Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ

ಆಧ್ಯಾತ್ಮದೆಡೆಗೆ ಮರುಳಾಗುವ ಮುನ್ನ ಈಶ ವಿಠಲದಾಸ ಸ್ವಾಮೀಜಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಲಾರ್ಸನ್ ಅಂಡ್ ಟೂಬ್ರೊ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಆದರೆ, ಅವರನ್ನು ಆಧ್ಯಾತ್ಮ ತನ್ನೆಡೆಗೆ ಸೆಳೆಯಲು ಆರಂಭಿಸಿತು. ಕೊನೆಗೊಂದು ದಿನ ಕೆಲಸಕ್ಕೆ ಗುಡ್ ಬೈ ಹೇಳಿ ಧಾರ್ಮಿಕ ಅಧ್ಯಯನ ಮತ್ತು ಆಧ್ಯಾತ್ಮದಲ್ಲಿ ತೊಡಗಿಕೊಂಡರು.
ಮುಂದೆ ಅನೇಕ ಸ್ವಾಮೀಜಿಗಳನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದರು. ಹಿಮಾಲಯ, ಹರಿದ್ವಾರ, ಕೇದಾರನಾಥ, ಮಧುರಾ ತೀರ್ಥಯಾತ್ರೆ ಕೈಗೊಂಡು ಆಧ್ಯಾತ್ಮ, ಭಕ್ತಿ, ಜ್ಞಾನದ ಹಸಿವನ್ನು ನೀಗಿಸಿಕೊಂಡರು. ಅಲ್ಲಿ ಕಳೆದ ಸಮಯದಲ್ಲಿ ವೇದ ಕಲಿಕೆ ಮತ್ತು ಧ್ಯಾನದಲ್ಲಿ ಮುಳುಗಿರುತ್ತಿದ್ದರು. ನಂತರ 1999ರಲ್ಲಿ ಮೂಡಬಿದಿರೆಯ ಪಲಡ್ಕ ಬಳಿ ಕೆಮಾರು ಮಠವನ್ನು ಶ್ರೀಗಳು ಸ್ಥಾಪಿಸಿದರು. ಮುಂದೆ 2002ರಲ್ಲಿ ಸಂದೀಪನಿ ಆಶ್ರಮವನ್ನೂ ಸ್ಥಾಪಿಸಿದರು.
ಅವರು ನಡೆಸುತ್ತಿರುವ ವಿದ್ಯಾಸಂಸ್ಥೆ, ಸಮಾಜ ಸೇವೆಗಳ ಜೊತೆಗೆ ಅವರ ಉದಾತ್ತ ಧ್ಯೇಯಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಮಠ, ಆಶ್ರಮ, ದೇವಸ್ಥಾನಗಳನ್ನು ಸ್ಥಾಪಿಸಿದ್ದರ ಹಿಂದೆ ಅವರಿಗೊಂದು ಖಚಿತವಾದ ಗುರಿಯಿದೆ. ಪ್ರತಿ ಮಕ್ಕಳಿಗೂ ಭೌತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ದೊರೆಯಬೇಕಾಗಿರುವುದು ಅವಶ್ಯಕ ಎಂಬುದು ಅವರ ನುಡಿ. ಮಕ್ಕಳನ್ನು ಉತ್ತಮವಾದ ನಾಗರಿಕರನ್ನಾಗಿ ಮಾಡಿದರೆ ದೇಶವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂಬುದು ಅವರ ಬೀಜಮಂತ್ರ.
ಫೇಸ್ ಬುಕ್ಕಿನಲ್ಲಿ ಈಶ ಸ್ವಾಮೀಜಿಗಳ ಅಕೌಂಟಲ್ಲಿ ಖಾತೆ ತೆರೆಯಲಾಗಿದೆ. ಅಲ್ಲಿ ಎಷ್ಟು ಜನ ಫೇಸ್ ಬುಕ್ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ ಎಂಬ ಮಾಹಿತಿ ದೊರೆಯದಿದ್ದರೂ, ಅವರು ಉತ್ತಮ ಜೀವನ ನಡೆಸಲು ನಾವು ಅನುಸರಿಸಬೇಕಾದ ಹಲ ಸಲಹೆಗಳು ಬಹುವಾಗಿ ಆಕರ್ಷಿಸುತ್ತವೆ. ಅವರನ್ನು ಸಂಪರ್ಕಿಸಬೇಕಿದ್ದರೆ ಈಮೇಲ್ ವಿಳಾಸ : [email protected]. ಇಂಥ ಸ್ವಾಮೀಜಿಗಳ ಸಂಸತಿ ಇನ್ನಷ್ಟು ಬೆಳೆಯಲಿ. [ಒನ್ಇಂಡಿಯಾ-ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]



Click it and Unblock the Notifications











