Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ

ಹಲಸಿನಿಂದ ಬಗೆಬಗೆ ತಿನಿಸು ಮಾಡಿದರೂ, ಥಟ್ಟನೆ ನೆನಪಾಗುವುದು ಪಾಯಸ. ಮುಂಚೆಲ್ಲಾ ಮಲೆನಾಡಿನಲ್ಲಿ ಎಲ್ಲಾ ಶುಭ ಸಮಾರಂಭಕ್ಕೂ ಎಲೆ ಮೊದಲಿಗೆ ಖಾಯಂ ಆಗಿರುತ್ತಿದ್ದ ಹಲಸಿನ ಪಾಯಸದ ಸ್ಥಾನವನ್ನು ಕ್ರಮೇಣ ಗೇರುಹಣ್ಣು, ಗೋಡಂಬಿ, ಇತರೆ ಹಣ್ಣುಗಳ ಮಿಶ್ರಣ ಆಕ್ರಮಿಸಿದೆ. ಇರಲಿ, ನಾವು ಹಳೆಯದನ್ನು ಮರೆಯುವಂತಿಲ್ಲ. ಹಲಸಿನ ರುಚಿ ನೋಡದೆ ಬಿಡುವಂತಿಲ್ಲ. ಒಪ್ಪಿಸಿಕೊಳ್ಳಿ
ತಯಾರಿಗೆ ಈ ಪದಾರ್ಥಗಳು ಬೇಕು :
ಹಲಸಿನ ಹಣ್ಣಿನ ತೊಳೆಗಳು-20 ಅಥವಾ ಅಧಿಕ ಮಾಗಿದ ಹಣ್ಣು ಇರಲಿ.
ತುಪ್ಪ-ಒಂದೂವರೆ ಕಪ್
ಬೆಲ್ಲದ ತುರಿ-3/4 ಕಪ್,
ತೆಂಗಿನಕಾಯಿ ತುರಿ-1/2 ಕಪ್,
ಏಲಕ್ಕಿ ಪುಡಿ:1/4 ಟೀ ಚಮಚ
ಗೋಡಂಬಿ ಚೂರುಗಳುಬೇಕಾದಷ್ಟು,
ತಯಾರಿಸುವ ಬಗೆ ಹೀಗೆ:
*ತೆಂಗಿನಕಾಯಿತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಎರಡಾವರ್ತಿಕಾಯಿ ಹಾಲನ್ನು ತೆಗೆಯಿರಿ.
*ಹಲಸಿನ ತೊಳೆಗಳಲ್ಲಿರುವ ಬೀಜಗಳನ್ನು ತಗೆದು, ತೊಳೆಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ.
* ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿಮಾಡಿ. ನೀರು ಕುದಿಯಲು ಬಿಡಿ. ನೀರು ಕುದಿಯತೊಡಗಿದಾಗ ಅದಕ್ಕೆ ಹಲಸಿನ ತೊಳೆಗಳನ್ನು ಸೇರಿಸಿ, ಅವು ತೀರಾ ಮೆತ್ತಗಾಗುವವರೆಗೂ ಕುದಿಸಿ.
* ಕುದಿಯುತ್ತಿರುವ ನೀರಿಗೆ ಬೆಲ್ಲದ ತುರಿ ಹಾಗೂ ಕಾಯಿ ಹಾಲನ್ನು ಸೇರಿಸಿ.
ಕಾಯಿ ಹಾಲು ಬೆರಸುವಾಗ ಉರಿಯು ಕಡಿಮೆಯಾಗಿರಲಿ ಹಾಗೂ ಬೆಲ್ಲವು ಸಂಪೂರ್ಣವಾಗಿ ಕರಗುವಂತೆ ನೋಡಿಕೊಳ್ಳಿ.
*ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇರಿಸಿ ನಂತರ ಪಾಯಸದೊಡನೆ ಬೆರಸಿ. ಕುದಿತದಿಂದ ಒಳ್ಳೆಯ ಸುವಾಸನೆ ಬಂದ ನಂತರ ಒಲೆಯಿಂದ ಇಳಿಸಿ.ಎಲ್ಲರಿಗೂ ಬಡಿಸಿ, ಆನಂದಿಸಿ.
ಪೂರಕ ಮಾಹಿತಿ:
ಬಹುಪಯೋಗಿ ಹಣ್ಣಿನ ಮರ - ಹಲಸು - ಕುರಿತು ರಾಷ್ಟ್ರೀಯ ಕಾರ್ಯಾಗಾರ ಮೇ. 21 ಹಾಗೂ ಮೇ.22 ರಂದು ಬೆಂಗಳೂರಿನ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಸುಮಾರು 200 ರೈತರು, 50 ವಿಜ್ಞಾನಿಗಳು ಹಾಗೂ 50 ಉದ್ದಿಮೆದಾರರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಾಗಾರದಲ್ಲಿ 50ಕ್ಕೂ ಹೆಚ್ಚು ವಿಷಯಗಳ ಮಂಡನೆಯಾಗಲಿದೆ.
ಹಲಸಿನ ಹಣ್ಣಿನಲ್ಲಿ ಎ ಮತ್ತು ಸಿ ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿವೆ. ಇದರಲ್ಲಿ ಪೊಟಾಸಿಯಂ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡ ಇರುವವರಿಗೆ ಬಹಳ ಉಪಯುಕ್ತ. ಕೃಷಿ ವಿಶ್ವವಿದ್ಯಾನಿಲಯ ಪ್ರೊ. ರಂಗಣ್ಣ ಅವರ ನೇತೃತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ಬಿಸ್ಕತ್, ವಿನೇಗರ್, ಸ್ಕ್ವಾಷ್, ಜ್ಯೂಸ್, ಹಲ್ವ, ವೈನ್, ಸೀಕರಣೆ ತಯಾರಿಸಲಾಗಿದ್ದು ಎರಡು ದಿನ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.



Click it and Unblock the Notifications