Just In
- 1 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 1 hr ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 5 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- 14 hrs ago ದಿನ ಭವಿಷ್ಯ ಏಪ್ರಿಲ್ 25, 2024: ಗುರುವಾರ ಈ 4 ರಾಶಿಯವರಿಗೆ ತುಂಬಾನೇ ಶುಭ ದಿನ
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಸಂತ ಋತುವಿನಲ್ಲಿ ತಿನ್ನಿ ಕಳಲೆ ಪಲ್ಯ
ಏನಿದು ಕಳಲೆ?
ಎಲ್ಲರಿಗೂ ಬಿದಿರು ಬಗ್ಗೆ ಗೊತ್ತೇ ಇದೆ. ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು. ಇದು ಮಲೆನಾಡಿನಲಿ ಮಳೆಗಾಲದ ಸಮಯದಲಿ ಸಿಗುವ ಎಳೆ ಬಿದಿರು ವಿವಿಧ ಖಾದ್ಯಗಳು. ಬಾಂಬೂ ಬಲಿತ ಬಿದಿರು ಬಡಿಯಲು, ಕಟ್ಟಲು, ಎಳೆ ಬಿದಿರು ತಿನ್ನಲು....ಅಹಾ ಬಿದಿರೇ!
ವರ್ಷ ಋತುವಿನ ಆಗಮನ, ಬಿದಿರಿಗೆ ಬಿಡುವಿಲ್ಲದ ಕೆಲಸ ತನ್ನ ವಂಶವಾಹಿನಿಯ ವೃದ್ಧಿ. ಬಿದಿರಿನ ಬುಡದಲ್ಲಿನ ಗಡ್ಡೆಯ ಭಾಗದಲ್ಲಿ ಬರುವ ಮೊಳಕೆಗೆ "ಕಳಲೆ" ಎಂದು ಹೆಸರು. ಬಿದಿರಿನಿಂದ ಬೇರ್ಪಡಿಸಿದ ಕಳಲೆಯ ಕವಚ ತೆಗೆದಾಗ ಬುಡದಲಿ ಸಿಗುವುದು ಬಿಳಿಯ ತಿರುಳು ಕಳಲೆ- ತುಳುವಲ್ಲಿ ಕಣಿಲೆ. ಇದನು ಹಾಗೆ ಉಪಯೋಗಿಸಿದಲ್ಲಿ ವಿಷಕಾರಿ. ಈ ಕಳಲೆಯನು ದಿನವೂ ನೀರು ಬದಲಾಯಿಸುತ್ತಾ 3 ದಿನ ನೀರಲ್ಲಿ ಮುಳುಗಿಸಿಟ್ಟು ಆಮೇಲೆ ಅದನು ತರಕಾರಿಯಂತೆ ಉಪಯೋಗಿಸಬೇಕು. ಶ್ರಾವಣದಲಿ ದೊರಕುವ ಕಳಲೆ, ಭಾದ್ರಪದದಲಿ ಕೊಯ್ಯುವುದು ನಿಷಿದ್ದ. ನೋಡಿ, ಬಿದಿರಿನ ಸಂತತಿ ಉಳಿಯಬೇಕು ಎಂಬ ತಂತ್ರವೂ ಅಡಗಿದೆ ಅದರಲ್ಲಿ.
ಬಿದಿರು ಘಟ್ಟಪ್ರದೇಶ, ಮಲೆನಾಡು ಹಾಗೂ ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ. ಇವು ರೈತನ ಹೊಲದ ರಕ್ಷಣೆಗೂ ಸೈ. ಕಳಲೆ ಖನಿಜ, ಲವಣ, ಸುಣ್ಣದ ಅಂಶ ಹೊಂದಿದೆ. ಇದೀಗ ಅರಣ್ಯ ಇಲಾಖೆ ಬಿದಿರನು ಕಡಿಯದಂತೆ ನಿಷೇಧಿಸಿದೆ. ವರುಷಕ್ಕೊಮ್ಮೆ ಆದರೂ ಆರೋಗ್ಯದ ದೃಷ್ಟಿಯಿಂದ ಕಳಲೆ ತಿನ್ನಲೇಬೇಕಂತೆ. ಕಳಲೆಯಲಿ ಬರೀ ಪಲ್ಯವೊಂದೇ ಅಲ್ಲ ಅದು ಬಜೆ, ಚಿತ್ರಾನ್ನ, ಸಾಂಬಾರಿಗೂ ಸೈ.
