Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಜೀ ಟಿವಿ ಮೇಲೆ ಸ್ವಾರ್ಥಿಗಳ 'ಗೂಂಡಾಗಿರಿ'

ಈ 'ದ್ರೋಹ'ವನ್ನು ಅದು ಪ್ರತಿಭಟಿಸಿದ್ದು ಜೀ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿರುವ ವಸ್ತುಗಳನ್ನು ನಾಶ ಮಾಡುವ ಗೂಂಡಾಗಿರಿಯ ಮೂಲಕ! ಈ 'ಪ್ರತಿಭಟನೆ'ಯಿಂದ ಕನ್ನಡದ ಅಸ್ಮಿತೆಗೆ ಲಾಭವೇನೂ ಆಗದಿದ್ದರೂ ಕನ್ನಡಾಭಿಮಾನವೆಂದರೆ ಗೂಂಡಾಗಿರಿ ಎಂದು ಜನರು ಭಾವಿಸುವಂಥ ವಾತಾವರಣ ಸೃಷ್ಟಿಯಾಯಿತು.
ಇಷ್ಟಕ್ಕೂ 'ವೀರ ನಾರಿ...' ಡಬ್ ಮಾಡಲಾದ ಕಾರ್ಯಕ್ರಮವೂ ಅಲ್ಲ. ಇದು ಕಿರುತೆರೆಯ ಪ್ರಮುಖ ಕಲಾವಿದ ಸುಚೇಂದ್ರ ಪ್ರಸಾದ್ ನಿರೂಪಕನಾಗಿ ಝಾನ್ಸಿಯ ರಾಣಿ ಬಾಲ್ಯವನ್ನು ವಿವರಿಸುವ ಒಂದು ಕಾರ್ಯಕ್ರಮ. ಲಕ್ಷ್ಮೀಬಾಯಿ ಬದುಕನ್ನು ಇಲ್ಲಿ ಮರು ಸೃಷ್ಟಿಸಲಾಗಿತ್ತು. ಮರು ಸೃಷ್ಟಿಸಲಾಗಿದ್ದ ಪಾತ್ರಗಳು ಹಿಂದಿಯಲ್ಲಿ ಮಾತನಾಡುವುದನ್ನು ಕನ್ನಡ ಸಬ್ ಟೈಟಲ್ ಜೊತೆ ತೋರಿಸಲಾಗುತ್ತಿತ್ತು.
ಇದು ಹೇಗೆ ಡಬ್ಬಿಂಗ್ ಆಗಲು ಸಾಧ್ಯ?
ಒಂದು ವೇಳೆ ಡಬ್ ಮಾಡಿದ ಕಾರ್ಯಕ್ರಮವನ್ನೇ ಪ್ರಸಾರ ಮಾಡಿದ್ದರೂ ಗೂಂಡಾಗಿರಿಯ ಮೂಲಕ ಅದನ್ನು ತಡೆಯುವ ಅಧಿಕಾರವನ್ನು ಈ ಸಂಘನೆಯವರಿಗೆ ಯಾರು ಕೊಟ್ಟರು?
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹನೀಯರ ಹಿನ್ನೆಲೆಯನ್ನು ನೋಡಿದರೆ ಇವರೆಲ್ಲಾ ತಮ್ಮ ಲಾಭದ ಪ್ರಮಾಣ ಕುಸಿಯುತ್ತದೆ ಎಂದು ಗೂಂಡಾಗಿರಿಗಿಳಿದಿದ್ದರೇ ಹೊರತು ಕನ್ನಡ ಉಳಿಸುವ ಕಾಳಜಿಯಿಂದಲ್ಲ ಎಂಬುದು ಸ್ಪಷ್ಟ.
ಡಬ್ ಮಾಡಿದ ಧಾರಾವಾಹಿಗಳಿಂದ ಕನ್ನಡಕ್ಕೆ ತೊಂದರೆಯಾಗುತ್ತದೆ ಎನ್ನುವವರು ಕನ್ನಡದಲ್ಲೇ ಉತ್ತಮ ಧಾರಾವಾಹಿಗಳು ಸೃಷ್ಟಿಯಾದರೆ ಅದು ಇತರ ಭಾಷೆಗಳಿಗೆ ಡಬ್ ಆಗುತ್ತದೆಯಷ್ಟೇ ಅಲ್ಲದೆ ಡಬ್ಬಿಂಗ್ ಧಾರಾವಾಹಿಗಳ ಹಾವಳಿಯೂ ಇರುವುದಿಲ್ಲ ಎಂಬುದನ್ನು ಮರೆಯುವುದೇಕೆ? ಎಲ್ಲದಕ್ಕಿಂತ ಹೆಚ್ಚಾಗಿ ಡಬ್ಬಿಂಗ್ ಅನ್ನು ನಮ್ಮ ದೇಶದ ಯಾವ ಕಾನೂನೂ ನಿಷೇಧಿಸಿಲ್ಲ.
ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಸ್ಪರ್ಧೆಯನ್ನು ಎದುರಿಸುವ ಬದಲಿಗೆ ಗೂಂಡಾಗಿರಿಯ ಮೂಲಕ ಲಾಭ ಸಾಧಿಸಲು ಹೊರಟವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ. ಯಾವುದೇ ಉದ್ಯಮ ಲಾಭಕೋರ ಸ್ವಾರ್ಥಿ ಸಂಘಟನೆಗಳ ಅಡಿಯಾಳಾಗುವುದು ಬಹಳ ಕೆಟ್ಟದ್ದು. ಇದನ್ನು ಮೊಳಕೆಯಲ್ಲೇ ಚಿವುಟುವ ಅಗತ್ಯವಿದೆ.



Click it and Unblock the Notifications