Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)

*ಮನಸ್ವಿನಿ,ನಾರಾವಿ
ಬೇಕಾದ ಸಾಮಾಗ್ರಿಗಳು:
ಜೀರಿಗೆ -3/4 ಟೀ ಚಮಚ
ಪುದೀನ ಎಲೆಗಳು 3 ರಿಂದ ನಾಲ್ಕು
ಸಾಸಿವೆ -1 ಟೀ ಚಮಚ
ಹಸಿಮೆಣಸಿನಕಾಯಿ -ಸಣ್ಣಗಾತ್ರ8 / ದೊಡ್ಡದು 5
ಇಂಗು -1/4 ಟೀ ಚಮಚ
ತೆಂಗಿನಕಾಯಿ ತುರಿ -1 ಬಟ್ಟಲು
ರುಚಿಕೆ ತಕ್ಕಷ್ಟು ಉಪ್ಪು
ಗಟ್ಟಿ ಮೊಸರು 2 ಕಪ್
ಒಗ್ಗರಣೆಗೆ:
ಎಣ್ಣೆ -1 ಟೀ ಚಮಚ
ಸಾಸಿವೆ -1 ಟೀ ಚಮಚ
ತರಕಾರಿ -ಸೌತೆಕಾಯಿ ಅಥವಾ ಪಡವಲಕಾಯಿ
ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ ಬಳಸಬಹುದು
ಮಾಡುವ ವಿಧಾನ:
ಹಸಿ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ಕೊಚ್ಚಿ ಹಾಕಿ. ಪಡವಲಕಾಯಿ ಬಳಸಿದರೆ ಅದನ್ನು ಸಣ್ಣಗೆ ಹೆಚ್ಚಿ ಎಣ್ಣೆ ಸಾಸಿವೆ ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ. ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಉಪ್ಪು, ಇಂಗು, ತೆಂಗಿನ ತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮೊಸರಿಗೆ ಎಲ್ಲಾ ಮಿಶ್ರಣವನ್ನು, ತರಕಾರಿಯನ್ನು ಹಾಕಿ ಸರಿಯಾಗಿ ಬೆರೆಸಿ. ಒಗ್ಗರಣೆ ಬೇಡವಾದರೆ ಮೊಸರಿಗೆ ಹಾಕಿದ ಮಿಶ್ರಣವನ್ನು ಫ್ರೀಜರ್ ನಲ್ಲಿಟ್ಟು ನಂತರ ಬಳಸಬಹುದು. ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಬಡಿಸಬಹುದು. ಪುದೀನ ಎಲೆ ,ಒಗ್ಗರಣೆ ಹಾಕುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ತೆಂಗಿನ ತುರಿ ಬದಲು ತೆಂಗಿನ ಹಾಲನ್ನು ಸಹ ಬಳಸಬಹುದು.



Click it and Unblock the Notifications











