Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ಪ್ರೀತಿಗೋಸ್ಕರ ಗಂಡು-ಹೆಣ್ಣು ನಡುವಿನ ಮೆಸೇಜ್ ಪುರಾಣ!
ನಿಮ್ಮ ಈ ಮೇಲ್ ಇನ್ ಬಾಕ್ಸ್ನಲ್ಲಿ ಸ್ಪಾಮ್ ಫೋಲ್ಡರ್ ಇದ್ದರೂ ನಿತ್ಯವೂ ನೂರಾರು ಅನಗತ್ಯ ಈಮೇಲ್ಗಳು ಬಂದು ತುಂಬಿಕೊಳ್ಳುತ್ತಿವೆಯೇ? ಇದರ ಕಾಟ ತಡೆಯಲಾರದೇ ಈ ಮೇಲ್ ವಿಳಾಸವನೇ ಬದಲಿಸಲು ಯೋಚಿಸುತ್ತಿದ್ದೀರಾ? ಆದರೆ ಹೊಸ ಈ ಮೇಲ್ ವಿಳಾಸವಿದ್ದರೂ ಇದರಲ್ಲಿಯೂ ಅನಗತ್ಯ ಈ ಮೇಲ್ ಬರುವುದಿಲ್ಲ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವು ಉತ್ಪನ್ನಗಳ ಪ್ರಚಾರ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಕಾರಣ ಇವು ಬರುತ್ತಲೇ ಇರುತ್ತವೆ.
ಆದ್ದರಿಂದ ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ನಿತ್ಯವೂ ಅನಗತ್ಯವಾದ ಈಮೇಲ್ಗಳನ್ನು ಡಿಲೀಟ್ ಮಾಡುವುದೇ ಉತ್ತಮ ಕ್ರಮ ಎಂದು ಹೆಚ್ಚಿನವರು ಒಪ್ಪಿಕೊಂಡುಬಿಟ್ಟಿದ್ದಾರೆ. ಅಂದರೆ ಒಂದು ರೀತಿಯಲ್ಲಿ ನಿಮ್ಮನ್ನು ಈ ಈಮೇಲ್ಗಳು ಸೋಲಿಸಿವೆ. ಈ ಕ್ರಮವನ್ನೇ ಕೆಲವು ಖದೀಮರು ತಮ್ಮ ಎದುರಾಳಿಯನ್ನು ಮಣಿಸಲು ಬಳಸುತ್ತಾರೆ. Text Blasting ಅಥವಾ ಪದಸ್ಫೋಟ ಎಂದು ಕರೆಯಲಾಗುವ ಈ ಕ್ರಮದಲ್ಲಿ ಸತತವಾಗಿ ತನ್ನ ಎದುರಾಳಿಯ ಸ್ಮೃತಿ ತಪ್ಪುವವರೆಗೆ ಪದಗಳ ಮಹಾಪುಂಜಗಳನ್ನೇ ರವಾನಿಸಿ ಗೆಲುವು ಸಾಧಿಸುವುದು ಒಂದು ಕ್ರಮ. ಆದರೆ ಇದು ಎಲ್ಲಾ ವಯಸ್ಸಿನವರಿಗೆ ಅನ್ವಯಿಸುವುದಿಲ್ಲ.
ಜೀವನದಲ್ಲಿ ಪ್ರೌಢತೆ ಪಕ್ವತೆಯನ್ನು ಗಳಿಸಿದವರು ಈ ಪದಗಳಿಗೆ ಯಾವುದೇ ಮಹತ್ವ ನೀಡದೇ 'ತಾಕತ್ತಿದ್ದರೆ ನೇರವಾಗಿ ಎದುರು ಬಂದು ಮಾತನಾಡು' ಎಂಬ ಒಂದೇ ವಾಕ್ಯ ಬರೆದು ಮುಗಿಸುತ್ತಾರೆ. ಆದರೆ ದುರ್ಬಲರು, ಹೊಸತಾಗಿ ಮದುವೆಯಾದವರು, ಹದಿಹರೆಯದವರು, ಜೀವನಸಂಗಾತಿಯ ಅನ್ವೇಶಣೆಯಲ್ಲಿರುವವರು ಮೊದಲಾದವರಿಗೆ ಈ ಪದಗಳನ್ನು ಎದುರಿಸುವ ಮನೋಬಲ ಇರುವುದಿಲ್ಲ. ಇವನ್ನು ನಿರ್ಲಕ್ಷಿಸಿ ಹೆಚ್ಚಿನ ತೊಂದರೆಗೆ ಒಳಗಾಗಲೂ ಸಿದ್ಧರಿರದೇ ಮನೋವೇದನೆ ಅನುಭವಿಸುತ್ತಾರೆ. ಈ ವಿಧಾನಗಳನ್ನು ದುರುಳರು ಏಕೆ ಅನುಸರಿಸುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ...

