Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

ಏನಾದರು ಮಾಡುತಿರು ಮಂಕುತಿಮ್ಮ ಎಂಬಂತೆ, ಜೆಪಿ ನಗರದ ರಂಗ ಶಂಕರದ ಬಳಿಯಿರುವ 'ಕಡಾಯಿ ಕಾ ಖಾನಾ' ಖಾನಾವಳಿಯ ಮಾಲಿಕ ಪುಟ್ಟರಾಜು ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ, ಈ ಆಫರು ಕೇವಲ 100 ದಿನಗಳ ಕಾಲ ಮಾತ್ರ ಲಭ್ಯವಿರಲಿದೆ. ನಂತರ ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಏನಾದರೂ ಮಾಡಿತಿರಬೇಕಲ್ಲ? ಕಳೆದ ವರ್ಷ ಇದೇ ಪುಟ್ಟರಾಜು ಅವರು ಕಬ್ಬನ್ ಪೇಟೆಯಲ್ಲಿರುವ ತಮ್ಮ ಹೋಟೆಲ್ 'ಬಿರಿಯಾನಿ ಬಜಾರ್'ನಲ್ಲಿ ಒಂದು ರುಪಾಯಿಗೆ ದೋಸೆ ಮತ್ತು ಇಡ್ಲಿಯನ್ನು ಸುಮಾರು ಆರು ತಿಂಗಳ ಕಾಲ ನೀಡಿದ್ದರು. ಗ್ರಾಹಕರ ಸಂತೃಪ್ತಿಯೇ ನಮ್ಮ ತೃಪ್ತಿ ಎಂಬ ಸಿದ್ಧಾಂತಕ್ಕೆ ಪುಟ್ಟರಾಜು ಜೋತು ಬಿದ್ದಿದ್ದಾರೆ.
ಗ್ರಾಹಕರ ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ಪುಟ್ಟರಾಜು ಅವರು ಈಗ ರೋಟಿ, ಚಪಾತಿ, ಕುಲ್ಚಾ, ಪರೋಟಾಗಳನ್ನು 1 ರುಪಾಯಿಗೆ ನೀಡಲು ಮುಂದಾಗಿದ್ದಾರೆ. ಗಮನಿಸಿ, ಇಡ್ಲಿ ಜೊತೆಗೆ ಚಟ್ನಿ ಉಚಿತವಾಗಿ ಸಿಗುವಂತೆ ಇವುಗಳೊಂದಿಗೆ ಪಲ್ಯ ಉಚಿತವಾಗಿ ಸಿಗುವುದಿಲ್ಲ. ಚಪಾತಿಗೆ 1 ರುಪಾಯಿ ಕೊಟ್ಟರೂ ಪಲ್ಯಕ್ಕೆ ಮಾಮೂಲಿ ಬೆಲೆ ತೆತ್ತು ಪಡೆಯಬೇಕು. ಬೆಲೆ ಕಡಿಮೆಯಿದ್ದರೂ ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿಳಾಸ : ಕಡಾಯಿ ಕಾ ಖಜಾನಾ, ನಂ. 40, 2ನೇ ಹಂತ, ಜೆ.ಪಿ. ನಗರ, ಆರ್. ವಿಸಿಟ್ ಡೆಂಟಲ್ ಕಾಲೇಜು ಎದಿರು, ರಂಗ ಶಂಕರದ ಬಳಿ, ಬೆಂಗಳೂರು. ಪುಟ್ಟರಾಜು ಅವರ ಮೊಬೈಲ್ ಸಂಖ್ಯೆ : 99801 54451.



Click it and Unblock the Notifications











