Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

ಏನಾದರು ಮಾಡುತಿರು ಮಂಕುತಿಮ್ಮ ಎಂಬಂತೆ, ಜೆಪಿ ನಗರದ ರಂಗ ಶಂಕರದ ಬಳಿಯಿರುವ 'ಕಡಾಯಿ ಕಾ ಖಾನಾ' ಖಾನಾವಳಿಯ ಮಾಲಿಕ ಪುಟ್ಟರಾಜು ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ, ಈ ಆಫರು ಕೇವಲ 100 ದಿನಗಳ ಕಾಲ ಮಾತ್ರ ಲಭ್ಯವಿರಲಿದೆ. ನಂತರ ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಏನಾದರೂ ಮಾಡಿತಿರಬೇಕಲ್ಲ? ಕಳೆದ ವರ್ಷ ಇದೇ ಪುಟ್ಟರಾಜು ಅವರು ಕಬ್ಬನ್ ಪೇಟೆಯಲ್ಲಿರುವ ತಮ್ಮ ಹೋಟೆಲ್ 'ಬಿರಿಯಾನಿ ಬಜಾರ್'ನಲ್ಲಿ ಒಂದು ರುಪಾಯಿಗೆ ದೋಸೆ ಮತ್ತು ಇಡ್ಲಿಯನ್ನು ಸುಮಾರು ಆರು ತಿಂಗಳ ಕಾಲ ನೀಡಿದ್ದರು. ಗ್ರಾಹಕರ ಸಂತೃಪ್ತಿಯೇ ನಮ್ಮ ತೃಪ್ತಿ ಎಂಬ ಸಿದ್ಧಾಂತಕ್ಕೆ ಪುಟ್ಟರಾಜು ಜೋತು ಬಿದ್ದಿದ್ದಾರೆ.
ಗ್ರಾಹಕರ ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ಪುಟ್ಟರಾಜು ಅವರು ಈಗ ರೋಟಿ, ಚಪಾತಿ, ಕುಲ್ಚಾ, ಪರೋಟಾಗಳನ್ನು 1 ರುಪಾಯಿಗೆ ನೀಡಲು ಮುಂದಾಗಿದ್ದಾರೆ. ಗಮನಿಸಿ, ಇಡ್ಲಿ ಜೊತೆಗೆ ಚಟ್ನಿ ಉಚಿತವಾಗಿ ಸಿಗುವಂತೆ ಇವುಗಳೊಂದಿಗೆ ಪಲ್ಯ ಉಚಿತವಾಗಿ ಸಿಗುವುದಿಲ್ಲ. ಚಪಾತಿಗೆ 1 ರುಪಾಯಿ ಕೊಟ್ಟರೂ ಪಲ್ಯಕ್ಕೆ ಮಾಮೂಲಿ ಬೆಲೆ ತೆತ್ತು ಪಡೆಯಬೇಕು. ಬೆಲೆ ಕಡಿಮೆಯಿದ್ದರೂ ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿಳಾಸ : ಕಡಾಯಿ ಕಾ ಖಜಾನಾ, ನಂ. 40, 2ನೇ ಹಂತ, ಜೆ.ಪಿ. ನಗರ, ಆರ್. ವಿಸಿಟ್ ಡೆಂಟಲ್ ಕಾಲೇಜು ಎದಿರು, ರಂಗ ಶಂಕರದ ಬಳಿ, ಬೆಂಗಳೂರು. ಪುಟ್ಟರಾಜು ಅವರ ಮೊಬೈಲ್ ಸಂಖ್ಯೆ : 99801 54451.



Click it and Unblock the Notifications