Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪ್ರೀತಿ, ಪ್ರೇಮ, ವಿರಹ -ಸಂಬಂಧದಲ್ಲಿ ಹಾಲು-ಜೇನುವಿದ್ದಂತೆ!
ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ...
ಸಂಗಾತಿಗಳ ನಡುವಣ ಸಂಬಂಧ ಗಟ್ಟಿಯಾಗಲು ಕೇವಲ ದೈಹಿಕ ಆಕರ್ಷಣೆ ಸಾಲದು, ಬದಲಿಗೆ ವಿಶ್ವಾಸ, ಪ್ರೀತಿ, ಭರವಸೆ ಮೊದಲಾದವೂ ಇರಬೇಕು. ಅಂತೆಯೇ ಕೊಂಚ ದೂರವೂ ಸಹಾ. ಪ್ರೇಮವೆಂದರೆ ಇಡಿಯ ದಿನ ಒಬ್ಬರಿಗೊಬ್ಬರು ಗೋಂದಿನಂತೆ ಅಂಟಿಕೊಂಡಿರುವುದೂ ಅಲ್ಲ, ಈ ಹೊತ್ತಿನಲ್ಲಿ ತಮ್ಮ ಸಂಗಾತಿ ಏನು ಮಾಡುತ್ತಿದ್ದಾರೆ ಎಂಬುದನ್ನು ಸತತವಾಗಿ ಗಮನಿಸುತ್ತಿರುವುದೂ ಅಲ್ಲ. ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!
ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಸಂಗಾತಿ ಎಲ್ಲಿರುತ್ತಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುವುದು ಸುಲಭವಾಗಿರುವುದರಿಂದ ಈ ಕ್ರಿಯೆ ಹೊಸ ರೀತಿಯಲ್ಲಿ ಸಂಬಂಧದ ನಡುವೆ ಹುಳಿ ಹಿಂಡಬಹುದು. ಆದ್ದರಿಂದಲೇ ಹಿರಿಯರು ಸಂಬಂಧ ಗಟ್ಟಿಗೊಳ್ಳಲು ವಿರಹದ ಅಗತ್ಯವನ್ನೂ ಎತ್ತಿ ಹಿಡಿದಿದ್ದರು.
ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ ಎಂದು ಕಂಡುಕೊಳ್ಳಲಾಗಿದೆ. ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?
ದಂಪತಿಗಳ ನಡುವಣ ವಿರಸ, ಸಂಗಾತಿಯ ಮಹತ್ವ, ಕೊಂಚಕಾಲದ ಬಳಿಕ ಲಭ್ಯವಾಗುವ ಸ್ಪರ್ಶಸುಖ ಮೊದಲಾದವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮಾತ್ರವೇ ಅಲ್ಲ ಸ್ವಾರಸ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದನ್ನೇ ಅಲ್ಲವೇ ಬೇಂದ್ರೆಯವರು 'ಕಾಯೋದ್ರಾಗಿನ ಸುಖ ಕೂಡೂದ್ರಾಗ ಇಲ್ಲ' ಎಂದು ಹೇಳಿರುವುದು! ಬನ್ನಿ, ಈ ಸ್ವಾರಸ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ...

ಮಾಹಿತಿ #1
ಯಾವಾಗ ನಿಮ್ಮ ಸಂಗಾತಿ ನಿಮ್ಮ ಕಣ್ಣಿನಿಂದ ದೂರಾಗುತ್ತಾರೋ, ಆಗ ಅವರನ್ನು ಕಾಯುವ, ಬರಮಾಡಿಕೊಳ್ಳುವ ಕಾತುರ ನಿಮ್ಮ ದೇಹದಲ್ಲಿ ಕೆಲವಾರು ರಾಸಾಯನಿಕ ಕ್ರಿಯೆಗಳು ಜರುಗುತ್ತವೆ.

ಮಾಹಿತಿ #1
ಸಂಗಾತಿಯ ಇರದಿರುವಿಕೆಯನ್ನು ಮೆದುಳು ಒಂದು ಶೂನ್ಯದಂತೆ ಪರಿಗಣಿಸಿ ಇತರ ಕೆಲಸಗಳಲ್ಲಿ ಉತ್ಸಾಹವನ್ನು ಕಡಿಮೆ ಮಾಡುತ್ತದೆ.

