Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ಮದುವೆ ಎಂದರೆ ಮಕ್ಕಳಾಟವಲ್ಲ, ಎರಡೆರಡು ಬಾರಿ ಯೋಚಿಸಿ!
ಮದುವೆ ಎನ್ನುವ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ಈ ಬಂಧನಕ್ಕೆ ಸಿಲುಕಿದರೆ ಮತ್ತೆ ಇದರಿಂದ ಹೊರಬರುವುದು ತುಂಬಾ ಕಷ್ಟ...
ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವ ಮೂರು ಹಂತಗಳಿರುತ್ತದೆ. ಈ ಮೂರು ಹಂತಗಳಿಗೆ ಇಷ್ಟಿಷ್ಟೇ ವರ್ಷಗಳು ಎನ್ನುವುದು ಇರುತ್ತದೆ. ಪ್ರತಿಯೊಂದು ಹಂತದಲ್ಲಿ ಏನು ಆಗಬೇಕೋ ಅದು ಆಗಬೇಕು. ಇನ್ನೊಂದು ಹಂತಕ್ಕೆ ಹೋದ ಬಳಿಕ ಅದನ್ನು ಮಾಡಲು ಸಾಧ್ಯವಿಲ್ಲ.
ಅದೇ ರೀತಿಯ ಮದುವೆ ಕೂಡ. ಯೌವನದಲ್ಲಿ ಮದುವೆ ಕೆಲಸಗಳು ಆಗಬೇಕು. ಯೌವನ ದಾಟಿ ಮುಪ್ಪಿನಲ್ಲಿ ಮದುವೆ ಆಗಲು ಹೋದರೆ ಅದು ಅನರ್ಥವಾಗುತ್ತದೆ ಮತ್ತು ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಅದರಲ್ಲೂ ಮದುವೆ ಎನ್ನುವ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ಈ ಬಂಧನಕ್ಕೆ ಸಿಲುಕಿದರೆ ಮತ್ತೆ ಇದರಿಂದ ಹೊರಬರುವುದು ತುಂಬಾ ಕಷ್ಟ. ಇದನ್ನೆಲ್ಲಾ ವಿವಾಹದ ಮೊದಲೇ ಇತ್ಯರ್ಥ ಮಾಡಿಕೊಳ್ಳಿ!
ಇದಕ್ಕಾಗಿ ಮದುವೆಯ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರವು ತುಂಬಾ ಮಹತ್ವದ್ದಾಗಿರುತ್ತದೆ. ಕೆಲವೊಂದು ವ್ಯಕ್ತಿತ್ವನ್ನು ಹೊಂದಿರುವವರನ್ನು ನೀವು ಮದುವೆಯಾಗಬಾರದು. ಹಾಗೊಂದು ವೇಳೆ ನೀವು ಮದುವೆಯಾದರೆ ಅದರಿಂದ ಸಮಸ್ಯೆಗಳು ಎದುರಾಗುವುದು ಖಚಿತ. ಹಿರಿಯರೇ ನಿಶ್ಚಯಿಸಿದ ಮದುವೆ, ಆದರೆ ಆ ಮೊದಲ ರಾತ್ರಿ....
ಈ ಲೇಖನದಲ್ಲಿ ಕೊಟ್ಟಿರುವ ವ್ಯಕ್ತಿತ್ವವಿರುವವರೊಂದಿಗೆ ಮದುವೆಯಾಗಲು ಹೊರಟಿರುವುದಾದರೆ ಅದರಿಂದ ದೂರ ಹೋಗುವುದು ಒಳ್ಳೆಯದು....

ಸುಳ್ಳುಗಾರ
ನೀವು ಮದುವೆಯಾಗಲು ಬಯಸುವಂತಹ ವ್ಯಕ್ತಿಯು ಸುಳ್ಳುಗಳನ್ನು ಹೇಳುತ್ತಾ ಸುಳ್ಳುಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ್ದರೆ ಈ ಮದುವೆಯಿಂದ ದೂರು ಉಳಿಯುವುದೇ ಉತ್ತಮ.

