Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ

ಹಲಸಿನಿಂದ ಬಗೆಬಗೆ ತಿನಿಸು ಮಾಡಿದರೂ, ಥಟ್ಟನೆ ನೆನಪಾಗುವುದು ಪಾಯಸ. ಮುಂಚೆಲ್ಲಾ ಮಲೆನಾಡಿನಲ್ಲಿ ಎಲ್ಲಾ ಶುಭ ಸಮಾರಂಭಕ್ಕೂ ಎಲೆ ಮೊದಲಿಗೆ ಖಾಯಂ ಆಗಿರುತ್ತಿದ್ದ ಹಲಸಿನ ಪಾಯಸದ ಸ್ಥಾನವನ್ನು ಕ್ರಮೇಣ ಗೇರುಹಣ್ಣು, ಗೋಡಂಬಿ, ಇತರೆ ಹಣ್ಣುಗಳ ಮಿಶ್ರಣ ಆಕ್ರಮಿಸಿದೆ. ಇರಲಿ, ನಾವು ಹಳೆಯದನ್ನು ಮರೆಯುವಂತಿಲ್ಲ. ಹಲಸಿನ ರುಚಿ ನೋಡದೆ ಬಿಡುವಂತಿಲ್ಲ. ಒಪ್ಪಿಸಿಕೊಳ್ಳಿ
ತಯಾರಿಗೆ ಈ ಪದಾರ್ಥಗಳು ಬೇಕು :
ಹಲಸಿನ ಹಣ್ಣಿನ ತೊಳೆಗಳು-20 ಅಥವಾ ಅಧಿಕ ಮಾಗಿದ ಹಣ್ಣು ಇರಲಿ.
ತುಪ್ಪ-ಒಂದೂವರೆ ಕಪ್
ಬೆಲ್ಲದ ತುರಿ-3/4 ಕಪ್,
ತೆಂಗಿನಕಾಯಿ ತುರಿ-1/2 ಕಪ್,
ಏಲಕ್ಕಿ ಪುಡಿ:1/4 ಟೀ ಚಮಚ
ಗೋಡಂಬಿ ಚೂರುಗಳುಬೇಕಾದಷ್ಟು,
ತಯಾರಿಸುವ ಬಗೆ ಹೀಗೆ:
*ತೆಂಗಿನಕಾಯಿತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಎರಡಾವರ್ತಿಕಾಯಿ ಹಾಲನ್ನು ತೆಗೆಯಿರಿ.
*ಹಲಸಿನ ತೊಳೆಗಳಲ್ಲಿರುವ ಬೀಜಗಳನ್ನು ತಗೆದು, ತೊಳೆಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ.
* ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿಮಾಡಿ. ನೀರು ಕುದಿಯಲು ಬಿಡಿ. ನೀರು ಕುದಿಯತೊಡಗಿದಾಗ ಅದಕ್ಕೆ ಹಲಸಿನ ತೊಳೆಗಳನ್ನು ಸೇರಿಸಿ, ಅವು ತೀರಾ ಮೆತ್ತಗಾಗುವವರೆಗೂ ಕುದಿಸಿ.
* ಕುದಿಯುತ್ತಿರುವ ನೀರಿಗೆ ಬೆಲ್ಲದ ತುರಿ ಹಾಗೂ ಕಾಯಿ ಹಾಲನ್ನು ಸೇರಿಸಿ.
ಕಾಯಿ ಹಾಲು ಬೆರಸುವಾಗ ಉರಿಯು ಕಡಿಮೆಯಾಗಿರಲಿ ಹಾಗೂ ಬೆಲ್ಲವು ಸಂಪೂರ್ಣವಾಗಿ ಕರಗುವಂತೆ ನೋಡಿಕೊಳ್ಳಿ.
*ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇರಿಸಿ ನಂತರ ಪಾಯಸದೊಡನೆ ಬೆರಸಿ. ಕುದಿತದಿಂದ ಒಳ್ಳೆಯ ಸುವಾಸನೆ ಬಂದ ನಂತರ ಒಲೆಯಿಂದ ಇಳಿಸಿ.ಎಲ್ಲರಿಗೂ ಬಡಿಸಿ, ಆನಂದಿಸಿ.
ಪೂರಕ ಮಾಹಿತಿ:
ಬಹುಪಯೋಗಿ ಹಣ್ಣಿನ ಮರ - ಹಲಸು - ಕುರಿತು ರಾಷ್ಟ್ರೀಯ ಕಾರ್ಯಾಗಾರ ಮೇ. 21 ಹಾಗೂ ಮೇ.22 ರಂದು ಬೆಂಗಳೂರಿನ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಸುಮಾರು 200 ರೈತರು, 50 ವಿಜ್ಞಾನಿಗಳು ಹಾಗೂ 50 ಉದ್ದಿಮೆದಾರರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಾಗಾರದಲ್ಲಿ 50ಕ್ಕೂ ಹೆಚ್ಚು ವಿಷಯಗಳ ಮಂಡನೆಯಾಗಲಿದೆ.
ಹಲಸಿನ ಹಣ್ಣಿನಲ್ಲಿ ಎ ಮತ್ತು ಸಿ ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿವೆ. ಇದರಲ್ಲಿ ಪೊಟಾಸಿಯಂ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡ ಇರುವವರಿಗೆ ಬಹಳ ಉಪಯುಕ್ತ. ಕೃಷಿ ವಿಶ್ವವಿದ್ಯಾನಿಲಯ ಪ್ರೊ. ರಂಗಣ್ಣ ಅವರ ನೇತೃತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ಬಿಸ್ಕತ್, ವಿನೇಗರ್, ಸ್ಕ್ವಾಷ್, ಜ್ಯೂಸ್, ಹಲ್ವ, ವೈನ್, ಸೀಕರಣೆ ತಯಾರಿಸಲಾಗಿದ್ದು ಎರಡು ದಿನ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.



Click it and Unblock the Notifications