Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ

ಆಧ್ಯಾತ್ಮದೆಡೆಗೆ ಮರುಳಾಗುವ ಮುನ್ನ ಈಶ ವಿಠಲದಾಸ ಸ್ವಾಮೀಜಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಲಾರ್ಸನ್ ಅಂಡ್ ಟೂಬ್ರೊ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಆದರೆ, ಅವರನ್ನು ಆಧ್ಯಾತ್ಮ ತನ್ನೆಡೆಗೆ ಸೆಳೆಯಲು ಆರಂಭಿಸಿತು. ಕೊನೆಗೊಂದು ದಿನ ಕೆಲಸಕ್ಕೆ ಗುಡ್ ಬೈ ಹೇಳಿ ಧಾರ್ಮಿಕ ಅಧ್ಯಯನ ಮತ್ತು ಆಧ್ಯಾತ್ಮದಲ್ಲಿ ತೊಡಗಿಕೊಂಡರು.
ಮುಂದೆ ಅನೇಕ ಸ್ವಾಮೀಜಿಗಳನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದರು. ಹಿಮಾಲಯ, ಹರಿದ್ವಾರ, ಕೇದಾರನಾಥ, ಮಧುರಾ ತೀರ್ಥಯಾತ್ರೆ ಕೈಗೊಂಡು ಆಧ್ಯಾತ್ಮ, ಭಕ್ತಿ, ಜ್ಞಾನದ ಹಸಿವನ್ನು ನೀಗಿಸಿಕೊಂಡರು. ಅಲ್ಲಿ ಕಳೆದ ಸಮಯದಲ್ಲಿ ವೇದ ಕಲಿಕೆ ಮತ್ತು ಧ್ಯಾನದಲ್ಲಿ ಮುಳುಗಿರುತ್ತಿದ್ದರು. ನಂತರ 1999ರಲ್ಲಿ ಮೂಡಬಿದಿರೆಯ ಪಲಡ್ಕ ಬಳಿ ಕೆಮಾರು ಮಠವನ್ನು ಶ್ರೀಗಳು ಸ್ಥಾಪಿಸಿದರು. ಮುಂದೆ 2002ರಲ್ಲಿ ಸಂದೀಪನಿ ಆಶ್ರಮವನ್ನೂ ಸ್ಥಾಪಿಸಿದರು.
ಅವರು ನಡೆಸುತ್ತಿರುವ ವಿದ್ಯಾಸಂಸ್ಥೆ, ಸಮಾಜ ಸೇವೆಗಳ ಜೊತೆಗೆ ಅವರ ಉದಾತ್ತ ಧ್ಯೇಯಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಮಠ, ಆಶ್ರಮ, ದೇವಸ್ಥಾನಗಳನ್ನು ಸ್ಥಾಪಿಸಿದ್ದರ ಹಿಂದೆ ಅವರಿಗೊಂದು ಖಚಿತವಾದ ಗುರಿಯಿದೆ. ಪ್ರತಿ ಮಕ್ಕಳಿಗೂ ಭೌತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ದೊರೆಯಬೇಕಾಗಿರುವುದು ಅವಶ್ಯಕ ಎಂಬುದು ಅವರ ನುಡಿ. ಮಕ್ಕಳನ್ನು ಉತ್ತಮವಾದ ನಾಗರಿಕರನ್ನಾಗಿ ಮಾಡಿದರೆ ದೇಶವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂಬುದು ಅವರ ಬೀಜಮಂತ್ರ.
ಫೇಸ್ ಬುಕ್ಕಿನಲ್ಲಿ ಈಶ ಸ್ವಾಮೀಜಿಗಳ ಅಕೌಂಟಲ್ಲಿ ಖಾತೆ ತೆರೆಯಲಾಗಿದೆ. ಅಲ್ಲಿ ಎಷ್ಟು ಜನ ಫೇಸ್ ಬುಕ್ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ ಎಂಬ ಮಾಹಿತಿ ದೊರೆಯದಿದ್ದರೂ, ಅವರು ಉತ್ತಮ ಜೀವನ ನಡೆಸಲು ನಾವು ಅನುಸರಿಸಬೇಕಾದ ಹಲ ಸಲಹೆಗಳು ಬಹುವಾಗಿ ಆಕರ್ಷಿಸುತ್ತವೆ. ಅವರನ್ನು ಸಂಪರ್ಕಿಸಬೇಕಿದ್ದರೆ ಈಮೇಲ್ ವಿಳಾಸ : [email protected]. ಇಂಥ ಸ್ವಾಮೀಜಿಗಳ ಸಂಸತಿ ಇನ್ನಷ್ಟು ಬೆಳೆಯಲಿ. [ಒನ್ಇಂಡಿಯಾ-ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications