Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮದುವೆ ಎಂದರೆ ಮಕ್ಕಳಾಟವಲ್ಲ, ಎರಡೆರಡು ಬಾರಿ ಯೋಚಿಸಿ!
ಮದುವೆ ಎನ್ನುವ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ಈ ಬಂಧನಕ್ಕೆ ಸಿಲುಕಿದರೆ ಮತ್ತೆ ಇದರಿಂದ ಹೊರಬರುವುದು ತುಂಬಾ ಕಷ್ಟ...
ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವ ಮೂರು ಹಂತಗಳಿರುತ್ತದೆ. ಈ ಮೂರು ಹಂತಗಳಿಗೆ ಇಷ್ಟಿಷ್ಟೇ ವರ್ಷಗಳು ಎನ್ನುವುದು ಇರುತ್ತದೆ. ಪ್ರತಿಯೊಂದು ಹಂತದಲ್ಲಿ ಏನು ಆಗಬೇಕೋ ಅದು ಆಗಬೇಕು. ಇನ್ನೊಂದು ಹಂತಕ್ಕೆ ಹೋದ ಬಳಿಕ ಅದನ್ನು ಮಾಡಲು ಸಾಧ್ಯವಿಲ್ಲ.
ಅದೇ ರೀತಿಯ ಮದುವೆ ಕೂಡ. ಯೌವನದಲ್ಲಿ ಮದುವೆ ಕೆಲಸಗಳು ಆಗಬೇಕು. ಯೌವನ ದಾಟಿ ಮುಪ್ಪಿನಲ್ಲಿ ಮದುವೆ ಆಗಲು ಹೋದರೆ ಅದು ಅನರ್ಥವಾಗುತ್ತದೆ ಮತ್ತು ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಅದರಲ್ಲೂ ಮದುವೆ ಎನ್ನುವ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ಈ ಬಂಧನಕ್ಕೆ ಸಿಲುಕಿದರೆ ಮತ್ತೆ ಇದರಿಂದ ಹೊರಬರುವುದು ತುಂಬಾ ಕಷ್ಟ. ಇದನ್ನೆಲ್ಲಾ ವಿವಾಹದ ಮೊದಲೇ ಇತ್ಯರ್ಥ ಮಾಡಿಕೊಳ್ಳಿ!
ಇದಕ್ಕಾಗಿ ಮದುವೆಯ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರವು ತುಂಬಾ ಮಹತ್ವದ್ದಾಗಿರುತ್ತದೆ. ಕೆಲವೊಂದು ವ್ಯಕ್ತಿತ್ವನ್ನು ಹೊಂದಿರುವವರನ್ನು ನೀವು ಮದುವೆಯಾಗಬಾರದು. ಹಾಗೊಂದು ವೇಳೆ ನೀವು ಮದುವೆಯಾದರೆ ಅದರಿಂದ ಸಮಸ್ಯೆಗಳು ಎದುರಾಗುವುದು ಖಚಿತ. ಹಿರಿಯರೇ ನಿಶ್ಚಯಿಸಿದ ಮದುವೆ, ಆದರೆ ಆ ಮೊದಲ ರಾತ್ರಿ....
ಈ ಲೇಖನದಲ್ಲಿ ಕೊಟ್ಟಿರುವ ವ್ಯಕ್ತಿತ್ವವಿರುವವರೊಂದಿಗೆ ಮದುವೆಯಾಗಲು ಹೊರಟಿರುವುದಾದರೆ ಅದರಿಂದ ದೂರ ಹೋಗುವುದು ಒಳ್ಳೆಯದು....

ಸುಳ್ಳುಗಾರ
ನೀವು ಮದುವೆಯಾಗಲು ಬಯಸುವಂತಹ ವ್ಯಕ್ತಿಯು ಸುಳ್ಳುಗಳನ್ನು ಹೇಳುತ್ತಾ ಸುಳ್ಳುಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ್ದರೆ ಈ ಮದುವೆಯಿಂದ ದೂರು ಉಳಿಯುವುದೇ ಉತ್ತಮ.

