Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಜೀರಿಗೆ ಸಾರು ಮಾಡಿದ ವಿಧಾನ

ಬೇಕಾಗುವ ಪದಾರ್ಥಗಳು : ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಎರಡು ಚಮಚ ಜೀರಿಗೆ | ಐದು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ.
ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡೆ. ಇದಕ್ಕೆ ಮೂರು ಚಮಚ ಹಸಿ ತೆಂಗಿನತುರಿ, ಮೂರು ಚಮಚ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಂಡೆ.
ಆನಂತರದಲ್ಲಿ, ಅರ್ಧ ಗೋಳಾಕಾರದ ಒಂದು ಬಾಣಲೆಯನ್ನು ಸ್ಟೌವ್ ಮೇಲಿಟ್ಟು ನಾಲಕ್ಕು ಲೋಟ ನೀರು ಕುದಿಯಲು ಇಟ್ಟೆ. ನೀರು ಕುದ್ದನಂತರ ಅದಕ್ಕೆ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಮತ್ತೆ ಕುದಿಸಿದೆ. ಇದೇ ಸಮಯಕ್ಕೆ ಅರ್ಧ ಚಮಚದಷ್ಟು ಹುಣಿಸೆಹಣ್ಣಿನ ಪೇಸ್ಟ್, ಅರ್ಧ ಉಂಡೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಯುವತನಕ ಕಾದೆ.
ಬಾಣಲೆ ಕೆಳಗಿಳಿಸಿದ ನಂತರ ಒಗ್ಗರಣೆ ಕೈಸೌಟಿನಲ್ಲಿ ಅರ್ಧ ಚಮಚ ಎಣ್ಣೆ, ಸಾಸಿವೆ, ಸಣ್ಣಗೆ ಹೆಚ್ಚಿಕೊಂಡ ತಾಜಾ ಕರಿಬೇವಿನ ಎಲೆಗಳು ಹಾಗೂ ಎರಡು ಚೂರು ಇಂಗು ಹಾಕಿ ಒಗ್ಗರಣೆ ಮಾಡಿ ಸಾರಿನ ಬಾಣಲೆಯಲ್ಲಿ ಮುಳುಗಿಸಿದೆ. ಜೀರಿಗೆ ಪರಿಮಳವೇ ಪ್ರಧಾನವಾದ ಈ ಸಾರಿನ ರುಚಿ ತುಂಬಾ ಚೆನ್ನಾಗಿತ್ತು. ಇದು ಗರ್ವದ ಮಾತಲ್ಲ. ನನ್ನ ಅಂದಾಜಿನ ಪ್ರಕಾರ ನಾನು ಬರೆದ ಅಳತೆಯಲ್ಲಿ ನೀವು ಸಾರು ಮಾಡಿದರೆ ಇಬ್ಬರ ಊಟಕ್ಕೆ ಸಾಕಾಗುತ್ತದೆ. ನಾನು ಒಬ್ಬನೇ ಇದ್ದುದರಿಂದ ಇಷ್ಟು ಪ್ರಮಾಣದ ಸಾರು ಮಧ್ಯಾನ್ಹ ಮತ್ತು ರಾತ್ರಿ ಊಟಕ್ಕೆ ಸಾಕಷ್ಟಾಯಿತು.



Click it and Unblock the Notifications