ಊರು ಕಳಲೆ:
ಇದೊಂದು ಒಂದು ಪುಟ್ಟ ಗ್ರಾಮ. ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಐದು ಮೈಲು ದೂರದಲ್ಲಿದೆ. ಇಲ್ಲಿ ಲಕ್ಷ್ಮೀಕಾಂತ ಸ್ವಾಮಿಯ ದೇಗುಲವಿದೆ. ಈ ಲಕ್ಷ್ಮೀಕಾಂತ ಕೂಡ ಬಿದಿರು ಬೆಳೆಗಳ ಮಧ್ಯೆ ದೊರಕಿದನಂತೆ ಅದಕ್ಕೆ ಆ ಸ್ಥಳಕ್ಕೆ "ಕಳಲೆ" ಎಂದು ಹೆಸರಾಯಿತಂತೆ. ಕಳಲೆ ಮನೆತನದ ದಳವಾಯಿಗಳು ಮೈಸೂರು ಹಾಗು ವಿಜಯನಗರ ಸಂಸ್ಥಾನಗಳ ಆಳ್ವಿಕೆಯಲಿ ಪ್ರಮುಖ ಪಾತ್ರ ವಹಿಸಿದವರು.
ಇಷ್ಟೆಲ್ಲಾ ಹೇಳಿ ರೆಸಿಪಿ ಹೇಳದಿದ್ದರೆ ಹೇಗೆ?
ಸಣ್ಣಗೆ
ಹೆಚ್ಚಿದ
ಕಳಲೆ
:
3
ಕಪ್
ಎಣ್ಣೆ
:
2
ಚಮಚ
ಒಗ್ಗರಣೆ
ಸಾಮಾಗ್ರಿ
:
ಸಾಸಿವೆ,
ಜೀರಿಗೆ,
ಅರಿಶಿಣ,
ಉದ್ದಿನಬೇಳೆ
ತಲಾ
ಒಂದು
ಚಮಚ
ಕೆಂಪು
ಮೆಣಸಿನಕಾಯಿ
:
5
ಬೆಲ್ಲ/ಸಕ್ಕರೆ
ಸ್ವಲ್ಪ(ಇಷ್ಟವಿದ್ದಲ್ಲಿ)
ಗೊತ್ತೇ
ಇದೆ
ರುಚಿಗೆ
ತಕ್ಕಷ್ಟು
ಉಪ್ಪು
ತಯಾರಿಸುವ ವಿಧಾನ :
ಮೇಲೆ ತಿಳಿಸಿದಂತೆ ಕಳಲೆಯನ್ನು ಮೂರು ದಿನ ನೀರಲ್ಲಿ ನೆನೆಸಿಡಿ. ನಂತರ ಕಳಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಕಳಲೆ ಸೇರಿಸಿ, ಬೆಲ್ಲ, ಉಪ್ಪು ಹಾಕಿ, ಕಡಾಯಿಯನ್ನು ಮುಚ್ಚಿಟ್ಟು ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಕಳಲೆ ಪಲ್ಯ ತಯಾರು.
ನಾಮವೊಂದೆ...ರೂಪ ಹಲವು....ನಿಮಗೂ ತಿಳಿದಿದ್ದಲ್ಲಿ ಬರೆಯಿರಿ! ಎಲ್ಲರಿಗೂ ತಿಳಿಸಿ.