ಕಾರಣ #1
ಈ ವಿಧಾನದ ಮೂಲಕ ಎದುರಾಳಿಯ ಮನಸ್ಸಿನಲ್ಲಿ ತನ್ನ ಚಿತ್ರ ಸದಾ ಹಸಿರಾಗಿರಬೇಕು, ತನ್ನ ಮಾತುಗಳನ್ನೇ ಆತ/ಆಕೆ ಕೇಳುತ್ತಿರಬೇಕು, ತನ್ನ ಬಗ್ಗೆಯೇ ಆತ/ಆಕೆ ಯೋಚಿಸುತ್ತಿರಬೇಕು ಎಂದು ಬಯಸುತ್ತಾನೆ. ಯಾವಾಗ ಈ ವ್ಯಕ್ತಿಯ ಮೆಸೇಜ್ ಬಂತೋ ಆಗ ಅತ್ತ ಗಮನ ಹೊರಳಿಸಿದರೂ ಮನಸ್ಸಿನಲ್ಲಿ ಈ ವ್ಯಕ್ತಿಯ ಚಿತ್ರ ಮೂಡಿದರೂ ಆತನ ಉದ್ದೇಶ ನೆರವೇರಿದಂತೆ.

ಕಾರಣ #2
ತನ್ನ ಎದುರು ಇರುವ ವ್ಯಕ್ತಿಯನ್ನು ಕಳೆದುಕೊಳ್ಳುವ ಭಯ. ಎದುರಿನ ವ್ಯಕ್ತಿಯನ್ನು ಅಪಾರವಾಗಿ ಆರಾಧಿಸುತ್ತಿದ್ದು ಆತ/ಆಕೆ ಅಪ್ಪಿತಪ್ಪಿಯೂ ಬೇರೆ ಯಾರನ್ನಾದರೂ ಮೋಹಿಸಿದರೆ? ಇದಕ್ಕೆ ಆಸ್ಪದ ನೀಡದೇ ಇರಲು ಸತತವಾಗಿ ಮೆಸೇಜ್ಗಳನ್ನು ಕಳಿಸುತ್ತಾ ಇರುವುದು ಒಂದು ಕ್ರಮ.

ಕಾರಣ #3
ಓರ್ವ ವ್ಯಕ್ತಿಯ ಮೆಸೇಜ್ ಕಳಿಸುವ ವ್ಯಸನ. ಇವರಿಗೆ ಮೆಸೇಜ್ ಕಳಿಸುವುದೇ ಒಂದು ವ್ಯಸನವಾಗಿದ್ದು ಇಡಿಯ ದಿನ ಒಬ್ಬರಿಗಿಂತ ಹೆಚ್ಚು ಜನರಿಗೆ ಸತತವಾಗಿ ಮೆಸೇಜ್ ಕಳಿಸುತ್ತಾ ಇರುತ್ತಾರೆ. ರಾತ್ರಿಮಲಗಿದ್ದಾಗಲೂ, ಶೌಚಾಲಯದಲ್ಲಿದ್ದಾಗಲೂ ಇವರ ಕ್ರಿಯೆ ನಡೆಯುತ್ತಾ ಇರುತ್ತದೆ. ಮೊಬೈಲು ಒಂದು ಕ್ಷಣ ಇಲ್ಲದೇ ಇದ್ದರೂ ಇವರು ವಿಚಲಿತರಾಗುತ್ತಾರೆ.

