Just In
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಡೆದದ್ದು ಮೂತಿ ಮಾತ್ರವಲ್ಲ ಪ್ರೀತಿ, ಬದುಕು ಕೂಡ!
ನನಗೇ ಏಕೆ ಹೀಗಾಯಿತು? ಯಾರಿಗೆ ನಾನು ಏನು ಅನ್ಯಾಯ ಮಾಡಿದೆ? ಎಂದು ಯೋಚಿಸಿ.. ಯೋಚಿಸಿ... ಮನಸ್ಸು ಮರಗಟ್ಟಿ ಹೋಗಿದೆ... ಎಂದಾದರೂ ಸಿಕ್ಕರೆ ನಿನ್ನ ಕೇಳಬೇಕು ಎಂದು ಆಕಾಶದೆಡೆಗೆ ನೋಡುತ್ತೇನೆ... ಉತ್ತರಕ್ಕೆ, ಸಾಂತ್ವನಕ್ಕೆ ಆಕಾಶದಲ್ಲಿ ಅಮ್ಮನನ್ನು ಹುಡುಕುತ್ತೇನೆ.
ದುರಂತ ಅಂದರೆ ನೋಡು, ಈಗ ನನಗೂ ಮದುವೆಯಾಗಿ, ಇಬ್ಬರು ಮಕ್ಕಳು. ಪ್ರಪಂಚದ ಕಣ್ಣಿಗೆ ನಾ ಸುಖಿ ಕುಟುಂಬದ ಯಜಮಾನ. ಬೆಂಗಳೂರಿನಲ್ಲಿ ಒಳ್ಳೆ ಕೆಲಸ, ಮನೆ, ಕಾರು, ಆಳುಕಾಳು ಉಳ್ಳ ಶ್ರೀಮಂತ, ಅದೃಷ್ಟವಂತ. ಆದರೂ ನಿನ್ನ ಕಳೆದು ಕೊಂಡದ್ದು ನೆನಪಾದಾಗೆಲ್ಲ ನಾನು ಅನುಭವಿಸುವ, ನನ್ನ ಮನದಲ್ಲಿ ಹುಟ್ಟುವ ದಟ್ಟದಾರಿದ್ರ್ಯ ನನಗೊಬ್ಬನಿಗೆ ಗೊತ್ತು.
ದಿನವೂ ನಾನು ಪ್ರೀತಿಸುವ ಜನರಿಗೋಸ್ಕರ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ, ನಿನ್ನಂತಹ ಹೆಣ್ಣು ಪ್ರತಿಯೊಬ್ಬರಿಗೂ ಬದುಕಲ್ಲಿ ಯಾವ ರೂಪದಲ್ಲಾದರೂ ಸಿಗಲಿ... ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ, ಟೀಚರ್ ಯಾವುದೇ ರೂಪದಲ್ಲಿ ಸಿಕ್ಕರೂ ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ. ನನಗಂತೂ ನೀನೆ ಮತ್ತು ನಿನ್ನ ನೆನಪೇ ಎಲ್ಲಾ.
ಪ್ರತಿ ವರುಷ ಪ್ರೇಮಿಗಳ ದಿನದಂದು ನಿನ್ನ ಪ್ರೀತಿಸಿದ ನನ್ನೊಳಗಿನ ಮುಗ್ಧ ಪ್ರೇಮಿ ಎದ್ದು ಕೂಡುತ್ತಾನೆ, ನಾನು ಪ್ರತಿ ವರುಷ ಅವನ ಕತ್ತುಹಿಡಿದು ಅದುಮಿ, ಹೂತಿಟ್ಟು ನಿಟ್ಟುಸಿರು ಬಿಡುತ್ತೇನೆ. ಆದರೂ ಹುಚ್ಚುಖೋಡಿ ಮನಸು ಇನ್ನೂ ಆಸೆ ಬಿಟ್ಟಿಲ್ಲ... ನನ್ನನು ಸಮಾಧಾನಿಸುವಂತೆ ಡೆಕ್ಕಲ್ಲಿ ನಿನ್ನದೇ ಗಜಲ್ ತೇಲಿ ಬರುತಿದೆ... ಹುಡುಕಿದರೆ, ಧ್ಯಾನಿಸಿದರೆ ದೇವರೇ ಸೀಗುತ್ತಾನಂತೆ... ಮತ್ತೊಮ್ಮೆ ಬದುಕಿನಲ್ಲಿ ನೀನು ಸಿಗಲಾರೆಯಾ?
ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ,
ನಾನು
(ಅನುಲೇಖ: ಕ್ಷಮಿಸು ಗೌರಿ! ನಿನ್ನ ಆಜ್ಞೆ ಮೀರಿ, ನಿನ್ನ ನೆನಪಾಗಿ ತಡೆಯದೆ ಕಣ್ಣು, ಕಣ್ಣೀರು ಸುರಿಸುತ್ತಿದೆ, ಅದಕ್ಕೆ ನಾನಂತೂ ಹೊಣೆಯೆಲ್ಲ.)