Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಒಡೆದದ್ದು ಮೂತಿ ಮಾತ್ರವಲ್ಲ ಪ್ರೀತಿ, ಬದುಕು ಕೂಡ!

ನನಗೇ ಏಕೆ ಹೀಗಾಯಿತು? ಯಾರಿಗೆ ನಾನು ಏನು ಅನ್ಯಾಯ ಮಾಡಿದೆ? ಎಂದು ಯೋಚಿಸಿ.. ಯೋಚಿಸಿ... ಮನಸ್ಸು ಮರಗಟ್ಟಿ ಹೋಗಿದೆ... ಎಂದಾದರೂ ಸಿಕ್ಕರೆ ನಿನ್ನ ಕೇಳಬೇಕು ಎಂದು ಆಕಾಶದೆಡೆಗೆ ನೋಡುತ್ತೇನೆ... ಉತ್ತರಕ್ಕೆ, ಸಾಂತ್ವನಕ್ಕೆ ಆಕಾಶದಲ್ಲಿ ಅಮ್ಮನನ್ನು ಹುಡುಕುತ್ತೇನೆ.
ದುರಂತ ಅಂದರೆ ನೋಡು, ಈಗ ನನಗೂ ಮದುವೆಯಾಗಿ, ಇಬ್ಬರು ಮಕ್ಕಳು. ಪ್ರಪಂಚದ ಕಣ್ಣಿಗೆ ನಾ ಸುಖಿ ಕುಟುಂಬದ ಯಜಮಾನ. ಬೆಂಗಳೂರಿನಲ್ಲಿ ಒಳ್ಳೆ ಕೆಲಸ, ಮನೆ, ಕಾರು, ಆಳುಕಾಳು ಉಳ್ಳ ಶ್ರೀಮಂತ, ಅದೃಷ್ಟವಂತ. ಆದರೂ ನಿನ್ನ ಕಳೆದು ಕೊಂಡದ್ದು ನೆನಪಾದಾಗೆಲ್ಲ ನಾನು ಅನುಭವಿಸುವ, ನನ್ನ ಮನದಲ್ಲಿ ಹುಟ್ಟುವ ದಟ್ಟದಾರಿದ್ರ್ಯ ನನಗೊಬ್ಬನಿಗೆ ಗೊತ್ತು.
ದಿನವೂ ನಾನು ಪ್ರೀತಿಸುವ ಜನರಿಗೋಸ್ಕರ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ, ನಿನ್ನಂತಹ ಹೆಣ್ಣು ಪ್ರತಿಯೊಬ್ಬರಿಗೂ ಬದುಕಲ್ಲಿ ಯಾವ ರೂಪದಲ್ಲಾದರೂ ಸಿಗಲಿ... ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ, ಟೀಚರ್ ಯಾವುದೇ ರೂಪದಲ್ಲಿ ಸಿಕ್ಕರೂ ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ. ನನಗಂತೂ ನೀನೆ ಮತ್ತು ನಿನ್ನ ನೆನಪೇ ಎಲ್ಲಾ.
ಪ್ರತಿ ವರುಷ ಪ್ರೇಮಿಗಳ ದಿನದಂದು ನಿನ್ನ ಪ್ರೀತಿಸಿದ ನನ್ನೊಳಗಿನ ಮುಗ್ಧ ಪ್ರೇಮಿ ಎದ್ದು ಕೂಡುತ್ತಾನೆ, ನಾನು ಪ್ರತಿ ವರುಷ ಅವನ ಕತ್ತುಹಿಡಿದು ಅದುಮಿ, ಹೂತಿಟ್ಟು ನಿಟ್ಟುಸಿರು ಬಿಡುತ್ತೇನೆ. ಆದರೂ ಹುಚ್ಚುಖೋಡಿ ಮನಸು ಇನ್ನೂ ಆಸೆ ಬಿಟ್ಟಿಲ್ಲ... ನನ್ನನು ಸಮಾಧಾನಿಸುವಂತೆ ಡೆಕ್ಕಲ್ಲಿ ನಿನ್ನದೇ ಗಜಲ್ ತೇಲಿ ಬರುತಿದೆ... ಹುಡುಕಿದರೆ, ಧ್ಯಾನಿಸಿದರೆ ದೇವರೇ ಸೀಗುತ್ತಾನಂತೆ... ಮತ್ತೊಮ್ಮೆ ಬದುಕಿನಲ್ಲಿ ನೀನು ಸಿಗಲಾರೆಯಾ?
ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ,
ನಾನು
(ಅನುಲೇಖ: ಕ್ಷಮಿಸು ಗೌರಿ! ನಿನ್ನ ಆಜ್ಞೆ ಮೀರಿ, ನಿನ್ನ ನೆನಪಾಗಿ ತಡೆಯದೆ ಕಣ್ಣು, ಕಣ್ಣೀರು ಸುರಿಸುತ್ತಿದೆ, ಅದಕ್ಕೆ ನಾನಂತೂ ಹೊಣೆಯೆಲ್ಲ.)



Click it and Unblock the Notifications