ಕಾರಣ #4
ಕೆಲವರು ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಈ ವಿಧಾನ ಅನುಸರಿಸುತ್ತಾರೆ. ಆದರೆ ಈ ವಿಧಾನದಲ್ಲಿ ಎರಡೂ ಕಡೆಯಿಂದ ಸಮಾನವಾಗಿ ಸಂದೇಶಗಳು ರವಾನೆಯಾಗುವ ಕಾರಣ ಇದನ್ನೊಂದು ಪೂರಕ ವಿಧಾನವೆಂದು ಪರಿಗಣಿಸಬಹುದು.

ಕಾರಣ #5
ತಮ್ಮನ್ನೇ ಬಲವಂತವಾಗಿ ಮತ್ತು ಸತತವಾಗಿ ತಮ್ಮ ಪ್ರಿಯತಮೆ ಪ್ರೀತಿಸುತ್ತಿರಬೇಕೆಂದು ಕೆಲವು ಪುರುಷರು ಬಯಸುತ್ತಾರೆ. ಈ ವಿಧಾನದಲ್ಲಿ ಸತತವಾಗಿ ಇನ್ನೂರು ಮುನ್ನೂರು ಸಂದೇಶಗಳನ್ನು ರವಾನಿಸಿ ಬಳಿಕ ಥಟ್ಟನೇ ನಿಲ್ಲಿಸಿ ಬಿಡುವುದು ಒಂದು ಕ್ರಮ. ಸಂದೇಶ ಇಲ್ಲದೇ ಇದ್ದಾಗ ಆಕೆ ಈತನ ಬಗ್ಗೆ ಚಿಂತಿಸುತ್ತಾಳೆ, ಏಕೆ ಮೆಸೇಜ್ ಬರಲಿಲ್ಲ ಎಂದು ವ್ಯಾಕುಲಳಾಗುತ್ತಾಳೆ ಎಂಬುದನ್ನು ನೆನೆಸಿಕೊಂಡೇ ಈ ಪುರುಷರು ಪುಳಕಿತರಾಗುತ್ತಾರೆ.

ಕಾರಣ #6
ಕೆಲವರು ತಮ್ಮ ವಿಚಾರಗಳನ್ನು ಮಂಡಿಸಲು ಮತ್ತು ಇದರ ಬಗ್ಗೆ ಪ್ರತಿಕ್ರೆಯೆಗಳನ್ನು ಗಮನಿಸಲು ಉತ್ಸುಕರಾಗಿರುತ್ತಾರೆ. ಈ ವಿಚಾರ ವಿಮರ್ಶೆ ಯಾವತ್ತಿದ್ದರೂ ಉತ್ತಮವೇ. ಆದರೆ ಎಷ್ಟೋ ಸಂದರ್ಭಗಳಲ್ಲಿ ಕೆಲವರು ತಮ್ಮ ಮನಸ್ಸಿನಾಳದ ಕೆಟ್ಟ ಭಾವನೆಗಳನ್ನೂ ಹೊರಹಾಕಿ ಉಳಿದವರ ಕೋಪಕ್ಕೆ ಗುರಿಯಾಗುತ್ತಾರೆ. ಮತಗಳನ್ನು ಸೆಳೆಯಲೂ ರಾಜಕಾರಣಿಗಳು ಈ ಹೊಸ ತಂತ್ರವನ್ನು ಇತ್ತೀಚೆಗೆ ಬಳಸುತ್ತಿದ್ದಾರೆ.



Click it and Unblock the Notifications











