Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ

16ನೇ ವಯಸ್ಸಿಗೆ ಅಲ್ಲಿನ ಯುವಜನ ಉದ್ಯೋಗ ಅರಸುತ್ತಾರೆ. ಅದರಿಂದ ನಮಗೆ ಆತ್ಮವಿಶ್ವಾಸ ಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಹೇಳುತ್ತಾ ಅವಳು ಕಾಲೇಜು, ವೃತ್ತಿ, ಓದು ಮೂರನ್ನೂ ನಿಭಾಯಿಸುವ ಕಸರತ್ತಿಗೆ ಒಡ್ಡಿಕೊಂಡಿದ್ದಾಳೆ.
ಅಪ್ಪ ಗಳಿಸಿದ ರಾಶಿ ಹಣವನ್ನು ಖರ್ಚು ಮಾಡುತ್ತಾ ಕಾಲ ಕಳೆಯುವ ಅತಿ ಶ್ರೀಮಂತ ಹುಡುಗರ ಕತೆ ಇದಲ್ಲ. ಮಧ್ಯಮ ವರ್ಗದ ಯುವಜನರ ಇಂದಿನ ಬದಲಾದ ಮನಸ್ಥಿತಿ. ಪಾಶ್ಚಿಮಾತ್ಯರ ಅನುಕರಣೆಗೆ ಒಳಗಾಗಿ ಇಂಥ ಮನಸ್ಥಿತಿ ತಾಳುತ್ತಿರುವ ಯುವಜನತೆ ಅದರೊಂದಿಗೆ ಅಪ್ಪನ ಪ್ರೀತಿ ಮತ್ತು ಸಲುಗೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?
'ಅಪ್ಪನ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ತಪ್ಪು' ಎನ್ನುವುದು ಎಷ್ಟು ಸರಿಯೋ 'ಅಪ್ಪನಿಂದ ಹಣವನ್ನೇ ಕೇಳಬಾರದು, ಅವರ ಹಣ ನಮ್ಮದಲ್ಲ' ಎನ್ನುವುದು ಅಷ್ಟೇ ತಪ್ಪು. ಇದರಿಂದ ಹಿರಿಯರಿಗೆ ನೋವುಂಟು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿಲ್ಲ.
ಅಪ್ಪ ಹೇಗಾದರೂ ಹಣ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದುಕೊಳ್ಳುವ ಮನಸ್ಸು ಇರುವುದು ಬೇಡ. ಆದರೆ ಮಕ್ಕಳು ತೀರಾ ವೃತ್ತಿಪರತೆ ಬೆಳೆಸಿಕೊಂಡು ಆತ್ಮೀಯ ಸಂಬಂಧಗಳನ್ನು ದೂರ ತಳ್ಳುವುದು ಸರಿಯೇ?



Click it and Unblock the Notifications