Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಅಡುಗೆ ಆರೋಗ್ಯ: ಸವಿಯಿರಿ ನಿಂಬೆಕಾಯಿ ಸಾರು
ನಿಂಬೆಕಾಯಿ/ನಿಂಬೆ ಹಣ್ಣಿನ ಬಳಕೆ ದಿನನಿತ್ಯ ಅಡುಗೆ ಮನೆಯಲ್ಲಿ ಇದ್ದದ್ದೇ. ಆದರೆ ನಿಂಬೆಯ ಉಪಯೋಗವೂ ಅಷ್ಟೇ ಚೈತನ್ಯದಾಯಕ. ನಿಂಬೆಕಾಯಿ ಸಾರು, ಯಾವುದೇ ಸೂಪ್ ಗೂ ಕಮ್ಮಿಯಿಲ್ಲ. ಸೂಪ್ ಎಂದರೇನು ಎಂದು ತಿಳಿಯೋ ಮೊದಲು ನಾವೆಲ್ಲಾ, ನಿಂಬೆ ಸಾರು, ಹುಣಸೆ ಸಾರು ಮುಂತಾದ ತಿಳಿ ಸಾರುಗಳನ್ನು ಮಾಡಿ ಲೋಟಗಟ್ಟಲೇ ಹೀರಿದ್ದು ಉಂಟು.ದಿನೇ ಅದೇ ತಿಳಿಬೇಳೆ ಸಾರು ಎನ್ನುವವರು ಸುಲಭವಾಗಿ ನಿಂಬೆಸಾರು ಮಾಡಿ ಸವಿಯಬಹುದು.ನಾಲಗೆ ರುಚಿ ಕೆಟ್ಟವರಿಗೆ, ಕೆಮ್ಮು ದಮ್ಮು, ಶೀತ ,ಉಷ್ಣ ಎನ್ನುವವರಿಗೆಲ್ಲಾ ನಿಂಬೆ ಸಾರು ರಾಮಬಾಣ.
ಮನಸ್ವಿನಿ. ನಾರಾವಿ
ತಯಾರಿಸಲು ಬೇಕಾದ ಸಾಮಾಗ್ರಿ:
ನಿಂಬೆ ಹಣ್ಣು : 3 ದೊಡ್ಡ ಗಾತ್ರದ್ದು
ತೊಗರಿಬೇಳೆ:1 ಬಟ್ಟಲು
ಗೂದೆ ಹಣ್ಣು(Tomato):ಹಣ್ಣಾಗಿರೋದು 2
ಹಸಿಮೆನಸಿನಕಾಯಿ: 2
ಕೆಂಪು ಒಣಮೆಣಸಿನ ಕಾಯಿ :3
ಕಡಲೇಬೇಳೆ :1 ಚಮಚ
ಕೊತ್ತಂಬರಿಬೀಜ(ಧನಿಯ):1 ಚಮಚ
ಶುಂಠಿ ರಸ : 1 ಟೀ ಚಮಚ
ಕಡ್ಲೇಕಾಯಿ ಎಣ್ಣೆ ಒಗ್ಗರಣೆಗೆ
ಜೀರಿಗೆ :ಕಾಲು ಚಮಚ
ಮೆಣಸು: ಕಾಲು ಚಮಚ
ಅರಿಶಿನ: ಕಾಲು ಚಮಚ
ಸಾಸಿವೆ: ಕಾಲು ಚಮಚ
ಇಂಗು, ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು ಎಲೆ,
ಮಾಡುವ ವಿಧಾನ:
ಶುದ್ಧವಾದ ನೀರಿಗೆ ತೊಗರಿಬೇಳೆ ಯನ್ನು ಹಾಕಿ ಬೇಯಿಸಿ. ಬೇಯಿಸುವಾಗ ಚಿಟಿಕೆ ಅರಿಶಿನ ಹಾಕಿ,ಚೆನ್ನಾಗಿ ತಿರುವುತ್ತಾ ಇರಿ, ಬೇಳೆ ಕರಗಿದ ಮೇಲೆ ಒಲೆಯಿಂದ ಕೆಳಗಿಸಿ.
ಮಸಾಲೆ ಪುಡಿ ತಯಾರಿಕೆ : ಹುರಿದ ಕೆಂಪು ಮೆಣಸಿನಕಾಯಿ, ಕೊತ್ತಂಬರೀಬೀಜ, ಕಡಲೇ ಬೇಳೆ, ಮೆಣಸು, ಜೀರಿಗೆ, ಇಂಗುಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ,
ಪಾತ್ರೆಯಲ್ಲಿ ಎರಡು ಬಟ್ಟಲು ನೀರು ಕುದಿಸಿ ಅದಕ್ಕೆ ಅರಿಶಿನ ,ಕತ್ತರಿಸಿದ ಟೊಮ್ಯಾಟೊ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ, ಕೆಲ ನಿಮಿಷಗಳ ಕಾಲ ಬೇಯಿಸಿ. ನಂತರ ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಸ್ವಲ್ಪ ಹೊತ್ತಿನ ಬಳಿಕ ಬೇಯಿಸಿಟ್ಟ ಬೇಳೆ ಸೇರಿಸಿ. ಬೇಕಿದ್ದರೆ ಸ್ವಲ್ಪ ಹೆಚ್ಚಿಗೆ ನೀರನ್ನು ಬೆರಸಿ.ಚೆನ್ನಾಗಿ ಕುದಿಸಿ.
ನಿಂಬೆರಸ ತೆಗೆದಿಟ್ಟುಕೊಂಡು ಅದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.ಮೇಲಿನ ಮಿಶ್ರಣಕ್ಕೆ ಒಗ್ಗರಣೆ ಜತೆ ಬೆರೆತ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕದಡಿ, ಕುದಿಸಿರಿ. ನಿಂಬೆ ಸಾರು ತಯಾರಾಗುತ್ತದೆ. ಒಗ್ಗರಣೆ ಸಮಯದಲ್ಲಿ ಶುಂಠಿರಸವನ್ನು ಬೆರಸಿ ಹೆಚ್ಚಿನ ಸ್ವಾದವನ್ನು ಪಡೆಯಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications