Just In
- 50 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಜಾನ್ ಗೆ ಶೀರ್ ಕುರ್ಮಾ ವಿಶೇಷ ಔತಣ
ರಂಜಾನ್ ಉಪವಾಸ ಇನ್ನೇನು ಮುಗಿಯುವ ಸಮಯ ಬಂದಿದೆ. (ಆಗಸ್ಟ್ 30). ಈ ವೇಳೆ ಬಂಧು ಬಾಂಧವರಿಗೆ ಸಿಹಿಯ ಔತಣವಿದ್ದರೆ ಚೆಂದ. ಆದ್ದರಿಂದ ರಂಜಾನ್ ವಿಶೇಷ ಶೀರ್ ಕುರ್ಮಾ (ಖೀರ್) ನಿಮ್ಮ ಮನೆಯಲ್ಲೂ ಘಮಗುಟ್ಟಲಿ. ತಿನ್ನಲೂ ರುಚಿಕರ ಮಾಡಲೂ ಸುಲಭವಾಗಿರುವ ಈ ಸಿಹಿ ತಿಂಡಿ ಖೀರ್ ಹಬ್ಬಕ್ಕೆ ಹೇಳಿ ಮಾಡಿಸಿದಂತಿರುತ್ತದೆ
ಬೇಕಾಗುವ
ಸಾಮಾನುಗಳು:
*
2
ಕಪ್
ಶಾವಿಗೆ
*
1/2
ಕಪ್
ಕೋಯಾ
(ಕುದಿಸಿ
ಗಟ್ಟಿಗೊಳಿಸಿದ
ಹಾಲು)
*
5
1/2
ಕಪ್
ಹಾಲು
*
ಏಲಕ್ಕಿ
ಪುಡಿ
*
1/4
ಕಪ್
ಒಣ
ದ್ರಾಕ್ಷಿ
ಮತ್ತು
ಗೋಡಂಬಿ
(ಬೇಕಿದ್ದರೆ
ಬಾದಾಮಿ)
*
1
1/2
ಕಪ್
ಸಕ್ಕರೆ
*
2
ಕಪ್
ತುಪ್ಪ
ತಯಾರಿಸುವ ವಿಧಾನ:
ಮೊದಲು ಅಗಲವಾದ ಬಾಣಲೆಯಲ್ಲಿ ತುಪ್ಪ ಹಾಕಿ ಶಾವಿಗೆಯನ್ನು ಸ್ವಲ್ಪ ಕೆಂಪಾಗುವ ತನಕ ಹುರಿದಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದಕ್ಕೆ ಕೋಯಾ ಬೆರೆಸಿ ಸಣ್ಣ ಉರಿಯಲ್ಲಿ 30 ನಿಮಿಷ ಕಾಯಿಸಿ ಚೆನ್ನಾಗಿ ತಿರುಗಿಸುತ್ತಾ ಇರಬೇಕು.
ನಂತರ ಸಕ್ಕರೆ ಬೆರೆಸಿ 3-4 ನಿಮಿಷ ತಿರುಗಿಸಬೇಕು. ಅದಕ್ಕೆ ಹುರಿದಿಟ್ಟುಕೊಂಡಿದ್ದ ಶಾವಿಗೆ ಬೆರೆಸಿ ಚೆನ್ನಾಗಿ ಕದಡಬೇಕು. ಇನ್ನೂ ಸ್ವಲ್ಪ ಹೆಚ್ಚು ಹಾಲು ಬೆರೆಸಿದರೆ ರುಚಿ ಹೆಚ್ಚಾಗುತ್ತದೆ. ಕೊನೆಗೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ ಒಣದ್ರಾಕ್ಷಿ , ಗೋಡಂಬಿಯನ್ನು ಹುರಿದುಕೊಂಡು ಶಾವಿಗೆಗೆ ಹಾಕಬೇಕು.
ನಂತರ ಏಲಕ್ಕಿ ಪುಡಿ ಬೆರೆಸಿ ಚೆನ್ನಾಗಿ ಕದಡಬೇಕು. ಈಗ ಶಾವಿಗೆ ಪಾಯಸ ತಿನ್ನಲು ರೆಡಿಯಾಗಿದೆ. ಹಬ್ಬ ಹರಿದಿನಗಳಿಗೆ ಸೂಕ್ತವಾಗಿರುವ ಈ ಸಿಹಿ ಖಾದ್ಯ ಶೀರ್ ಕುರ್ಮಾ ರುಚಿ ಎಂತಹವರನ್ನೂ ಇನ್ನೊಮ್ಮೆ ತಿನ್ನಬೇಕೆನ್ನುವಂತೆ ಮಾಡುತ್ತದೆ.