Just In
Don't Miss
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- News
ಮಂಜಿನ ದಟ್ಟಣೆಯಿಂದ ಅಪಘಾತ; ಪಶ್ಚಿಮ ಬಂಗಾಳದಲ್ಲಿ 13 ಮಂದಿ ಸಾವು
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಓಣಂ ಸ್ಪೆಷೆಲ್ ಅಡುಗೆ-ಕೂಟುಕರಿ
ಮಲಯಾಳಿಗಳ ಹಬ್ಬವಾದ ಓಣಂಗೆ ಅವೆಲ್, ಕೂಟುಕರಿ, ಎರಿಷೇರಿ ಈ ರೀತಿಯ ಅಡುಗೆಗಳನ್ನು ಮಾಡಿದರೆ ಮಾತ್ರ 'ಓಣಂ ಸದ್ಯ' ಅಂದರೆ ಓಣಂ ಸ್ಪೆಷೆಲ್ ಅಡುಗೆ ಎಂದು ಹೇಳಲು ಸಾಧ್ಯ. ಓಣಂಗೆ ತಯಾರಿಸುವ ಪ್ರಮುಖ ಅಡುಗೆಗಳಲ್ಲಿ ಒಂದಾದ ಕೂಟುಕರಿಯ ರುಚಿ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
ಕಡಲೆ 1/2 ಕಪ್
ತರಕಾರಿ ಒಂದು ಕಪ್
ತೆಂಗಿನ ತುರಿ 2 ಕಪ್
ಕೊತ್ತಂಬರಿ ಪುಡಿ ಒಂದು ಚಮಚ
ಮೆಂತೆ 1/4 ಚಮಚ
ಒಣ ಕೆಂಪು ಮೆಣಸು 5-6
ಸಾಸಿವೆ 1/4 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ 1/4ಚಮಚ
ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
1. ಕಡಲೆಯನ್ನು ನೀರಿನಲ್ಲಿ ಒಂದು ರಾತ್ರಿ ನೆನೆ ಹಾಕಬೇಕು.
2. ನಂತರ ಕಡಲೆ ಮತ್ತು ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
3. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ತೆಂಗಿನ ಕಾಯಿ ತುರಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅದು ಕಂದು ಬಣ್ಣ ಬರುವಾಗ ಒಂದು ಪಾತ್ರೆಯಲ್ಲಿ ಹಾಕಿಡಬೇಕು.
4. ನಂತರ ಅದೇ ಬಾಣಲೆಯಲ್ಲಿ ಕೊತ್ತಂಬರಿ ಪುಡಿ, ಮೆಂತೆ, ಒಣ ಕೆಂಪು ಮೆಣಸು, ಅರಿಶಿಣ ಪುಡಿ, ಜೀರಿಗೆ ಹಾಕಿ ಹುರಿಯಬೇಕು. ನಂತರ ಹುರಿದ ತೆಂಗಿನ ಕಾಯಿ ತುರಿ ಮತ್ತು ಮಸಾಲೆ ಮಿಶ್ರಣಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ನುಣ್ಣನೆ ಅರೆಯಬೇಕು.
5. ನಂತರ ಅರೆದ ಮಸಾಲೆ ಪದಾರ್ಥವನ್ನು ಬೇಯಿಸಿದ ತರಕಾರಿ ಜೊತೆ ಹಾಕಿ ಮಿಶ್ರಣ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು( ಮಿಶ್ರಣ ಗಟ್ಟಿಯಾಗಿರಬೇಕು).
6. ಈಗ ಒಗ್ಗರಣೆ ಪಾತ್ರೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆಯನ್ನು ಕೂಟು ಕರಿಗೆ ಹಾಕಿದರೆ ಸವೆಯಲು ರುಚಿಕರವಾದ ಕೂಟು ಕರಿ ರೆಡಿ.