Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಶಾಲೆ ಸುತ್ತಮುತ್ತ ಜಂಕ್ ಆಹಾರ ನಿಷೇಧಿಸಬೇಕಾ?

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರು ತಿನ್ನುವ ಆಹಾರದ ಮೇಲೆ ಪಾಲಕರು ಮತ್ತು ಶಿಕ್ಷಕರು ಒಂದು ನಿಗಾ ಇಡುವುದು ಉತ್ತಮ. ಏಕೆಂದರೆ ಇಂತಹ ಪದಾರ್ಥಗಳೇ ಮುಂದೆ ಆರೋಗ್ಯದ ಮೇಲೆ ಮಾತ್ರವಲ್ಲ ಅವರ ಭವಿಷ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.
ಕರ್ನಾಟಕದ ಕೆಲ ಖಾಸಗಿ ಶಾಲೆಗಳಲ್ಲಿ ಬ್ರೆಡ್ ಹೊರತಾಗಿ ಬೇಕರಿಯ ಯಾವ ಪದಾರ್ಥಗಳನ್ನೂ ತಿನ್ನಲು ಬಿಡುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿಯೇ ತಯಾರಿಸಿದ ಆಹಾರ ತಂದರೆ ಸರಿ ಇಲ್ಲದಿದ್ದರೆ ಮಗು ಖಾಲಿ ಹೊಟ್ಟೆಯಲ್ಲಿ ವಾಪಸ್ ಬರಬೇಕಾದೀತು. ಇಂತಹ ಪದ್ಧತಿ ಕರ್ನಾಟಕದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜಾರಿಗೆ ಬರಬೇಕು.
ಈ ವಿಷಯ ಯಾಕೆ ಹೇಳಬೇಕಾಯಿತೆಂದರೆ, ದೆಹಲಿಯ ಕೆಲ ಪ್ರಜ್ಞಾವಂತ ಮಕ್ಕಳು ಪಿಜ್ಜಾ, ಬರ್ಗರ್ ಸೇರಿದಂತೆ ಎಲ್ಲಾ ಜಂಕ್ ಆಹಾರವನ್ನು ಶಾಲೆಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿಷೇಧಿಸಬೇಕೆಂದು ದೆಹಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಮಕ್ಕಳ ಕಾಳಜಿಯನ್ನು ಮನಗಂಡ ನ್ಯಾಯಮೂರ್ತಿಗಳು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಆರೋಗ್ಯ ಕೆಡಿಸುವ ಕುರುಕಲು ಆಹಾರ ಮಾತ್ರವಲ್ಲ ತಂಪು ಪಾನೀಯಗಳನ್ನು ಕೂಡ ಬ್ಯಾನ್ ಮಾಡಬೇಕೆಂದು ವಿದ್ಯಾರ್ಥಿಗಳ ವೇದಿಕೆ ಕೋರ್ಟನ್ನು ಕೋರಿದೆ. ಇಂದಿನ ದಿನಗಳಲ್ಲಿ ಎಲ್ಲೆಲ್ಲಿ ಶಾಲಾ ಕಾಲೇಜುಗಳಿವೆಯೋ ಅಲ್ಲಿ ಸುತ್ತಮುತ್ತಲೆಲ್ಲ ಕಾಂಡಿಮೆಂಟ್ಸ್ ಮಾರುವ ಅಂಗಡಿ ಇದ್ದೇ ಇರುತ್ತದೆ. ವ್ಯಾಪಾರ ನೂರಕ್ಕೆ ನೂರರಷ್ಟು ಖಾತ್ರಿ.
ಪಾಠಶಾಲೆಯಲ್ಲಿ ಮಾತ್ರ ಆರೋಗ್ಯ ಕಾಪಾಡುವ ಕುರಿತು ಗಂಟೆಗಟ್ಟಲೆ ಪಾಠ ಮಾಡುತ್ತಾರೆ, ಆದರೆ ಶಾಲೆಯ ಬಾಗಿಲಲ್ಲೇ ಜಂಕ್ ಆಹಾರಗಳು ಲಭ್ಯವಿದ್ದರೂ ಶಾಲೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಗೆ ಕೂಡ ನೋಟೀಸ್ ಜಾರಿಯಾಗಿದ್ದು, ಅರ್ಜಿಗೆ ಉತ್ತರ ನೀಡುವಂತೆ ಕೋರ್ಟ್ ಆಗ್ರಹಿಸಿದೆ.



Click it and Unblock the Notifications