Just In
- 52 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್
*
ವಾಣಿ,
ಬೆಂಗಳೂರು
ಬೇಕಾಗುವ
ಪದಾರ್ಥಗಳು
:
ರವೆ
1
ಲೋಟ
|
ತುಪ್ಪ
1
ಲೋಟ
|
ಸಕ್ಕರೆ
ಒಂದೂವರೆ
ಲೋಟ
|
ಹಲಸಿನ
ಹಣ್ಣು
ಐದಾರು
|
ಗೋಡಂಬಿ,
ಒಣದ್ರಾಕ್ಷಿ,
ಏಲಕ್ಕಿ
ಪುಡಿ
|
ಕೇಸರಿ
ಬಣ್ಣ
(ಬೇಕಿದ್ದರೆ).
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ರವೆ ಘಮ್ಮನೆ ವಾಸನೆ ಮತ್ತು ತುಸು ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇನ್ನೊಂದು ಪುಟ್ಟ ಬಾಣಲೆಯಲ್ಲಿ ಕಾಲು ಚಮಚ ತುಪ್ಪದಲ್ಲಿ ಗೋಡಂಬಿ, ಒಣದ್ರಾಕ್ಷಿ ಹುರಿದಿಟ್ಟುಕೊಳ್ಳಿ.
ಇದಿಷ್ಟಾದ ನಂತರ ಹಲಸಿನ ಹಣ್ಣನ್ನು (ಲೋಳೆಲೋಳೆ ಇರದ ಹಣ್ಣು) ಮಿಕ್ಸಿಯಲ್ಲಿ ಹಾಕಿ ಸ್ವಲ್ಪೇ ಸ್ವಲ್ಪ ರುಬ್ಬಿಕೊಳ್ಳಬಹುದು ಅಥವಾ ಸಣ್ಣಸಣ್ಣ ಹೋಳಾಗಿ ತುಂಡರಿಸಿಟ್ಟುಕೊಳ್ಳಬಹುದು.
ಒಂದು ಪಾತ್ರೆಯಲ್ಲಿ ರವೆಯ ಎರಡರಷ್ಟು ಅಥವಾ ಎರಡೂವರೆಯಷ್ಟು ನೀರು ಮತ್ತು ಹಾಲು ಮಿಶ್ರಣವನ್ನು ಸ್ಟೌ ಮೇಲೆ ಕುದಿಯಲು ಇಟ್ಟು, ಕುದಿ ಬಂದ ನಂತರ ಹುರಿದಿಟ್ಟುಕೊಂಡ ಗೋಡಂಬಿ, ಒಣದ್ರಾಕ್ಷಿ, ರವೆ ಮತ್ತು ರುಬ್ಬಿಕೊಂಡ ಹಲಸಿನ ಹಣ್ಣನ್ನು ಹಾಕಿ ಕೈಯಾಡಿಸುತ್ತಿರಬೇಕು. ರವೆ ಗಂಟಾಗದಂತೆ ಹೆಚ್ಚಿನ ಎಚ್ಚರವಹಿಸಿ.
ಇದು ಅರ್ಧ ಬೆಂದನಂತರ ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಕುದಿಯಲು ಬಿಡಿ. ಚೆನ್ನಾಗಿ ಬೆಂದುಬಂದ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಎಲ್ಲ ಹೊಂದಿಕೊಳ್ಳುವಂತೆ ಕೈಯಾಡಿಸಿ. ಕೇಸರಿ ಬಣ್ಣ ಬೇಕಿದ್ದರೆ ಚಿಟಿಕೆಯಷ್ಟು ಕೇಸರಿ ಬಣ್ಣ ಬೆರೆಸಿ. ಬಿಸಿಬಿಸಿಯಾಗಿರುವಾಗಲೇ ಸರ್ವ್ ಮಾಡಿ. ಜೊತೆಗೆ ನೆಚ್ಚಿನ ಬಟಾಣಿಕಾಳಿನ ಉಪ್ಪಿಟ್ಟು ಅಥವಾ ಬಿಸಿಬಿಸಿ ಕಾಂದಾಬಜಿ ಇದ್ದರೆ ಹಲಸಿನ ಹಣ್ಣಿನ ಸಿರಾದ ರುಚಿ ಇನ್ನಷ್ಟು ಹೆಚ್ಚುತ್ತದೆ.