Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಗರಮಾ ಗರಂ ಮಸಾಲ ಪರುಪ್ಪು ವಡೆ
ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಅತಿಹೆಚ್ಚಿನ ಬೇಡಿಕೆ ಇರುವ ತಿಂಡಿ ಎಂದರೆ ಇಡ್ಲಿ ವಡೆ ಸಾಂಬಾರ್. ಇಡ್ಲಿ ಬೆಳಗ್ಗಿನ ತಿಂಡಿಯಾಗಿ ಹೆಚ್ಚಿನವರು ಇಷ್ಟಪಟ್ಟರೆ ಸಂಜೆಯ ಕುರುಕು ತಿಂಡಿಯಾಗಿ ಉದ್ದಿನವಡೆಗೇ ಹೆಚ್ಚಿನ ಬೇಡಿಕೆ. ಕೆಲವರು ಸಾಂಬಾರ್ನಲ್ಲಿ ಮುಳುಗಿಸಿ ತಿನ್ನಲು ಇಷ್ಟಪಟ್ಟರೆ ಉಳಿದವರಿಗೆ ಕಾಯಿ ಚಟ್ನಿಯೊಡನೆ ವಡೆ ಇಷ್ಟವಾಗುತ್ತದೆ.
ಅದರಲ್ಲೂ ಮಳೆ ಬಂದು ತಣ್ಣಾಗಾಗಿರುವ ವಾತಾವರಣದಲ್ಲಿ ವಡೆಗೆ ಹೆಚ್ಚಿನ ಬೇಡಿಕೆ. ಪ್ರಯಾಣಿಕರಿಗೂ ವಡೆ ಎಂದರೆ ಊಟದ ಬದಲಿಗೆ ಸೇವಿಸುವ ಲಘು ಆಹಾರವಾಗಿದೆ. ಆದರೆ ಪ್ರತಿಬಾರಿ ಉದ್ದಿನವಡೆಯನ್ನೇ ತಿಂದು ಬೇಸರವಾಗಿದೆಯೇ? ಬನ್ನಿ ಅದಕ್ಕೂ ಹೆಚ್ಚು ಗರಿಗರಿಯಾದ, ರುಚಿಯಾದ ಮಸಾಲಾ ಪರುಪ್ಪು ವಡೆ ನಿಮ್ಮ ಕುರುಕಲು ತಿಂಡಿಯ ಬಯಕೆಯನ್ನು ಪೂರ್ಣಗೊಳಿಸಬಲ್ಲುದು. ಗರಂ ಗರಂ ಮದ್ದೂರು ವಡೆ ನೀವೇ ಮಾಡಿ
ಕಡ್ಲೆಬೇಳೆ ಮತ್ತು ಕೆಲವು ಮಸಾಲೆ ವಸ್ತುಗಳು ಪ್ರಧಾನವಾಗಿರುವ ಈ ವಡೆ ಬೆಳಗಿನ ತಿಂಡಿಯಾಗಿಯೂ ಸೈ, ಸಂಜೆಯ ಕುರುಕಲು ತಿಂಡಿಯಾಗಿಯೂ ಜೈ ಅನ್ನಿಸಿಕೊಳ್ಳುತ್ತದೆ. ಟೀ ಕಾಫಿಯೊಡನೆ ಉತ್ತಮ ಜೊತೆಯನ್ನೂ ನೀಡುತ್ತದೆ. ಮಸಾಲೆ ವಡೆಗಿಂತಲೂ ಮಸಾಲಾ ಪರುಪ್ಪು ವಡೆ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ರುಚಿಕರ ತಿಂಡಿಯನ್ನು ಮಾಡುವ ವಿಧಾನವನ್ನು ಈಗ ಕಲಿಯೋಣ:

ಪ್ರಮಾಣ: ಸುಮಾರು ಹದಿನೈದರಿಂದ ಇಪ್ಪತ್ತು ವಡೆಗಳು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಕಡ್ಲೆ ಬೇಳೆ- 1 ಕಪ್
*ಈರುಳ್ಳಿ- 1 (ಚಿಕ್ಕದಾಗಿ ಹೆಚ್ಚಿದ್ದು)
*ಹಸಿಮೆಣಸು- 2 (ಚಿಕ್ಕದಾಗಿ ಕತ್ತರಿಸಿದ್ದು)
*ದೊಡ ಜೀರಿಗೆ (ಸೌಂಫ್) - 1 ಚಿಕ್ಕಚಮಚ
*ಕಾಳುಮೆಣಸಿನ ಪುಡಿ - ½ ಚಿಕ್ಕಚಮಚ
*ಕರಿಬೇವಿನ ಎಲೆ- 4-5
*ಕೊತ್ತಂಬರಿ ಸೊಪ್ಪು- 1 ದೊಡ್ಡ ಚಮಚ (ಎಲೆಗಳನ್ನು ಬಿಡಿಸಿ ಚಿಕ್ಕದಾಗಿ ಕತ್ತರಿಸಿದ್ದು)
*ಉಪ್ಪು-ರುಚಿಗನುಸಾರ
*ಹುರಿಯಲು ಎಣ್ಣೆ - 1 ಕಪ್
ವಿಧಾನ:
1) ಕಡ್ಲೆಬೇಳೆಯನ್ನು ತೊಳೆದು ಸುಮಾರು ನಾಲ್ಕರಿಂದ ಐದು ಗಂಟೆ ಬೇಳೆಯನ್ನು ಬೇರೆಯಾಗಿ ತೆಗೆದಿಡಿ. ಉಳಿದದ್ದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆಯಿರಿ.
