Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗರ್ಭಿಣಿಯರು 'ಕಲ್ಲಂಗಡಿ ಹಣ್ಣು' ಸೇವಿಸುವುದರಿಂದ ಲಾಭವೋ ಲಾಭ
ನೀರಿನಂಶ ಅಧಿಕವಾಗಿರುವ ಹಣ್ಣು ಅಂದಾಗ ಥಟ್ಟನೇ ನೆನಪಾಗುವುದೇ ಕಲ್ಲಂಗಡಿ. ಬಾಯಾರಿಕೆಯನ್ನು ನಿವಾರಣೆ ಮಾಡುವುದರ ಜೊತೆಗೆ ತೂಕ ಇಳಿಕೆಯಲ್ಲೂ ಸೈ ಎನಿಸಿದೆ. ಗರ್ಭಿಣಿಯರ ಆರೋಗ್ಯ ದೃಷ್ಟಿಯಿಂದಲೂ ಕಲ್ಲಂಗಡಿ ಹಣ್ಣು ಅತ್ಯದ್ಭುತವಾಗಿದೆ...
ನಿಮ್ಮ ಮನೆಗೆ ಇನ್ನು ಕೆಲವೇ ತಿಂಗಳಲ್ಲಿ ಹೊಸ ಅತಿಥಿಯ ಆಗಮನವಾಗುವುದಿದೆಯೇ? ಈ ಶುಭಸುದ್ದಿ ತಿಳಿಯುತ್ತಿದ್ದಂತೆಯೇ ನಿಮ್ಮ ಮನೆಯವರು ಮತ್ತು ಹಿತೈಷಿಗಳು ಬಹಳಷ್ಟು ಸಲಹೆಗಳನ್ನು ನೀಡಿರಬೇಕಲ್ಲವೇ? ಆದರೆ ಯಾರು ಏನೇ ಹೇಳಿದರೂ ನಿಮ್ಮ ವೈದ್ಯರು ಅಪ್ಪಣೆ ನೀಡುವ ಹೊರತು ಯಾವುದೇ ಆಹಾರವನ್ನು ಸೇವಿಸಲು ಹೋಗದಿರುವುದೇ ಜಾಣತನದ ಕ್ರಮ. ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು
ಬೇಸಿಗೆಯಲ್ಲಿ ಗರ್ಭಿಣಿಯರಿಗೆ ಸೂಕ್ತವಾದ ಆಹಾರ ಯಾವುದು? ಸಾಮಾನ್ಯವಾಗಿ ನೀರಿನಂಶ ಹೆಚ್ಚಿರುವ ಕಲ್ಲಂಗಡಿ, ಸೌತೆ ಹಾಗೂ ಇತರ ಹಣ್ಣುಗಳ ರಸವನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಅದರಲ್ಲೂ ಕಲ್ಲಂಗಡಿ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣಾಗಿದ್ದು ಇದರಲ್ಲಿ ಅತಿ ಹೆಚ್ಚಿನ ನೀರು ಮತ್ತು ಇತರ ಪೋಷಕಾಂಶಗಳಿವೆ. ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ
ಇದು ತೂಕವನ್ನು ಇಳಿಸಲು ನೆರವಾಗುವ ಜೊತೆಗೇ ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿರಿಸಲೂ ನೆರವಾಗುತ್ತದೆ. ಆದರೆ ಈ ಹಣ್ಣು ಗರ್ಭಿಣಿಯರು ಸೇವಿಸಲು ಯೋಗ್ಯವೇ? ಈ ಪ್ರಶ್ನೆಯನ್ನು ನಿಮ್ಮ ವೈದ್ಯರಲ್ಲಿ ಕೇಳಿ ನಿಮಗೆ ಸೂಕ್ತ ಎಂದು ಅನುಮತಿ ನೀಡಿದ ಬಳಿಕವೇ ಸೇವಿಸಬೇಕು. ಇದು ನಿಮಗೆ ಸೂಕ್ತ ಎನ್ನುವುದಾದರೆ ಕಲ್ಲಂಗಡಿಯ ಪ್ರಯೋಜನಗಳನ್ನು ಗರ್ಭಿಣಿಯರು ಸಹಾ ಪಡೆಯಬಹುದು. ಬನ್ನಿ, ಇದರ ಪ್ರಯೋಜನಗಳೇನು ಎಂಬುದನ್ನು ನೋಡೋಣ.....

ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ
ಇತರ ಸಮಯಕ್ಕಿಂತಲೂ ಬೇಸಿಗೆಯ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ದ್ರವಾಹಾರ ಹಾಗೂ ನೀರನ್ನು ಸೇವಿಸಬೇಕು. ಕಲ್ಲಂಗಡಿ ಹಣ್ಣಿನಲ್ಲಿ ಗರಿಷ್ಠ ಪ್ರಮಾಣದ ನೀರು ಇರುವ ಕಾರಣ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಬಿಸಿಲ ಬೇಗೆಯಿಂದ ದೇಹವನ್ನು ತಂಪಾಗಿರಿಸಲು ಸಾಧ್ಯವಾಗುತ್ತದೆ.

ಇದರಲ್ಲಿದೆ ಹಲವು ವಿಟಮಿನ್ನುಗಳು
ಕಲ್ಲಂಗಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಇದ್ದರೂ ಉಳಿದಂತೆ ಹಲವಾರು ಪೋಷಕಾಂಶಗಳೂ ಇವೆ. ಪ್ರಮುಖವಾಗಿ ವಿಟಮಿನ್ ಎ ಮತ್ತು ಸಿ. ಈ ಪೋಷಕಾಂಶಗಳು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಮಗುವಿನ ಪೋಷಣೆಗೂ ನೆರವಾಗುತ್ತದೆ. ಗರ್ಭಿಣಿಯರು ಬೇಸಿಗೆಯಲ್ಲಿ ಪ್ರತಿದಿನ ಮೂರು ಬಾರಿ ಸಾಮಾನ್ಯ ಪ್ರಮಾಣದ ಕಲ್ಲಂಗಡಿ ಹಣ್ಣಿನ ತಿರುಳನ್ನು ಸೇವಿಸುವುದು ಉತ್ತಮ.

ಎದೆಯುರಿಯನ್ನು ಕಡಿಮೆ ಮಾಡುತ್ತದೆ
ಗರ್ಭಾವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇದರಲ್ಲಿ ಎದೆಯುರಿ ಅಥವಾ ಹೊಟ್ಟೆಯಲ್ಲಿ ಉರಿಯೂ ಒಂದು. ಹೀಗೆ ಉರಿ ಕಾಣಿಸಿಕೊಂಡಾಗ ಗಾಬರಿಯಾಗದೇ ತಕ್ಷಣವೇ ಒಂದು ಕಪ್ನಷ್ಟು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ತಿಂದರೆ ಸಾಕಾಗುತ್ತದೆ.

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ
ಗರ್ಭಾವಸ್ಥೆಯಲ್ಲಿ ಎದುರಾಗುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಸ್ನಾಯುಗಳ ಸೆಡೆತ. ದೇಹದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಕೊರತೆ ಇದ್ದರೆ ಸ್ನಾಯುಗಳು ಸೆಡೆತಕ್ಕೆ ಒಳಗಾಗಿ ಚಲನೆಯನ್ನು ಪ್ರತಿಬಂಧಿಸುವುದು ಮಾತ್ರವಲ್ಲ, ನೋವನ್ನೂ ನೀಡುತ್ತವೆ.

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ
ಈ ತೊಂದರೆ ವಿಶೇಷವಾಗಿ ಏಳನೆಯ ತಿಂಗಳಿನ ಬಳಿಕ ಕಾಣಿಸಿಕೊಳ್ಳುತ್ತದೆ. ಕಲ್ಲಂಗಡಿಯಲ್ಲಿ ಇವೆರಡೂ ಖನಿಜಗಳು ಉತ್ತಮ ಪ್ರಮಾಣದಲ್ಲಿರುವ ಕಾರಣ ಥಟ್ಟನೇ ಸ್ನಾಯುಗಳು ಸೆಡೆತಕ್ಕೆ ಒಳಗಾಗುವುದರಿಂದ ತಪ್ಪಿಸಬಹುದು.



Click it and Unblock the Notifications
