವುದು ಸಾಗರದಷ್ಟು ಎಂಬ ನೀತಿವಾಣಿ ಪಾಲಿಸುತ್ತಿರುವ ಯುವ ಸ್ವಾಮೀಜಿಗಳಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿಯೂ ಒಬ್ಬರು. ಮೂಲತಃ ದಾವಣಗೆರೆಯವರಾದ ಸ್ವಾಮೀಜಿಗಳು ಸದ್ಯಕ್ಕೆ ವಾಸಿಸುತ್ತಿರುವುದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ ಇಷ್ಟಪಡುವ ಸ್ವಾಮೀಜಿಯನ್ನು ಅಪ್ಟುಡೇಟ್ ಸ್ವಾಮೀಜಿ ಅಂದರೂ ಪರವಾಗಿಲ್ಲ. ಧ್ಯಾನ ಮತ್ತು ಬ್ಯಾಡ್ಮಿಂಟನ್ ಆಟವಾಡುವುದು ಅವರಿಗೆ ಅತಿ ಇಷ್ಟವಾದ ಸಂಗತಿಗಳು.
ಫೇಸ್ ಬುಕ್ ನಲ್ಲಿ ಅಡಿಗಾಲಿಟ್ಟಿರುವ ಸ್ವಾಮೀಜಿಗಳು ಸಂಪಾದಿಸಿರುವ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು. ಸ್ವಾಮೀಜಿ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ. ಇಂಥವರ ಹೆಚ್ಚಿನ ಅಗತ್ಯ ಸಮಾಜಕ್ಕೆ ಯಾವತ್ತಿಗೂ ಇದ್ದೇ ಇರುತ್ತದೆ. ಇದೇ ಡಿಸೆಂಬರ್ 1ರಂದು ತಮ್ಮ 27ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಂಡ ಬಸವ ಮರುಳಸಿದ್ಧ ಸ್ವಾಮೀಜಿಗಳ ಫೇಸ್ ಬುಕ್ ಗೆಳೆಯರ ಬಳಗ ಇನ್ನಷ್ಟು ಹೆಚ್ಚಲಿ. [ದಟ್ಸ್ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications