Latest Updates
-
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ!
ಮದುವೆ ಬಳಿಕ ಎಲ್ಲಾ ಮೋಜು ಮಸ್ತಿಗಳಿಗೆ ಬ್ರೇಕ್! ಹೌದೇ?
ಮದುವೆಯಾದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕು. ಸ್ವಲ್ಪ ಹೊತ್ತಾದರೂ ಹಲವಾರು ಪ್ರಶ್ನೆಗಳು ನಿಮ್ಮ ಮುಂದಿರುತ್ತದೆ. ಮದುವೆಯೆನ್ನುವುದು ಬಂಧನವೆನ್ನುವಂತೆ ಎಂದು ಮದುವೆಯಾದ ಮಂದಿ ಹೇಳುತ್ತಾರೆ....
ಸಂತೋಷಕ್ಕೆ ಹಾಡು ಸಂತೋಷಕ್ಕೆ. ಕುಣಿದು ತಾಳಕ್ಕೆ ಕುಣಿದು...ಎನ್ನುವ ಹಾಡು ಕೇಳಿದ್ದೇವೆ. ಬ್ರಹ್ಮಚಾರಿಗಳು ಯಾನೆ ಬ್ಯಾಚುಲರ್ ಗಳಿಗೆ ಈ ಹಾಡು ಹೊಂದಿಕೆಯಾಗುವುದು. ಬ್ಯಾಚುಲರ್ ಜೀವನದ ಬಗ್ಗೆ ಹೇಳುವುದೇ ಒಂದು ಸಂತೋಷದ ಸಂಗತಿ. ಯಾಕೆಂದರೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ನಮಗೆ ಇಷ್ಟಬಂದ ಹಾಗೆ ಇರಬಹುದಾಗಿದೆ. ಮದುವೆ ಎಂದರೆ ಮಕ್ಕಳಾಟವಲ್ಲ, ಎರಡೆರಡು ಬಾರಿ ಯೋಚಿಸಿ!
ಆದರೆ ಮದುವೆಯಾದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕು. ಸ್ವಲ್ಪ ಹೊತ್ತಾದರೂ ಹಲವಾರು ಪ್ರಶ್ನೆಗಳು ನಿಮ್ಮ ಮುಂದಿರುತ್ತದೆ. ಮದುವೆಯೆನ್ನುವುದು ಬಂಧನವೆನ್ನುವಂತೆ ಎಂದು ಮದುವೆಯಾದ ಮಂದಿ ಹೇಳುತ್ತಾರೆ. ಮದುವೆಯಾದ ಬಳಿಕ ಕೂಡ ಹಿಂದಿನಂತೆ ಸಂತೋಷದಿಂದ ಇರಲು ಯಾಕೆ ಸಾಧ್ಯವಾಗುವುದಿಲ್ಲ. ಬ್ಯಾಚುಲರ್ನಲ್ಲಿ ಮಾಡುತ್ತಿದ್ದ ಚೇಷ್ಟೆ, ಮದುವೆ ಬಳಿಕ ನಡೆಯಲ್ಲ!
ಮದುವೆ ಯಾಕೆ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಮದುವೆ ಎನ್ನುವುದು ಹೀಗೆ ಆಗುವುದು ಯಾಕೆ? ಮದುವೆ ಬಳಿಕ ಕೂಡ ಸ್ವಾತಂತ್ರ್ಯವಾಗಿ ಸಂತೋಷದಿಂದ ಇರಲು ಸಾಧ್ಯವಿಲ್ಲವೇ? ಜನರು ಮದುವೆಯನ್ನು ದ್ವೇಷಿಸುವುದು ಯಾಕೆ ಎಂದು ಈ ಬಗ್ಗೆ ನಾವು ಲೇಖನದಲ್ಲಿ ತಿಳಿದುಕೊಳ್ಳುವ.....