ಸಮಯಸಾಧಕ....
ಸಂಗಾತಿ ಎಂದ ಮೇಲೆ ಕಷ್ಟ ಸುಖದಲ್ಲಿ ಭಾಗಿಯಾಗಬೇಕು. ಆದರೆ ಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮ ಜತೆಗಿದ್ದು, ಕಷ್ಟದ ಸಮಯದಲ್ಲಿ ದೂರವಿದ್ದರೆ ಆ ವ್ಯಕ್ತಿಯ ಬಗ್ಗೆ ನೀವು ಮತ್ತಷ್ಟು ಚಿಂತಿಸಬೇಕು.

ಸಮಯಸಾಧಕ....
ಆತ್ಮರತಿಯ ಸ್ವಭಾವದವನು ಯಾವಾಗಲೂ ವಿಶ್ವದಲ್ಲಿ ತಾನೇ ದೊಡ್ಡವನು ಎಂದುಕೊಳ್ಳುತ್ತಾನೆ. ಅವರು ನಂಬಿದಂತಹ ವಿಷಯದ ಬಗ್ಗೆ ನೀವು ವಿರೋಧ ವ್ಯಕ್ತಪಡಿಸಿದರೆ ಆಗ ನಿಮಗೆ ಬೈಯ್ಯಬಹುದು ಅಥವಾ ನಿಂದಿಸಬಹುದು. ಇದರಿಂದ ಇಂತಹ ವ್ಯಕ್ತಿಯಿಂದ ದೂರವಿರುವುದೇ ಒಳ್ಳೆಯದು.

ಬದ್ಧತೆಯ ಭೀತಿ
ಜೀವನವಿಡಿ ನಿಮ್ಮ ಜತೆ ಜೀವನ ಸಾಗಿಸಲು ಹೆದರುತ್ತಾ ಇರುವ ವ್ಯಕ್ತಿಯನ್ನು ಮದುವೆಯಾಗುವುದು ನಿಮ್ಮ ಶ್ರಮವನ್ನು ವ್ಯರ್ಥಗೊಳಿಸಿದಂತೆ....

ನಿಂದಿಸುವ ವ್ಯಕ್ತಿ
ನಿಮ್ಮನ್ನು ನಿಂದಿಸುವುದರಲ್ಲೇ ಆತ ಅಥವಾ ಆಕೆ ಸಂತೋಷ ಪಡುತ್ತಾ ಇದ್ದರೆ ಅಂತವರನ್ನು ಮದುವೆಯಾದರೆ ಜೀವನವಿಡಿ ಸಂಕಷ್ಟದಲ್ಲಿ ಇರಬೇಕಾಗುತ್ತದೆ.

ಬಲಿಪಶು
ಆತ ಅಥವಾ ಆಕೆ ಯಾವಾಗಲೂ ತಾನು ಪರಿಸ್ಥಿತಿಗೆ ಬಲಿಪಶುವಾದೆ ಎಂದು ದಿನವನ್ನು ಕಳೆಯುತ್ತಾ ಇದ್ದರೆ ಅವರೊಂದಿಗೆ ಜೀವನ ಸಾಗಿಸುವುದು ವ್ಯರ್ಥ. ಯಾಕೆಂದರೆ ಪರಿಸ್ಥಿತಿಯನ್ನು ದೂರುತ್ತಾ ಇರುವವರಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ ಹೇಳಿ.

ಜಡ ವ್ಯಕ್ತಿತ್ವ
ಯಾವುದೇ ಆರಂಭವನ್ನು ಮಾಡಲು ಹಿಂಜರಿಯುವ, ಪೂರ್ವಭಾವಿಯಾಗಿರದ ಮತ್ತು ನಿಮ್ಮ ಅಗತ್ಯತೆಗಳಿಗೆ ಸ್ಪಂದಿಸದೆ ಇರುವ ವ್ಯಕ್ತಿಯನ್ನು ನೀವು ದೂರವಿರಿಸಬೇಕು.



Click it and Unblock the Notifications











