Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಒಡೆದದ್ದು ಮೂತಿ ಮಾತ್ರವಲ್ಲ ಪ್ರೀತಿ, ಬದುಕು ಕೂಡ!

ನನಗೇ ಏಕೆ ಹೀಗಾಯಿತು? ಯಾರಿಗೆ ನಾನು ಏನು ಅನ್ಯಾಯ ಮಾಡಿದೆ? ಎಂದು ಯೋಚಿಸಿ.. ಯೋಚಿಸಿ... ಮನಸ್ಸು ಮರಗಟ್ಟಿ ಹೋಗಿದೆ... ಎಂದಾದರೂ ಸಿಕ್ಕರೆ ನಿನ್ನ ಕೇಳಬೇಕು ಎಂದು ಆಕಾಶದೆಡೆಗೆ ನೋಡುತ್ತೇನೆ... ಉತ್ತರಕ್ಕೆ, ಸಾಂತ್ವನಕ್ಕೆ ಆಕಾಶದಲ್ಲಿ ಅಮ್ಮನನ್ನು ಹುಡುಕುತ್ತೇನೆ.
ದುರಂತ ಅಂದರೆ ನೋಡು, ಈಗ ನನಗೂ ಮದುವೆಯಾಗಿ, ಇಬ್ಬರು ಮಕ್ಕಳು. ಪ್ರಪಂಚದ ಕಣ್ಣಿಗೆ ನಾ ಸುಖಿ ಕುಟುಂಬದ ಯಜಮಾನ. ಬೆಂಗಳೂರಿನಲ್ಲಿ ಒಳ್ಳೆ ಕೆಲಸ, ಮನೆ, ಕಾರು, ಆಳುಕಾಳು ಉಳ್ಳ ಶ್ರೀಮಂತ, ಅದೃಷ್ಟವಂತ. ಆದರೂ ನಿನ್ನ ಕಳೆದು ಕೊಂಡದ್ದು ನೆನಪಾದಾಗೆಲ್ಲ ನಾನು ಅನುಭವಿಸುವ, ನನ್ನ ಮನದಲ್ಲಿ ಹುಟ್ಟುವ ದಟ್ಟದಾರಿದ್ರ್ಯ ನನಗೊಬ್ಬನಿಗೆ ಗೊತ್ತು.
ದಿನವೂ ನಾನು ಪ್ರೀತಿಸುವ ಜನರಿಗೋಸ್ಕರ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ, ನಿನ್ನಂತಹ ಹೆಣ್ಣು ಪ್ರತಿಯೊಬ್ಬರಿಗೂ ಬದುಕಲ್ಲಿ ಯಾವ ರೂಪದಲ್ಲಾದರೂ ಸಿಗಲಿ... ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ, ಟೀಚರ್ ಯಾವುದೇ ರೂಪದಲ್ಲಿ ಸಿಕ್ಕರೂ ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ. ನನಗಂತೂ ನೀನೆ ಮತ್ತು ನಿನ್ನ ನೆನಪೇ ಎಲ್ಲಾ.
ಪ್ರತಿ ವರುಷ ಪ್ರೇಮಿಗಳ ದಿನದಂದು ನಿನ್ನ ಪ್ರೀತಿಸಿದ ನನ್ನೊಳಗಿನ ಮುಗ್ಧ ಪ್ರೇಮಿ ಎದ್ದು ಕೂಡುತ್ತಾನೆ, ನಾನು ಪ್ರತಿ ವರುಷ ಅವನ ಕತ್ತುಹಿಡಿದು ಅದುಮಿ, ಹೂತಿಟ್ಟು ನಿಟ್ಟುಸಿರು ಬಿಡುತ್ತೇನೆ. ಆದರೂ ಹುಚ್ಚುಖೋಡಿ ಮನಸು ಇನ್ನೂ ಆಸೆ ಬಿಟ್ಟಿಲ್ಲ... ನನ್ನನು ಸಮಾಧಾನಿಸುವಂತೆ ಡೆಕ್ಕಲ್ಲಿ ನಿನ್ನದೇ ಗಜಲ್ ತೇಲಿ ಬರುತಿದೆ... ಹುಡುಕಿದರೆ, ಧ್ಯಾನಿಸಿದರೆ ದೇವರೇ ಸೀಗುತ್ತಾನಂತೆ... ಮತ್ತೊಮ್ಮೆ ಬದುಕಿನಲ್ಲಿ ನೀನು ಸಿಗಲಾರೆಯಾ?
ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ,
ನಾನು
(ಅನುಲೇಖ: ಕ್ಷಮಿಸು ಗೌರಿ! ನಿನ್ನ ಆಜ್ಞೆ ಮೀರಿ, ನಿನ್ನ ನೆನಪಾಗಿ ತಡೆಯದೆ ಕಣ್ಣು, ಕಣ್ಣೀರು ಸುರಿಸುತ್ತಿದೆ, ಅದಕ್ಕೆ ನಾನಂತೂ ಹೊಣೆಯೆಲ್ಲ.)



Click it and Unblock the Notifications