Just In
- 1 hr ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 2 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 2 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 3 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ
ಹಲಸಿನಿಂದ ಬಗೆಬಗೆ ತಿನಿಸು ಮಾಡಿದರೂ, ಥಟ್ಟನೆ ನೆನಪಾಗುವುದು ಪಾಯಸ. ಮುಂಚೆಲ್ಲಾ ಮಲೆನಾಡಿನಲ್ಲಿ ಎಲ್ಲಾ ಶುಭ ಸಮಾರಂಭಕ್ಕೂ ಎಲೆ ಮೊದಲಿಗೆ ಖಾಯಂ ಆಗಿರುತ್ತಿದ್ದ ಹಲಸಿನ ಪಾಯಸದ ಸ್ಥಾನವನ್ನು ಕ್ರಮೇಣ ಗೇರುಹಣ್ಣು, ಗೋಡಂಬಿ, ಇತರೆ ಹಣ್ಣುಗಳ ಮಿಶ್ರಣ ಆಕ್ರಮಿಸಿದೆ. ಇರಲಿ, ನಾವು ಹಳೆಯದನ್ನು ಮರೆಯುವಂತಿಲ್ಲ. ಹಲಸಿನ ರುಚಿ ನೋಡದೆ ಬಿಡುವಂತಿಲ್ಲ. ಒಪ್ಪಿಸಿಕೊಳ್ಳಿ
ತಯಾರಿಗೆ ಈ ಪದಾರ್ಥಗಳು ಬೇಕು :
ಹಲಸಿನ
ಹಣ್ಣಿನ
ತೊಳೆಗಳು-20
ಅಥವಾ
ಅಧಿಕ
ಮಾಗಿದ
ಹಣ್ಣು
ಇರಲಿ.
ತುಪ್ಪ-ಒಂದೂವರೆ
ಕಪ್
ಬೆಲ್ಲದ
ತುರಿ-3/4
ಕಪ್,
ತೆಂಗಿನಕಾಯಿ
ತುರಿ-1/2
ಕಪ್,
ಏಲಕ್ಕಿ
ಪುಡಿ:1/4
ಟೀ
ಚಮಚ
ಗೋಡಂಬಿ
ಚೂರುಗಳುಬೇಕಾದಷ್ಟು,
ತಯಾರಿಸುವ
ಬಗೆ
ಹೀಗೆ:
*ತೆಂಗಿನಕಾಯಿತುರಿಗೆ
ಸ್ವಲ್ಪ
ನೀರು
ಸೇರಿಸಿ
ರುಬ್ಬಿಕೊಳ್ಳಿ.
ಎರಡಾವರ್ತಿಕಾಯಿ
ಹಾಲನ್ನು
ತೆಗೆಯಿರಿ.
*ಹಲಸಿನ
ತೊಳೆಗಳಲ್ಲಿರುವ
ಬೀಜಗಳನ್ನು
ತಗೆದು,
ತೊಳೆಗಳನ್ನು
ಸಣ್ಣ
ಚೂರುಗಳನ್ನಾಗಿ
ಕತ್ತರಿಸಿ.
*
ಒಂದು
ಪಾತ್ರೆಯಲ್ಲಿ
ಒಂದು
ಕಪ್
ನೀರನ್ನು
ಬಿಸಿಮಾಡಿ.
ನೀರು
ಕುದಿಯಲು
ಬಿಡಿ.
ನೀರು
ಕುದಿಯತೊಡಗಿದಾಗ
ಅದಕ್ಕೆ
ಹಲಸಿನ
ತೊಳೆಗಳನ್ನು
ಸೇರಿಸಿ,
ಅವು
ತೀರಾ
ಮೆತ್ತಗಾಗುವವರೆಗೂ
ಕುದಿಸಿ.
*
ಕುದಿಯುತ್ತಿರುವ
ನೀರಿಗೆ
ಬೆಲ್ಲದ
ತುರಿ
ಹಾಗೂ
ಕಾಯಿ
ಹಾಲನ್ನು
ಸೇರಿಸಿ.
ಕಾಯಿ
ಹಾಲು
ಬೆರಸುವಾಗ
ಉರಿಯು
ಕಡಿಮೆಯಾಗಿರಲಿ
ಹಾಗೂ
ಬೆಲ್ಲವು
ಸಂಪೂರ್ಣವಾಗಿ
ಕರಗುವಂತೆ
ನೋಡಿಕೊಳ್ಳಿ.
*ಗೋಡಂಬಿಯನ್ನು
ತುಪ್ಪದಲ್ಲಿ
ಹುರಿದಿಟ್ಟುಕೊಳ್ಳಿ.
ತುಪ್ಪವನ್ನು
ಸ್ವಲ್ಪ
ಬಿಸಿ
ಮಾಡಿಕೊಂಡು
ಸೇರಿಸಿ
ನಂತರ
ಪಾಯಸದೊಡನೆ
ಬೆರಸಿ.
ಕುದಿತದಿಂದ
ಒಳ್ಳೆಯ
ಸುವಾಸನೆ
ಬಂದ
ನಂತರ
ಒಲೆಯಿಂದ
ಇಳಿಸಿ.ಎಲ್ಲರಿಗೂ
ಬಡಿಸಿ,
ಆನಂದಿಸಿ.
ಪೂರಕ
ಮಾಹಿತಿ:
ಬಹುಪಯೋಗಿ
ಹಣ್ಣಿನ
ಮರ
-
ಹಲಸು
-
ಕುರಿತು
ರಾಷ್ಟ್ರೀಯ
ಕಾರ್ಯಾಗಾರ
ಮೇ.
21
ಹಾಗೂ
ಮೇ.22
ರಂದು
ಬೆಂಗಳೂರಿನ
ಜಿಕೆವಿಕೆಯ
ಕುವೆಂಪು
ಸಭಾಂಗಣದಲ್ಲಿ
ನಡೆಯಲಿದೆ.
ಈ
ಕಾರ್ಯಾಗಾರದಲ್ಲಿ
ಸುಮಾರು
200
ರೈತರು,
50
ವಿಜ್ಞಾನಿಗಳು
ಹಾಗೂ
50
ಉದ್ದಿಮೆದಾರರು
ರಾಜ್ಯ
ಹಾಗೂ
ಹೊರ
ರಾಜ್ಯಗಳಿಂದ
ಭಾಗವಹಿಸಲಿದ್ದಾರೆ
ಹಾಗೂ
ಕಾರ್ಯಾಗಾರದಲ್ಲಿ
50ಕ್ಕೂ
ಹೆಚ್ಚು
ವಿಷಯಗಳ
ಮಂಡನೆಯಾಗಲಿದೆ.
ಹಲಸಿನ ಹಣ್ಣಿನಲ್ಲಿ ಎ ಮತ್ತು ಸಿ ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿವೆ. ಇದರಲ್ಲಿ ಪೊಟಾಸಿಯಂ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡ ಇರುವವರಿಗೆ ಬಹಳ ಉಪಯುಕ್ತ. ಕೃಷಿ ವಿಶ್ವವಿದ್ಯಾನಿಲಯ ಪ್ರೊ. ರಂಗಣ್ಣ ಅವರ ನೇತೃತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ಬಿಸ್ಕತ್, ವಿನೇಗರ್, ಸ್ಕ್ವಾಷ್, ಜ್ಯೂಸ್, ಹಲ್ವ, ವೈನ್, ಸೀಕರಣೆ ತಯಾರಿಸಲಾಗಿದ್ದು ಎರಡು ದಿನ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.