Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಟಿವಿ ಮೇಲೆ ಸ್ವಾರ್ಥಿಗಳ 'ಗೂಂಡಾಗಿರಿ'
ಈ 'ದ್ರೋಹ'ವನ್ನು ಅದು ಪ್ರತಿಭಟಿಸಿದ್ದು ಜೀ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿರುವ ವಸ್ತುಗಳನ್ನು ನಾಶ ಮಾಡುವ ಗೂಂಡಾಗಿರಿಯ ಮೂಲಕ! ಈ 'ಪ್ರತಿಭಟನೆ'ಯಿಂದ ಕನ್ನಡದ ಅಸ್ಮಿತೆಗೆ ಲಾಭವೇನೂ ಆಗದಿದ್ದರೂ ಕನ್ನಡಾಭಿಮಾನವೆಂದರೆ ಗೂಂಡಾಗಿರಿ ಎಂದು ಜನರು ಭಾವಿಸುವಂಥ ವಾತಾವರಣ ಸೃಷ್ಟಿಯಾಯಿತು.
ಇಷ್ಟಕ್ಕೂ 'ವೀರ ನಾರಿ...' ಡಬ್ ಮಾಡಲಾದ ಕಾರ್ಯಕ್ರಮವೂ ಅಲ್ಲ. ಇದು ಕಿರುತೆರೆಯ ಪ್ರಮುಖ ಕಲಾವಿದ ಸುಚೇಂದ್ರ ಪ್ರಸಾದ್ ನಿರೂಪಕನಾಗಿ ಝಾನ್ಸಿಯ ರಾಣಿ ಬಾಲ್ಯವನ್ನು ವಿವರಿಸುವ ಒಂದು ಕಾರ್ಯಕ್ರಮ. ಲಕ್ಷ್ಮೀಬಾಯಿ ಬದುಕನ್ನು ಇಲ್ಲಿ ಮರು ಸೃಷ್ಟಿಸಲಾಗಿತ್ತು. ಮರು ಸೃಷ್ಟಿಸಲಾಗಿದ್ದ ಪಾತ್ರಗಳು ಹಿಂದಿಯಲ್ಲಿ ಮಾತನಾಡುವುದನ್ನು ಕನ್ನಡ ಸಬ್ ಟೈಟಲ್ ಜೊತೆ ತೋರಿಸಲಾಗುತ್ತಿತ್ತು.
ಇದು
ಹೇಗೆ
ಡಬ್ಬಿಂಗ್
ಆಗಲು
ಸಾಧ್ಯ?
ಒಂದು
ವೇಳೆ
ಡಬ್
ಮಾಡಿದ
ಕಾರ್ಯಕ್ರಮವನ್ನೇ
ಪ್ರಸಾರ
ಮಾಡಿದ್ದರೂ
ಗೂಂಡಾಗಿರಿಯ
ಮೂಲಕ
ಅದನ್ನು
ತಡೆಯುವ
ಅಧಿಕಾರವನ್ನು
ಈ
ಸಂಘನೆಯವರಿಗೆ
ಯಾರು
ಕೊಟ್ಟರು?
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹನೀಯರ ಹಿನ್ನೆಲೆಯನ್ನು ನೋಡಿದರೆ ಇವರೆಲ್ಲಾ ತಮ್ಮ ಲಾಭದ ಪ್ರಮಾಣ ಕುಸಿಯುತ್ತದೆ ಎಂದು ಗೂಂಡಾಗಿರಿಗಿಳಿದಿದ್ದರೇ ಹೊರತು ಕನ್ನಡ ಉಳಿಸುವ ಕಾಳಜಿಯಿಂದಲ್ಲ ಎಂಬುದು ಸ್ಪಷ್ಟ.
ಡಬ್ ಮಾಡಿದ ಧಾರಾವಾಹಿಗಳಿಂದ ಕನ್ನಡಕ್ಕೆ ತೊಂದರೆಯಾಗುತ್ತದೆ ಎನ್ನುವವರು ಕನ್ನಡದಲ್ಲೇ ಉತ್ತಮ ಧಾರಾವಾಹಿಗಳು ಸೃಷ್ಟಿಯಾದರೆ ಅದು ಇತರ ಭಾಷೆಗಳಿಗೆ ಡಬ್ ಆಗುತ್ತದೆಯಷ್ಟೇ ಅಲ್ಲದೆ ಡಬ್ಬಿಂಗ್ ಧಾರಾವಾಹಿಗಳ ಹಾವಳಿಯೂ ಇರುವುದಿಲ್ಲ ಎಂಬುದನ್ನು ಮರೆಯುವುದೇಕೆ? ಎಲ್ಲದಕ್ಕಿಂತ ಹೆಚ್ಚಾಗಿ ಡಬ್ಬಿಂಗ್ ಅನ್ನು ನಮ್ಮ ದೇಶದ ಯಾವ ಕಾನೂನೂ ನಿಷೇಧಿಸಿಲ್ಲ.
ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಸ್ಪರ್ಧೆಯನ್ನು ಎದುರಿಸುವ ಬದಲಿಗೆ ಗೂಂಡಾಗಿರಿಯ ಮೂಲಕ ಲಾಭ ಸಾಧಿಸಲು ಹೊರಟವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ. ಯಾವುದೇ ಉದ್ಯಮ ಲಾಭಕೋರ ಸ್ವಾರ್ಥಿ ಸಂಘಟನೆಗಳ ಅಡಿಯಾಳಾಗುವುದು ಬಹಳ ಕೆಟ್ಟದ್ದು. ಇದನ್ನು ಮೊಳಕೆಯಲ್ಲೇ ಚಿವುಟುವ ಅಗತ್ಯವಿದೆ.