Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)

*ಮನಸ್ವಿನಿ,ನಾರಾವಿ
ಬೇಕಾದ ಸಾಮಾಗ್ರಿಗಳು:
ಜೀರಿಗೆ -3/4 ಟೀ ಚಮಚ
ಪುದೀನ ಎಲೆಗಳು 3 ರಿಂದ ನಾಲ್ಕು
ಸಾಸಿವೆ -1 ಟೀ ಚಮಚ
ಹಸಿಮೆಣಸಿನಕಾಯಿ -ಸಣ್ಣಗಾತ್ರ8 / ದೊಡ್ಡದು 5
ಇಂಗು -1/4 ಟೀ ಚಮಚ
ತೆಂಗಿನಕಾಯಿ ತುರಿ -1 ಬಟ್ಟಲು
ರುಚಿಕೆ ತಕ್ಕಷ್ಟು ಉಪ್ಪು
ಗಟ್ಟಿ ಮೊಸರು 2 ಕಪ್
ಒಗ್ಗರಣೆಗೆ:
ಎಣ್ಣೆ -1 ಟೀ ಚಮಚ
ಸಾಸಿವೆ -1 ಟೀ ಚಮಚ
ತರಕಾರಿ -ಸೌತೆಕಾಯಿ ಅಥವಾ ಪಡವಲಕಾಯಿ
ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ ಬಳಸಬಹುದು
ಮಾಡುವ ವಿಧಾನ:
ಹಸಿ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ಕೊಚ್ಚಿ ಹಾಕಿ. ಪಡವಲಕಾಯಿ ಬಳಸಿದರೆ ಅದನ್ನು ಸಣ್ಣಗೆ ಹೆಚ್ಚಿ ಎಣ್ಣೆ ಸಾಸಿವೆ ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ. ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಉಪ್ಪು, ಇಂಗು, ತೆಂಗಿನ ತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮೊಸರಿಗೆ ಎಲ್ಲಾ ಮಿಶ್ರಣವನ್ನು, ತರಕಾರಿಯನ್ನು ಹಾಕಿ ಸರಿಯಾಗಿ ಬೆರೆಸಿ. ಒಗ್ಗರಣೆ ಬೇಡವಾದರೆ ಮೊಸರಿಗೆ ಹಾಕಿದ ಮಿಶ್ರಣವನ್ನು ಫ್ರೀಜರ್ ನಲ್ಲಿಟ್ಟು ನಂತರ ಬಳಸಬಹುದು. ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಬಡಿಸಬಹುದು. ಪುದೀನ ಎಲೆ ,ಒಗ್ಗರಣೆ ಹಾಕುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ತೆಂಗಿನ ತುರಿ ಬದಲು ತೆಂಗಿನ ಹಾಲನ್ನು ಸಹ ಬಳಸಬಹುದು.



Click it and Unblock the Notifications