ಸಮಯಸಾಧಕ....
ಸಂಗಾತಿ ಎಂದ ಮೇಲೆ ಕಷ್ಟ ಸುಖದಲ್ಲಿ ಭಾಗಿಯಾಗಬೇಕು. ಆದರೆ ಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮ ಜತೆಗಿದ್ದು, ಕಷ್ಟದ ಸಮಯದಲ್ಲಿ ದೂರವಿದ್ದರೆ ಆ ವ್ಯಕ್ತಿಯ ಬಗ್ಗೆ ನೀವು ಮತ್ತಷ್ಟು ಚಿಂತಿಸಬೇಕು.

ಸಮಯಸಾಧಕ....
ಆತ್ಮರತಿಯ ಸ್ವಭಾವದವನು ಯಾವಾಗಲೂ ವಿಶ್ವದಲ್ಲಿ ತಾನೇ ದೊಡ್ಡವನು ಎಂದುಕೊಳ್ಳುತ್ತಾನೆ. ಅವರು ನಂಬಿದಂತಹ ವಿಷಯದ ಬಗ್ಗೆ ನೀವು ವಿರೋಧ ವ್ಯಕ್ತಪಡಿಸಿದರೆ ಆಗ ನಿಮಗೆ ಬೈಯ್ಯಬಹುದು ಅಥವಾ ನಿಂದಿಸಬಹುದು. ಇದರಿಂದ ಇಂತಹ ವ್ಯಕ್ತಿಯಿಂದ ದೂರವಿರುವುದೇ ಒಳ್ಳೆಯದು.

ಬದ್ಧತೆಯ ಭೀತಿ
ಜೀವನವಿಡಿ ನಿಮ್ಮ ಜತೆ ಜೀವನ ಸಾಗಿಸಲು ಹೆದರುತ್ತಾ ಇರುವ ವ್ಯಕ್ತಿಯನ್ನು ಮದುವೆಯಾಗುವುದು ನಿಮ್ಮ ಶ್ರಮವನ್ನು ವ್ಯರ್ಥಗೊಳಿಸಿದಂತೆ....

ನಿಂದಿಸುವ ವ್ಯಕ್ತಿ
ನಿಮ್ಮನ್ನು ನಿಂದಿಸುವುದರಲ್ಲೇ ಆತ ಅಥವಾ ಆಕೆ ಸಂತೋಷ ಪಡುತ್ತಾ ಇದ್ದರೆ ಅಂತವರನ್ನು ಮದುವೆಯಾದರೆ ಜೀವನವಿಡಿ ಸಂಕಷ್ಟದಲ್ಲಿ ಇರಬೇಕಾಗುತ್ತದೆ.

ಬಲಿಪಶು
ಆತ ಅಥವಾ ಆಕೆ ಯಾವಾಗಲೂ ತಾನು ಪರಿಸ್ಥಿತಿಗೆ ಬಲಿಪಶುವಾದೆ ಎಂದು ದಿನವನ್ನು ಕಳೆಯುತ್ತಾ ಇದ್ದರೆ ಅವರೊಂದಿಗೆ ಜೀವನ ಸಾಗಿಸುವುದು ವ್ಯರ್ಥ. ಯಾಕೆಂದರೆ ಪರಿಸ್ಥಿತಿಯನ್ನು ದೂರುತ್ತಾ ಇರುವವರಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ ಹೇಳಿ.

ಜಡ ವ್ಯಕ್ತಿತ್ವ
ಯಾವುದೇ ಆರಂಭವನ್ನು ಮಾಡಲು ಹಿಂಜರಿಯುವ, ಪೂರ್ವಭಾವಿಯಾಗಿರದ ಮತ್ತು ನಿಮ್ಮ ಅಗತ್ಯತೆಗಳಿಗೆ ಸ್ಪಂದಿಸದೆ ಇರುವ ವ್ಯಕ್ತಿಯನ್ನು ನೀವು ದೂರವಿರಿಸಬೇಕು.



Click it and Unblock the Notifications











