Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಹೊಸ ವರ್ಷಕ್ಕೆ ಚೀನಿಕಾಯಿ ಕಡುಬು
ಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡೋಣಂತೆ, ಅದಕ್ಕೇನಂತೆ! ನೆನಪಿಡಿ, ಚೀನಿಕಾಯಿಯಿಂದ ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ, ಸಿಪ್ಪೆಯ ಚಟ್ನಿ ಕೂಡ ತಯಾರಿಸಬಹುದು.
ಹೊಸವರುಷಕೆ ಸಿಹಿಗಡುಬಿನ ತಿನಿಸು.
ಉತ್ತರಕರ್ನಾಟಕದ ಕಡೆ ದೀಪಾವಳಿಯಂದು ಈ ಚೀನಿಕಾಯಿ ಕಡುಬು ಆಗಲೇಬೇಕು. ಅದರಲ್ಲೂ ವಿಶೇಷವಾಗಿ ನರಕಚತುರ್ದಶಿಯದಿನ ಈ ಕಡುಬನ್ನು ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಶಿರಸಿಯ ಕಡೆ ಚೀನಿಕಾಯಿಗೆ ಗೋವೆಕಾಯಿ ಎನ್ನುತ್ತಾರೆ. ಗೋವೇಕಾಯಿ ಕಡುಬು ಉತ್ತರಕನ್ನಡದ ಕಡೆಯ ತಿಂಡಿ ತಿನಿಸುಗಳಲ್ಲಿ ಅಗ್ರಗಣ್ಯವಾದದ್ದು.
ಚೀನೀಕಾಯಿಯಿಂದ ಬಹಳಷ್ಟು ಪದಾರ್ಥಗಳನ್ನು ತಯಾರಿಸಬಹುದು. ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ(ಹಶಿ) ಹಾಗೂ ಸಿಪ್ಪೆಯ ಚಟ್ನಿ ಕೂಡಾ ತುಂಬಾ ರುಚಿಕರ. ಚೀನಿಕಾಯಿಯ ಬಲಿತ ಬೀಜವನ್ನು ಚೆನ್ನಾಗಿ ಒಣಗಿಸಿ, ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಳಭಾಗವನ್ನು ತಿನ್ನಬಹುದು. ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು
* ಅಕ್ಕಿ - 1/2 ಕೆ.ಜಿ.
* ಬೆಲ್ಲ - 1/2 ಕೆ.ಜಿ.
* ಚೀನಿಕಾಯಿ - 1/2 ಕೆ.ಜಿ.
* ತೆಂಗಿನಕಾಯಿ - 1/4 ಭಾಗ
* ಏಲಕ್ಕಿ ಬೀಜ - 10 (ಬೇಕಿದ್ದರೆ ಸಣ್ಣ ಜಾಯಿಕಾಯಿ ಚೂರನ್ನೂ ಹಾಕಬಹುದು)
* ಬಾಳೆ ಎಲೆ - 8-10
ಮಾಡುವ ವಿಧಾನ
* ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಹಾಕಿ, ಗಟ್ಟಿಯಾಗಿ ನುಣ್ಣಗೆ ರುಬ್ಬಬೇಕು.
* ಚೀನಿಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ದೊಡ್ಡ ಬಾಣಲೆಯಲ್ಲಿ ಬೆಲ್ಲವನ್ನು ಗುದ್ದಿ, ಒಂದು ಲೋಟ ನೀರನ್ನು ಹಾಕಿ ಹೆಚ್ಚಿಟ್ಟ ಗೋವೆಕಾಯಿ ಹಾಗೂ ಕಾಯಿತುರಿಯನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು.
* ಕುದಿಸಿದ ನಂತರ ಬೀಸಿಟ್ಟ ಅಕ್ಕಿಹಿಟ್ಟು, ಏಲಕ್ಕಿ ಬೀಜಗಳು ಹಾಗೂ ಜಾಯಿಕಾಯಿ ಚೂರನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕಬೇಕು(ತೊಳೆಸಬೇಕು).
* ಸರಿಯಾಗಿ ಮಿಶ್ರಣವಾದನಂತರ, (ಗ್ರಾಮ್ಯ ಭಾಷೆಯಲ್ಲಿ ಕೇಳಬೇಕೆಂದರೆ, ಒಂದು ಬಂಧ ಬಂದನಂತರ) ಗ್ಯಾಸ್ ಆರಿಸಿ ತಣಿಯಲು ಬಿಡಬೇಕು.
* ಮಿಶ್ರಣ ತಣಿದ ಮೇಲೆ ಬಾಳೆ ಎಲೆಗಳನ್ನು ತುಸು ಬಾಡಿಸಿಕೊಂಡು ಒಂದೊಂದು ಬಾಳೆ ಎಲೆಗೆ ಎರಡು ಸೌಟು ಮಿಶ್ರಣವನ್ನು ಹಾಕಿ ತುಸು ತೆಳುವಾಗಿ ಹರಡುವಂತೆ ಕೈಯಲ್ಲಿ ತಟ್ಟಬೇಕು. ನಂತರ ನಾಲ್ಕೂ ಕಡೆ ಬಾಳೆ ಎಲೆಯನ್ನು ಮಡಚಿ, ಇಡ್ಲಿ ( Idli Cooker)ದಳ್ಳೆಯಲ್ಲಿಟ್ಟು ಸುಮಾರು ಒಂದು ತಾಸಿನವರೆಗೂ ಬೇಯಿಸಬೇಕು.
* ಒಂದು ತಾಸಾದ ಮೇಲೆ ಬೆಂದಿರುವುದನ್ನು ಖಾತರಿಸಿಕೊಂಡು, ಬಾಳೆ ಎಲೆಯಿಂದ ಕಡುಬನ್ನು ತೆಗೆಯಬೇಕು. ಘಮ ಘಮಿಸುವ ಗೋವೆ ಕಡುಬು ಬಲು ರುಚಿಕರವಾಗಿರುತ್ತದೆ. ನಮ್ಮಲ್ಲಿ ಇದನ್ನು ತುಪ್ಪದೊಂದಿಗೆ ತೆಗೆದುಕೊಳ್ಳುತ್ತಾರೆ. ನಿಮ್ಮಲ್ಲಿ?



Click it and Unblock the Notifications