Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತಣ್ಣನೆಯ ಸೌತೆಕಾಯಿ ಸಾಸಿವೆ (ರಾಯತ)

*ಮನಸ್ವಿನಿ,ನಾರಾವಿ
ಬೇಕಾದ ಸಾಮಾಗ್ರಿಗಳು:
ಜೀರಿಗೆ -3/4 ಟೀ ಚಮಚ
ಪುದೀನ ಎಲೆಗಳು 3 ರಿಂದ ನಾಲ್ಕು
ಸಾಸಿವೆ -1 ಟೀ ಚಮಚ
ಹಸಿಮೆಣಸಿನಕಾಯಿ -ಸಣ್ಣಗಾತ್ರ8 / ದೊಡ್ಡದು 5
ಇಂಗು -1/4 ಟೀ ಚಮಚ
ತೆಂಗಿನಕಾಯಿ ತುರಿ -1 ಬಟ್ಟಲು
ರುಚಿಕೆ ತಕ್ಕಷ್ಟು ಉಪ್ಪು
ಗಟ್ಟಿ ಮೊಸರು 2 ಕಪ್
ಒಗ್ಗರಣೆಗೆ:
ಎಣ್ಣೆ -1 ಟೀ ಚಮಚ
ಸಾಸಿವೆ -1 ಟೀ ಚಮಚ
ತರಕಾರಿ -ಸೌತೆಕಾಯಿ ಅಥವಾ ಪಡವಲಕಾಯಿ
ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ ಬಳಸಬಹುದು
ಮಾಡುವ ವಿಧಾನ:
ಹಸಿ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ಕೊಚ್ಚಿ ಹಾಕಿ. ಪಡವಲಕಾಯಿ ಬಳಸಿದರೆ ಅದನ್ನು ಸಣ್ಣಗೆ ಹೆಚ್ಚಿ ಎಣ್ಣೆ ಸಾಸಿವೆ ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ. ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಉಪ್ಪು, ಇಂಗು, ತೆಂಗಿನ ತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮೊಸರಿಗೆ ಎಲ್ಲಾ ಮಿಶ್ರಣವನ್ನು, ತರಕಾರಿಯನ್ನು ಹಾಕಿ ಸರಿಯಾಗಿ ಬೆರೆಸಿ. ಒಗ್ಗರಣೆ ಬೇಡವಾದರೆ ಮೊಸರಿಗೆ ಹಾಕಿದ ಮಿಶ್ರಣವನ್ನು ಫ್ರೀಜರ್ ನಲ್ಲಿಟ್ಟು ನಂತರ ಬಳಸಬಹುದು. ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಬಡಿಸಬಹುದು. ಪುದೀನ ಎಲೆ ,ಒಗ್ಗರಣೆ ಹಾಕುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ತೆಂಗಿನ ತುರಿ ಬದಲು ತೆಂಗಿನ ಹಾಲನ್ನು ಸಹ ಬಳಸಬಹುದು.



Click it and Unblock the Notifications
