Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಫೇಸ್ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ

ಇನ್ನು ರಾಜಕಾರಣಿಗಳು ಸಂಕಷ್ಟ ಎದುರಾದಾಗ, ಸಂಸತ ಹಂಚಿಕೊಳ್ಳುವಾಗ, ಬೇರೇನೂ ಕೆಲಸವಿಲ್ಲದಾಗ, ಸುಖಾಸುಮ್ಮನೆ ಸ್ವಾಮೀಜಿಗಳ ಕಾಲಿಗೆ ಎರಗಿ ಆಶೀರ್ವಾದ ಪಡೆಯುವುದು, ಸಲಹೆಸೂಚನೆಗಳನ್ನು ತೆಗೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರನ್ನು ನಂಬುವ ಜನಸಾಮಾನ್ಯರ ಮಾತಂತೂ ಕೇಳುವುದೇ ಬೇಡ. ಸ್ವಾಮೀಜಿಗಳು ಹೇಳಿದ್ದೇ ವೇದವಾಕ್ಯ.
ಇದೇ ಸಮಾಜದಲ್ಲಿ ಖೊಟ್ಟಿ ಸ್ವಾಮೀಜಿಗಳು, ಕಳ್ಳ ಸ್ವಾಮೀಜಿಗಳು, ದಗಲಬಾಜಿ ಸ್ವಾಮೀಜಿಗಳೂ ಇರುತ್ತಾರೆ. ಇವರೆಲ್ಲರ ನಡುವೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಲೋಕದ ವ್ಯಾಪಾರವನ್ನು ಗಮನಿಸುತ್ತ, ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುತ್ತ, ಕಾಲಕ್ಕೆ ತಕ್ಕಂತೆ ತಮ್ಮನ್ನೂ ಅಪ್ಡೇಡ್ ಮಾಡಿಕೊಳ್ಳುವ ವಿದ್ಯಾವಂತ ಸ್ವಾಮೀಜಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (ಹುಟ್ಟಿದ್ದು 1984ರಲ್ಲಿ).
ನಮಗೆ ತಿಳಿದಿರುವುದು ಒಂದು ಬಿಂದುವಿನಷ್ಟು, ತಿಳಿಯದಿರುವುದು ಸಾಗರದಷ್ಟು ಎಂಬ ನೀತಿವಾಣಿ ಪಾಲಿಸುತ್ತಿರುವ ಯುವ ಸ್ವಾಮೀಜಿಗಳಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿಯೂ ಒಬ್ಬರು. ಮೂಲತಃ ದಾವಣಗೆರೆಯವರಾದ ಸ್ವಾಮೀಜಿಗಳು ಸದ್ಯಕ್ಕೆ ವಾಸಿಸುತ್ತಿರುವುದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ ಇಷ್ಟಪಡುವ ಸ್ವಾಮೀಜಿಯನ್ನು ಅಪ್ಟುಡೇಟ್ ಸ್ವಾಮೀಜಿ ಅಂದರೂ ಪರವಾಗಿಲ್ಲ. ಧ್ಯಾನ ಮತ್ತು ಬ್ಯಾಡ್ಮಿಂಟನ್ ಆಟವಾಡುವುದು ಅವರಿಗೆ ಅತಿ ಇಷ್ಟವಾದ ಸಂಗತಿಗಳು.
ಫೇಸ್ ಬುಕ್ ನಲ್ಲಿ ಅಡಿಗಾಲಿಟ್ಟಿರುವ ಸ್ವಾಮೀಜಿಗಳು ಸಂಪಾದಿಸಿರುವ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು. ಸ್ವಾಮೀಜಿ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ. ಇಂಥವರ ಹೆಚ್ಚಿನ ಅಗತ್ಯ ಸಮಾಜಕ್ಕೆ ಯಾವತ್ತಿಗೂ ಇದ್ದೇ ಇರುತ್ತದೆ. ಇದೇ ಡಿಸೆಂಬರ್ 1ರಂದು ತಮ್ಮ 27ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಂಡ ಬಸವ ಮರುಳಸಿದ್ಧ ಸ್ವಾಮೀಜಿಗಳ ಫೇಸ್ ಬುಕ್ ಗೆಳೆಯರ ಬಳಗ ಇನ್ನಷ್ಟು ಹೆಚ್ಚಲಿ. [ದಟ್ಸ್ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications