Just In
Don't Miss
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Movies Puttakkana makkalu: ಮಗಳ ಜೀವನ ಸರಿಪಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಪುಟ್ಟಕ್ಕ
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ
ಆಧ್ಯಾತ್ಮದೆಡೆಗೆ ಮರುಳಾಗುವ ಮುನ್ನ ಈಶ ವಿಠಲದಾಸ ಸ್ವಾಮೀಜಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಲಾರ್ಸನ್ ಅಂಡ್ ಟೂಬ್ರೊ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಆದರೆ, ಅವರನ್ನು ಆಧ್ಯಾತ್ಮ ತನ್ನೆಡೆಗೆ ಸೆಳೆಯಲು ಆರಂಭಿಸಿತು. ಕೊನೆಗೊಂದು ದಿನ ಕೆಲಸಕ್ಕೆ ಗುಡ್ ಬೈ ಹೇಳಿ ಧಾರ್ಮಿಕ ಅಧ್ಯಯನ ಮತ್ತು ಆಧ್ಯಾತ್ಮದಲ್ಲಿ ತೊಡಗಿಕೊಂಡರು.
ಮುಂದೆ ಅನೇಕ ಸ್ವಾಮೀಜಿಗಳನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದರು. ಹಿಮಾಲಯ, ಹರಿದ್ವಾರ, ಕೇದಾರನಾಥ, ಮಧುರಾ ತೀರ್ಥಯಾತ್ರೆ ಕೈಗೊಂಡು ಆಧ್ಯಾತ್ಮ, ಭಕ್ತಿ, ಜ್ಞಾನದ ಹಸಿವನ್ನು ನೀಗಿಸಿಕೊಂಡರು. ಅಲ್ಲಿ ಕಳೆದ ಸಮಯದಲ್ಲಿ ವೇದ ಕಲಿಕೆ ಮತ್ತು ಧ್ಯಾನದಲ್ಲಿ ಮುಳುಗಿರುತ್ತಿದ್ದರು. ನಂತರ 1999ರಲ್ಲಿ ಮೂಡಬಿದಿರೆಯ ಪಲಡ್ಕ ಬಳಿ ಕೆಮಾರು ಮಠವನ್ನು ಶ್ರೀಗಳು ಸ್ಥಾಪಿಸಿದರು. ಮುಂದೆ 2002ರಲ್ಲಿ ಸಂದೀಪನಿ ಆಶ್ರಮವನ್ನೂ ಸ್ಥಾಪಿಸಿದರು.
ಅವರು
ನಡೆಸುತ್ತಿರುವ
ವಿದ್ಯಾಸಂಸ್ಥೆ,
ಸಮಾಜ
ಸೇವೆಗಳ
ಜೊತೆಗೆ
ಅವರ
ಉದಾತ್ತ
ಧ್ಯೇಯಗಳು
ಭಕ್ತಾದಿಗಳನ್ನು
ಆಕರ್ಷಿಸುತ್ತಿವೆ.
ಮಠ,
ಆಶ್ರಮ,
ದೇವಸ್ಥಾನಗಳನ್ನು
ಸ್ಥಾಪಿಸಿದ್ದರ
ಹಿಂದೆ
ಅವರಿಗೊಂದು
ಖಚಿತವಾದ
ಗುರಿಯಿದೆ.
ಪ್ರತಿ
ಮಕ್ಕಳಿಗೂ
ಭೌತಿಕ
ಮತ್ತು
ಆಧ್ಯಾತ್ಮಿಕ
ಶಿಕ್ಷಣ
ದೊರೆಯಬೇಕಾಗಿರುವುದು
ಅವಶ್ಯಕ
ಎಂಬುದು
ಅವರ
ನುಡಿ.
ಮಕ್ಕಳನ್ನು
ಉತ್ತಮವಾದ
ನಾಗರಿಕರನ್ನಾಗಿ
ಮಾಡಿದರೆ
ದೇಶವನ್ನು
ಬಲಿಷ್ಠವಾಗಿ
ಕಟ್ಟಲು
ಸಾಧ್ಯ
ಎಂಬುದು
ಅವರ
ಬೀಜಮಂತ್ರ.
ಫೇಸ್
ಬುಕ್ಕಿನಲ್ಲಿ
ಈಶ
ಸ್ವಾಮೀಜಿಗಳ
ಅಕೌಂಟಲ್ಲಿ
ಖಾತೆ
ತೆರೆಯಲಾಗಿದೆ.
ಅಲ್ಲಿ
ಎಷ್ಟು
ಜನ
ಫೇಸ್
ಬುಕ್
ಗೆಳೆಯರನ್ನು
ಅವರು
ಸಂಪಾದಿಸಿದ್ದಾರೆ
ಎಂಬ
ಮಾಹಿತಿ
ದೊರೆಯದಿದ್ದರೂ,
ಅವರು
ಉತ್ತಮ
ಜೀವನ
ನಡೆಸಲು
ನಾವು
ಅನುಸರಿಸಬೇಕಾದ
ಹಲ
ಸಲಹೆಗಳು
ಬಹುವಾಗಿ
ಆಕರ್ಷಿಸುತ್ತವೆ.
ಅವರನ್ನು
ಸಂಪರ್ಕಿಸಬೇಕಿದ್ದರೆ
ಈಮೇಲ್
ವಿಳಾಸ
:
[email protected].
ಇಂಥ
ಸ್ವಾಮೀಜಿಗಳ
ಸಂಸತಿ
ಇನ್ನಷ್ಟು
ಬೆಳೆಯಲಿ.
[ಒನ್ಇಂಡಿಯಾ-ಕನ್ನಡ
ಫೇಸ್ಬುಕ್
ಫ್ಯಾನ್
ಕ್ಲಬ್
ಸೇರಿರಿ]