Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆ ಆರೋಗ್ಯ: ಸವಿಯಿರಿ ನಿಂಬೆಕಾಯಿ ಸಾರು
ನಿಂಬೆಕಾಯಿ/ನಿಂಬೆ ಹಣ್ಣಿನ ಬಳಕೆ ದಿನನಿತ್ಯ ಅಡುಗೆ ಮನೆಯಲ್ಲಿ ಇದ್ದದ್ದೇ. ಆದರೆ ನಿಂಬೆಯ ಉಪಯೋಗವೂ ಅಷ್ಟೇ ಚೈತನ್ಯದಾಯಕ. ನಿಂಬೆಕಾಯಿ ಸಾರು, ಯಾವುದೇ ಸೂಪ್ ಗೂ ಕಮ್ಮಿಯಿಲ್ಲ. ಸೂಪ್ ಎಂದರೇನು ಎಂದು ತಿಳಿಯೋ ಮೊದಲು ನಾವೆಲ್ಲಾ, ನಿಂಬೆ ಸಾರು, ಹುಣಸೆ ಸಾರು ಮುಂತಾದ ತಿಳಿ ಸಾರುಗಳನ್ನು ಮಾಡಿ ಲೋಟಗಟ್ಟಲೇ ಹೀರಿದ್ದು ಉಂಟು.ದಿನೇ ಅದೇ ತಿಳಿಬೇಳೆ ಸಾರು ಎನ್ನುವವರು ಸುಲಭವಾಗಿ ನಿಂಬೆಸಾರು ಮಾಡಿ ಸವಿಯಬಹುದು.ನಾಲಗೆ ರುಚಿ ಕೆಟ್ಟವರಿಗೆ, ಕೆಮ್ಮು ದಮ್ಮು, ಶೀತ ,ಉಷ್ಣ ಎನ್ನುವವರಿಗೆಲ್ಲಾ ನಿಂಬೆ ಸಾರು ರಾಮಬಾಣ.
ಮನಸ್ವಿನಿ. ನಾರಾವಿ
ತಯಾರಿಸಲು ಬೇಕಾದ ಸಾಮಾಗ್ರಿ:
ನಿಂಬೆ ಹಣ್ಣು : 3 ದೊಡ್ಡ ಗಾತ್ರದ್ದು
ತೊಗರಿಬೇಳೆ:1 ಬಟ್ಟಲು
ಗೂದೆ ಹಣ್ಣು(Tomato):ಹಣ್ಣಾಗಿರೋದು 2
ಹಸಿಮೆನಸಿನಕಾಯಿ: 2
ಕೆಂಪು ಒಣಮೆಣಸಿನ ಕಾಯಿ :3
ಕಡಲೇಬೇಳೆ :1 ಚಮಚ
ಕೊತ್ತಂಬರಿಬೀಜ(ಧನಿಯ):1 ಚಮಚ
ಶುಂಠಿ ರಸ : 1 ಟೀ ಚಮಚ
ಕಡ್ಲೇಕಾಯಿ ಎಣ್ಣೆ ಒಗ್ಗರಣೆಗೆ
ಜೀರಿಗೆ :ಕಾಲು ಚಮಚ
ಮೆಣಸು: ಕಾಲು ಚಮಚ
ಅರಿಶಿನ: ಕಾಲು ಚಮಚ
ಸಾಸಿವೆ: ಕಾಲು ಚಮಚ
ಇಂಗು, ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು ಎಲೆ,
ಮಾಡುವ ವಿಧಾನ:
ಶುದ್ಧವಾದ ನೀರಿಗೆ ತೊಗರಿಬೇಳೆ ಯನ್ನು ಹಾಕಿ ಬೇಯಿಸಿ. ಬೇಯಿಸುವಾಗ ಚಿಟಿಕೆ ಅರಿಶಿನ ಹಾಕಿ,ಚೆನ್ನಾಗಿ ತಿರುವುತ್ತಾ ಇರಿ, ಬೇಳೆ ಕರಗಿದ ಮೇಲೆ ಒಲೆಯಿಂದ ಕೆಳಗಿಸಿ.
ಮಸಾಲೆ ಪುಡಿ ತಯಾರಿಕೆ : ಹುರಿದ ಕೆಂಪು ಮೆಣಸಿನಕಾಯಿ, ಕೊತ್ತಂಬರೀಬೀಜ, ಕಡಲೇ ಬೇಳೆ, ಮೆಣಸು, ಜೀರಿಗೆ, ಇಂಗುಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ,
ಪಾತ್ರೆಯಲ್ಲಿ ಎರಡು ಬಟ್ಟಲು ನೀರು ಕುದಿಸಿ ಅದಕ್ಕೆ ಅರಿಶಿನ ,ಕತ್ತರಿಸಿದ ಟೊಮ್ಯಾಟೊ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ, ಕೆಲ ನಿಮಿಷಗಳ ಕಾಲ ಬೇಯಿಸಿ. ನಂತರ ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಸ್ವಲ್ಪ ಹೊತ್ತಿನ ಬಳಿಕ ಬೇಯಿಸಿಟ್ಟ ಬೇಳೆ ಸೇರಿಸಿ. ಬೇಕಿದ್ದರೆ ಸ್ವಲ್ಪ ಹೆಚ್ಚಿಗೆ ನೀರನ್ನು ಬೆರಸಿ.ಚೆನ್ನಾಗಿ ಕುದಿಸಿ.
ನಿಂಬೆರಸ ತೆಗೆದಿಟ್ಟುಕೊಂಡು ಅದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.ಮೇಲಿನ ಮಿಶ್ರಣಕ್ಕೆ ಒಗ್ಗರಣೆ ಜತೆ ಬೆರೆತ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕದಡಿ, ಕುದಿಸಿರಿ. ನಿಂಬೆ ಸಾರು ತಯಾರಾಗುತ್ತದೆ. ಒಗ್ಗರಣೆ ಸಮಯದಲ್ಲಿ ಶುಂಠಿರಸವನ್ನು ಬೆರಸಿ ಹೆಚ್ಚಿನ ಸ್ವಾದವನ್ನು ಪಡೆಯಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications


