Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

ಏನಾದರು ಮಾಡುತಿರು ಮಂಕುತಿಮ್ಮ ಎಂಬಂತೆ, ಜೆಪಿ ನಗರದ ರಂಗ ಶಂಕರದ ಬಳಿಯಿರುವ 'ಕಡಾಯಿ ಕಾ ಖಾನಾ' ಖಾನಾವಳಿಯ ಮಾಲಿಕ ಪುಟ್ಟರಾಜು ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ, ಈ ಆಫರು ಕೇವಲ 100 ದಿನಗಳ ಕಾಲ ಮಾತ್ರ ಲಭ್ಯವಿರಲಿದೆ. ನಂತರ ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಏನಾದರೂ ಮಾಡಿತಿರಬೇಕಲ್ಲ? ಕಳೆದ ವರ್ಷ ಇದೇ ಪುಟ್ಟರಾಜು ಅವರು ಕಬ್ಬನ್ ಪೇಟೆಯಲ್ಲಿರುವ ತಮ್ಮ ಹೋಟೆಲ್ 'ಬಿರಿಯಾನಿ ಬಜಾರ್'ನಲ್ಲಿ ಒಂದು ರುಪಾಯಿಗೆ ದೋಸೆ ಮತ್ತು ಇಡ್ಲಿಯನ್ನು ಸುಮಾರು ಆರು ತಿಂಗಳ ಕಾಲ ನೀಡಿದ್ದರು. ಗ್ರಾಹಕರ ಸಂತೃಪ್ತಿಯೇ ನಮ್ಮ ತೃಪ್ತಿ ಎಂಬ ಸಿದ್ಧಾಂತಕ್ಕೆ ಪುಟ್ಟರಾಜು ಜೋತು ಬಿದ್ದಿದ್ದಾರೆ.
ಗ್ರಾಹಕರ ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ಪುಟ್ಟರಾಜು ಅವರು ಈಗ ರೋಟಿ, ಚಪಾತಿ, ಕುಲ್ಚಾ, ಪರೋಟಾಗಳನ್ನು 1 ರುಪಾಯಿಗೆ ನೀಡಲು ಮುಂದಾಗಿದ್ದಾರೆ. ಗಮನಿಸಿ, ಇಡ್ಲಿ ಜೊತೆಗೆ ಚಟ್ನಿ ಉಚಿತವಾಗಿ ಸಿಗುವಂತೆ ಇವುಗಳೊಂದಿಗೆ ಪಲ್ಯ ಉಚಿತವಾಗಿ ಸಿಗುವುದಿಲ್ಲ. ಚಪಾತಿಗೆ 1 ರುಪಾಯಿ ಕೊಟ್ಟರೂ ಪಲ್ಯಕ್ಕೆ ಮಾಮೂಲಿ ಬೆಲೆ ತೆತ್ತು ಪಡೆಯಬೇಕು. ಬೆಲೆ ಕಡಿಮೆಯಿದ್ದರೂ ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿಳಾಸ : ಕಡಾಯಿ ಕಾ ಖಜಾನಾ, ನಂ. 40, 2ನೇ ಹಂತ, ಜೆ.ಪಿ. ನಗರ, ಆರ್. ವಿಸಿಟ್ ಡೆಂಟಲ್ ಕಾಲೇಜು ಎದಿರು, ರಂಗ ಶಂಕರದ ಬಳಿ, ಬೆಂಗಳೂರು. ಪುಟ್ಟರಾಜು ಅವರ ಮೊಬೈಲ್ ಸಂಖ್ಯೆ : 99801 54451.



Click it and Unblock the Notifications