Latest Updates
-
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ?
ಶಾಲೆ ಸುತ್ತಮುತ್ತ ಜಂಕ್ ಆಹಾರ ನಿಷೇಧಿಸಬೇಕಾ?

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರು ತಿನ್ನುವ ಆಹಾರದ ಮೇಲೆ ಪಾಲಕರು ಮತ್ತು ಶಿಕ್ಷಕರು ಒಂದು ನಿಗಾ ಇಡುವುದು ಉತ್ತಮ. ಏಕೆಂದರೆ ಇಂತಹ ಪದಾರ್ಥಗಳೇ ಮುಂದೆ ಆರೋಗ್ಯದ ಮೇಲೆ ಮಾತ್ರವಲ್ಲ ಅವರ ಭವಿಷ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.
ಕರ್ನಾಟಕದ ಕೆಲ ಖಾಸಗಿ ಶಾಲೆಗಳಲ್ಲಿ ಬ್ರೆಡ್ ಹೊರತಾಗಿ ಬೇಕರಿಯ ಯಾವ ಪದಾರ್ಥಗಳನ್ನೂ ತಿನ್ನಲು ಬಿಡುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿಯೇ ತಯಾರಿಸಿದ ಆಹಾರ ತಂದರೆ ಸರಿ ಇಲ್ಲದಿದ್ದರೆ ಮಗು ಖಾಲಿ ಹೊಟ್ಟೆಯಲ್ಲಿ ವಾಪಸ್ ಬರಬೇಕಾದೀತು. ಇಂತಹ ಪದ್ಧತಿ ಕರ್ನಾಟಕದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜಾರಿಗೆ ಬರಬೇಕು.
ಈ ವಿಷಯ ಯಾಕೆ ಹೇಳಬೇಕಾಯಿತೆಂದರೆ, ದೆಹಲಿಯ ಕೆಲ ಪ್ರಜ್ಞಾವಂತ ಮಕ್ಕಳು ಪಿಜ್ಜಾ, ಬರ್ಗರ್ ಸೇರಿದಂತೆ ಎಲ್ಲಾ ಜಂಕ್ ಆಹಾರವನ್ನು ಶಾಲೆಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿಷೇಧಿಸಬೇಕೆಂದು ದೆಹಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಮಕ್ಕಳ ಕಾಳಜಿಯನ್ನು ಮನಗಂಡ ನ್ಯಾಯಮೂರ್ತಿಗಳು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಆರೋಗ್ಯ ಕೆಡಿಸುವ ಕುರುಕಲು ಆಹಾರ ಮಾತ್ರವಲ್ಲ ತಂಪು ಪಾನೀಯಗಳನ್ನು ಕೂಡ ಬ್ಯಾನ್ ಮಾಡಬೇಕೆಂದು ವಿದ್ಯಾರ್ಥಿಗಳ ವೇದಿಕೆ ಕೋರ್ಟನ್ನು ಕೋರಿದೆ. ಇಂದಿನ ದಿನಗಳಲ್ಲಿ ಎಲ್ಲೆಲ್ಲಿ ಶಾಲಾ ಕಾಲೇಜುಗಳಿವೆಯೋ ಅಲ್ಲಿ ಸುತ್ತಮುತ್ತಲೆಲ್ಲ ಕಾಂಡಿಮೆಂಟ್ಸ್ ಮಾರುವ ಅಂಗಡಿ ಇದ್ದೇ ಇರುತ್ತದೆ. ವ್ಯಾಪಾರ ನೂರಕ್ಕೆ ನೂರರಷ್ಟು ಖಾತ್ರಿ.
ಪಾಠಶಾಲೆಯಲ್ಲಿ ಮಾತ್ರ ಆರೋಗ್ಯ ಕಾಪಾಡುವ ಕುರಿತು ಗಂಟೆಗಟ್ಟಲೆ ಪಾಠ ಮಾಡುತ್ತಾರೆ, ಆದರೆ ಶಾಲೆಯ ಬಾಗಿಲಲ್ಲೇ ಜಂಕ್ ಆಹಾರಗಳು ಲಭ್ಯವಿದ್ದರೂ ಶಾಲೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಗೆ ಕೂಡ ನೋಟೀಸ್ ಜಾರಿಯಾಗಿದ್ದು, ಅರ್ಜಿಗೆ ಉತ್ತರ ನೀಡುವಂತೆ ಕೋರ್ಟ್ ಆಗ್ರಹಿಸಿದೆ.



Click it and Unblock the Notifications