Just In
Don't Miss
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಲ್ಲೇ ಸ್ವಾತಂತ್ರ್ಯೋತ್ಸವ; ಕಟ್ಟಾಗೆ ಸದ್ಯಕ್ಕಿಲ್ಲ ಮುಕ್ತಿ!
ಎಲ್ಲ ರಾಜಕಾರಣಿಗಳಂತೆ ಎದುರಿಗೆ ಜೈಲುಗಂಬಿ ಕಾಣುತ್ತಿದ್ದಂತೆ ಎದೆಎದೆ ಬಡಿದುಕೊಂಡು ಕಟ್ಟಾ, ಮೈ ಲಾರ್ಡ್! ನನಗೆ ಆರೋಗ್ಯ ಸರಿಯಿಲ್ಲ ಎಂದು ನ್ಯಾಯಾಲಯಕ್ಕೆ ಅಲವತ್ತುಕೊಂಡರು. ಆರೋಗ್ಯ ಕಾರಣಗಳಿಗಾಗಿ ತನಗೆ ಜಾಮೀನು ನೀಡಬೇಕೆಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾಡಿಕೊಂಡ ಮನವಿಯನ್ನು ಸುಧೀಂದ್ರ ಸ್ಪಷ್ಟವಾಗಿ ತಳ್ಳಿಹಾಕಿದರು.
'ನಿಮಗೆ ಅಗತ್ಯವಿರುವ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜೈಲು ಪ್ರಾಧಿಕಾರಕ್ಕೆ ಸೂಚನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ತೊಂದರೆ ಯಾಗದಂತೆ ನೋಡಿಕೊಳ್ಳುವಂತೆ ಸೂಚಿಸುತ್ತೇನೆ" ಎಂದು ಹೇಳಿ ಜಾಮೀನು ಅರ್ಜಿಯನ್ನು ನಯವಾಗಿಯೇ ತಳ್ಳಿಹಾಕಿದ್ದಾರೆ. ಅಲ್ಲಿಗೆ ಕಟ್ಟಾದ್ವಯರಿಗೆ ಆ. 22ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವುದ ಅನಿವಾರ್ಯವಾಗಿದೆ.
ಕಟ್ಟಾ
ಪ್ರಭೃತಿಗಳು
ಇನ್ನೂ
ಒಂದು
ನಾಟಕ
ಹೂಡಲು
ಯತ್ನಿಸಿದ್ದಾರೆ.
ಜಾಮೀನು
ಕೋರಿ
ಹೈಕೋರ್ಟ್ಗೆ
ಅರ್ಜಿ
ಸಲ್ಲಿಸುವವರೆಗೂ
ನ್ಯಾಯಾಂಗ
ಬಂಧನದಿಂದ
ವಿನಾಯ್ತಿ
ನೀಡುವಂತೆ
ಅವರ
ಪರ
ವಕೀಲರು
ನ್ಯಾಯಾಲಯಕ್ಕೆ
ಮನವಿ
ಮಾಡಿದರು.
ಇದರಿಂದ
ಒಳಗೊಳಗೇ
ಕೆಂಡವಾದ
ಜಡ್ಜ್
ಸುಧೀಂದ್ರ
ಅವೆಲ್ಲ
ನಡೆಯಾಕಿಲ್ಲ,
ನಡೀತಿರು
ಜೈಲಿಗೆ
ಎಂದಿದ್ದಾರೆ.
ಸುಪ್ರೀಂ
ಕೋರ್ಟ್
ಆದೇಶ
ಎದುರಿಗೇ
ಇದೆ!:
2ಜಿ
ಸ್ಪೆಕ್ಟ್ರಂ
ಹಂಚಿಕೆ
ಹಗರಣದಲ್ಲಿ
ಮಾಜಿ
ಸಚಿವ
ಎ.ರಾಜಾ
ಮತ್ತು
ಕನ್ನಿಮೋಳಿಯ
ಜಾಮೀನು
ಅರ್ಜಿ
ತಿರಸ್ಕರಿಸಿ
ದೆಹಲಿ
ಹೈಕೋರ್ಟ್
ಮತ್ತು
ಸುಪ್ರೀಂ
ಕೋರ್ಟ್
ನೀಡಿದ
ಆದೇಶವನ್ನು
ಉಲ್ಲೇಖಿಸಿದ
ಜಡ್ಜ್
ಸಾಹೇಬರು,
ಕಟ್ಟಾ
ವಕೀಲರ
ಮನವಿಯನ್ನು
ತಿರಸ್ಕರಿಸಿದರು.
ಅಲ್ಲಿಗೆ
ಕಟ್ಟಾ
ಅಂಡ್
ಗ್ಯಾಂಗ್
ಗೆ
ಸದ್ಯಕ್ಕೆ
ಮುಕ್ತಿಯಿಲ್ಲ.
ಜತೆಗೆ
ಪ್ರಕರಣದ
ಆರೋಪಿಗಳಾದ
ಬಿ.ಕೆ.ಮಂಜು,
ಬಸವ
ಪೂರ್ಣಯ್ಯ,
ಪಾಲಿಕೆ
ಸದಸ್ಯ
ಗೋಪಿಗೆ
5ಲಕ್ಷ
ಭದ್ರತಾ
ಠೇವಣಿ
ಮತ್ತು
ಇಬ್ಬರ
ಖಾತ್ರಿ
ಒದಗಿಸುವಂತೆ
ಷರತ್ತು
ವಿಧಿಸಿ
ನ್ಯಾಯಾಲಯ
ಜಾಮೀನು
ಮಂಜೂರು
ಮಾಡಿತು.
ವಿಧಿ ವಿಪರೀತ ಎನ್ನುವುದು ಇದಕ್ಕೇನಾ!?: ಒಂದು ಕಡೆ ರಾಜಭವನದಲ್ಲಿ ಡಿವಿ ಸದಾನಂದ ಗೌಡರ ಸಂಪುಟ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಅದೇ ಶುಭಮಹೂರ್ತದಲ್ಲಿ, ಬಿಜೆಪಿಯ ಪ್ರಭಾವಿ ಮುಖಂಡ ಮತ್ತು ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಕಾರಾಗೃಹ ಪ್ರವೇಶಕ್ಕೆ ಪ್ರಯಾಣ ಬೆಳೆಸಿದುದು ವಿಪರ್ಯಾಸ.