ಅತ್ತೆ-ಮಾವ ಜೊತೆ ಹೊಂದಾಣಿಕೆ
ಮದುವೆಯಲ್ಲಿ ದೊಡ್ಡ ಕಂಟವೆಂದರೆ ಅದು ಅತ್ತೆ ಮತ್ತು ಮಾವ. ಇದು ಪತಿ ಅಥವಾ ಪತ್ನಿ ಯಾರೇ ಆಗಿರಲಿ. ನಿಮ್ಮನ್ನು ಅತ್ತೆ-ಮಾವ ಸರಿಯಾಗಿ ನೋಡಿಕೊಳ್ಳದೆ ಇದ್ದರೆ ನೀವು ಸಂಗಾತಿಯನ್ನು ಪ್ರೀತಿಸುತ್ತಾ ಇದ್ದರೂ ಮದುವೆಯನ್ನು ದ್ವೇಷಿಸಲು ಆರಂಭಿಸುತ್ತೀರಿ. ಆದರೆ ಈ ಬಗ್ಗೆ ನೀವು ಸಂಗಾತಿ ಜತೆಗೆ ಕುಳಿತುಕೊಂಡು ಮಾತುಕತೆ ನಡೆಸಿ ಪ್ರತಿಯೊಂದನ್ನು ನಿಭಾಯಿಸಬಹುದು.ಅತ್ತೆಯೊಂದಿಗೆ ಹೊಂದಿಕೊಂಡರೆ ಅರ್ಧ ಯುದ್ಧ ಗೆದ್ದಂತೆ!

ಒಂದೊಂದು ಪೈಸೆಗೂ ಲೆಕ್ಕ
ಆರ್ಥಿಕ ಸ್ವಾತಂತ್ರ್ಯವು ಮತ್ತೊಂದು ಸಮಸ್ಯೆಯಾಗಿದೆ. ಯಾಕೆಂದರೆ ಮದುವೆಗೆ ಮೊದಲು ನಿಮಗೆ ಇಷ್ಟಬಂದಂತೆ ಖರ್ಚು ಮಾಡುತ್ತಾ ಇರಬಹುದು. ಆದರೆ ಮದುವೆ ಬಳಿಕ ನಿಮಗೆ ಇಷ್ಟಬಂದಂತೆ ಖರ್ಚು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭವಿಷ್ಯದ ಜೀವನಕ್ಕಾಗಿ ಉಳಿತಾಯ ಮಾಡಬೇಕಾಗುತ್ತದೆ. ಆದರೆ ಇಬ್ಬರು ಕುಳಿತುಕೊಂಡು ಈ ಬಗ್ಗೆ ಮಾತುಕತೆ ನಡೆಸಿದರೆ ಎಲ್ಲವೂ ಸರಿಯಾಗಬಹುದು.

ಪದೇ ಪದೇ ಜಗಳ
ಆಗಾಗ ಜಗಳವಾಗುವುದು ಮತ್ತೊಂದು ಸಮಸ್ಯೆಯಾಗಿದೆ. ಇದು ಮದುವೆಯ ಸಂಬಂಧವನ್ನು ಕೆಡಿಸುವುದು. ಆದರೆ ಸಂಗಾತಿ ಜಗಳಕ್ಕೆ ಇಳಿದಾಗ ನೀವು ಮೌನವಾಗಿದ್ದುಕೊಂಡು ಬೇರೆ ಕೆಲಸದಲ್ಲಿ ತೊಡಗಿಕೊಂಡರೆ ಆಗ ಜಗಳವು ವಿಪರೀತಕ್ಕೆ ಏರುವುದು ಕಡಿಮೆಯಾಗುವುದು.

ಮಕ್ಕಳ ಜವಾಬ್ದಾರಿ
ಮಕ್ಕಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಹೆಚ್ಚಿನವರು ಮದುವೆಯನ್ನು ದ್ವೇಷಿಸುವುದೇ ಈ ಕಾರಣಕ್ಕಾಗಿ. ಯಾವುದೇ ಸಾಕುಪ್ರಾಣಿ ಅಥವಾ ಮಕ್ಕಳನ್ನು ಬೆಳೆಸಿದಾಗ ಅಂತಿಮವಾಗಿ ಅವು ಪಡುವ ಸಂತೋಷ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ.

ಮದುವೆಯಿಂದಾಗಿ ಬೊಜ್ಜು!!
ಮದುವೆ ಬಳಿಕ ದೇಹವು ಕೊಬ್ಬಿನಿಂದ ತುಂಬಬಹುದು ಮತ್ತು ಅನಾರೋಗ್ಯ ಕಾಡಬಹುದು ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಮದುವೆಯಿಂದಾಗಿ ಬೊಜ್ಜು ಬರುವುದಿಲ್ಲ. ಅತಿಯಾಗಿ ತಿನ್ನುವುದು ಮತ್ತು ನಿಮ್ಮ ಜೀವನ ಶೈಲಿಯಿಂದ ಕೊಬ್ಬು ಬರುತ್ತದೆ.



Click it and Unblock the Notifications