ಮಾಹಿತಿ #2
ಈ ಶೂನ್ಯವನ್ನು ತುಂಬಿಕೊಳ್ಳಲು ಮೆದುಳಿಗೆ ಹೊಸ ವಿಚಾರಗಳು ಬೇಕಾಗುತ್ತವೆ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಪುಳಕಿತಗೊಳ್ಳುತ್ತಾರೆ.

ಮಾಹಿತಿ #2
ಅಂದರೆ ಶೂನ್ಯವು ಸಂಗಾತಿಯ ಬಗೆಗಿನ ಒಳ್ಳೆಯ ಅಭಿಪ್ರಾಯಗಳನ್ನೇ ಹೆಚ್ಚು ತುಂಬಿಕೊಳ್ಳುವ ಮೂಲಕ ಸಂಗಾತಿಯ ಬಗ್ಗೆ ಗೌರವ ಹೆಚ್ಚುತ್ತದೆ. (ವ್ಯತಿರಿಕ್ತವಾಗಿ ಹಳಸುತ್ತಿರುವ ಸಂಬಂಧದಲ್ಲಿ ಈ ಜಾಗವನ್ನು ಸಂಗಾತಿಯ ಋಣಾತ್ಮಕ ಸಂಗತಿಗಳೇ ಆವರಿಸಿಕೊಳ್ಳುತ್ತವೆ)

ಮಾಹಿತಿ #3
ಈ ಶೂನ್ಯದ ಅವಧಿ ಹೆಚ್ಚಾದಷ್ಟೂ ಸಂಗಾತಿಯ ಬಗ್ಗೆ ಉತ್ತಮ ಅಭಿಪ್ರಾಯಗಳು ತುಂಬಿಕೊಳ್ಳುವುದು ಹೆಚ್ಚುತ್ತಾ ಹೋಗುವ ಮೂಲಕ ನಿಮ್ಮ ಸಂಗಾತಿಯ ಬಗ್ಗೆ ಗೌರವ, ತನ್ಮೂಲಕ ಪ್ರೀತಿಯೂ ಹೆಚ್ಚುತ್ತಾ ಹೋಗುತ್ತದೆ.

ಮಾಹಿತಿ #4
ವಿಶೇಷವಾಗಿ ಪುರುಷರು ತಮ್ಮ ಸಂಗಾತಿಯಿಂದ ದೂರವಿದ್ದಾಗ ಮೆದುಳಿನ ಶೂನ್ಯಭಾಗ ಸಂಗಾತಿಯ ಬಗ್ಗೆ ಯೋಚಿಸುತ್ತಲೇ ಮಲಗುವ ಕಾರಣ ಸ್ವಪ್ನಸ್ಖಲನಕ್ಕೆ ಒಳಗಾಗುತ್ತಾರೆ.

ಮಾಹಿತಿ #5
ಆದ್ದರಿಂದ ಪ್ರೀತಿಯನ್ನು ಹೆಚ್ಚಿಸಲು ಕೊಂಚ ವಿರಹವೂ ಅಗತ್ಯ ಎಂದು ಮನಃಶಾಸ್ತ್ರಜ್ಞರು ತಿಳಿಸುತ್ತಾರೆ.

ಮಾಹಿತಿ #5
ಅಂತೆಯೇ ಅತಿ ಹೆಚ್ಚು ಹತ್ತಿರವಿರುವ ದಂಪತಿಗಳ ನಡುವೆಯೂ ಪ್ರೀತಿ ಕಡಿಮೆಯಾಗಿರುವುದು ಕಂಡುಬಂದಿದೆ. ಆಹಾರದಿಂದ ಕೊಂಚ ಕಾಲ ದೂರವಿದ್ದಾಗ ಹಸಿವು ಹೆಚ್ಚುವಂತೆಯೇ ಪ್ರೀತಿಪಾತ್ರರಿಂದ ಆಗಾಗ ದೂರವಿರುವ ಮೂಲಕ ಪ್ರೀತಿಯೂ ಹೆಚ್ಚುತ್ತದೆ ಎಂದು ಸಾಬೀತುಪಡಿಸಲಾಗಿದೆ.



Click it and Unblock the Notifications