Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬಸಳೆ ಸೊಪ್ಪಿನ ಸಾರು ಈ ರೀತಿ ಮಾಡಿದರೆ ರುಚಿ ಅಧಿಕ

ಬೇಕಾಗುವ ಸಾಮಗ್ರಿಗಳು:
* ಬಸಳೆ ಸೊಪ್ಪು ಒಂದು ಕಟ್ಟು
* ಮೊಳಕೆ ಬರಿಸಿದ ಹೆಸರು ಕಾಳು 1 ಕಪ್
* ಈರುಳ್ಳಿ 2 (ಕತ್ತರಿಸಿದ)
* ಟೊಮೆಟೊ 2 (ಕತ್ತರಿಸಿದ)
* ಹುಣಸೆಹಣ್ಣಿನ ರಸ ( ಒಂದು ನಿಂಬೆ ಗಾತ್ರ ಹುಣಸೆ ಹಣ್ಣಿನ ಉಂಡೆ ತಗೊಂಡು ಅದನ್ನು ನೀರಿನಲ್ಲಿ ಹಿಂಡಿ ರಸ ತೆಗೆದು ಹಿಂಡಬೇಕು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಕರಿಬೇವು
* ಸಾಸಿವೆ
* ಬೆಳ್ಳುಳ್ಳಿ,
ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಒಣ ಕೆಂಪು ಮೆಣಸಿನ ಕಾಯಿ - 5-6 ಅಥವಾ ಒಂದೂವರೆ ಚಮಚ ಮೆಣಸಿನ ಪುಡಿ
ಕೊತ್ತಂಬರಿ ಬೀಜ - 2 ಚಮಚ ಅಥವಾ 1/2 ಚಮಚ ಕೊತ್ತಂಬರಿ ಪುಡಿ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಅರಿಶಿಣ ಪುಡಿ 1/4 ಚಮಚ
ತಯಾರಿಸುವ ವಿಧಾನ:
1. ಬಸಳೆ ಸೊಪ್ಪನ್ನು ಸ್ವಚ್ಛಗೊಳಿಸಿ , ಅದನ್ನು ಮೊಳಕೆ ಬರಿಸಿದ ಕಾಳು, ಈರುಳ್ಳಿ, ಟೊಮೆಟೊ ಮತ್ತು ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪುಹಾಕಿ ಬೇಯಿಸಲು ಇಡಬೇಕು.
2. ನಂತರ ಮಸಾಲೆ ಸಾಮಾಗ್ರಿಗಳನ್ನು ಹಾಕಿ ನುಣ್ಣನೆ ರುಬ್ಬಬೇಕು. ಹೀಗೆ ರುಬ್ಬುವ ಮುನ್ನ ತೆಂಗಿನ ತುರಿ ಚೆನ್ನಾಗಿ ಹುರಿದು, ಅದಕ್ಕೆ ಉಳಿದ ಸಾಮಾಗ್ರಿಗಳನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿದು ನಂತರ ಅರೆದರೆ ಮಸಾಲೆ ರುಚಿ ಹೆಚ್ಚುವುದು.
3. ಈಗ ಬೇಯುತ್ತಿರುವ ಬಸಳೆ ಸೊಪ್ಪು , ಹೆಸರು ಕಾಳಿನ ಮಿಶ್ರಣಕ್ಕೆ ರುಬ್ಬಿದ ಮಸಾಲೆ ಮತ್ತು ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಹುಣಸೆ ಹಣ್ಣಿನ ರಸ ಸೇರಿಸಿ , ಸ್ವಲ್ಪ ಹೊತ್ತು ಕುದಿಸಿ ಉರಿಯಿಂದ ಸಾರು ಪಾತ್ರೆಯನ್ನು ಇಳಿಸಿ ಬದಿಯಲ್ಲಿಡಬೇಕು.
4. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ , ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಬೇಕು, ಸಾಸಿವೆ ಚಟಪಟಾ ಶಬ್ದ ಬರುವಾಗ ಕರಿಬೇವು ಮತ್ತು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ಈ ಒಗ್ಗರಣೆಯನ್ನು ಬಿಸಿಯಾದ ಸಾರಿಗೆ ಹಾಕಿ ಒಮ್ಮೆ ತಿರುಗಿಸಿದರೆ ರುಚಿಕರವಾದ ಬಸಳೆ ಸೊಪ್ಪಿನ ಸಾರು ರೆಡಿ.
ಈ ಸಾರನ್ನು ಮಾಡಿದರೆ ದೋಸೆ, ಇಡ್ಲಿ ಜೊತೆ ತಿನ್ನಬಹುದು, ಅನ್ನದ ಜೊತೆ ಕೂಡ ತಿನ್ನಬಹುದು.



Click it and Unblock the Notifications