Just In
- 1 hr ago
ದಿನ ಭವಿಷ್ಯ: ಭಾನುವಾರದ ರಾಶಿಫಲ ಹೇಗಿದೆ ನೋಡಿ
- 11 hrs ago
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- 12 hrs ago
ಮಾರ್ಚ್ 2021ರಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು: ಈ ತಿಂಗಳಿನಲ್ಲಿ 11 ದಿನಗಳು ತುಂಬಾನೇ ವಿಶೇಷ
- 13 hrs ago
ಹಿರಿಯರೇ, ಸಣ್ಣ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
Don't Miss
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ
ಒಂದು ರುಪಾಯಿಗೆ ಬೆಂಗಳೂರಿನಲ್ಲಿ ಏನು ಸಿಗುತ್ತದೆ ಹೇಳಿ? ಒಂದು ಪೆಪ್ಪರ್ಮಿಂಟ್ ಕೂಡ ಸಿಗಲಾರದು. ಪರಿಸ್ಥಿತಿ ಹೀಗಿರುವಾಗ ರೊಟ್ಟಿ, ಕುಲ್ಚಾ, ಚಪಾತಿ, ನಾನ್, ಪರೋಟಾ ಕೇವಲ ಒಂದು ರುಪಾಯಿಗೆ ಸಿಕ್ಕರೆ ಹೇಗೆ? ನಂಬಬೇಕಾದರೆ ಒಮ್ಮೆ ನಿಮ್ಮನ್ನು ನೀವೇ ಜಿಗುಟಿಕೊಳ್ಳಿ. ಹೌದು, ಈ ಐಟಂಗಳೆಲ್ಲ ಕೇವಲ ಒಂದೇ ರುಪಾಯಿಗೆ ಸಿಗುತ್ತಿವೆ. ಅದೂ ಬೆಂಗಳೂರಿನಲ್ಲಿ.
ಏನಾದರು ಮಾಡುತಿರು ಮಂಕುತಿಮ್ಮ ಎಂಬಂತೆ, ಜೆಪಿ ನಗರದ ರಂಗ ಶಂಕರದ ಬಳಿಯಿರುವ 'ಕಡಾಯಿ ಕಾ ಖಾನಾ' ಖಾನಾವಳಿಯ ಮಾಲಿಕ ಪುಟ್ಟರಾಜು ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ, ಈ ಆಫರು ಕೇವಲ 100 ದಿನಗಳ ಕಾಲ ಮಾತ್ರ ಲಭ್ಯವಿರಲಿದೆ. ನಂತರ ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಏನಾದರೂ ಮಾಡಿತಿರಬೇಕಲ್ಲ? ಕಳೆದ ವರ್ಷ ಇದೇ ಪುಟ್ಟರಾಜು ಅವರು ಕಬ್ಬನ್ ಪೇಟೆಯಲ್ಲಿರುವ ತಮ್ಮ ಹೋಟೆಲ್ 'ಬಿರಿಯಾನಿ ಬಜಾರ್'ನಲ್ಲಿ ಒಂದು ರುಪಾಯಿಗೆ ದೋಸೆ ಮತ್ತು ಇಡ್ಲಿಯನ್ನು ಸುಮಾರು ಆರು ತಿಂಗಳ ಕಾಲ ನೀಡಿದ್ದರು. ಗ್ರಾಹಕರ ಸಂತೃಪ್ತಿಯೇ ನಮ್ಮ ತೃಪ್ತಿ ಎಂಬ ಸಿದ್ಧಾಂತಕ್ಕೆ ಪುಟ್ಟರಾಜು ಜೋತು ಬಿದ್ದಿದ್ದಾರೆ.
ಗ್ರಾಹಕರ ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ಪುಟ್ಟರಾಜು ಅವರು ಈಗ ರೋಟಿ, ಚಪಾತಿ, ಕುಲ್ಚಾ, ಪರೋಟಾಗಳನ್ನು 1 ರುಪಾಯಿಗೆ ನೀಡಲು ಮುಂದಾಗಿದ್ದಾರೆ. ಗಮನಿಸಿ, ಇಡ್ಲಿ ಜೊತೆಗೆ ಚಟ್ನಿ ಉಚಿತವಾಗಿ ಸಿಗುವಂತೆ ಇವುಗಳೊಂದಿಗೆ ಪಲ್ಯ ಉಚಿತವಾಗಿ ಸಿಗುವುದಿಲ್ಲ. ಚಪಾತಿಗೆ 1 ರುಪಾಯಿ ಕೊಟ್ಟರೂ ಪಲ್ಯಕ್ಕೆ ಮಾಮೂಲಿ ಬೆಲೆ ತೆತ್ತು ಪಡೆಯಬೇಕು. ಬೆಲೆ ಕಡಿಮೆಯಿದ್ದರೂ ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿಳಾಸ : ಕಡಾಯಿ ಕಾ ಖಜಾನಾ, ನಂ. 40, 2ನೇ ಹಂತ, ಜೆ.ಪಿ. ನಗರ, ಆರ್. ವಿಸಿಟ್ ಡೆಂಟಲ್ ಕಾಲೇಜು ಎದಿರು, ರಂಗ ಶಂಕರದ ಬಳಿ, ಬೆಂಗಳೂರು. ಪುಟ್ಟರಾಜು ಅವರ ಮೊಬೈಲ್ ಸಂಖ್ಯೆ : 99801 54451.