2) ಸರಿಯಾದ ದ್ರವ್ಯತೆಗಾಗಿ ಕೊಂಚ ನೀರು ಸೇರಿಸಿ. ಇದು ದೋಸೆಹಿಟ್ಟಿಗಿಂತ ಗಟ್ಟಿಯಾದ ಹದವಿರುವಂತಿರಲಿ.
3) ಇದಕ್ಕೆ ದೊಡ್ಡ ಜೀರಿಗೆ, ಹಸಿಮೆಣಸು, ಬೇವಿನ ಎಲೆ, ಈರುಳ್ಳಿ, ಕಾಳುಮೆಣಸು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ಕಡೆಯಿರಿ. ಹಿಟ್ಟು ನುಣ್ಣಗಾದ ಬಳಿಕ ಕೈಯಲ್ಲಿ ಹಿಡಿದರೆ ಸುಲಭವಾಗಿ ಕೆಳಗೆ ಬೀಳಬಾರದು ಅಷ್ಟು ದಪ್ಪನೆ ಇರಲಿ.
4) ಈ ಮಿಶ್ರಣಕ್ಕೆ ತೆಗೆದಿಟ್ಟಿದ್ದ ಕಡ್ಲೆಬೇಳೆಯನ್ನು ಸೇರಿಸಿ ಚಮಚ ಬಳಸಿ ಕಲಕಿ.
5) ದಪ್ಪ ತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ನಿಮ್ಮ ಕೈಗಳಿಗೆ ಕೊಂಚವೇ ನೀರು ಹಾಕಿ ತೇವ ಮಾಡಿಕೊಳ್ಳಿ. ಬಳಿಕ ವಡೆಯ ಹಿಟ್ಟಿನ ಕೊಂಚಭಾಗ ಅಂಗೈ ಮೇಲಿರಿಸಿ ಚಿಕ್ಕದಾದ ರೊಟ್ಟಿಯಂತೆ ತಟ್ಟಿ.
6) ಎಣ್ಣೆ ಬಿಸಿಯಾಗಿರುವುದನ್ನು ಖಾತ್ರಿಪಡಿಸಿ. ಇದಕ್ಕೆ ಮೆಂತೆಯಕಾಳೊಂದನ್ನು ಹಾಕಿ ನೋಡಿ. ತಕ್ಷಣ ಸಿಡಿದರೆ ಎಣ್ಣೆ ಬಿಸಿಯಾಗಿದೆ ಎಂದರ್ಥ. ಮಧ್ಯಮಕ್ಕಿಂತಲೂ ಕೊಂಚ ಕಡಿಮೆ ಇರುವ ಉರಿಯಲ್ಲಿ ವಡೆಯ ಹಿಟ್ಟನ್ನು ನಿಧಾನವಾಗಿ ಎಣ್ಣೆಗೆ ಹಾಕಿ ನಡುನಡುವೆ ತಿರುವುತ್ತಾ ಹುರಿಯಿರಿ. ಸುಮಾರು ಕೆಂಬಣ್ಣ ಬಂದ ಬಳಿಕ ತೂತುಗಳ ಸೌಟು ಬಳಸಿ ಎಣ್ಣೆ ಬಸಿಯಿರಿ. ಬಳಿಕ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ. ಇದರಿಂದ ವಡೆಗೆ ಅಂಟಿಕೊಂಡಿದ್ದ ಎಣ್ಣೆ ನಿವಾರಿಸಬಹುದು.
7) ಕೈಗಳಲ್ಲಿ ವಡೆಯನ್ನು ತಟ್ಟಲು ಅನುಭವ ಸಾಲದೇ ಹೋದರೆ ಇದಕ್ಕೆ ಇನ್ನೊಂದು ವಿಧಾನವಿದೆ. ಇದಕ್ಕಾಗಿ ಸ್ವಚ್ಛವಾದ ತಲೆಯೊರೆಸುವ ತೆಳ್ಳಗಿನ ಟವೆಲ್ ಅಥವಾ ಹತ್ತಿಯ ಬಟ್ಟೆಯ ನಡುವೆ ವಡೆಯನ್ನು ತಟ್ಟಿ. ಇದನ್ನು ನಿಧಾನವಾಗಿ ಎಣ್ಣೆಯ ಮೇಲೆ ಕೊಂಡು ಹೋಗಿ ಉಲ್ಟಾ ಮಾಡಿ. ಬಟ್ಟೆಯನ್ನು ನಿಧಾನವಾಗಿ ಹಿಂಬದಿ ಮಡಚಿ ವಡೆಯ ಹಿಟ್ಟು ಕಳಚಿ ಎಣ್ಣೆಯಲ್ಲಿ ಬೀಳುವಂತೆ ಮಾಡಿ.
8) ಬಿಸಿಬಿಸಿಯಿದ್ದಂತೆಯೇ ಕಾಯಿಚಟ್ನಿ, ಟೊಮೇಟೋ ಕೆಚಪ್ ಅಥವಾ ಸಾಂಬಾರ್ ನೊಂದಿಗೆ ಬಡಿಸಿ, ಮೆಚ್ಚುಗೆ ಪಡಿಯಿರಿ.



Click it and Unblock the Notifications
