Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್

* ವಾಣಿ, ಬೆಂಗಳೂರು
ಬೇಕಾಗುವ ಪದಾರ್ಥಗಳು : ರವೆ 1 ಲೋಟ | ತುಪ್ಪ 1 ಲೋಟ | ಸಕ್ಕರೆ ಒಂದೂವರೆ ಲೋಟ | ಹಲಸಿನ ಹಣ್ಣು ಐದಾರು | ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ | ಕೇಸರಿ ಬಣ್ಣ (ಬೇಕಿದ್ದರೆ).
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ರವೆ ಘಮ್ಮನೆ ವಾಸನೆ ಮತ್ತು ತುಸು ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇನ್ನೊಂದು ಪುಟ್ಟ ಬಾಣಲೆಯಲ್ಲಿ ಕಾಲು ಚಮಚ ತುಪ್ಪದಲ್ಲಿ ಗೋಡಂಬಿ, ಒಣದ್ರಾಕ್ಷಿ ಹುರಿದಿಟ್ಟುಕೊಳ್ಳಿ.
ಇದಿಷ್ಟಾದ ನಂತರ ಹಲಸಿನ ಹಣ್ಣನ್ನು (ಲೋಳೆಲೋಳೆ ಇರದ ಹಣ್ಣು) ಮಿಕ್ಸಿಯಲ್ಲಿ ಹಾಕಿ ಸ್ವಲ್ಪೇ ಸ್ವಲ್ಪ ರುಬ್ಬಿಕೊಳ್ಳಬಹುದು ಅಥವಾ ಸಣ್ಣಸಣ್ಣ ಹೋಳಾಗಿ ತುಂಡರಿಸಿಟ್ಟುಕೊಳ್ಳಬಹುದು.
ಒಂದು ಪಾತ್ರೆಯಲ್ಲಿ ರವೆಯ ಎರಡರಷ್ಟು ಅಥವಾ ಎರಡೂವರೆಯಷ್ಟು ನೀರು ಮತ್ತು ಹಾಲು ಮಿಶ್ರಣವನ್ನು ಸ್ಟೌ ಮೇಲೆ ಕುದಿಯಲು ಇಟ್ಟು, ಕುದಿ ಬಂದ ನಂತರ ಹುರಿದಿಟ್ಟುಕೊಂಡ ಗೋಡಂಬಿ, ಒಣದ್ರಾಕ್ಷಿ, ರವೆ ಮತ್ತು ರುಬ್ಬಿಕೊಂಡ ಹಲಸಿನ ಹಣ್ಣನ್ನು ಹಾಕಿ ಕೈಯಾಡಿಸುತ್ತಿರಬೇಕು. ರವೆ ಗಂಟಾಗದಂತೆ ಹೆಚ್ಚಿನ ಎಚ್ಚರವಹಿಸಿ.
ಇದು ಅರ್ಧ ಬೆಂದನಂತರ ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಕುದಿಯಲು ಬಿಡಿ. ಚೆನ್ನಾಗಿ ಬೆಂದುಬಂದ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಎಲ್ಲ ಹೊಂದಿಕೊಳ್ಳುವಂತೆ ಕೈಯಾಡಿಸಿ. ಕೇಸರಿ ಬಣ್ಣ ಬೇಕಿದ್ದರೆ ಚಿಟಿಕೆಯಷ್ಟು ಕೇಸರಿ ಬಣ್ಣ ಬೆರೆಸಿ. ಬಿಸಿಬಿಸಿಯಾಗಿರುವಾಗಲೇ ಸರ್ವ್ ಮಾಡಿ. ಜೊತೆಗೆ ನೆಚ್ಚಿನ ಬಟಾಣಿಕಾಳಿನ ಉಪ್ಪಿಟ್ಟು ಅಥವಾ ಬಿಸಿಬಿಸಿ ಕಾಂದಾಬಜಿ ಇದ್ದರೆ ಹಲಸಿನ ಹಣ್ಣಿನ ಸಿರಾದ ರುಚಿ ಇನ್ನಷ್ಟು ಹೆಚ್ಚುತ್ತದೆ.



Click it and Unblock the Notifications