Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ವಸಂತ ಋತುವಿನಲ್ಲಿ ತಿನ್ನಿ ಕಳಲೆ ಪಲ್ಯ

ಏನಿದು ಕಳಲೆ?
ಎಲ್ಲರಿಗೂ ಬಿದಿರು ಬಗ್ಗೆ ಗೊತ್ತೇ ಇದೆ. ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು. ಇದು ಮಲೆನಾಡಿನಲಿ ಮಳೆಗಾಲದ ಸಮಯದಲಿ ಸಿಗುವ ಎಳೆ ಬಿದಿರು ವಿವಿಧ ಖಾದ್ಯಗಳು. ಬಾಂಬೂ ಬಲಿತ ಬಿದಿರು ಬಡಿಯಲು, ಕಟ್ಟಲು, ಎಳೆ ಬಿದಿರು ತಿನ್ನಲು....ಅಹಾ ಬಿದಿರೇ!
ವರ್ಷ ಋತುವಿನ ಆಗಮನ, ಬಿದಿರಿಗೆ ಬಿಡುವಿಲ್ಲದ ಕೆಲಸ ತನ್ನ ವಂಶವಾಹಿನಿಯ ವೃದ್ಧಿ. ಬಿದಿರಿನ ಬುಡದಲ್ಲಿನ ಗಡ್ಡೆಯ ಭಾಗದಲ್ಲಿ ಬರುವ ಮೊಳಕೆಗೆ "ಕಳಲೆ" ಎಂದು ಹೆಸರು. ಬಿದಿರಿನಿಂದ ಬೇರ್ಪಡಿಸಿದ ಕಳಲೆಯ ಕವಚ ತೆಗೆದಾಗ ಬುಡದಲಿ ಸಿಗುವುದು ಬಿಳಿಯ ತಿರುಳು ಕಳಲೆ- ತುಳುವಲ್ಲಿ ಕಣಿಲೆ. ಇದನು ಹಾಗೆ ಉಪಯೋಗಿಸಿದಲ್ಲಿ ವಿಷಕಾರಿ. ಈ ಕಳಲೆಯನು ದಿನವೂ ನೀರು ಬದಲಾಯಿಸುತ್ತಾ 3 ದಿನ ನೀರಲ್ಲಿ ಮುಳುಗಿಸಿಟ್ಟು ಆಮೇಲೆ ಅದನು ತರಕಾರಿಯಂತೆ ಉಪಯೋಗಿಸಬೇಕು. ಶ್ರಾವಣದಲಿ ದೊರಕುವ ಕಳಲೆ, ಭಾದ್ರಪದದಲಿ ಕೊಯ್ಯುವುದು ನಿಷಿದ್ದ. ನೋಡಿ, ಬಿದಿರಿನ ಸಂತತಿ ಉಳಿಯಬೇಕು ಎಂಬ ತಂತ್ರವೂ ಅಡಗಿದೆ ಅದರಲ್ಲಿ.
ಬಿದಿರು ಘಟ್ಟಪ್ರದೇಶ, ಮಲೆನಾಡು ಹಾಗೂ ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ. ಇವು ರೈತನ ಹೊಲದ ರಕ್ಷಣೆಗೂ ಸೈ. ಕಳಲೆ ಖನಿಜ, ಲವಣ, ಸುಣ್ಣದ ಅಂಶ ಹೊಂದಿದೆ. ಇದೀಗ ಅರಣ್ಯ ಇಲಾಖೆ ಬಿದಿರನು ಕಡಿಯದಂತೆ ನಿಷೇಧಿಸಿದೆ. ವರುಷಕ್ಕೊಮ್ಮೆ ಆದರೂ ಆರೋಗ್ಯದ ದೃಷ್ಟಿಯಿಂದ ಕಳಲೆ ತಿನ್ನಲೇಬೇಕಂತೆ. ಕಳಲೆಯಲಿ ಬರೀ ಪಲ್ಯವೊಂದೇ ಅಲ್ಲ ಅದು ಬಜೆ, ಚಿತ್ರಾನ್ನ, ಸಾಂಬಾರಿಗೂ ಸೈ.
ಊರು ಕಳಲೆ:
ಇದೊಂದು ಒಂದು ಪುಟ್ಟ ಗ್ರಾಮ. ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಐದು ಮೈಲು ದೂರದಲ್ಲಿದೆ. ಇಲ್ಲಿ ಲಕ್ಷ್ಮೀಕಾಂತ ಸ್ವಾಮಿಯ ದೇಗುಲವಿದೆ. ಈ ಲಕ್ಷ್ಮೀಕಾಂತ ಕೂಡ ಬಿದಿರು ಬೆಳೆಗಳ ಮಧ್ಯೆ ದೊರಕಿದನಂತೆ ಅದಕ್ಕೆ ಆ ಸ್ಥಳಕ್ಕೆ "ಕಳಲೆ" ಎಂದು ಹೆಸರಾಯಿತಂತೆ. ಕಳಲೆ ಮನೆತನದ ದಳವಾಯಿಗಳು ಮೈಸೂರು ಹಾಗು ವಿಜಯನಗರ ಸಂಸ್ಥಾನಗಳ ಆಳ್ವಿಕೆಯಲಿ ಪ್ರಮುಖ ಪಾತ್ರ ವಹಿಸಿದವರು.
ಇಷ್ಟೆಲ್ಲಾ ಹೇಳಿ ರೆಸಿಪಿ ಹೇಳದಿದ್ದರೆ ಹೇಗೆ?
ಸಣ್ಣಗೆ ಹೆಚ್ಚಿದ ಕಳಲೆ : 3 ಕಪ್
ಎಣ್ಣೆ : 2 ಚಮಚ
ಒಗ್ಗರಣೆ ಸಾಮಾಗ್ರಿ : ಸಾಸಿವೆ, ಜೀರಿಗೆ, ಅರಿಶಿಣ, ಉದ್ದಿನಬೇಳೆ ತಲಾ ಒಂದು ಚಮಚ
ಕೆಂಪು ಮೆಣಸಿನಕಾಯಿ : 5
ಬೆಲ್ಲ/ಸಕ್ಕರೆ ಸ್ವಲ್ಪ(ಇಷ್ಟವಿದ್ದಲ್ಲಿ)
ಗೊತ್ತೇ ಇದೆ ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಮೇಲೆ ತಿಳಿಸಿದಂತೆ ಕಳಲೆಯನ್ನು ಮೂರು ದಿನ ನೀರಲ್ಲಿ ನೆನೆಸಿಡಿ. ನಂತರ ಕಳಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಕಳಲೆ ಸೇರಿಸಿ, ಬೆಲ್ಲ, ಉಪ್ಪು ಹಾಕಿ, ಕಡಾಯಿಯನ್ನು ಮುಚ್ಚಿಟ್ಟು ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಕಳಲೆ ಪಲ್ಯ ತಯಾರು.
ನಾಮವೊಂದೆ...ರೂಪ ಹಲವು....ನಿಮಗೂ ತಿಳಿದಿದ್ದಲ್ಲಿ ಬರೆಯಿರಿ! ಎಲ್ಲರಿಗೂ ತಿಳಿಸಿ.



Click it and Unblock the Notifications