Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 4 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ
ಇನ್ನು ರಾಜಕಾರಣಿಗಳು ಸಂಕಷ್ಟ ಎದುರಾದಾಗ, ಸಂಸತ ಹಂಚಿಕೊಳ್ಳುವಾಗ, ಬೇರೇನೂ ಕೆಲಸವಿಲ್ಲದಾಗ, ಸುಖಾಸುಮ್ಮನೆ ಸ್ವಾಮೀಜಿಗಳ ಕಾಲಿಗೆ ಎರಗಿ ಆಶೀರ್ವಾದ ಪಡೆಯುವುದು, ಸಲಹೆಸೂಚನೆಗಳನ್ನು ತೆಗೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರನ್ನು ನಂಬುವ ಜನಸಾಮಾನ್ಯರ ಮಾತಂತೂ ಕೇಳುವುದೇ ಬೇಡ. ಸ್ವಾಮೀಜಿಗಳು ಹೇಳಿದ್ದೇ ವೇದವಾಕ್ಯ.
ಇದೇ ಸಮಾಜದಲ್ಲಿ ಖೊಟ್ಟಿ ಸ್ವಾಮೀಜಿಗಳು, ಕಳ್ಳ ಸ್ವಾಮೀಜಿಗಳು, ದಗಲಬಾಜಿ ಸ್ವಾಮೀಜಿಗಳೂ ಇರುತ್ತಾರೆ. ಇವರೆಲ್ಲರ ನಡುವೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಲೋಕದ ವ್ಯಾಪಾರವನ್ನು ಗಮನಿಸುತ್ತ, ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುತ್ತ, ಕಾಲಕ್ಕೆ ತಕ್ಕಂತೆ ತಮ್ಮನ್ನೂ ಅಪ್ಡೇಡ್ ಮಾಡಿಕೊಳ್ಳುವ ವಿದ್ಯಾವಂತ ಸ್ವಾಮೀಜಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (ಹುಟ್ಟಿದ್ದು 1984ರಲ್ಲಿ).
ನಮಗೆ ತಿಳಿದಿರುವುದು ಒಂದು ಬಿಂದುವಿನಷ್ಟು, ತಿಳಿಯದಿರುವುದು ಸಾಗರದಷ್ಟು ಎಂಬ ನೀತಿವಾಣಿ ಪಾಲಿಸುತ್ತಿರುವ ಯುವ ಸ್ವಾಮೀಜಿಗಳಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿಯೂ ಒಬ್ಬರು. ಮೂಲತಃ ದಾವಣಗೆರೆಯವರಾದ ಸ್ವಾಮೀಜಿಗಳು ಸದ್ಯಕ್ಕೆ ವಾಸಿಸುತ್ತಿರುವುದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ ಇಷ್ಟಪಡುವ ಸ್ವಾಮೀಜಿಯನ್ನು ಅಪ್ಟುಡೇಟ್ ಸ್ವಾಮೀಜಿ ಅಂದರೂ ಪರವಾಗಿಲ್ಲ. ಧ್ಯಾನ ಮತ್ತು ಬ್ಯಾಡ್ಮಿಂಟನ್ ಆಟವಾಡುವುದು ಅವರಿಗೆ ಅತಿ ಇಷ್ಟವಾದ ಸಂಗತಿಗಳು.
ಫೇಸ್ ಬುಕ್ ನಲ್ಲಿ ಅಡಿಗಾಲಿಟ್ಟಿರುವ ಸ್ವಾಮೀಜಿಗಳು ಸಂಪಾದಿಸಿರುವ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು. ಸ್ವಾಮೀಜಿ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ. ಇಂಥವರ ಹೆಚ್ಚಿನ ಅಗತ್ಯ ಸಮಾಜಕ್ಕೆ ಯಾವತ್ತಿಗೂ ಇದ್ದೇ ಇರುತ್ತದೆ. ಇದೇ ಡಿಸೆಂಬರ್ 1ರಂದು ತಮ್ಮ 27ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಂಡ ಬಸವ ಮರುಳಸಿದ್ಧ ಸ್ವಾಮೀಜಿಗಳ ಫೇಸ್ ಬುಕ್ ಗೆಳೆಯರ ಬಳಗ ಇನ್ನಷ್ಟು ಹೆಚ್ಚಲಿ. [ದಟ್ಸ್ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]