Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಈ ವಿಶ್ವಂಭರ ಸ್ವಾಮೀಜಿ ಯಾರು? ಈಗ ಎಲ್ಲಿದ್ದಾರೆ?

ಈ ಸ್ವಾಮೀಜಿಗಳೆಲ್ಲ ಫೇಸ್ ಬುಕ್ ನಲ್ಲಿ ಯಾಕಿದ್ದಾರೆ ಅನ್ನುವುದಕ್ಕಿಂತ ಇಂಟರ್ ನೆಟ್ಟಿನಲ್ಲಿ ಅವರೆಲ್ಲ ಎಂತಹ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ನಮ್ಮ ಕುತೂಹಲ. ಈ ತಾಣವನ್ನು ಸ್ವಾಮಿಗಳು ಯಾವ ಬಗೆಯಲ್ಲಿ ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಯಾರ್ಯಾರಿಗೆ ಎಷ್ಟು ಭಕ್ತರಿದ್ದಾರೆ? ಇದರಿಂದ ಏನು ಪ್ರಯೋಜನ?
ಯಾವುದೇ ಪ್ರವಚನಗಳಿಲ್ಲದೆ, ಅನುಭವ ಮಂಟಪಗಳಿಲ್ಲದೆ, ಭಿತ್ತಿಪತ್ರಗಳಿಲ್ಲದೆ, ಈಮೇಲುಗಳಿಲ್ಲದೆ ಸಾವಿರಾರು ಭಕ್ತಾದಿಗಳನ್ನು ಒಂದೇ ಏಟಿಗೆ ತಲುಪಬಹುದಾದ ಸೋಷಿಯಲ್ ಮೀಡಿಯ ಈ ಫೇಸ್ ಬುಕ್. ಸ್ವಾಮೀಜಿಗಳು ಭಕ್ತಾದಿಗಳನ್ನು ಮಾತ್ರವಲ್ಲ ಭಕ್ತಾದಿಗಳು ಇನ್ನಿತರ ಭಕ್ತರನ್ನು ಕೂಡ ಸಂಧಿಸುವ, ಮಾಹಿತಿಗಳನ್ನು ಹಂಚಿಕೊಳ್ಳುವ ಉಪಯುಕ್ತ ತಾಣ ಇದಾಗಿದೆ. ಹಾಗಂತ ಇಲ್ಲಿ ನಡೆಯುವ ಎಲ್ಲ ಚರ್ಚೆಗಳು ಉಪಯುಕ್ತವಾಗಿರುತ್ತವೆ ಅಂತಲ್ಲ.
ಆಯಾ ಸ್ವಾಮೀಜಿಗೆ ಮಾತ್ರ ಸಂಬಂಧಿಸಿದ ಮಾಹಿತಿಯ ಜೊತೆಗೆ ಇತರ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ಹಾಕಿ ಇತರರಿಗೂ ತಲುಪುವಂತೆ ಮಾಡಬಹುದು. ಇಂಥ ಉಪಯೋಗವನ್ನು ಎಷ್ಟು ಸ್ವಾಮೀಜಿಗಳು ಪಡೆದುಕೊಂಡಿದ್ದಾರೆ? ಉತ್ತರ ಹುಡುಕುತ್ತ ಹೋದರೆ ಕೆಲ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಅತ್ಯಂತ ಕ್ರಿಯಾಶೀಲರಾಗಿರುವ ಪೇಜಾವರ ಶ್ರೀಗಳ ಮತ್ತು ರಾಘವೇಶ್ವರ ಭಾರತಿ ಸ್ವಾಮಿಜಿಗಳ ಫೇಸ್ ಬುಕ್ ಬಗ್ಗೆ ಈ ತಾಣದಲ್ಲಿ ಓದಿದ್ದೀರಿ. ಇಲ್ಲಿ ಸಾವಿರಗಟ್ಟಲೆ ಭಕ್ತರಿಲ್ಲದಿದ್ದರೂ ಚಟುವಟಿಕೆ ನಿರಂತರವಾಗಿದೆ.
ಹಾಗೆಯೇ ಹುಡುಕುತ್ತಿರುವಾಗ ಸಿಕ್ಕಿದ್ದು ವಿಶ್ವಂಭರ ಸ್ವಾಮೀಜಿ ಎಂಬ ಕಾವಿಧಾರಿ ಸ್ವಾಮೀಜಿಯ ಫೇಸ್ ಬುಕ್ ತಾಣ. ಅವರ ಹಿಂಬಾಲಕರನ್ನು ನೋಡಿ ದಂಗಾಯಿತು. ಸುಮಾರು ನಾಲ್ಕೂವರೆ ಸಾವಿರ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ. ಆದರೆ, ತಾಣದಲ್ಲಿ ಅಷ್ಟೊಂದು ಚರ್ಚೆ ನಡೆದಿರುವುದು ಕಂಡುಬರುತ್ತಿಲ್ಲ. ಅವರು ಮುಂಬಯಿಯವರಾದರೂ ನಮ್ಮ ಬೆಂಗಳೂರಿನಲ್ಲೇ ನೆಲೆಸಿದ್ದಾರೆಂದು ಮಾಹಿತಿ ನೀಡುತ್ತದೆ. ಇಷ್ಟು ಹೊರತುಪಡಿಸಿದರೆ ಬೇರೆ ಮಾಹಿತಿ ಇಲ್ಲ.
ಅಷ್ಟೊಂದು ಗೆಳೆಯರನ್ನು ಸಂಪಾದಿಸಿದ್ದು ಹೇಗೆ? ಚಟುವಟಿಕೆ ಯಾಕೆ ನಿಂತ ನೀರಾಗಿದೆ? ನಿಜಕ್ಕೂ ಇವರು ಸ್ವಾಮೀಜಿನಾ? ಅಥವಾ ಸ್ವಾಮೀಜಿ ಅಂತ ಹೆಸರಿಟ್ಟುಕೊಂಡಿದ್ದಾರಾ? ಇವರಿಗೂ ಆರ್ಟ್ ಆಫ್ ಲಿವಿಂಗ್ ಗೂ ಏನು ಸಂಬಂಧ? ಸ್ವಾಮೀಜಿಯ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ಈ ದಟ್ಸ್ ಕನ್ನಡ ತಾಣದಲ್ಲಿಯೇ ಹಂಚಿಕೊಳ್ಳಬೇಕೆಂದು ಕೋರಿಕೆ. [ಒನ್ಇಂಡಿಯಾ ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications