Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಒಡೆದದ್ದು ಮೂತಿ ಮಾತ್ರವಲ್ಲ ಪ್ರೀತಿ, ಬದುಕು ಕೂಡ!

ನನಗೇ ಏಕೆ ಹೀಗಾಯಿತು? ಯಾರಿಗೆ ನಾನು ಏನು ಅನ್ಯಾಯ ಮಾಡಿದೆ? ಎಂದು ಯೋಚಿಸಿ.. ಯೋಚಿಸಿ... ಮನಸ್ಸು ಮರಗಟ್ಟಿ ಹೋಗಿದೆ... ಎಂದಾದರೂ ಸಿಕ್ಕರೆ ನಿನ್ನ ಕೇಳಬೇಕು ಎಂದು ಆಕಾಶದೆಡೆಗೆ ನೋಡುತ್ತೇನೆ... ಉತ್ತರಕ್ಕೆ, ಸಾಂತ್ವನಕ್ಕೆ ಆಕಾಶದಲ್ಲಿ ಅಮ್ಮನನ್ನು ಹುಡುಕುತ್ತೇನೆ.
ದುರಂತ ಅಂದರೆ ನೋಡು, ಈಗ ನನಗೂ ಮದುವೆಯಾಗಿ, ಇಬ್ಬರು ಮಕ್ಕಳು. ಪ್ರಪಂಚದ ಕಣ್ಣಿಗೆ ನಾ ಸುಖಿ ಕುಟುಂಬದ ಯಜಮಾನ. ಬೆಂಗಳೂರಿನಲ್ಲಿ ಒಳ್ಳೆ ಕೆಲಸ, ಮನೆ, ಕಾರು, ಆಳುಕಾಳು ಉಳ್ಳ ಶ್ರೀಮಂತ, ಅದೃಷ್ಟವಂತ. ಆದರೂ ನಿನ್ನ ಕಳೆದು ಕೊಂಡದ್ದು ನೆನಪಾದಾಗೆಲ್ಲ ನಾನು ಅನುಭವಿಸುವ, ನನ್ನ ಮನದಲ್ಲಿ ಹುಟ್ಟುವ ದಟ್ಟದಾರಿದ್ರ್ಯ ನನಗೊಬ್ಬನಿಗೆ ಗೊತ್ತು.
ದಿನವೂ ನಾನು ಪ್ರೀತಿಸುವ ಜನರಿಗೋಸ್ಕರ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ, ನಿನ್ನಂತಹ ಹೆಣ್ಣು ಪ್ರತಿಯೊಬ್ಬರಿಗೂ ಬದುಕಲ್ಲಿ ಯಾವ ರೂಪದಲ್ಲಾದರೂ ಸಿಗಲಿ... ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ, ಟೀಚರ್ ಯಾವುದೇ ರೂಪದಲ್ಲಿ ಸಿಕ್ಕರೂ ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ. ನನಗಂತೂ ನೀನೆ ಮತ್ತು ನಿನ್ನ ನೆನಪೇ ಎಲ್ಲಾ.
ಪ್ರತಿ ವರುಷ ಪ್ರೇಮಿಗಳ ದಿನದಂದು ನಿನ್ನ ಪ್ರೀತಿಸಿದ ನನ್ನೊಳಗಿನ ಮುಗ್ಧ ಪ್ರೇಮಿ ಎದ್ದು ಕೂಡುತ್ತಾನೆ, ನಾನು ಪ್ರತಿ ವರುಷ ಅವನ ಕತ್ತುಹಿಡಿದು ಅದುಮಿ, ಹೂತಿಟ್ಟು ನಿಟ್ಟುಸಿರು ಬಿಡುತ್ತೇನೆ. ಆದರೂ ಹುಚ್ಚುಖೋಡಿ ಮನಸು ಇನ್ನೂ ಆಸೆ ಬಿಟ್ಟಿಲ್ಲ... ನನ್ನನು ಸಮಾಧಾನಿಸುವಂತೆ ಡೆಕ್ಕಲ್ಲಿ ನಿನ್ನದೇ ಗಜಲ್ ತೇಲಿ ಬರುತಿದೆ... ಹುಡುಕಿದರೆ, ಧ್ಯಾನಿಸಿದರೆ ದೇವರೇ ಸೀಗುತ್ತಾನಂತೆ... ಮತ್ತೊಮ್ಮೆ ಬದುಕಿನಲ್ಲಿ ನೀನು ಸಿಗಲಾರೆಯಾ?
ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ,
ನಾನು
(ಅನುಲೇಖ: ಕ್ಷಮಿಸು ಗೌರಿ! ನಿನ್ನ ಆಜ್ಞೆ ಮೀರಿ, ನಿನ್ನ ನೆನಪಾಗಿ ತಡೆಯದೆ ಕಣ್ಣು, ಕಣ್ಣೀರು ಸುರಿಸುತ್ತಿದೆ, ಅದಕ್ಕೆ ನಾನಂತೂ ಹೊಣೆಯೆಲ್ಲ.)



Click it and Unblock the Notifications