Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಜೀ ಟಿವಿ ಮೇಲೆ ಸ್ವಾರ್ಥಿಗಳ 'ಗೂಂಡಾಗಿರಿ'

ಈ 'ದ್ರೋಹ'ವನ್ನು ಅದು ಪ್ರತಿಭಟಿಸಿದ್ದು ಜೀ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿರುವ ವಸ್ತುಗಳನ್ನು ನಾಶ ಮಾಡುವ ಗೂಂಡಾಗಿರಿಯ ಮೂಲಕ! ಈ 'ಪ್ರತಿಭಟನೆ'ಯಿಂದ ಕನ್ನಡದ ಅಸ್ಮಿತೆಗೆ ಲಾಭವೇನೂ ಆಗದಿದ್ದರೂ ಕನ್ನಡಾಭಿಮಾನವೆಂದರೆ ಗೂಂಡಾಗಿರಿ ಎಂದು ಜನರು ಭಾವಿಸುವಂಥ ವಾತಾವರಣ ಸೃಷ್ಟಿಯಾಯಿತು.
ಇಷ್ಟಕ್ಕೂ 'ವೀರ ನಾರಿ...' ಡಬ್ ಮಾಡಲಾದ ಕಾರ್ಯಕ್ರಮವೂ ಅಲ್ಲ. ಇದು ಕಿರುತೆರೆಯ ಪ್ರಮುಖ ಕಲಾವಿದ ಸುಚೇಂದ್ರ ಪ್ರಸಾದ್ ನಿರೂಪಕನಾಗಿ ಝಾನ್ಸಿಯ ರಾಣಿ ಬಾಲ್ಯವನ್ನು ವಿವರಿಸುವ ಒಂದು ಕಾರ್ಯಕ್ರಮ. ಲಕ್ಷ್ಮೀಬಾಯಿ ಬದುಕನ್ನು ಇಲ್ಲಿ ಮರು ಸೃಷ್ಟಿಸಲಾಗಿತ್ತು. ಮರು ಸೃಷ್ಟಿಸಲಾಗಿದ್ದ ಪಾತ್ರಗಳು ಹಿಂದಿಯಲ್ಲಿ ಮಾತನಾಡುವುದನ್ನು ಕನ್ನಡ ಸಬ್ ಟೈಟಲ್ ಜೊತೆ ತೋರಿಸಲಾಗುತ್ತಿತ್ತು.
ಇದು ಹೇಗೆ ಡಬ್ಬಿಂಗ್ ಆಗಲು ಸಾಧ್ಯ?
ಒಂದು ವೇಳೆ ಡಬ್ ಮಾಡಿದ ಕಾರ್ಯಕ್ರಮವನ್ನೇ ಪ್ರಸಾರ ಮಾಡಿದ್ದರೂ ಗೂಂಡಾಗಿರಿಯ ಮೂಲಕ ಅದನ್ನು ತಡೆಯುವ ಅಧಿಕಾರವನ್ನು ಈ ಸಂಘನೆಯವರಿಗೆ ಯಾರು ಕೊಟ್ಟರು?
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹನೀಯರ ಹಿನ್ನೆಲೆಯನ್ನು ನೋಡಿದರೆ ಇವರೆಲ್ಲಾ ತಮ್ಮ ಲಾಭದ ಪ್ರಮಾಣ ಕುಸಿಯುತ್ತದೆ ಎಂದು ಗೂಂಡಾಗಿರಿಗಿಳಿದಿದ್ದರೇ ಹೊರತು ಕನ್ನಡ ಉಳಿಸುವ ಕಾಳಜಿಯಿಂದಲ್ಲ ಎಂಬುದು ಸ್ಪಷ್ಟ.
ಡಬ್ ಮಾಡಿದ ಧಾರಾವಾಹಿಗಳಿಂದ ಕನ್ನಡಕ್ಕೆ ತೊಂದರೆಯಾಗುತ್ತದೆ ಎನ್ನುವವರು ಕನ್ನಡದಲ್ಲೇ ಉತ್ತಮ ಧಾರಾವಾಹಿಗಳು ಸೃಷ್ಟಿಯಾದರೆ ಅದು ಇತರ ಭಾಷೆಗಳಿಗೆ ಡಬ್ ಆಗುತ್ತದೆಯಷ್ಟೇ ಅಲ್ಲದೆ ಡಬ್ಬಿಂಗ್ ಧಾರಾವಾಹಿಗಳ ಹಾವಳಿಯೂ ಇರುವುದಿಲ್ಲ ಎಂಬುದನ್ನು ಮರೆಯುವುದೇಕೆ? ಎಲ್ಲದಕ್ಕಿಂತ ಹೆಚ್ಚಾಗಿ ಡಬ್ಬಿಂಗ್ ಅನ್ನು ನಮ್ಮ ದೇಶದ ಯಾವ ಕಾನೂನೂ ನಿಷೇಧಿಸಿಲ್ಲ.
ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಸ್ಪರ್ಧೆಯನ್ನು ಎದುರಿಸುವ ಬದಲಿಗೆ ಗೂಂಡಾಗಿರಿಯ ಮೂಲಕ ಲಾಭ ಸಾಧಿಸಲು ಹೊರಟವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ. ಯಾವುದೇ ಉದ್ಯಮ ಲಾಭಕೋರ ಸ್ವಾರ್ಥಿ ಸಂಘಟನೆಗಳ ಅಡಿಯಾಳಾಗುವುದು ಬಹಳ ಕೆಟ್ಟದ್ದು. ಇದನ್ನು ಮೊಳಕೆಯಲ್ಲೇ ಚಿವುಟುವ ಅಗತ್ಯವಿದೆ.



Click it and Unblock the Notifications